Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾಮಿಲಿ ಪ್ರೇಕ್ಷಕರಿಗಾಗಿ ಕುಟುಂಬದವರೆಲ್ಲ ಸೇರಿ ಮಾಡಿದ ಸಿನಿಮಾ ‘ಜನಕ’; ಏನಿದರ ಕಥೆ?

‘ಜನಕ’ ಚಿತ್ರದಲ್ಲಿ ಹೀರೋ ಆಗಿ ಮನು ನಟಿಸಿದ್ದಾರೆ. ಅವರ ಜೊತೆ ನಾಯಕಿಯರಾಗಿ ರಕ್ಷಾ ಹಾಗೂ ಶಾಲಿನಿ ಅಭಿನಯಿಸಿದ್ದಾರೆ. ಸುರೇಶ್​ ಬಾಬು, ರಾಜಲಕ್ಷ್ಮಿ, ಆನಂದ್​ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಸ್ಯಾಂಡಲ್​ವುಡ್​ನ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಈ ಸಿನಿಮಾದ ಸುದ್ದಿಗೋಷ್ಠಿಗೆ ಬಂದು ಶುಭ ಹಾರೈಸಿದ್ದಾರೆ.

ಫ್ಯಾಮಿಲಿ ಪ್ರೇಕ್ಷಕರಿಗಾಗಿ ಕುಟುಂಬದವರೆಲ್ಲ ಸೇರಿ ಮಾಡಿದ ಸಿನಿಮಾ ‘ಜನಕ’; ಏನಿದರ ಕಥೆ?
‘ಜನಕ’ ಸಿನಿಮಾ ಟ್ರೇಲರ್ ಬಿಡುಗಡೆ ಕಾರ್ಯಕ್ರಮ
Follow us
ಮದನ್​ ಕುಮಾರ್​
|

Updated on: May 29, 2024 | 9:34 PM

ಚಿತ್ರರಂಗಕ್ಕೆ ಬರಬೇಕು ಎಂಬ ಹೊಸಬರಿಗೆ ಕೆಲವೊಮ್ಮೆ ಕುಟುಂಬದವರಿಂದ ಬೆಂಬಲ ಸಿಗುವುದಿಲ್ಲ. ಆದರೆ ಕೆಲವೊಮ್ಮೆ ಇಡೀ ಕುಟುಂಬದವರು ಸೇರಿಕೊಂಡು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಾರೆ. ಕನ್ನಡದ ‘ಜನಕ’ ಸಿನಿಮಾ (Janaka Kannada Movie) ತಂಡ ಈ ಮಾತಿಗೆ ಲೇಟೆಸ್ಟ್​ ಉದಾಹರಣೆ. ಈ ಸಿನಿಮಾಗಾಗಿ ನಾಯಕ ನಟ ಮನು (Manu) ಮತ್ತು ಅವರ ಇಡೀ ಕುಟುಂಬದವರು ಶ್ರಮಿಸಿದ್ದಾರೆ. ಮನು ಅವರ ತಾಯಿ ಪ್ರೇಮಾ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಕೌಟುಂಬಿಕ ಕಥಾಹಂದರ ಇರಲಿದೆ. ತಂದೆ-ಮಗನ ಸೆಂಟಿಮೆಂಟ್​ ಇರುವ ಕಹಾನಿಯನ್ನು ಪ್ರೇಕ್ಷಕರ ಮುಂದೆ ತರಲು ‘ಜನಕ’ ಸಿನಿಮಾ (Janaka Movie) ತಂಡ ಸಜ್ಜಾಗಿದೆ.

ಇತ್ತೀಚೆಗೆ ‘ಜನಕ’ ಸಿನಿಮಾದ ಹಾಡು ಮತ್ತು ಟ್ರೇಲರ್​ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕನ್ನಡದ ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್​ ಅವರು ಆಗಮಿಸಿದ್ದರು. ಟ್ರೇಲರ್​ ಬಿಡುಗಡೆ ಮಾಡಿ ಅವರು ಶುಭ ಹಾರೈಸಿದರು. ‘ಕುಟುಂಬದವರೆಲ್ಲ ಸೇರಿ ಮಾಡಿದ ಫ್ಯಾಮಿಲಿ ಕಥೆ ಇರುವ ಸಿನಿಮಾ ಇದು. ತಾಯಿ, ಮಕ್ಕಳು, ಸೊಸೆ ಎಲ್ಲರೂ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಈ ಸಿನಿಮಾ ಯಶಸ್ವಿ ಆಗಲಿ ಅಂತ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಓಂ ಸಾಯಿ ಪ್ರಕಾಶ್​ ಹೇಳಿದರು.

ಮನು ಅವರು ನಾಯಕನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ‘ಇದು ಹಳ್ಳಿ ಪರಿಸರದ ಕಥೆ. ತಂದೆ ಮತ್ತು ಮಗನ ಬಾಂಧವ್ಯದ ಕಹಾನಿ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು. ಒಬ್ಬಳು ಹಳ್ಳಿಯಲ್ಲಿ ಇರುವವಳು, ಇನ್ನೊಬ್ಬಳು ಆಚೆಯಿಂದ ಬರುವವಳು. ಕೌಟುಂಬಿಕ ಪ್ರೇಕ್ಷಕರಿಗೆ ಇದು ಉತ್ತಮ ಮನರಂಜನೆ ನೀಡುತ್ತದೆ. ಇದು ನನ್ನ ಮೊದಲ ಹೆಜ್ಜೆ. ಜನರ ಆಶೀರ್ವಾದ ಬೇಕು. ನಾನು, ನಮ್ಮ ತಾಯಿ ಹಾಗೂ ತಮ್ಮ ಅಣ್ಣ ಬಹಳ ಕಷ್ಟಪಟ್ಟು ಈತನಕ ಬಂದಿದ್ದೇವೆ. ಸಿನಿಮಾ ನಿರ್ಮಾಣ ಮಾಡಿರುವ ತಮ್ಮ ತಾಯಿಗೆ ಇದು ದೊಡ್ಡ ಯಶಸ್ಸು’ ಎಂದು ಮನು ಹೇಳಿದ್ದಾರೆ.

‘ಜನಕ’ ಸಿನಿಮಾದಲ್ಲಿ ಮನು ಜೊತೆ ರಕ್ಷಾ, ಶಾಲಿನಿ, ಸುರೇಶ್​ ಬಾಬು, ರಾಜಲಕ್ಷ್ಮಿ, ಎಂಜಿಆರ್​ಕೆ ಪಲ್ಲವಿ, ಆನಂದ್​ ಮುಂತಾದವರು ನಟಿಸಿದ್ದಾರೆ. ಸುರೇಶ್​ ಬಾಬು ಅವರಿಗೆ ಈ ಸಿನಿಮಾದಲ್ಲಿ ತಂದೆಯ ಪಾತ್ರ ನೀಡಲಾಗಿದೆ. ಕಥಾನಾಯಕನ ತಾಯಿಯಾಗಿ ರಾಜಲಕ್ಷ್ಮಿ ನಟಿಸಿದ್ದಾರೆ. ಆನಂದ್​ ಅವರು ಖಳನಾಯಕನ ಪಾತ್ರ ಮಾಡಿದ್ದಾರೆ. ಕೌರವ ವೆಂಕಟೇಶ್​ ಅವರು ‘ಜನಕ’ ಸಿನಿಮಾಗೆ ಸಾಹಸ ನಿರ್ದೇಶನ ಮಾಡಿದ್ದಾರೆ. ರಣಧೀರ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ಹಾಡುಗಳಿಗೆ ರಾಘವ ಸುಭಾಷ್​ ಅವರ ಸಂಗೀತ ನಿರ್ದೇಶನವಿದೆ. ಸಲಾಂ ವೀರೋಲಿ ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ‘ಚಿತ್ರರಂಗದಲ್ಲಿ ಸ್ಟಾರ್​ ಯಾರೂ ಇಲ್ಲ’: ನೇರವಾಗಿ ಹೇಳಿದ ನಟ ಧ್ರುವ ಸರ್ಜಾ

‘ಈ ಸಿನಿಮಾ ನಿಂತುಹೋಗುತ್ತೆ ಎಂದು ಅನೇಕರು ಹೆದರಿಸಿದ್ದರು. ಆದರೆ ಕಷ್ಟಪಟ್ಟು ನಾವು ಈ ಸಿನಿಮಾದ ಕೆಲಸ ಮುಗಿಸಿದ್ದೇವೆ. ನನ್ನ ದೊಡ್ಡ ಮಗ, ಸೊಸೆ, ಚಿಕ್ಕ ಮಗ ಎಲ್ಲ ಸೇರಿ ನನ್ನ ಜೊತೆ ನಿಂತರು. ಹೀರೋಯಿನ್​ ಪಾತ್ರಕ್ಕೆ ನನ್ನ ಸೊಸೆ ಧ್ವನಿ ನೀಡಿದ್ದಾಳೆ. ಎರಡನೇ ಹೀರೋಯಿನ್​ಗೆ ಚಿಕ್ಕ ಮಗನ ಪ್ರೇಯಸಿ ವಾಯ್ಸ್​ ಕೊಟ್ಟಿದ್ದಾಳೆ’ ಎಂದಿದ್ದಾರೆ ನಿರ್ಮಾಪಕಿ ಪ್ರೇಮಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ಕೊಲೆ ಆರೋಪಿಗೆ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಾತಿಥ್ಯ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ
ತೆಲಂಗಾಣದಲ್ಲಿ ನಿರ್ಮಾಣ ಹಂತದ ಆರು ಅಂತಸ್ತಿನ ಕಟ್ಟಡ ಕುಸಿತ