AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meghana Raj: ಧ್ರುವ ಸರ್ಜಾ ಬರ್ತ್​ಡೇಗೆ ವಿಶೇಷವಾಗಿ ವಿಶ್​ ಮಾಡಿದ ಮೇಘನಾ ರಾಜ್​

Happy Birthday Dhruva Sarja: ಮೇಘನಾ ರಾಜ್​ ಇನ್​ಸ್ಟಾಗ್ರಾಮ್​ನಲ್ಲಿ ‘ಹ್ಯಾಪಿ ಬರ್ತ್​ಡೇ BIL​’ ಎಂದು ವಿಶ್​ ಮಾಡಿದ್ದಾರೆ. BIL ಎನ್ನುವ ಪದ​ ಎಲ್ಲರ ಗಮನ ಸೆಳೆದಿದೆ. BIL ಎಂದರೆ ‘ಬ್ರದರ್​ ಇನ್​ ಲಾ’ ಎಂದರ್ಥ

Meghana Raj: ಧ್ರುವ ಸರ್ಜಾ ಬರ್ತ್​ಡೇಗೆ ವಿಶೇಷವಾಗಿ ವಿಶ್​ ಮಾಡಿದ ಮೇಘನಾ ರಾಜ್​
ಧ್ರುವ-ಚಿರು- ಮೇಘನಾ ರಾಜ್
TV9 Web
| Edited By: |

Updated on:Oct 06, 2021 | 6:14 PM

Share

ಇಂದು (ಅಕ್ಟೋಬರ್​ 6) ಧ್ರುವ ಸರ್ಜಾ ಬರ್ತ್​ಡೇ. ಈ ವಿಶೇಷ ದಿನದ ಅಂಗವಾಗಿ ಅನೇಕ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಇನ್ನು, ಧ್ರುವ ಕುಟುಂಬದವರು ಕೂಡ ವಿಶೇಷವಾಗಿ ವಿಶ್​ ಮಾಡುತ್ತಿದ್ದಾರೆ. ಈಗ ಧ್ರುವ ಸರ್ಜಾಗೆ ಮೇಘನಾ ರಾಜ್​ ಅವರು ವಿಶೇಷವಾಗಿ ವಿಶ್​ ಮಾಡಿದ್ದಾರೆ.

ಚಿರಂಜೀವಿ ಸರ್ಜಾ ಮೃತಪಟ್ಟಾಗ ಮೇಘನಾ ರಾಜ್​ ತೀವ್ರವಾಗಿ ಕುಸಿದು ಹೋಗಿದ್ದರು. ಚಿರುವನ್ನು ಕಳೆದುಕೊಂಡಿದ್ದು ಧ್ರುವ ಅವರಿಗೂ ತೀವ್ರ ನೋವನ್ನು ತಂದಿತ್ತು. ಆದರೂ, ಮೇಘನಾ ರಾಜ್​ ಅವರನ್ನು ಧ್ರುವ ಅಣ್ಣನಂತೆ ನಿಂತು ಸಮಾಧಾನ ಪಡಿಸಿದ್ದರು. ಹೀಗಾಗಿ, ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ. ಇಂದು ಮೇಘನಾ ರಾಜ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ‘ಹ್ಯಾಪಿ ಬರ್ತ್​ಡೇ BIL​’ ಎಂದು ವಿಶ್​ ಮಾಡಿದ್ದಾರೆ. BIL ಎನ್ನುವ ಪದ​ ಎಲ್ಲರ ಗಮನ ಸೆಳೆದಿದೆ. BIL ಎಂದರೆ ‘ಬ್ರದರ್​ ಇನ್​ ಲಾ’ ಎಂದರ್ಥ.

ಮೇಘನಾ ಪಾಲಿಗೆ ಅಕ್ಟೋಬರ್​ ವಿಶೇಷ ತಿಂಗಳು. ಮೇಘನಾ ರಾಜ್​ ಪತಿ ಚಿರಂಜೀವಿ ಸರ್ಜಾ, ಮಗ ರಾಯನ್​ ರಾಜ್​ ಸರ್ಜಾ, ಭಾವ ಧ್ರುವ ಹುಟ್ಟಿದ್ದು ಅಕ್ಟೋಬರ್​ ತಿಂಗಳಲ್ಲೇ. ಕೇವಲ ಐದು ದಿನಗಳ ಅಂತರದಲ್ಲಿ ಇಬ್ಬರ ಜನ್ಮದಿನ ಬರಲಿದೆ. ಅಕ್ಟೋಬರ್​ 17 ಚಿರಂಜೀವಿ ಜನ್ಮದಿನ.​ ರಾಯನ್​ ಹುಟ್ಟಿದ್ದು ಅಕ್ಟೋಬರ್​ 22ರಂದು.

ಅದ್ದೂರಿ, ಬಹದ್ದೂರ್​, ಭರ್ಜರಿ, ಪೊಗರು ಸಿನಿಮಾಗಳ ಮೂಲಕ ಧ್ರುವ ತಮ್ಮದೇ ಛಾಪು ಮೂಡಿಸಿದ್ದಾರೆ. ಇಂದು (ಅಕ್ಟೋಬರ್ 6) ಧ್ರುವ ಹುಟ್ಟುಹಬ್ಬದ ಗಿಫ್ಟ್ ಆಗಿ ‘ಮಾರ್ಟಿನ್’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಐದು ಭಾಷೆಯಲ್ಲಿ ಮಾರ್ಟಿನ್ ಪೋಸ್ಟರ್ ರಿಲೀಸ್ ಮಾಡಿದ ಚಿತ್ರತಂಡ ಆ ಮೂಲಕ ವಿಶೇಷವಾಗಿ ನಟ ಧ್ರುವ ಸರ್ಜಾ ಅವರಿಗೆ ಶುಭ ಹಾರೈಸಿದೆ. ಇನ್ನು ಸೆಲೆಬ್ರಿಟಿಗಳು, ಅಭಿಮಾನಿಗಳು, ಸ್ನೇಹಿತರಿಂದ ಧ್ರುವ ಸರ್ಜಾ ಅವರಿಗೆ ಬರ್ತ್​ಡೇ ವಿಶ್​ ಹರಿದುಬರುತ್ತಿದೆ.

ಇದನ್ನೂ ಓದಿ: ಮೇಘನಾ ರಾಜ್​ ಮಗ ರಾಯನ್​ ರಾಜ್​ ಸರ್ಜಾಗೆ 11ನೇ ತಿಂಗಳ ಸಂಭ್ರಮ; ಇಲ್ಲಿದೆ ವಿಡಿಯೋ

ಮೇಘನಾ ರಾಜ್​ಗೆ ಅಕ್ಟೋಬರ್​ ತಿಂಗಳು ಸ್ಪೆಷಲ್​; ವಿಶೇಷ ಪೋಸ್ಟ್​ ಹಂಚಿಕೊಂಡ ನಟಿ

Published On - 5:57 pm, Wed, 6 October 21

Follow Us
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
'ಪೆಲೆಟ್ ಗನ್ ದಾಳಿ ನಡೆದೇ ಇಲ್ಲ'; ರಾಹುಲ್ ಗಾಂಧಿಗೆ ಬಿಜೆಪಿ ಸಂಸದ ತಿರುಗೇಟು
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ