AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಡಬಿಡದೆ 28 ಗಂಟೆ ಶೂಟ್; ದರ್ಶನ್​ಗೆ ಮತ್ತೆ ಶುರುವಾಯ್ತು ಬೆನ್ನು ನೋವು

ದರ್ಶನ್ ಅವರು ‘ಡೆವಿಲ್’ ಸಿನಿಮಾದ 28 ಗಂಟೆಗಳ ನಿರಂತರ ಶೂಟಿಂಗ್ ನಂತರ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಈ ಮೊದಲು ಇದ್ದ ಬೆನ್ನು ನೋವು ಮತ್ತೆ ಹೆಚ್ಚಾಗಿದ್ದು, ಕೋರ್ಟ್ ಹಾಜರಾತಿಯಿಂದಲೂ ಅವರು ದೂರ ಉಳಿದಿದ್ದಾರೆ. ಚಿತ್ರೀಕರಣದ ವೇಳಾಪಟ್ಟಿಯನ್ನು ಪೂರ್ಣಗೊಳಿಸುವ ಒತ್ತಡದಿಂದಾಗಿ ಈ ಘಟನೆ ನಡೆದಿದೆ.

ಎಡಬಿಡದೆ 28 ಗಂಟೆ ಶೂಟ್; ದರ್ಶನ್​ಗೆ ಮತ್ತೆ ಶುರುವಾಯ್ತು ಬೆನ್ನು ನೋವು
ದರ್ಶನ್
ಮಾಲತೇಶ ಜಗ್ಗೀನ್
| Edited By: |

Updated on: Apr 08, 2025 | 1:02 PM

Share

ನಟ ದರ್ಶನ್ (Darshan) ಅವರು ‘ಡೆವಿಲ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಬೆನ್ನು ನೋವಿಗೆ ಫಿಸಿಯೋ ಥೆರೆಪಿ ಮಾಡಿಸಿಕೊಳ್ಳುತ್ತಾ, ಅಗತ್ಯ ಮೆಡಿಕೇಷನ್ ಮಾಡುತ್ತಾ ದರ್ಶನ್ ಸೆಟ್​ಗೆ ಮರಳಿದ್ದಾರೆ. ಈಗ 28 ಗಂಟೆ ನಿರಂತರ ಶೂಟ್​ನಿಂದಾಗಿ ದರ್ಶನ್ ಅವರಿಗೆ ಮತ್ತೆ ಬೆನ್ನು ನೋವು ಅತಿಯಾಗಿದೆ ಎಂಬ ವರದಿ ಹರಿದಾಡಿದೆ. ಅವರು ಇಂದು (ಏಪ್ರಿಲ್ 8) ಕೋರ್ಟ್​ಗೆ ಹಾಜರಾಗಬೇಕಿತ್ತು. ಆದರೆ, ಬೆನ್ನು ನೋವಿನ ಕಾರಣ ನೀಡಿ ಅವರು ಬಂದಿಲ್ಲ. ಶೂಟಿಂಗ್ ಎಫೆಕ್ಟ್​ನಿಂದಾಗಿ ದರ್ಶನ್ ಬೆನ್ನು ನೋವು ಹೆಚ್ಚಾಗಿದೆ ಎನ್ನಲಾಗಿದೆ.

ದರ್ಶನ್ ಅವರು ಮೈಸೂರಿನಲ್ಲಿ ಕೆಲವು ದಿನಗಳ ಕಾಲ ಶೂಟ್ ಮಾಡಿದರು. ಈ ವೇಳೆ ಕೇವಲ ಟಾಕಿ ಪೋರ್ಷನ್ ಮಾತ್ರ ಇತ್ತು ಎನ್ನಲಾಗಿದೆ. ದರ್ಶನ್ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಆ್ಯಕ್ಷನ್ ದೃಶ್ಯಗಳನ್ನು ನಿರ್ದೇಶಕ ಪ್ರಕಾಶ್ ಮಾಡಿಸಿರಲಿಲ್ಲ. ರಾಜಸ್ಥಾನದಲ್ಲಿ ಯಾವ ದೃಶ್ಯಗಳ ಶೂಟ್ ನಡೆದಿದೆ ಎಂಬ ಮಾಹಿತಿ ಇನ್ನೂ ರಿವೀಲ್ ಆಗಿಲ್ಲ. ಆದರೆ, ಅವರು ಅಲ್ಲಿ ಬರೋಬ್ಬರಿ 28 ಗಂಟೆಗಳ ಕಾಲ ಶೂಟಿಂಗ್ ಮಾಡಿದ್ದರು ಎನ್ನಲಾಗುತ್ತಿದೆ.

ಬಾಲಿವುಡ್ ನಟ, ನಿರ್ದೇಶಕ ಮಹೇಶ್ ಮಂಜ್ರೇಕರ್ ‘ಡೆವಿಲ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕೆಲಸ ವಿಳಂಬ ಆಗಿದ್ದು, ಅವರ ಕಾಲ್​ಶೀಟ್ ಮುಗಿಯೋ ಹಂತದಲ್ಲಿ ಇತ್ತು. ಈ ಕಾರಣಕ್ಕೆ ದರ್ಶನ್ ಅವರು ನಿರಂತರವಾಗಿ ಶೂಟ್​ನಲ್ಲಿ ಭಾಗಿ ಆಗಿ, ಅವರ ಕಾಂಬಿನೇಷನ್​ನಲ್ಲಿ ಬರುವ ಶೂಟ್​ನ ಪೂರ್ಣಗೊಳಿಸಿಕೊಟ್ಟಿದ್ದಾರಂತೆ. ಇದಕ್ಕೆ ಅವರು ತೆಗೆದುಕೊಂಡಿದ್ದು ಬರೋಬ್ಬರಿ 28 ಗಂಟೆ.

ಇದನ್ನೂ ಓದಿ
Image
ಕೋರ್ಟ್​ಗೆ ಬರಲೇ ಬೇಕು, ದರ್ಶನ್​ಗೆ ನ್ಯಾಯಾಲಯದ ಎಚ್ಚರಿಕೆ
Image
ಬೆನ್ನು ನೋವಿನ ಕಾರಣ ಹೇಳಿ ಕೋರ್ಟ್​ಗೆ ಗೈರಾದ ದರ್ಶನ್
Image
ಸಾಯಿ ಪಲ್ಲವಿ ಧ್ವನಿ ಅದೆಷ್ಟು ಕ್ಯೂಟ್; ಅವರ ಹಾಡು ಕೇಳಿ
Image
ಐಪಿಎಲ್ ಬೆಟ್ಟಿಂಗ್ ಪ್ರಮೋಷನ್ ಮಾಡೋ ಇನ್​ಫ್ಲ್ಯುಯೆನ್ಸ್​ರಗಳಿಗೆ ನೋಟಿಸ್

ಬೆನ್ನು ನೋವಿನ ಸಮಸ್ಯೆ ಇದ್ದು 28 ಗಂಟೆಗಳ ಕಾಲ ಶೂಟ್ ಮಾಡುವುದು ಎಂದರೆ ಅದು ಸಣ್ಣ ಮಾತಲ್ಲ. ಅದನ್ನು ದರ್ಶನ್ ಮಾಡಿ ತೋರಿಸಿದ್ದಾರೆ. ಆದರೆ, ಅದು ಈಗ ಅವರಿಗೆ ಬ್ಯಾಕ್ ಫೈಯರ್ ಆಗಿದೆ. ಮತ್ತೆ ಬೆನ್ನು ನೋವು ಹೆಚ್ಚಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ‘ನನಗೆ ಬರೋಕಾಗಲ್ಲ, ವಿನಾಯಿತಿ ಕೊಡಿ’; ಬೆನ್ನು ನೋವಿನ ಕಾರಣ ಹೇಳಿ ಕೋರ್ಟ್​ಗೆ ಗೈರಾದ ದರ್ಶನ್

ಹೈದರಾಬಾದ್​ನಲ್ಲಿ ಮುಂದಿನ ಹಂತದ ಶೂಟ್

ಹೈದರಾಬಾದ್​ನಲ್ಲಿ ಮುಂದಿನ ಹಂತದ ಶೂಟ್ ನಡೆಯಲಿದೆಯಂತೆ. ಅದು ಯಾವಾಗ ಎನ್ನುವ ಬಗ್ಗೆ ತಂಡದ ಕಡೆಯಿಂದ ಅಪ್​​ಡೇಟ್ ಬಂದಿಲ್ಲ. ಸಿನಿಮಾ ಈ ವರ್ಷವೇ ರಿಲೀಸ್ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆ: ಬಿಗಿ ಭದ್ರತೆ
ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಪ್ರತಿಭಟನೆ: ಬಿಗಿ ಭದ್ರತೆ
ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್!
ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್!
ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್!
ವಿಟಿಯು ಸಿಂಡಿಕೇಟ್ ಸದಸ್ಯನಿಂದಲೇ ಪರೀಕ್ಷಾ ಗೋಲ್ಮಾಲ್!
ಕಳಪೆ ಆಹಾರ ಪೂರೈಸುವ ಹೋಟೆಲ್​ಗಳಿಗೆ 5 ಲಕ್ಷ ರೂ. ವರೆಗೆ ದಂಡ!
ಕಳಪೆ ಆಹಾರ ಪೂರೈಸುವ ಹೋಟೆಲ್​ಗಳಿಗೆ 5 ಲಕ್ಷ ರೂ. ವರೆಗೆ ದಂಡ!
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಇಂದು ಫ್ರೀಡಂಪಾರ್ಕ್​ನಲ್ಲಿ ಜೆಡಿಎಸ್​ ಪ್ರತಿಭಟನೆ; ಸಂಚಾರ ಮಾರ್ಗ ಬದಲಾವಣೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳಗೌರಿ ವ್ರತ ಇಂದು: ಮೇಷಾದಿ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ
ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ