AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಫೋಟೋಶೂಟ್​ನಲ್ಲಿ ಮಿಂಚುತ್ತಿರುವ ನಟಿ ಪಾರುಲ್​ ಯಾದವ್​; ಫ್ಯಾನ್ಸ್​ ಫಿದಾ

ರಮೇಶ್​ ಅರವಿಂದ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬಟರ್​ಫ್ಲೈ’ ಚಿತ್ರದಲ್ಲಿ ಪಾರುಲ್​ ಯಾದವ್​ ಅವರು ಅಭಿನಯಿಸಿದ್ದಾರೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾದ ರಿಲೀಸ್​ ತಡವಾಗುತ್ತಲೇ ಇದೆ.

ಹೊಸ ಫೋಟೋಶೂಟ್​ನಲ್ಲಿ ಮಿಂಚುತ್ತಿರುವ ನಟಿ ಪಾರುಲ್​ ಯಾದವ್​; ಫ್ಯಾನ್ಸ್​ ಫಿದಾ
ಪಾರುಲ್​ ಯಾದವ್​
TV9 Web
| Updated By: ಮದನ್​ ಕುಮಾರ್​|

Updated on: Aug 01, 2021 | 5:13 PM

Share

ನಟಿ ಪಾರುಲ್​ ಯಾದವ್​ (Parul Yadav) ಅವರಿಗೆ ಬಹುಭಾಷೆಯಲ್ಲಿ ಅಭಿಮಾನಿಗಳಿದ್ದಾರೆ. ಕನ್ನಡದಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡಿದ ಅವರು ಮೂಲತಃ ಮುಂಬೈನವರು. ಕಿಚ್ಚ ಸುದೀಪ್​, ಉಪೇಂದ್ರ ಮುಂತಾದ ಸ್ಟಾರ್​ ನಟರ ಜೊತೆ ತೆರೆ ಹಂಚಿಕೊಳ್ಳುವ ಚಾನ್ಸ್​ ಅವರಿಗೆ ಸಿಕ್ಕಿತ್ತು. 2000ನೇ ಇಸವಿಯಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಪಾರುಲ್​ಗೆ ಒಂದು ದಶಕದ ಅನುಭವ ಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾ ಆಯ್ಕೆ ಮಾಡಿಕೊಳ್ಳಲು ವಿಳಂಬ ಮಾಡುತ್ತಿದ್ದಾರೆ. ಹಾಗಂತ ಅವರು ಅಭಿಮಾನಿಗಳಿಂದ ದೂರ ಇಲ್ಲ. ಸೋಶಿಯಲ್​ ಮೀಡಿಯಾ ಮೂಲಕ ಫ್ಯಾನ್ಸ್​ ಜೊತೆ ಪಾರುಲ್ ಸದಾ ಸಂಪರ್ಕದಲ್ಲಿ ಇರುತ್ತಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಪಾರುಲ್​ ಯಾದವ್​ಗೆ 6.7 ಲಕ್ಷಕ್ಕೂ ಅಧಿಕ ಫಾಲೋವರ್ಸ್​ ಇದ್ದಾರೆ. ಕಲರ್​ಫುಲ್​ ಆದಂತಹ ಫೋಟೋಶೂಟ್​ಗಳ ಮೂಲಕ ಅವರು ಆಗಾಗ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಪಾರುಲ್​ ಯಾದವ್​ ಮಾಡಿಸಿರುವ ಹೊಸ ಫೋಟೋಶೂಟ್​ ಕೂಡ ಆಕರ್ಷಕವಾಗಿದೆ. ಗ್ಲಾಮರಸ್​ ಲುಕ್​ನಲ್ಲಿ ಅವರು ಮಿಂಚಿದ್ದಾರೆ. ತಿಳಿ ನೀಲಿ ಬಣ್ಣದ ಉಡುಗೆ ಧರಿಸಿ, ಪಡ್ಡೆಗಳ ನಿದ್ದೆ ಕೆಡಿಸಿದ್ದಾರೆ.

View this post on Instagram

A post shared by Parul Yadav (@theparulyadav)

ಪಾರುಲ್​ ಯಾದವ್​ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳದೇ ಬಹಳ ಸಮಯ ಆಗಿದೆ. 2018ರಲ್ಲಿ ತೆರೆಕಂಡ ‘ಸೀಜರ್​’ ಚಿತ್ರವೇ ಕೊನೆ. ಆ ಬಳಿಕ ಅವರ ಬೇರಾವುದೇ ಸಿನಿಮಾ ತೆರೆಕಂಡಿಲ್ಲ. ರಮೇಶ್​ ಅರವಿಂದ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಬಟರ್​ಫ್ಲೈ’ ಚಿತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಆದರೆ ಕಾರಣಾಂತರಗಳಿಂದ ಆ ಸಿನಿಮಾದ ರಿಲೀಸ್​ ತಡವಾಗುತ್ತಲೇ ಇದೆ. ಇದು ಹಿಂದಿಯ ಸೂಪರ್​ ಹಿಟ್​ ‘ಕ್ವೀನ್​’ ಸಿನಿಮಾದ ಕನ್ನಡ ರಿಮೇಕ್​. ಹಿಂದಿಯಲ್ಲಿ ಕಂಗನಾ ರಣಾವತ್​ ಮಾಡಿದ ಪಾತ್ರವನ್ನು ಕನ್ನಡದಲ್ಲಿ ಪಾರುಲ್​ ಯಾದವ್​ ಮಾಡಿದ್ದಾರೆ. ‘ಬಟರ್​ಫ್ಲೈ’ ಚಿತ್ರಕ್ಕೆ ಅವರು ಸಹ-ನಿರ್ಮಾಪಕಿ ಕೂಡ ಹೌದು. ಈ ಎಲ್ಲ ಕಾರಣಗಳಿಂದಾಗಿ ಆ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇದೆ.

View this post on Instagram

A post shared by Parul Yadav (@theparulyadav)

ಈ ವರ್ಷ ಪಾರುಲ್​ ಮತ್ತು ಅವರ ಕುಟುಂಬದ ಸದಸ್ಯರಿಗೆ ಕೊರೊನಾ ಪಾಸಿಟಿವ್​ ಆಗಿತ್ತು. ಆ ದಿನಗಳ ಅನುಭವದ ಬಗ್ಗೆ ಇತ್ತೀಚೆಗೆ ಅವರು ಮಾತನಾಡಿದ್ದರು. ‘ಒಂದು ರಾತ್ರಿ ಸುಮಾರು ಎರಡೂವರೆಯ ಸುಮಾರಿಗೆ ಜ್ವರ 103 ಡಿಗ್ರಿಗಿಂತಲೂ ಏರಿ, ಕೈಕಾಲುಗಳು ನಡುಗಲು ಪ್ರಾರಂಭಿಸಿದ್ದವು. ಆಗ ಡಾಕ್ಟರ್​ಗೆ ಕರೆ ಮಾಡಿ ನನಗಿನ್ನು ಸಾಧ್ಯವಿಲ್ಲ ಎಂದಿದ್ದೆ. ಆಗ ಧೈರ್ಯ ತುಂಬಿದ್ದ ವೈದ್ಯರು, ಆತ್ಮವಿಶ್ವಾಸದಿಂದಿರಿ; ಅದೊಂದೇ ನಿಮ್ಮನ್ನು ಕಾಪಾಡುವುದು ಎಂದಿದ್ದರು. ತಕ್ಷಣ ನಾನು ಹೋಗಿ ಥಂಡಿ ಬಟ್ಟೆಯನ್ನು ತಲೆಗೆ ಹಾಕಿಕೊಂಡು ವಿಶ್ರಮಿಸಿದೆ. ಆ ರಾತ್ರಿ ಕಳೆದ ಮೇಲೆ ನನಗೊಂದು ಖಾತ್ರಿಯಾಯಿತು. ಇಷ್ಟು ಭೀಕರ ಜ್ವರವೂ ನನ್ನ ಪ್ರಾಣಕ್ಕೆ ಹಾನಿ ಮಾಡದ ಮೇಲೆ ಬದುಕುಳಿಯುತ್ತೇನೆ ಎನಿಸಿತು’ ಎಂದು ಪಾರುಲ್​ ಹೇಳಿದ್ದರು.

ಇದನ್ನೂ ಓದಿ:

ಕೊವಿಡ್​ನಿಂದ ಭಯಭೀತರಾದ ರೋಗಿಗಳಿಗೆ ಉತ್ಸಾಹ ತುಂಬಲು ವೈದ್ಯರಿಂದ ಮನೋರಂಜನೆ​; ವಿಡಿಯೋ ವೈರಲ್​

ಫ್ರೆಂಡ್​ಶಿಪ್​ ಡೇ ಪ್ರಯುಕ್ತ RRR​ ಚಿತ್ರದ ‘ದೋಸ್ತಿ’ ಹಾಡು ರಿಲೀಸ್​; ಕನ್ನಡಿಗರಿಗೆ ಕಾಡಿದೆ ಒಂದು ಕೊರತೆ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ