AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Soundarya: ಸೌಂದರ್ಯಾ ಜನ್ಮದಿನ: ‘ದ್ವೀಪ’ದಿಂದ ‘ಆಪ್ತಮಿತ್ರ’ವರೆಗೆ ಅದ್ಭುತ ನಟನೆ ತೋರಿದ ನಟಿಯ ಮರೆಯೋದುಂಟೆ?

Happy Birthday Soundarya: ಖ್ಯಾತ ನಟಿ ಸೌಂದರ್ಯಾ ಮಾಡಿದ ಪಾತ್ರಗಳು ಅಭಿಮಾನಿಗಳ ಮನದಲ್ಲಿ ಅಚ್ಚಾಗಿವೆ. ಇಂದಿಗೂ, ಎಂದೆಂದಿಗೂ ಅವರನ್ನು ಪ್ರೇಕ್ಷಕರು ಮಿಸ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.

Soundarya: ಸೌಂದರ್ಯಾ ಜನ್ಮದಿನ: ‘ದ್ವೀಪ’ದಿಂದ ‘ಆಪ್ತಮಿತ್ರ’ವರೆಗೆ ಅದ್ಭುತ ನಟನೆ ತೋರಿದ ನಟಿಯ ಮರೆಯೋದುಂಟೆ?
ಸೌಂದರ್ಯಾ
TV9 Web
| Edited By: |

Updated on: Jul 18, 2022 | 8:37 AM

Share

ನಟಿ ಸೌಂದರ್ಯಾ (Soundarya) ಅವರನ್ನು ಕನ್ನಡ ಚಿತ್ರರಂಗ (Sandalwood) ಎಂದಿಗೂ ಮರೆಯಲು ಸಾಧ್ಯವಿಲ್ಲ. ಎಲ್ಲ ಬಗೆಯ ಪಾತ್ರಗಳಿಗೂ ಜೀವ ತುಂಬಿದ ಅವರ ಪ್ರತಿಭೆಗೆ ಸರಿಸಾಟಿ ಆಗಬಲ್ಲಂತಹ ಮತ್ತೋರ್ವ ನಟಿ ಇಲ್ಲ. ಸೌಂದರ್ಯಾ ಎಂಬ ಹೆಸರಿಗೆ ತಕ್ಕಂತೆಯೇ ಅವರು ರೂಪವತಿ ಆಗಿದ್ದರು. ಅವರ ಅಂದಕ್ಕೆ ಮರುಳಾಗದವರೇ ಇಲ್ಲ ಎನ್ನಬಹುದು. ಅದೇ ರೀತಿ, ನಟನೆ ಕಂಡು ವಾವ್​ ಎನ್ನದ ಪ್ರೇಕ್ಷಕರೇ ಇಲ್ಲ. ಇಂದು (ಜುಲೈ 18) ಸೌಂದರ್ಯಾ ಜನ್ಮದಿನ (Soundarya Birthday). ಭೌತಿಕವಾಗಿ ಅವರು ನಮ್ಮ ಜೊತೆ ಇಲ್ಲ. ಆದರೂ ಕೂಡ ಸಿನಿಮಾಗಳ ಮೂಲಕ, ಮನಮೋಹಕ ಪಾತ್ರಗಳ ಮೂಲಕ ಅವರು ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿ ಇರುತ್ತಾರೆ. ನೆಚ್ಚಿನ ನಟಿಯನ್ನು ನೆನಪು ಮಾಡಿಕೊಂಡು ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲಾಗುತ್ತಿದೆ.

ಸೌಂದರ್ಯಾ ಅವರ ಮೂಲ ಹೆಸರು ಕೆ.ಎಸ್​. ಸೌಮ್ಯ. ಆದರೆ ಚಿತ್ರರಂಗದಲ್ಲಿ ಅವರು ಸೌಂದರ್ಯಾ ಎಂಬ ಹೆಸರಿನಿಂದ ಗುರುತಿಸಿಕೊಂಡರು. ದೇಶಾದ್ಯಂತ ಮನೆಮಾತಾಗುವ ಮಟ್ಟಕ್ಕೆ ಅವರು ಬೆಳೆದುನಿಂತರು. ಕೇವಲ 12 ವರ್ಷದಲ್ಲಿ 100ಕ್ಕೂ ಅಧಿಕ ಸಿನಿಮಾ ಮಾಡಿ ಸೈ ಎನಿಸಿಕೊಂಡರು. ಆ ಮೂಲಕ ‘ಆಧುನಿಕ ತೆಲುಗು ಚಿತ್ರರಂಗದ ಸಾವಿತ್ರಿ’ ಎಂಬ ಬಿರುದು ಪಡೆದರು. ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡರು.

ಪಾತ್ರಗಳ ಆಯ್ಕೆಯಲ್ಲಿ ಸೌಂದರ್ಯಾ ಅವರು ಯಾವಾಗಲೂ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು. ‘ಸಿಪಾಯಿ’ ಸಿನಿಮಾದ ಹಳ್ಳಿ ಹುಡುಗಿ, ‘ದ್ವೀಪ’ ಸಿನಿಮಾದ ಮಲೆನಾಡಿನ ರೈತ ಮಹಿಳೆ, ‘ಆಪ್ತಮಿತ್ರ’ ಸಿನಿಮಾದ ನಾಗವಲ್ಲಿ/ಗಂಗಾ ಸೇರಿದಂತೆ ಬಗೆಬಗೆಯ ಪಾತ್ರಗಳನ್ನು ಅವರು ನಿಭಾಯಿಸಿದರು. ಆ ಮೂಲಕ ಅಭಿಮಾನಿಗಳ ಹೃದಯ ಕದ್ದರು.

ಇದನ್ನೂ ಓದಿ
Image
Sanchari Vijay: ಸಂಚಾರಿ ವಿಜಯ್​ ಹುಟ್ಟುಹಬ್ಬ: ಪ್ರತಿಭಾನ್ವಿತ ನಟನ ನೆನೆದು ‘ಮಿಸ್​ ಯೂ’ ಎನ್ನುತ್ತಿದೆ ಸ್ಯಾಂಡಲ್​ವುಡ್​
Image
ಗಿರೀಶ್​ ಕಾರ್ನಾಡ್​ ಜನ್ಮದಿನ: ವಿಷ್ಣುವರ್ಧನ್​, ಶಂಕರ್​ನಾಗ್​ಗೆ ಮೊದಲು ಆ್ಯಕ್ಷನ್​-ಕಟ್​ ಹೇಳಿದ್ದೇ ಗಿರೀಶ್​ ಕಾರ್ನಾಡ್​
Image
ಶಂಕರ್ ​ನಾಗ್​ ನಿಧನರಾದಾಗ ಅಂತ್ಯಸಂಸ್ಕಾರಕ್ಕೆ ಬರಲು ಮಾಸ್ಟರ್​ ಮಂಜುನಾಥ್​ಗೆ ಸಾಧ್ಯವಾಗಲಿಲ್ಲ; ಕಾರಣ ಏನು?
Image
ವಿದೇಶಿ ನ್ಯೂಸ್​ ಚಾನೆಲ್​ಗಳಲ್ಲಿ ಪುನೀತ್​ ನಿಧನದ ಸುದ್ದಿ; ಸೌತ್​ ಕೊರಿಯಾದಲ್ಲೂ ಅಭಿಮಾನದ ಹೊಳೆ

ನಿರ್ಮಾಪಕಿಯಾಗಿಯೂ ಸೌಂದರ್ಯಾ ಗುರುತಿಸಿಕೊಂಡಿದ್ದರು. ಅವರು ನಿರ್ಮಿಸಿದ ‘ದ್ವೀಪ’ ಚಿತ್ರಕ್ಕೆ ಎರಡು ‘ರಾಷ್ಟ್ರ ಪ್ರಶಸ್ತಿ’ ಒಲಿದು ಬಂದವು. ನಾಲ್ಕು ‘ರಾಜ್ಯ ಪ್ರಶಸ್ತಿ’, ಮೂರು ‘ಫಿಲ್ಮ್​ ಫೇರ್​’ ಪ್ರಶಸ್ತಿ ಪಡೆದುಕೊಂಡಿದ್ದು ಈ ಸಿನಿಮಾದ ಹೆಗ್ಗಳಿಕೆ. ಇಂಥ ಸಂವೇದನಾಶೀಲ ಸಿನಿಮಾವನ್ನು ನಿರ್ಮಿಸಿದ ಅವರಿಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಯಿತು. ಇಷ್ಟೆಲ್ಲ ಸಾಧನೆ ಮಾಡಿದ ನಟಿ ಕೇವಲ 31ನೇ ವಯಸ್ಸಿಗೆ ಇಹಲೋಕ ತ್ಯಜಿಸುತ್ತಾರೆ ಎಂಬುದನ್ನು ಯಾರೂ ಊಹಿಸಿರಲಿಲ್ಲ.

ಅದು, 2004ರ ಏಪ್ರಿಲ್ 17. ಚುನಾವಣಾ ಪ್ರಚಾರಕ್ಕಾಗಿ ಅವರು ಪ್ರಯಾಣ ಮಾಡುತ್ತಿದ್ದ ವಿಮಾನ ಅಪಘಾತಕ್ಕೆ ಈಡಾಯಿತು. ಚಿತ್ರರಂಗದಲ್ಲಿ ಧ್ರುವತಾರೆಯಂತೆ ಮಿಂಚುತ್ತಿದ್ದ ಅವರು ಈ ರೀತಿ ದುರ್ಮರಣ ಹೊಂದಿದರು ಎಂಬ ಸುದ್ದಿ ಕೇಳಿ ಅಭಿಮಾನಿಗಳ ಎದೆಗೆ ಸಿಡಿಲು ಬಡಿದಂತೆ ಆಯಿತು. ಇಂದಿಗೂ, ಎಂದೆಂದಿಗೂ ಸೌಂದರ್ಯಾ ಅವರನ್ನು ಪ್ರೇಕ್ಷಕರು ಮಿಸ್​ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?