AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ್ ಚರಣ್ ಪ್ರಯಾಣದ ಸಂಗಾತಿ ಉಪಾಸನಾ ಮಾತ್ರ ಅಲ್ಲ…

Ram Charan-Upasana Konidel: ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟರ ಪತ್ನಿಯರಲ್ಲೇ ಅತ್ಯಂತ ಶ್ರೀಮಂತ ಮತ್ತು ಬುದ್ಧಿವಂತೆ ಎಂದರೆ ಅದು ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೆಲ. ಸ್ವತಃ ಉದ್ಯಮಿಯಾಗಿರುವ ಉಪಾಸನಾ ಕೊನಿಡೆಲ, ತಮ್ಮ ಅತ್ತೆ ಅಂದರೆ ರಾಮ್ ಚರಣ್ ಅವರ ತಾಯಿಯನ್ನೂ ಸಹ ಉದ್ಯಮಿಯನ್ನಾಗಿದ್ದಾರೆ. ಅಂದಹಾಗೆ ಇದಕ್ಕೂ ರಾಮ್ ಚರಣ್ ಬ್ಯಾಗಿನಲ್ಲಿಯೂ ಎಲೆಕ್ಟ್ರಿಕ್ ಕುಕ್ಕರ್​ಗೂ ಸಂಬಂಧವೇನು?

ರಾಮ್ ಚರಣ್ ಪ್ರಯಾಣದ ಸಂಗಾತಿ ಉಪಾಸನಾ ಮಾತ್ರ ಅಲ್ಲ...
Upasana Konidela
ಮಂಜುನಾಥ ಸಿ.
|

Updated on:Apr 13, 2025 | 11:43 AM

Share

ದಕ್ಷಿಣದ ಸ್ಟಾರ್ ನಟರ ಪತ್ನಿಯರಲ್ಲಿ ಅತ್ಯಂತ ಶ್ರೀಮಂತ ಮತ್ತು ಅತ್ಯಂತ ಬುದ್ಧಿವಂತರೆಂದರೆ ಅದು ಉಪಾಸನಾ ಕೊನಿಡೆಲ (Upasana Konidela). ಅಪೋಲೊ ಹಾಸ್ಪಿಟಲ್ ಚೈನ್​ನ ಮಾಲೀಕತ್ವ ಹೊಂದಿರುವ ಕುಟುಂಬಕ್ಕೆ ಸೇರಿದ ಉಪಾಸನಾ ಕೊನೆಡೆಲ ಸ್ವತಃ ಬಹಳ ಒಳ್ಳೆಯ ಉದ್ಯಮಿಯೂ ಹೌದು. ಇದರ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ತಾವು ಸೊಸೆಯಾಗಿ ಸೇರಿದ ಚಿರಂಜೀವಿ (Chiranjeevi) ಮನೆಯಲ್ಲಿಯೂ ಅವರು ತಮ್ಮ ಬ್ಯುಸಿನೆಸ್ ಮೈಂಡ್ ಪ್ರಯೋಗಿಸಿದ್ದು ಚಿರಂಜೀವಿ ಪತ್ನಿ ಸುರೇಖ ಅವರನ್ನು ಉದ್ಯಮಿಯನ್ನಾಗಿ ಮಾಡಿದ್ದಾರೆ. ಅದು ಹೇಗೆ? ನೀವೇ ತಿಳಿಯಿರಿ…

ರಾಮ್ ಚರಣ್ ಈಗ ಗ್ಲೋಬಲ್ ಸ್ಟಾರ್. ಸಿನಿಮಾ ಚಿತ್ರೀಕರಣ, ಪ್ರಚಾರ, ಬ್ಯುಸಿನೆಸ್, ಪ್ರವಾಸ ಇನ್ನೂ ಕೆಲವು ಕಾರಣಗಳಿಗೆ ಪದೇ ಪದೇ ಪ್ರಯಾಣ ಮಾಡುತ್ತಲೇ ಇರುತ್ತಾರೆ. ರಾಮ್ ಚರಣ್ ಸಾಮಾನ್ಯವಾಗಿ ಎಲ್ಲಿಗೇ ಹೋದರು, ವಿಶೇಷವಾಗಿ ವಿದೇಶಕ್ಕೆ ಹೋಗುವ ಸಮಯದಲ್ಲಿ ಪತ್ನಿ ಉಪಾಸನಾ ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಉಪಾಸನಾಗೆ ಇದು ತುಸು ತಲೆ ನೋವಂತೆ, ಏಕೆಂದರೆ ರಾಮ್ ಚರಣ್ ಎಲ್ಲೇ ಹೋಗಲಿ ಒಂದು ಕುಕ್ಕರ್ ತೆಗೆದುಕೊಂಡು ಉಪಾಸನಾ ಅವರ ಜೊತೆಗೆ ಹೋಗುತ್ತಾರಂತೆ.

ರಾಮ್ ಚರಣ್, ಗ್ಲೋಬಲ್ ಸ್ಟಾರ್ ಆಗಿರಬಹುದು ಆದರೆ ಪಕ್ಕಾ ಭಾರತೀಯ, ರಾಮ್ ಚರಣ್​ಗೆ ಭಾರತೀಯ ಊಟ ವಿಶೇಷವಾಗಿ ತೆಲುಗು ಊಟ ಇರಲೇ ಬೇಕಂತೆ. ದಿನದಲ್ಲಿ ಒಮ್ಮೆಯಾದರೂ ತೆಲುಗು ಊಟ ಮಾಡಲಿಲ್ಲವೆಂದರೆ ಅವರಿಗೆ ಆಗುವುದೇ ಇಲ್ಲವಂತೆ. ಆದರೆ ರಾಮ್ ಚರಣ್ ಹೋದಲ್ಲೆಲ್ಲ ಮನೆ ಊಟದಂಥಹಾ ಊಟ ಸಿಗುವುದಿಲ್ಲವಾದ್ದರಿಂದ ಉಪಾಸನಾ ಅವರು ಕುಕ್ಕರ್ ಒಂದನ್ನು ಜೊತೆಗೆ ಹೊತ್ತೊಯ್ಯುತ್ತಾರಂತೆ.

ಇದನ್ನೂ ಓದಿ:ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೇಲ ಆಸ್ತಿ ಮೌಲ್ಯ ಎಷ್ಟು ಸಾವಿರ ಕೋಟಿ?

ರಾಮ್ ಚರಣ್ ಅವರ ತಾಯಿ ಸುರೇಖಾ ಅವರು ತೆಲುಗು ಆಹಾರ ಸಂಸ್ಕೃತಿಯ ಪಲ್ಯ, ಸಾಂಬಾರ್, ರಸಂಗಳ ಮಿಶ್ರಣವನ್ನು ಮಾಡಿದ್ದು, ಅವುಗಳನ್ನು ಜೊತೆಗೆ ತೆಗೆದುಕೊಂಡು ಹೋಗುತ್ತಾರಂತೆ. ಹೋದ ಕಡೆ ಆ ಎಲೆಕ್ಟ್ರಿಕ್ ಕುಕ್ಕರ್ ಅನ್ನು ಜೋಡಿಸಿ ಅನ್ನ ಮಾಡಿಕೊಂಡು, ರೆಡಿ ಮಿಕ್ಸ್ ಹಾಕಿಕೊಂಡು ಊಟ ಮಾಡುತ್ತಾರಂತೆ ರಾಮ್ ಚರಣ್. ದೇಸಿ ಊಟ ಇಲ್ಲದೇ ಹೋದರೆ ರಾಮ್ ಚರಣ್​ಗೆ ಆಗುವುದೇ ಇಲ್ಲವಂತೆ.

ಅಂದಹಾಗೆ ರಾಮ್ ಚರಣ್ ತಾಯಿ, ಚಿರಂಜೀವಿ ಪತ್ನಿ ಸುರೇಖಾ ಹಾಗೂ ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೇಲ ಸೇರಿ ಪ್ರಾರಂಭ ಮಾಡಿರುವ ಸಂಸ್ಥೆ ‘ಅತ್ತಮ್ಮಾಸ್ ಕಿಚನ್’. ಸುರೇಖಾ ಹಾಗೂ ಚಿರಂಜೀವಿ ಅವರ ತಾಯಿ ಅಂಜನಾ ದೇವಿ ಅವರು ಸೇರಿಕೊಂಡು ಕೆಲವು ರೆಸಿಪಿಗಳನ್ನು ತಯಾರಿಸಿದ್ದು ಅವುಗಳನ್ನು ರೆಡಿ ಟು ಈಟ್ ರೀತಿಯಲ್ಲಿ ಸಿದ್ಧಪಡಿಸಿ ಆನ್​ಲೈನ್ ಮೂಲಕ ಮಾರಾಟ ಮಾಡುತ್ತಿದ್ದಾರೆ. ಈ ಬ್ಯುಸಿನೆಸ್ ನೋಡಿಕೊಳ್ಳುತ್ತಿರುವುದು ಉಪಾಸನಾ ಕೋನಿಡೆಲ. ಅತ್ತಮಾಸ್ ಕಿಚನ್​ನಲ್ಲಿ ರಸಂ, ಉಪ್ಮಾ, ಪುಲಿಹೋರ, ಸಾಂಬಾರ್, ಹಲವು ರೀತಿಯ ಪಚ್ಚಡಿಗಳನ್ನು ಸುರೇಖ ಅವರು ತಾವೇ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:40 am, Sun, 13 April 25

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ಮಾವಿನಹಣ್ಣು ಸೇವಿಸಿ ಅಸ್ವಸ್ಥರಾಗಿದ್ದ ಇಬ್ಬರು ಬಾಲಕಿಯರು ಸಾವು
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ರಾಜ್ಯಸಭೆಗೆ ಅವಿರೋಧ ಆಯ್ಕೆ: ಪ್ರಮಾಣಪತ್ರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಮಂಗಳೂರಿನಲ್ಲಿ ಬಂದಿಳಿದ ತಮಿಳುನಾಡು ಸಿಎಂ ಜೋಸೆಫ್ ವಿಜಯ್​ಗೆ ಅದ್ದೂರಿ ಸ್ವಾಗ
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ಖಾಸಗಿ ಜೆಟ್​​ನಲ್ಲಿ ಕುಟುಂಬದ ಜೊತೆ ಕ್ರಿಕೆಟ್ ಆಡಿದ ಸಚಿನ್ ತೆಂಡೂಲ್ಕರ್
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಭೇಟಿಯಾದ ಸಿಎಂ ಡಿಕೆಶಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಪ್ರಕಾಶ್ ರಾಜ್ ವಿರುದ್ಧ ಚಿನ್ನಯ್ಯ ಆರೋಪಕ್ಕೆ ಗೃಹ ಸಚಿವರು ಹೇಳಿದ್ದೇನು ನೋಡಿ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ವಿರುದ್ಧ ಪ್ರತಿಭಟನೆ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕೊಲ್ಲೂರಿಗೆ ತಮಿಳುನಾಡು ಸಿಎಂ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಭೀಕರ ಬರಗಾಲದ ಮುನ್ಸೂಚನೆಯಾ?
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ
ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ