AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ ಹಾರೈಕೆ ಪಡೆದ ‘ಮೆಹಬೂಬಾ’ ಸಿನಿಮಾ ಮಾ.15ಕ್ಕೆ ಬಿಡುಗಡೆ; ಇಲ್ಲಿದೆ ಟ್ರೇಲರ್​..

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ‘ಮೆಹಬೂಬಾ’ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಬೇರೆ ಬೇರೆ ಊರುಗಳಿಂದ ಬಂದ ರೈತರು ಈ ಚಿತ್ರದ ಟ್ರೇಲರ್​ ಅನಾವರಣ ಮಾಡಿ ಶುಭ ಹಾರೈಸಿದ್ದಾರೆ. ಮಾಡರ್ನ್​ ರೈತ ಶಶಿ ಅವರು ಈ ಸಿನಿಮಾ ಮೂಲಕ ಚಂದನವನಕ್ಕೆ ಹೀರೋ ಆಗಿ ಎಂಟ್ರಿ ನೀಡುತ್ತಿದ್ದಾರೆ. ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ.

ರೈತರ ಹಾರೈಕೆ ಪಡೆದ ‘ಮೆಹಬೂಬಾ’ ಸಿನಿಮಾ ಮಾ.15ಕ್ಕೆ ಬಿಡುಗಡೆ; ಇಲ್ಲಿದೆ ಟ್ರೇಲರ್​..
ಮೆಹಬೂಬಾ ಸಿನಿಮಾ ಟ್ರೇಲರ್​ ಬಿಡುಗಡೆ ಸಮಾರಂಭ
ಮದನ್​ ಕುಮಾರ್​
|

Updated on: Mar 11, 2024 | 10:03 PM

Share

ಬಿಗ್​ ಬಾಸ್​ ವಿನ್ನರ್​, ಮಾಡರ್ನ್​ ರೈತ ಎಂದು ಫೇಮಸ್​ ಆಗಿರುವ ಶಶಿ ಅವರು ಮೆಹಬೂಬಾ’ (Mehabooba) ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾ ಈಗ ಜನರ ಎದುರು ಬರಲು ಸಜ್ಜಾಗಿದೆ. ಮಾರ್ಚ್​ 15ರಂದು ‘ಮೆಹಬೂಬಾ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಚಿತ್ರದ ರಿಲೀಸ್​ಗೆ ದಿನಗಣನೆ ಆರಂಭ ಆಗಿರುವಾಗ ಟ್ರೇಲರ್​ ಅನಾವರಣ ಮಾಡಲಾಗಿದೆ. ಶಶಿ (Bigg Boss Shashi) ಜೊತೆ ಪಾವನಾ ಗೌಡ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಟ್ರೇಲರ್​ (Mehabooba Movie Trailer) ಬಿಡುಗಡೆ ಸಮಾರಂಭಕ್ಕೆ ರೈತರು ಬಂದು ಶುಭ ಕೋರಿದ್ದಾರೆ. ಆ ಮೂಲಕ ಮಾಡರ್ನ್​ ರೈತ ಶಶಿಗೆ ರೈತರು ಸಾಥ್​ ನೀಡಿದ್ದಾರೆ.

ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ ಚಿತ್ರರಂಗದ ಸೆಲೆಬ್ರಿಟಿಗಳು, ರಾಜಕೀಯದ ಗಣ್ಯರನ್ನು ಆಹ್ವಾನಿಸುವ ಟ್ರೆಂಡ್​ ಇದೆ. ಆದರೆ ‘ಮೆಹಬೂಬಾ’ ಸಿನಿಮಾದ ಟ್ರೇಲರ್​ ಬಿಡುಗಡೆಗೆ ರೈತರೇ ಮುಖ್ಯ ಅತಿಥಿಗಳು! ಶಶಿ ಅವರ ಸಿನಿಮಾ ಪ್ರಯತ್ನಕ್ಕೆ ಅನ್ನದಾತರಾದ ರೈತರು ವಿಶ್​ ಮಾಡಿದ್ದಾರೆ. ರೈತರಿಂದ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಸಿ ಚಿತ್ರತಂಡದವರು ಖುಷಿಪಟ್ಟಿದ್ದಾರೆ. ಬೆಂಗಳೂರಿನಲ್ಲಿ ನಡೆದ ‘ಮೆಹಬೂಬಾ’ ಟ್ರೇಲರ್ ರಿಲೀಸ್​ ಸಮಾರಂಭಕ್ಕೆ ರಾಜ್ಯದ ಹಲವು ಊರುಗಳಿಂದ ರೈತರು ಬಂದಿದ್ದರು.

‘ಮೆಹಬೂಬಾ’ ಸಿನಿಮಾಗೆ ಅನೂಪ್ ಆ್ಯಂಟೋನಿ ಅವರು ನಿರ್ದೇಶನ ಮಾಡಿದ್ದಾರೆ. ಟ್ರೇಲರ್​ ಬಿಡುಗಡೆ ಬಳಿಕ ಶಶಿ ಮಾತನಾಡಿದರು. ‘ಬಿಗ್ ಬಾಸ್​ ಶೋನಲ್ಲಿ ನನ್ನನ್ನು ನೋಡಿದವರು, ರೈತಾಪಿ ವರ್ಗದವರು ಹಾಗೂ ನಾನು ಯಾರಿಗೆ ಪರಿಚಯ ಇದ್ದೇನೋ ಅವರೇ ನನ್ನ ಫಸ್ಟ್ ಸರ್ಕಲ್​ನಲ್ಲಿ ಇರುತ್ತಾರೆ. ಅವರು ಚಿತ್ರಮಂದಿರಕ್ಕೆ ಬಂದು ನನ್ನ ಚಿತ್ರವನ್ನು ನೋಡಬೇಕು ಅಂತ ಮನವಿ ಮಾಡಿಕೊಳ್ಳುತ್ತೇನೆ. ಸಿನಿಮಾ ಚೆನ್ನಾಗಿದೆ ಎಂದು ನೀವು ಬೇರೆಯವರಿಗೆ ಹೇಳಿದರೆ ಇನ್ನುಳಿದ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ. ಪ್ರೇಕ್ಷಕರು ಇಲ್ಲದಿದ್ದರೆ ಒಳ್ಳೆಯ ಸಿನಿಮಾ ನಿಲ್ಲುವುದು ಕಷ್ಟ’ ಎಂದಿದ್ದಾರೆ ಶಶಿ. ಆ ಮೂಲಕ ಅವರು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

‘ಮೆಹಬೂಬಾ’ ಸಿನಿಮಾದ ಟ್ರೇಲರ್​:

ಚಿತ್ರರಂಗಕ್ಕೆ ಶಶಿ ಹೊಸ ಹೀರೋ. ಅವರ ಜೊತೆ ಅನುಭವಿ ಕಲಾವಿದರು ಕೆಲಸ ಮಾಡಿದ್ದಾರೆ. ಕಂಟೆಂಟ್​ ಮೇಲೆ ಚಿತ್ರತಂಡಕ್ಕೆ ಭರವಸೆ ಇದೆ. ಸರ್ವಧರ್ಮ ಸಾಮರಸ್ಯ ಸಾರುವ ಈ ಚಿತ್ರದಲ್ಲಿ ಶಶಿ ಮತ್ತು ಪಾವನಾ ಗೌಡ ಅವರು ಜೋಡಿ ಆಗಿದ್ದಾರೆ. ಬೆಂಗಳೂರಿನ ವಿವಿಧ ಭಾಗಗಳಿಗೆ ತೆರಳಿ ಅವರು ಈಗಾಗಲೇ ಪ್ರಚಾರ ಮಾಡಿದ್ದಾರೆ. ಕೇರಳದ ಒಂದು ನೈಜ ಘಟನೆಯನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾವನ್ನು ಮಾಡಲಾಗಿದೆ ಎಂಬುದು ವಿಶೇಷ.

ಇದನ್ನೂ ಓದಿ: ಮಾರ್ಚ್ 15ಕ್ಕೆ ‘ಮೆಹಬೂಬಾ’ ಬಿಡುಗಡೆ; ಗಲ್ಲಿ ಗಲ್ಲಿಯಲ್ಲಿ ಶಶಿ-ಪಾವನಾ ವಿಶೇಷ ಪ್ರಚಾರ

‘ಮೆಹಬೂಬಾ’ ಸಿನಿಮಾಗೆ ಮ್ಯಾಥ್ಯೂಸ್‌ ಮನು ಅವರ ಸಂಗೀತ ನಿರ್ದೇಶನವಿದೆ. ಕಿರಣ್ ಹಂಪಾಪುರ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ ಮಾಡಿದ್ದಾರೆ. ಆ್ಯಕ್ಷನ್​ ದೃಶ್ಯಗಳು ಮಾಸ್ ಮಾದ ಅವರ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿವೆ. ಕಲೈ ಅವರು ಡ್ಯಾನ್ಸ್​ ಕೊರಿಯೋಗ್ರಫಿ ಮಾಡಿದ್ದಾರೆ. ‘ಮೆಹಬೂಬಾ’ ಚಿತ್ರವನ್ನು ‘ದಕ್ಷ್ ಎಂಟರ್​ಟೇನ್ಮೆಂಟ್ಸ್​’ ಸಹಯೋಗದಲ್ಲಿ ‘ಬಾಲಾಜಿ ಮೋಷನ್ ಪಿಕ್ಚರ್ಸ್’ ಮೂಲಕ ಶಶಿ ಅವರೇ ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್