AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೈಟ್ ಮಾಸ್ಟರ್​ಗಳ ನಡುವೆ ಫೈಟ್: ರವಿ ವರ್ಮಾ ವಿರುದ್ಧ ಡ್ಯಾನಿ ದೂರು

Ravi Varma-Diffrent Dany: ಜನಪ್ರಿಯ ಫೈಟ್ ಮಾಸ್ಟರ್​ಗಳಾದ ಡಿಫರೆಂಟ್ ಡ್ಯಾನಿ ಹಾಗೂ ರವಿ ವರ್ಮಾ ನಡುವೆ ಫೈಟ್ ಶುರುವಾಗಿದೆ. ರವಿವರ್ಮಾ ತಮಗೆ ಜೀವ ಬೆದರಿಕೆ ಹಾಕಿದ್ದಾರೆಂದು ಡ್ಯಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ.

ಫೈಟ್ ಮಾಸ್ಟರ್​ಗಳ ನಡುವೆ ಫೈಟ್: ರವಿ ವರ್ಮಾ ವಿರುದ್ಧ ಡ್ಯಾನಿ ದೂರು
ಮಂಜುನಾಥ ಸಿ.
|

Updated on: Mar 13, 2024 | 12:11 PM

Share

ಚಿತ್ರರಂಗದ ಜನಪ್ರಿಯ ಫೈಟ್ ಮಾಸ್ಟರ್​ಗಳ ಮಧ್ಯೆ ಫೈಟ್ ಶುರುವಾಗಿದೆ. ಕನ್ನಡ ಚಿತ್ರರಂಗ ಮಾತ್ರವೇ ಅಲ್ಲದೆ ಹಲವು ಚಿತ್ರರಂಗಗಳಲ್ಲಿ ಕೆಲಸ ಮಾಡುತ್ತಿರುವ ಫೈಟ್ ಮಾಸ್ಟರ್ ರವಿ ವರ್ಮಾ (Ravi Varma) ವಿರುದ್ಧ ಅಷ್ಟೆ ಜನಪ್ರಿಯ ಹಾಗೂ ಹಿರಿಯ ಫೈಟ್ ಮಾಸ್ಟರ್ ಆಗಿರುವ ಡ್ಯಾನಿ ಮಾಸ್ಟರ್ ಅಲಿಯಾಸ್ ಢಿಫರೆಂಟ್ ಡ್ಯಾನಿ, ಜೀವ ಬೆದರಿಕೆ ಹಾಕಿರುವ ಆರೋಪ ಮಾಡಿದ್ದಾರೆ. ಈಗಾಗಲೇ ಫಿಲಂ ಛೇಂಬರ್ ಹಾಗೂ ನಿರ್ಮಾಪಕರ ಸಂಘಕ್ಕೆ ದೂರು ನೀಡಿರುವ ಡ್ಯಾನಿ ಮಾಸ್ಟರ್, ಇಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದಾರೆ.

ಡ್ಯಾನಿ ಮಾಸ್ಟರ್ ಹಾಗೂ ರವಿ ವರ್ಮಾ ನಡುವಿನ ಮುನಿಸು ಹಳೆಯದ್ದು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಡ್ಯಾನಿ ಮಾಸ್ಟರ್, ‘ರವಿ ವರ್ಮಾ, ನನ್ನ ಕೆಲಸವನ್ನು ತನ್ನ ಕೆಲಸ ಎಂದು ಹೇಳಿಕೊಂಡು ಪರಭಾಷೆಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾನೆ’ ಎಂದು ಆರೋಪ ಮಾಡಿದ್ದರು. ರವಿವರ್ಮಾ ಸುಳ್ಳುಗಾರ ಎಂದು ಸಹ ಹೇಳಿದ್ದರು. ಇದೀಗ ಡ್ಯಾನಿ, ರವಿ ವರ್ಮಾ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಿದ್ದಾರೆ.

‘ಜಾಕಿ’ ಸಿನಿಮಾದಲ್ಲಿ ಬೆಂಕಿ ಫೈಟ್ ಒಂದಿದೆ. ಡ್ಯಾನಿ ಮಾಸ್ಟರ್ ಹೇಳಿರುವಂತೆ ಆ ಫೈಟ್ ಅನ್ನು ಕಂಪೋಸ್ ಮಾಡಿರುವುದು ಡ್ಯಾನಿ ಮಾಸ್ಟರ್. ಆದರೆ ನಟ ಪ್ರಭುದೇವ ಅವರು ಒಮ್ಮೆ ಪುನೀತ್ ಜೊತೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಆ ಫೈಟ್ ದೃಶ್ಯಗಳನ್ನು ನೋಡಿ ರವಿವರ್ಮಾ ಅವರನ್ನು ಕರೆಸಿಕೊಂಡು ಅವರಿಗೆ ಅವಕಾಶ ಕೊಟ್ಟರಂತೆ. ಅದಾದ ಬಳಿಕ ರವಿವರ್ಮಾ, ಟಾಲಿವುಡ್, ಕಾಲಿವುಡ್, ಬಾಲಿವುಡ್​ಗಳಲ್ಲಿಯೂ ಫೈಟ್ ನಿರ್ದೇಶಕರಾಗಿ ಖ್ಯಾತರಾದರು. ಆದರೆ ಡ್ಯಾನಿ ಹೇಳಿರುವಂತೆ ಆ ಅವಕಾಶ ಬರಬೇಕಾಗಿದ್ದಿದ್ದು ಅವರಿಗೆ, ಏಕೆಂದರೆ ಪ್ರಭುದೇವ ನೋಡಿ ಮೆಚ್ಚಿಕೊಂಡ ಫೈರ್ ಫೈಟ್ ಅನ್ನು ಕಂಪೋಸ್ ಮಾಡಿದ್ದು ಡ್ಯಾನಿ ಮಾಸ್ಟರ್.

ಇದನ್ನೂ ಓದಿ:ಯೋಗಿ ಕಿವಿಗೆ ಏಟು ಬಿದ್ದಾಗ ಪುನೀತ್​ ಏನು ಮಾಡಿದ್ರು? ‘ಹುಡುಗರು’ ಘಟನೆ ನೆನೆದ ರವಿ ವರ್ಮಾ

‘‘ನನಗೆ ಪ್ರಭುದೇವ ಸಿಕ್ಕಿಲ್ಲ, ಸಿಕ್ಕರೆ ಖಂಡಿತ ಈ ವಿಷಯ ಕೇಳುತ್ತೇನೆ. ರವಿವರ್ಮಾ, ನನ್ನ ಕೆಲಸ ತೋರಿಸಿ, ಸುಳ್ಳು ಹೇಳಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ’ ಎಂದು ಡ್ಯಾನಿ ಹೇಳಿದ್ದರು. ಇದೀಗ ಇದೇ ವಿಷಯಕ್ಕೆ ಡ್ಯಾನಿ ಮಾಸ್ಟರ್ ಹಾಗೂ ರವಿವರ್ಮಾ ನಡುವೆ ಜಗಳ ನಡೆದಿದೆ ಎನ್ನಲಾಗುತ್ತಿದೆ. ರವಿ ವರ್ಮಾ, ತಮಗೆ ಜೀವ ಬೆದರಿಕೆ ಹಾಕಿದ್ದಾರೆಂದು ಡ್ಯಾನಿ ಮಾಸ್ಟರ್ ಆರೋಪ ಮಾಡಿದ್ದಾರೆ.

‘ಜಾಕಿ’ ಸಿನಿಮಾಕ್ಕಾಗಿ ನಾನು ಮಾಡಿದ್ದ ಫೈರ್ ಫೈಟ್ ಅನ್ನು ತಾನು ಮಾಡಿದ್ದು ಎಂದು ಪ್ರಭುದೇವ ಬಳಿ ಹೇಳಿಕೊಂಡು ರವಿವರ್ಮಾ ಬಾಲಿವುಡ್​ಗೆ ಹೋಗಿರುತ್ತಾರೆ. ಆದರೆ ಅದು ಸುಳ್ಳೆಂದು ನಾನು ಹೇಳಿದ್ದೆ. ಈ ಬಗ್ಗೆ ಮಾತನಾಡಲು ರವಿವರ್ಮಾ ನಾಲ್ಕೈದು ಬಾರಿ ನನಗೆ ಕರೆ ಮಾಡಿದ್ದರು. ಆದರೆ ನಾನು ವೈಯಕ್ತಿಕ ಸಮಸ್ಯೆಗಳಿಂದಾಗಿ ಕರೆ ಸ್ವೀಕರಿಸಿರಲಿಲ್ಲ. ಆಗ ರವಿವರ್ಮಾ, ನನ್ನ ಸಹಾಯಕ ಮಂಜುಗೆ ಕರೆ ಮಾಡಿ ನನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ಅಲ್ಲದೆ, ‘ಮಾಸ್ತಿಗುಡಿ’ ಸಿನಿಮಾ ದುರಂತ ನಡೆದಾಗ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಗಲೇ ಅವನನ್ನು (ಡ್ಯಾನಿ) ಮುಗಿಸಬೇಕು ಎಂದುಕೊಂಡಿದ್ದೆ, ಆದರೆ ನನ್ನ ಅಕ್ಕ ತಡೆದರು’ ಎಂದು ಜೀವ ಬೆದರಿಕೆ ಹಾಕಿದ್ದಾನೆ’ ಎಂದು ಡ್ಯಾನಿ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್