AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಾಗುತ್ತಿದೆ 3 ಇಡಿಯಟ್ಸ್, ಪಿಕೆ ಜೋಡಿ, ಈ ಬಾರಿ ಗೆದ್ದಾರೆಯೇ ಆಮಿರ್ ಖಾನ್?

Aamir Khan: ನಟ ಆಮಿರ್ ಖಾನ್ ಸೋಲಿನ ಸುಳಿಯಿಂದ ಹೊರಬರಲು ಹಳೆ ಗೆಳೆಯನ ಶರಣು ಹೋಗಿದ್ದಾರೆ.

ಒಂದಾಗುತ್ತಿದೆ 3 ಇಡಿಯಟ್ಸ್, ಪಿಕೆ ಜೋಡಿ, ಈ ಬಾರಿ ಗೆದ್ದಾರೆಯೇ ಆಮಿರ್ ಖಾನ್?
ಆಮಿರ್-ಹಿರಾನಿ
Follow us
ಮಂಜುನಾಥ ಸಿ.
|

Updated on: Jul 04, 2023 | 9:55 PM

ಬಾಲಿವುಡ್​ನ (Bollywood) ಖಾನ್ ತ್ರಯರಲ್ಲಿ ಶಾರುಖ್ ಖಾನ್ (Shah Rukh Khan) ಪಠಾಣ್ ಸಿನಿಮಾ ಮೂಲಕ ಸತತ ಸೋಲಿನ ಸುಳಿಯಿಂದ ಹೊರಬಂದಿದ್ದಾಗಿದೆ. ಸಲ್ಮಾನ್ ಖಾನ್ (Salman Khan) ಮುಂಬರುವ ಟೈಗರ್ 3 ಸಿನಿಮಾ ಮೂಲಕ ಮತ್ತೆ ಗೆಲುವಿನ ಹಳಿಗೆ ಬರುವ ನಿರೀಕ್ಷೆ ಮೂಡಿಸಿದ್ದಾರೆ. ಇನ್ನು ಆಮಿರ್ ಖಾನ್ ಸೋಲಿನ ಸರಪಳಿ ಕಳಚಿಕೊಳ್ಳಲು ಹಳೆ ಗೆಳೆಯನಿಗೆ ಶರಣು ಹೋಗಿದ್ದಾರೆ. ಈ ಹಿಂದೆ 3 ಇಡಿಯಟ್ಸ್ ಹಾಗೂ ಪಿಕೆ ಸಿನಿಮಾಗಳ ಮೂಲಕ ಆಮಿರ್ ಖಾನ್​ಗೆ (Aamir Khan) ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿದ್ದ ರಾಜ್​ಕುಮಾರ್ ಹಿರಾನಿ ಜೊತೆ ಆಮಿರ್ ಖಾನ್ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದೆ.

ಎಸ್​ಎಸ್ ರಾಜಮೌಳಿಯಂತೆಯೇ ರಾಜ್​ಕುಮಾರ್ ಹಿರಾನಿ ಸಹ ಸೋಲೆ ಇಲ್ಲದ ಸರದಾರ. ಮುನ್ನಾಭಾಯಿ ಎಂಬಿಬಿಎಸ್ ಸಿನಿಮಾದಿಂದ ಆರಂಭಿಸಿ ಈ ವರೆಗೆ ರಾಜ್​ಕುಮಾರ್ ಹಿರಾನಿ ನಿರ್ದೇಶನದ ಒಂದೂ ಸಿನಿಮಾ ಸೋತಿಲ್ಲ ಮಾತ್ರವಲ್ಲ ಕೇವಲ ಮಸಾಲೆ ಸಿನಿಮಾಗಳಲ್ಲದೆ ಸಂದೇಶವುಳ್ಳ ಸಿನಿಮಾಗಳ ಮೂಲಕವೇ ದೊಡ್ಡ ಹಿಟ್​ಗಳನ್ನು ಹಿರಾನಿ ಗಳಿಸುತ್ತಿದ್ದಾರೆ. ಅದೇ ಕಾರಣಕ್ಕೆ ಆಮಿರ್ ಖಾನ್ ಈಗ ಹಿರಾನಿ ಜೊತೆ ಕೈಜೋಡಿಸಿದ್ದಾರೆ ಎನ್ನಲಾಗುತ್ತಿದ್ದು, ಹಿಂದಿನ ಬಾರಿಯಂತೆ ಹೊಸ ಕತೆಯ ಬದಲಿಗೆ ಜೀವನ ಕತೆಯನ್ನು ಸಿನಿಮಾಕ್ಕಾಗಿ ಆಯ್ದುಕೊಂಡಿದೆ ಈ ಜೋಡಿ.

ಈ ಇಬ್ಬರೂ ಸೇರಿ ಬಾಲಿವುಡ್​ನ ಹಿರಿಯ ನಟರೊಬ್ಬರ ಜೀವನವನ್ನೇ ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾರ ಜೀವನ ಕತೆಯನ್ನು ಆಯ್ದುಕೊಂಡಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ರಾಜ್​ಕುಮಾರ್ ಹಿರಾನಿ ಪ್ರಸ್ತುತ ಶಾರುಖ್ ಖಾನ್ ಜೊತೆ ಸಿನಿಮಾ ಮಾಡುತ್ತಿದ್ದು ಆ ಸಿನಿಮಾ ಬಿಡುಗಡೆ ಬಳಿಕ ಆಮಿರ್ ಖಾನ್ ಜೊತೆಗಿನ ಸಿನಿಮಾ ಪ್ರಾರಂಭವಾಗಲಿದೆ.

ಇದನ್ನೂ ಓದಿ:‘ನಟನೆಗೆ ಸದ್ಯಕ್ಕಂತೂ ಕಂಬ್ಯಾಕ್ ಮಾಡುವ ಆಲೋಚನೆಯಲ್ಲಿಲ್ಲ’; ಕಾರಣ ತಿಳಿಸಿದ ನಟ ಆಮಿರ್ ಖಾನ್

ರಾಜ್​ಕುಮಾರ್ ಹಿರಾನಿ ಪ್ರಸ್ತುತ ಡಂಕಿ ಹೆಸರಿನ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಶಾರುಖ್ ಖಾನ್ ನಾಯಕ, ತಾಪ್ಸಿ ಪನ್ನು ನಾಯಕಿ. ಈ ಸಿನಿಮಾವು ಅಕ್ರಮ ವಲಸಿಗರ ಕುರಿತಾದ ಕತೆಯನ್ನು ಹೊಂದಿದೆ. ಸಿನಿಮಾವನ್ನು ಪಂಜಾಬ್ ಹಾಗೂ ಕೆನಡಾ, ಲಂಡನ್​ಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ ಹಿರಾನಿ. ಈ ಸಿನಿಮಾದ ಬಿಡುಗಡೆಯ ಬಳಿಕವಷ್ಟೆ ಆಮಿರ್ ಖಾನ್ ಜೊತೆಗಿನ ಸಿನಿಮಾದ ಬಗ್ಗೆ ಸ್ಪಷ್ಟನೆ ದೊರಕಲಿದೆ.

ಆಮಿರ್ ಖಾನ್​ರ ಈ ಹಿಂದಿನ ಸಿನಿಮಾ ಲಾಲ್ ಸಿಂಗ್ ಛಡ್ಡ ಹೀನಾಯ ಸೋಲು ಕಂಡಿದೆ. ಇಂಗ್ಲೀಷ್​ನ ಫಾರೆಸ್ಟ್ ಗಂಫ್ ಸಿನಿಮಾವನ್ನು ಆಮಿರ್ ಖಾನ್ ಹಿಂದಿಯಲ್ಲಿ ರೀಮೇಕ್ ಮಾಡಿದ್ದರು. ಇಂಗ್ಲೀಷ್​ನಲ್ಲಿ ದಾಖಲೆಗಳನ್ನು ಬರೆದು ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದ್ದ ಈ ಸಿನಿಮಾ ಹಿಂದಿಯಲ್ಲಿ ತೀರ ಹೀನಾಯ ಸೋಲು ಕಂಡಿತು. 2016 ರಲ್ಲಿ ಬಿಡುಗಡೆ ಆಗಿದ್ದ ದಂಗಲ್ ಬಳಿಕ ಆಮಿರ್ ಖಾನ್ ಸತತ ಸೋಲು ಕಾಣುತ್ತಿದ್ದಾರೆ. ಲಾಲ್ ಸಿಂಗ್ ಛಡ್ಡಕ್ಕೆ ಮುನ್ನ ಪೂರ್ಣ ಪ್ರಮಾಣದ ನಾಯಕನ ಪಾತ್ರದಲ್ಲಿ ನಟಿಸಿದ್ದ ಥಗ್ಸ್ ಆಫ್ ಹಿಂದೊಸ್ತಾನ್ ಸಿನಿಮಾ ಸಹ ಸೋಲು ಕಂಡು ನಷ್ಟ ಅನುಭವಿಸಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೊಲೆ ಪಾತಕಿಯನ್ನು ಹಿಡಿಯಲು ಪೊಲೀಸ್ ಅಧಿಕಾರಿ ಮಾಡಿದ ಸಾಹಸ ನೋಡಿ
ಕೊಲೆ ಪಾತಕಿಯನ್ನು ಹಿಡಿಯಲು ಪೊಲೀಸ್ ಅಧಿಕಾರಿ ಮಾಡಿದ ಸಾಹಸ ನೋಡಿ
ಗಣ್ಯರ ಜೊತೆ ಹಿಂಬಾಲಕರು ಬೇಡವೆಂದು ವಿನಂತಿಸಿಕೊಳ್ಳಲಾಗಿದೆ: ಸೀಮಾ ಲಾಟ್ಕರ್
ಗಣ್ಯರ ಜೊತೆ ಹಿಂಬಾಲಕರು ಬೇಡವೆಂದು ವಿನಂತಿಸಿಕೊಳ್ಳಲಾಗಿದೆ: ಸೀಮಾ ಲಾಟ್ಕರ್
ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್