Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಅಯೋಧ್ಯೆ ತಲುಪಿದ ರಾಮ, ಸೀತೆ ಮತ್ತು ಲಕ್ಷ್ಮಣ

ಇದಾಗಲೇ ರಾಮ ಮಂದಿರದಲ್ಲಿ ಧಾರ್ಮಿಕ ವಿಧಿ ಮಿಧಾನಗಳು  ಆರಂಭವಾಗಿದ್ದು, ಜನವರಿ 22 ರಂದು ನಡೆಯಲಿರುವ ರಾಮ ಲಾಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ  ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ.  ಇದೀಗ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ  ಸಮಾರಂಭಕ್ಕೂ ಮುನ್ನವೇ ರಾಮ, ಲಕ್ಷ್ಮಣ ಮತ್ತು ಸೀತೆ ಅಯೋಧ್ಯೆಗೆ ಆಗಮಿಸಿದ್ದಾರೆ. ಹೌದು ರಮಾನಂದ್ ಸಾಗರ್ ಅವರ  ರಾಮಾಯಣದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್, ಸೀತೆಯ ಪಾತ್ರವನ್ನು ನಿರ್ವಹಿಸಿದ್ದ ದೀಪಿಕಾ ಚಿಖ್ಲಿಯಾ ಹಾಗೂ ಲಕ್ಷ್ಮಣನ ಪಾತ್ರವನ್ನು ನಿರ್ವಹಿಸಿದ್ದ ಸುನೀಲ್ ಲಾಹಿರಿ ಈ ಮೂವರು ಜೊತೆಯಾಗಿ ಇಂದು ಅಯೋಧ್ಯೆಗೆ ಆಗಮಿಸಿದ್ದಾರೆ. 

Viral Video: ಅಯೋಧ್ಯೆ ತಲುಪಿದ ರಾಮ, ಸೀತೆ ಮತ್ತು ಲಕ್ಷ್ಮಣ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 17, 2024 | 2:32 PM

ರಾಮ ಮಂದಿರ ಉದ್ಘಾಟನೆಗೆ ದಿನ ಗಣನೆ  ಶುರುವಾಗಿದೆ. ಇದಾಗಲೇ ರಾಮ ಮಂದಿರದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ  ವಿದ್ಯುಕ್ತ ಚಾಲನೆ  ದೊರಕಿದೆ. ಜನವರಿ 16ರಿಂದಲೇ  ಪೂಜಾ ಕೈಂಕರ್ಯಗಳು ಆರಂಭವಾಗಿದ್ದು, ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನೂ ಜನವರಿ 22 ರಂದು ನಡೆಯಲಿರುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಜಕೀಯ ಮುಖಂಡರು, ಕಲಾವಿದರು, ಉದ್ಯಮಿಗಳು ಸೇರಿದಂತೆ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ. ಹಾಗೇನೇ ರಮಾನಂದ್ ಸಾಗರ್ ಅವರ  ರಾಮಾಯಣದಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ಅರುಣ್ ಗೋವಿಲ್, ಸೀತೆಯ ಪಾತ್ರವನ್ನು ನಿರ್ವಹಿಸಿದ್ದ ದೀಪಿಕಾ ಚಿಖಾಲಿಯಾ ಹಾಗೂ ಲಕ್ಷ್ಮಣನ ಪಾತ್ರವನ್ನು ನಿರ್ವಹಿಸಿದ್ದ ಸುನೀಲ್ ಲಾಹಿರಿ ಅವರಿಗೂ ಈಗಾಗಲೇ ಆಹ್ವಾನ ದೊರಕಿದ್ದು,   ಇದೀಗ ರಾಮ ಲಾಲ್ಲ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೂ ಮೊದಲೇ ರಾಮ, ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆಗೆ ಆಗಮಿಸಿದ್ದಾರೆ. ಈ ಮೂವರು ಜೊತೆಯಾಗಿ ಇಂದು ಅಯೋಧ್ಯೆಗೆ ಆಗಮಿಸಿದ್ದು, ಈ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಮಾನಂದ್ ಸಾಗರ್ ಅವರ ʼರಾಮಾಯಣʼ ಧಾರಾವಾಹಿಯ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. 1987 ರಿಂದ 1988 ರವೆಗೆ ಸುದೀರ್ಘ ಕಾಲ ಪ್ರಸಾರವಾಗಿದ್ದ ಈ ಧಾರಾವಾಹಿಯನ್ನು ಕೊರೊನಾ ಸಮಯದಲ್ಲಿಯೂ ಪ್ರಸಾರ ಮಾಡಲಾಗಿತ್ತು.  ಆಗಲೂ ಈ ಅತ್ಯದ್ಭುತ  ಭರ್ಜರಿ ಪ್ರದರ್ಶನವನ್ನು ಕಂಡಿತ್ತು. 80ರ ದಶಕದಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದ್ದ ಹೊತ್ತಿನಲ್ಲಿ ಜನರು ಟಿವಿಗೆ ಪೂಜೆ ಮಾಡಿ ಧಾರಾವಾಹಿ ನೋಡುತ್ತಿದ್ದರು. ಇನ್ನೂ ಶ್ರೀರಾಮನ ಪಾತ್ರವನ್ನು ನಿರ್ವಹಿಸಿದ್ದ ಅರುಣ್ ಗೋವಿಲ್ ಅವರು ಸ್ಕ್ರೀನ್ ಮೇಲೆ ಬಂದರಂತೂ ಜನರು ಕೈ ಮುಗಿದು  ಕೂರುತ್ತಿದ್ದರು.

ಇದನ್ನೂ ಓದಿ: Viral Video: ಪಾರ್ಲೇ-ಜಿ ಬಿಸ್ಕೆಟ್​​​ನಲ್ಲಿ ಮೂಡಿದ ಅಯೋಧ್ಯೆ ರಾಮ ಮಂದಿರ 

ವೈರಲ್​​​ ವಿಡಿಯೋ ಇಲ್ಲಿದೆ:

ದೀಪಿಕಾ ಚಿಖ್ಲಿಯಾ ಸೀತಾ ದೇವಿಯ ಪಾತ್ರವನ್ನು ನಿರ್ವಹಿಸಿ ಹಾಗೂ  ಸುನೀಲ್ ಲಾಹಿರಿ ಅವರು ಲಕ್ಷ್ಮಣನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ  ಎಲ್ಲರ ಮನ ಗೆದ್ದಿದ್ದರು.  ಈ ಮೂವರು ಮಹಾನ್ ಕಲಾವಿದರಿಗೂ ಈಗಾಗಲೇ ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ  ಆಹ್ವಾನ ನೀಡಲಾಗಿದ್ದು, ಇದೀಗ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ  ಸಮಾರಂಭಕ್ಕೂ ಮುನ್ನವೇ ರಾಮ, ಲಕ್ಷ್ಮಣ ಮತ್ತು ಸೀತೆ ಅಯೋಧ್ಯೆಗೆ ಆಗಮಿಸಿದ್ದಾರೆ. ಅಯೋಧ್ಯೆಗೆ ಆಗಮಿಸುತ್ತಿದ್ದಂತೆ ಈ ಮೂವರಿಗೂ ಭರ್ಜರಿ ಸ್ವಾಗತ ದೊರಕಿದ್ದು, ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Published On - 2:22 pm, Wed, 17 January 24