AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಜೈಲಲ್ಲಿ ದರ್ಶನ್ ಊಟ: 2 ಚಪಾತಿ, 355 ಗ್ರಾಂ ಅನ್ನ, 650 ಗ್ರಾಂ ಸಾಂಬರ್, 205 ಗ್ರಾಂ ಮಜ್ಜಿಗೆ

ಬಳ್ಳಾರಿ ಜೈಲಿಗೆ ಶಿಫ್ಟ್​ ಆದ ಬಳಿಕ ದರ್ಶನ್​ ಸಾಮಾನ್ಯ ಖೈದಿಯಂತೆ ದಿನ ಕಳೆಯುವುದು ಅನಿವಾರ್ಯ ಆಗಿದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಅವರು ಊಟ ಮಾಡಿರಲಿಲ್ಲ. ಆದರೆ ಜೈಲಿನ ನಿಗದಿತ ಸಮಯದ ಪ್ರಕಾರ ಸಂಜೆ 7 ಗಂಟೆಗೆ ದರ್ಶನ್​ ಊಟ ಸೇವಿಸಿದ್ದಾರೆ. ಪರಪ್ಪನ ಅಗ್ರಹಾರದಲ್ಲಿದ್ದಾಗ ಮನೆ ಊಟ ಬೇಕು ಎನ್ನುತ್ತಿದ್ದ ಅವರಿಗೆ ಈಗ ಜೈಲಿನ ಊಟವೇ ಗತಿ ಆಗಿದೆ.

ಬಳ್ಳಾರಿ ಜೈಲಲ್ಲಿ ದರ್ಶನ್ ಊಟ: 2 ಚಪಾತಿ, 355 ಗ್ರಾಂ ಅನ್ನ, 650 ಗ್ರಾಂ ಸಾಂಬರ್, 205 ಗ್ರಾಂ ಮಜ್ಜಿಗೆ
ದರ್ಶನ್​
ವಿನಾಯಕ ಬಡಿಗೇರ್​
| Edited By: |

Updated on: Aug 29, 2024 | 8:47 PM

Share

ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆಯುತ್ತಿದ್ದ ದರ್ಶನ್​ ಅವರು ಈಗ ಬಳ್ಳಾರಿ ಜೈಲಿನಲ್ಲಿ ಸಾಮಾನ್ಯ ಖೈದಿಯಂತೆ ದಿನ ಕಳೆಯುತ್ತಿದ್ದಾರೆ. ಇಂದು (ಆಗಸ್ಟ್​ 29) ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ ರಾತ್ರಿ ಊಟ ಸೇವಿಸಿದ್ದಾರೆ. ಅವರಿಗೆ 2 ಚಪಾತಿ-ಪಲ್ಯ, ಅನ್ನ ಸಾಂಬರ್, ಮಜ್ಜಿಗೆ ನೀಡಲಾಗಿದೆ. ಜೈಲಿನ ನಿಯಮದಂತೆ 355 ಗ್ರಾಂ ಅನ್ನ, 650 ಗ್ರಾಂ ಸಾಂಬರ್, 205 ಗ್ರಾಂ ಮಜ್ಜಿಗೆಯನ್ನು ಜೈಲಿನ ಸಿಬ್ಬಂದಿ ನೀಡಿದ್ದಾರೆ. ಇಷ್ಟು ದಿನ ಮನೆಯೂಟ ಬೇಕು ಎನ್ನುತ್ತಿದ್ದ ದರ್ಶನ್​ ಈಗ ಜೈಲಿನ ಊಟವನ್ನೇ ಮಾಡುವುದು ಅನಿವಾರ್ಯ ಆಗಿದೆ.

ಬಳ್ಳಾರಿ ಶೈಲಿಗೆ ಶಿಫ್ಟ್​ ಆ ಬಳಿಕ ಬೆಳಗ್ಗೆ, ಮಧ್ಯಾಹ್ನ ದರ್ಶನ್​ ಅವರು ಊಟ ನಿರಾಕರಿಸಿದ್ದರು. ಆದರೆ ರಾತ್ರಿ ಊಟ ಸೇವಿಸಿದ್ದಾರೆ. ಜೈಲಿನ ನಿಗದಿತ ಸಮಯದಂತೆ ಸಂಜೆ 7 ಗಂಟೆಗೆ ಊಟ ನೀಡಲಾಗಿದೆ. ಸಾಮಾನ್ಯ ಖೈದಿಗಳಂತೆ ದರ್ಶನ್​ ಕೂಡ ಜೈಲೂಟ ಸೇವಿಸಿ ಸೆಲ್​ಗೆ ತೆರಳಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಇದ್ದಾಗ ಮನೆಯೂಟಕ್ಕಾಗಿ ದರ್ಶನ್​ ಅರ್ಜಿ ಸಲ್ಲಿಸಿದ್ದರು. ಆದರೆ ಅದಕ್ಕೆ ಕೂರ್ಟ್​ ಅನುಮತಿ ನೀಡಿರಲಿಲ್ಲ.

ತಮ್ಮ ಪ್ರಭಾವ ಬಳಸಿ ಪರಪ್ಪನ ಅಗ್ರಹಾರದಲ್ಲಿ ದರ್ಶನ್​ ಟೀ, ಸಿಗರೇಟ್​, ಮೊಬೈಲ್​ ಮುಂತಾದ ಸೌಲಭ್ಯ ಪಡೆದಿದ್ದರು. ಆ ಫೋಟೋ ಮತ್ತು ವಿಡಿಯೋ ಲೀಕ್​ ಆದ ಬಳಿಕ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಯಿತು. ಅದರ ಪರಿಣಾಮವಾಗಿ ದರ್ಶನ್​ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಗಿದೆ. ಇನ್ನುಳಿದ ಆರೋಪಿಗಳನ್ನು ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.

ಇದನ್ನೂ ಓದಿ: ದರ್ಶನ್​ ಸ್ನೇಹಿತ ಪ್ರದೋಷ್​ ತಂದಿದ್ದ ವಸ್ತುಗಳ ಇಂಚಿಂಚೂ ತಪಾಸಣೆ ಮಾಡಿದ ಪೊಲೀಸ್

ದರ್ಶನ್ ಅನಾರೋಗ್ಯದ ಬಗ್ಗೆ ಹಬ್ಬಿರುವುದು ಕೇವಲ ವದಂತಿ ಎಂದು ಎಸ್​ಪಿ ಶೋಭಾರಾಣಿ ಹೇಳಿದ್ದಾರೆ. ಬಳ್ಳಾರಿ ಜೈಲಿಗೆ ಭೇಟಿ ನೀಡಿದ ಬಳಿಕ ಅವರು ಹೇಳಿಕೆ ನೀಡಿದ್ದಾರೆ. ‘ಜೈಲಿನಲ್ಲಿರುವ ದರ್ಶನ್​​ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಯಾವುದೇ ವದಂತಿಗಳಿಗೆ ಕಿವಿಕೊಡಬೇಡಿ. ದರ್ಶನ್ ಧರಿಸಿದ್ದ ಕಡಗ, ದಾರ ಬಿಚ್ಚಿಸಲಾಗಿದೆ. ಕೂಲಿಂಗ್ ಗ್ಲಾಸ್ ಬಗ್ಗೆ ಪರಿಶೀಲಿಸ್ತಿದ್ದೇವೆ. ದರ್ಶನ್​ ಜೈಲಿನ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ. ಜೈಲಿನ ನಿಯಮದಂತೆ ಕುಟುಂಬಸ್ಥರಿಗೆ ಅವಕಾಶ ಇರುತ್ತದೆ. ಸದ್ಯ ದರ್ಶನ್ ಭೇಟಿಗೆ ಯಾರು ಬರ್ತಾರೆಂಬ ಮಾಹಿತಿ ಇಲ್ಲ’ ಎಂದು ಬಳ್ಳಾರಿ ಪೊಲೀಸ್​ ವರಿಷ್ಠಾಧಿಕಾರಿ ಶೋಭಾರಾಣಿ ಹೇಳಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ಇದ್ದಾಗ ದರ್ಶನ್ ಅವರ ಭೇಟಿಗೆ ಅನೇಕರು ಆಗಮಿಸುತ್ತಿದ್ದರು. ಆದರೆ ಈಗ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಿದ್ದರಿಂದ ಅಲ್ಲಿಗೆ ತೆರಳುವವರ ಆಪ್ತರ ಸಂಖ್ಯೆ ಕಡಿಮೆ ಆಗಲಿದೆ. ಬೆಂಗಳೂರಿನಲ್ಲಿದ್ದ ಕುಟುಂಬದವರು ಬಳ್ಳಾರಿಗೆ ಹೋಗಿ ಭೇಟಿ ಮಾಡುವುದು ಕೂಡ ಕಷ್ಟ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ