AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್ ಸಾರಥಿಗೆ ಹುಟ್ಟುಹಬ್ಬದ ಸಂಭ್ರಮ, 43ನೇ ವಸಂತಕ್ಕೆ ಕಾಲಿಟ್ಟ ಚಾಲೆಂಜಿಂಗ್ ಸ್ಟಾರ್

‘ಮೆಜೆಸ್ಟಿಕ್’​ನಲ್ಲಿ ಕಾಲಿಟ್ಟು.. ‘ಧ್ರುವ’ ತಾರೆಯಾಗಿ ಮಿಂಚಿ. ‘ಕಿಟ್ಟಿ’ ಅನ್ನೋ ಪಟ್ಟ ಗಿಟ್ಟಿಸ್ಕೊಂಡು ರೋಸ್​ ಹಿಡಿದ ‘ಕರಿಯ’ ಇದೀಗ ಅಭಿಮಾನಿಗಳ ಪಾಲಿನ ‘ದಾಸ’. ಸ್ಯಾಂಡಲ್​​ವುಡ್​ನ ‘ಸಾರಥಿ’ ‘ಚಕ್ರವರ್ತಿ’ಯಾಗಿ ಮೆರೆಯುತ್ತಿದ್ದಾರೆ. ಇವತ್ತು ದಚ್ಚು ಫ್ಯಾನ್ಸ್​ ಪಾಲಿಗೆ ವೆರಿ ವೆರಿ​ ಸ್ಪೆಷಲ್ ಡೇ. ಅದೇ ‘ರಾಬರ್ಟ್’ ಬರ್ತ್​​ ಡೇ. ಖುಷಿ ಎಲ್ಲೆ ಮೀರಿದೆ. ಸಂಭ್ರಮ, ಸಡಗರ ಜೋರಾಗಿದೆ. ಡಿಬಾಸ್. ಡಿಬಾಸ್ ಅನ್ನೋ ಘೋಷಣೆ ಮುಗಿಲು ಮುಟ್ಟಿದೆ. ನಿದ್ದೆ ಬಿಟ್ಟು ಒಡೆಯನ ಕಣ್ತುಂಬಿಕೊಳ್ಳೋಕೆ ದಾಂಗುಡಿ ಇಟ್ಟಿದ್ದಾರೆ. ಡಿಬಾಸ್​​ಗೆ ಅಭಿಮಾನದ ವಿಶ್ ಮಾಡೋಕೆ ಎಲ್ರೂ […]

ಸ್ಯಾಂಡಲ್​ವುಡ್ ಸಾರಥಿಗೆ ಹುಟ್ಟುಹಬ್ಬದ ಸಂಭ್ರಮ, 43ನೇ ವಸಂತಕ್ಕೆ ಕಾಲಿಟ್ಟ ಚಾಲೆಂಜಿಂಗ್ ಸ್ಟಾರ್
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Feb 16, 2020 | 2:06 PM

Share

‘ಮೆಜೆಸ್ಟಿಕ್’​ನಲ್ಲಿ ಕಾಲಿಟ್ಟು.. ‘ಧ್ರುವ’ ತಾರೆಯಾಗಿ ಮಿಂಚಿ. ‘ಕಿಟ್ಟಿ’ ಅನ್ನೋ ಪಟ್ಟ ಗಿಟ್ಟಿಸ್ಕೊಂಡು ರೋಸ್​ ಹಿಡಿದ ‘ಕರಿಯ’ ಇದೀಗ ಅಭಿಮಾನಿಗಳ ಪಾಲಿನ ‘ದಾಸ’. ಸ್ಯಾಂಡಲ್​​ವುಡ್​ನ ‘ಸಾರಥಿ’ ‘ಚಕ್ರವರ್ತಿ’ಯಾಗಿ ಮೆರೆಯುತ್ತಿದ್ದಾರೆ. ಇವತ್ತು ದಚ್ಚು ಫ್ಯಾನ್ಸ್​ ಪಾಲಿಗೆ ವೆರಿ ವೆರಿ​ ಸ್ಪೆಷಲ್ ಡೇ. ಅದೇ ‘ರಾಬರ್ಟ್’ ಬರ್ತ್​​ ಡೇ.

ಖುಷಿ ಎಲ್ಲೆ ಮೀರಿದೆ. ಸಂಭ್ರಮ, ಸಡಗರ ಜೋರಾಗಿದೆ. ಡಿಬಾಸ್. ಡಿಬಾಸ್ ಅನ್ನೋ ಘೋಷಣೆ ಮುಗಿಲು ಮುಟ್ಟಿದೆ. ನಿದ್ದೆ ಬಿಟ್ಟು ಒಡೆಯನ ಕಣ್ತುಂಬಿಕೊಳ್ಳೋಕೆ ದಾಂಗುಡಿ ಇಟ್ಟಿದ್ದಾರೆ. ಡಿಬಾಸ್​​ಗೆ ಅಭಿಮಾನದ ವಿಶ್ ಮಾಡೋಕೆ ಎಲ್ರೂ ಎಂಟ್ರಿ ಕೊಟ್ಟಿದ್ದಾರೆ.

ಸ್ಯಾಂಡಲ್​​ವುಡ್​​​ ‘ಒಡೆಯ’ನಿಗೆ ಹುಟ್ಟುಹಬ್ಬದ ಸಂಭ್ರಮ! ಚಾಲೆಂಜಿಂಗ್ ಸ್ಟಾರ್ ದರ್ಶನ್​. ಸ್ಯಾಂಡಲ್​​​ವುಡ್​ನಲ್ಲಿ ಸುನಾಮಿಯಂತೆ ಫ್ಯಾನ್ಸ್ ಫಾಲೋವಿಂಗ್ ಹೊಂದಿರೋ ಭೂಪತಿ ಬರ್ತ್​ಡೇ ಜೋರಾಗಿದೆ. ಇವತ್ತು 43ನೇ ವಸಂತಕ್ಕೆ ದಾಸ ಕಾಲಿಟ್ಟಿದ್ರೆ, ಅಭಿಮಾನಿಗಳಲ್ಲಿ ಹಬ್ಬದಂತಹ ಸಂಭ್ರಮ. ದಚ್ಚು ಮೀಟ್ ಆಗೋಕೆ ಕಾತರದಿಂದ ಕಾಯ್ತಿದ್ದ ಅಭಿಮಾನಿಗಳು ಡಿಬಾಸ್ ಜನುಮದಿನವನ್ನ ಅದ್ಧೂರಿಯಾಗಿ ಆಚರಿಸಿದ್ರು.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರೋ ದರ್ಶನ್​ ಮನೆ ಬಳಿ ಸಂಭ್ರಮ ಮನೆ ಮಾಡಿತ್ತು. ರಾಜ್ಯದ ಮೂಲೆ ಮೂಲೆಯಿಂದ್ಲೂ ಸಾವಿರಾರು ಅಭಿಮಾನಿಗಳು ಆಗಮಿಸಿದ್ರು. ಒಡೆಯನಿಗೆ ಪ್ರೀತಿ, ಅಭಿಮಾನದಿಂದ ಹುಟ್ಟು ಹಬ್ಬದ ಶುಭಾಷಯ ಕೋರಿದ್ರು.

ಡಿಬಾಸ್ ಬರ್ತ್​ ಡೇಗೆ ವಾರಕ್ಕೂ ಮೊದಲೇ ಅಭಿಮಾನಿಗಳು ಸಕಲ ತಯಾರಿ ಮಾಡ್ಕೊಂಡಿದ್ರು. ಪ್ರತೀ ಬಾರಿಯಂತೆ ಈ ಬಾರಿಯೂ ದರ್ಶನ್​ ಮನೆಮುಂದೆ ಸಾಲು ಸಾಲಾಗಿ ಬೃಹತ್ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ದರ್ಶನ್​ ಮನೆಯ ಮುಂದೆ ಹಬ್ಬದ ವಾತಾರವಣವೇ ಸೃಷ್ಟಿಯಾಗಿತ್ತು.

ಭೂಪತಿ ಬರ್ತ್​ ಡೇಯನ್ನ ಅಭಿಮಾನಿಗಳು ಭರ್ಜರಿಯಾಗಿ ಸೆಲಬ್ರೇಟ್ ಮಾಡಿದ್ರು. ಕಳೆದ ವರ್ಷ ದರ್ಶನ್ ಮಾಡಿದ ಮನವಿಯನ್ನ ಈ ಬಾರಿಯೂ ಅಭಿಮಾನಿಗಳು ಚಾಚು ತಪ್ಪದೇ ಪಾಲಿಸಿದ್ರು. ಹೂವಿನ ಹಾರ, ಗಿಫ್ಟ್​, ಕೇಕ್​ಗಳನ್ನ ತಂದು ದುಂದುಚ್ಚ ಮಾಡದೇ. ಆಹಾರ ಪದಾರ್ಥಗಳನ್ನ ಹೊತ್ತು ದರ್ಶನ್​ ಮನೆಯತ್ತ ಹೆಜ್ಜೆ ಹಾಕ್ತಿದ್ರು. ದವಸ, ಧಾನ್ಯಗಳನ್ನ ದಾನ ಮಾಡಿ ಮತ್ತೊಬ್ಬರಿಗೆ ನೆರವಾಗಿ ಎಂದು ಮನವಿ ಮಾಡಿದ್ದ ದರ್ಶನ್​ ಮಾತನ್ನ ಈ ಬಾರಿಯೂ ಅಭಿಮಾನಿ ಬಳಗ ಪಾಲಿಸಿದ್ರು.

ಇನ್ನು, ದರ್ಶನ್ ಹುಟ್ಟುಹಬ್ಬಕ್ಕೆ ಅವರ ಸಿನಿಮಾ ತಂಡದಿಂದ ಸರ್ಪ್ರೈಸ್ ಇದ್ದೇ ಇರುತ್ತೆ. ಅಂತೆಯೇ ದರ್ಶನ್ ಅಭಿನಯದ ಬಹು ನೀರೀಕ್ಷಿತ ಚಿತ್ರ ರಾಬರ್ಟ್ ಟೀಸರ್ ಮಧ್ಯರಾತ್ರಿ ರಿಲೀಸ್ ಮಾಡಲಾಯ್ತು. ರಾತ್ರಿ ಕೇಕ್ ಕಟ್ಟಿಂಗ್ ನಂತರ ಇಂದು ಇಡೀ ದಿನ ಅಭಿಮಾನಿಗಳ ನಡುವೆಯೇ ದಚ್ಚು ಕಾಲ ಕಳೆಯಲಿದ್ದಾರೆ.

Published On - 7:22 am, Sun, 16 February 20

Follow Us
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್