ಆ್ಯಕ್ಷನ್​ ಮೂಲಕ ಎಂಟ್ರಿ ಕೊಟ್ಟ ‘ರೈಡರ್​; ಕುಮಾರಸ್ವಾಮಿ ಜನ್ಮದಿನಕ್ಕೆ ವಿಶೇಷ ಗಿಫ್ಟ್

Rider Trailer: ಇಂದು (ಡಿಸೆಂಬರ್​ 16) ಎಚ್​.ಡಿ. ಕುಮಾರಸ್ವಾಮಿ ಜನ್ಮದಿನ. ಇದರ ಪ್ರಯುಕ್ತ ‘ರೈಡರ್​’ ಟ್ರೇಲರ್ ರಿಲೀಸ್​ ಆಗಿದೆ. ಈ ಟ್ರೇಲರ್​ನಲ್ಲಿ ನಿಖಿಲ್​ ಸಖತ್​ ಆ್ಯಕ್ಷನ್​ನಲ್ಲಿ ಮಿಂಚಿದ್ದಾರೆ. ವಿಲನ್​ ಆಗಿ ಗರುಡ ರಾಮ್​ ಕಾಣಿಸಿಕೊಂಡಿದ್ದಾರೆ.

ಆ್ಯಕ್ಷನ್​ ಮೂಲಕ ಎಂಟ್ರಿ ಕೊಟ್ಟ ‘ರೈಡರ್​; ಕುಮಾರಸ್ವಾಮಿ ಜನ್ಮದಿನಕ್ಕೆ ವಿಶೇಷ ಗಿಫ್ಟ್
ನಿಖಿಲ್​
Edited By:

Updated on: Dec 16, 2021 | 8:22 PM

‘ಸೀತಾರಾಮ ಕಲ್ಯಾಣ’ ತೆರೆಗೆ ಬಂದ ನಂತರದಲ್ಲಿ ನಿಖಿಲ್​ ಕುಮಾರಸ್ವಾಮಿ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಕೊವಿಡ್ ಕಾರಣದಿಂದ ಅವರು ಒಪ್ಪಿಕೊಂಡಿದ್ದ ‘ರೈಡರ್​’ ಸಿನಿಮಾ ಕೆಲಸಗಳು ವಿಳಂಬವಾದವು. ಈಗ ಕೊವಿಡ್​ ಮುಗಿದು ಚಿತ್ರಮಂದಿರಗಳು ಓಪನ್​ ಆಗಿವೆ. ಜನರು ಮತ್ತೆ ಥಿಯೇಟರ್​ನತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಕಾರಣಕ್ಕೆ ಸಾಲುಸಾಲು ಸಿನಿಮಾಗಳು ರಿಲೀಸ್​ ಆಗುತ್ತಿವೆ. ಕ್ರಿಸ್​ಮಸ್​ ನಿಮಿತ್ತ ಸಿನಿಮಾ ಡಿಸೆಂಬರ್​ 24ರಂದು ‘ರೈಡರ್​’ ಸಿನಿಮಾ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು ಚಿತ್ರತಂಡ ಟ್ರೇಲರ್​ ರಿಲೀಸ್​ ಮಾಡಿದೆ.

ಇಂದು (ಡಿಸೆಂಬರ್​ 16) ಎಚ್​.ಡಿ. ಕುಮಾರಸ್ವಾಮಿ ಜನ್ಮದಿನ. ಇದರ ಪ್ರಯುಕ್ತ ‘ರೈಡರ್​’ ಟ್ರೇಲರ್ ರಿಲೀಸ್​ ಆಗಿದೆ. ಈ ಟ್ರೇಲರ್​ನಲ್ಲಿ ನಿಖಿಲ್​ ಸಖತ್​ ಆ್ಯಕ್ಷನ್​ನಲ್ಲಿ ಮಿಂಚಿದ್ದಾರೆ. ವಿಲನ್​ ಆಗಿ ಗರುಡ ರಾಮ್​ ಕಾಣಿಸಿಕೊಂಡಿದ್ದಾರೆ. ವಿಜಯ್​ ಕುಮಾರ್​ ಕೊಂಡ ಅವರು ‘ರೈಡರ್​’ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ನಿಖಿಲ್‌ ಕುಮಾರ್‌ ಆಪ್ತ ಸುನೀಲ್‌ ಗೌಡ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಲಹರಿ ಫಿಲ್ಮ್ಸ್​​ ಕೂಡ ನಿರ್ಮಾಣದಲ್ಲಿ ಪಾಲುದಾರಿಕೆ ಹಂಚಿಕೊಂಡಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ನವೆಂಬರ್​ ತಿಂಗಳಲ್ಲೇ ‘ರೈಡರ್​’ ತೆರೆಗೆ ಬರಬೇಕಿತ್ತು. ಆದರೆ, ಸಿನಿಮಾ ಕೆಲಸಗಳು ಪೂರ್ಣಗೊಳ್ಳದ ಕಾರಣ ಚಿತ್ರದ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತ್ತು.

ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಹಿರಿಯ ನಟ ದತ್ತಣ್ಣ, ಗರುಡ ರಾಮ್, ಚಿಕ್ಕಣ್ಣ, ಶೋಭರಾಜ್, ಶಿವರಾಜ್.ಕೆ.ಆರ್.ಪೇಟೆ, ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ, ನಿಹಾರಿಕ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ. ನಟಿ ಕಾಶ್ಮೀರಿ ಪರ್ದೇಸಿ ಈ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿದ್ದಾರೆ. ‘ಡವ ಡವಢ..’ ಸಿನಿಮಾದ ಹಾಡು ಇತ್ತೀಚೆಗೆ ರಿಲೀಸ್ ಆಗಿ ಜನ ಮನ್ನಣೆ ಪಡೆದುಕೊಂಡಿತ್ತು.

‘ರೈಡರ್​’ ಸಿನಿಮಾ ದೊಡ್ಡ ಸ್ಪರ್ಧೆ ಎದುರಿಸಲಿದೆ. ಡಿಸೆಂಬರ್​ ತಿಂಗಳಲ್ಲಿ ದೊಡ್ಡ ಬಜೆಟ್​ನ ಹಲವು ಸಿನಿಮಾಗಳು ತೆರೆಗೆ ಬರುತ್ತಿವೆ. ಜನವರಿಯಲ್ಲೂ ಹಲವು ಚಿತ್ರಗಳು ರಿಲೀಸ್​ ಆಗುತ್ತಿವೆ. ‘ಪುಷ್ಪ’, ‘ಆರ್​ಆರ್​ಆರ್​’, ‘ರಾಧೆ ಶ್ಯಾಮ್​’, ‘ಸರ್ಕಾರಿ ವಾರು ಪಾಟ’ ಚಿತ್ರಗಳು ‘ರೈಡರ್​’ ಸಿನಿಮಾದ ಆಸುಪಾಸಿನ ಡೇಟ್​ನಲ್ಲಿಯೇ ತೆರೆಗೆ ಬರುತ್ತಿವೆ. ಈ ಮೂಲಕ ನಿಖಿಲ್​ ಸಿನಿಮಾ ದೊಡ್ಡ ಸಿನಿಮಾಗಳ ಜತೆ ಸ್ಪರ್ಧೆಗೆ ಇಳಿದಿದೆ.

ಇದನ್ನೂ ಓದಿ: ‘ಪುನೀತ್​ ಅಣ್ಣ ಇಲ್ಲದೇ ನಾವು ತಬ್ಬಲಿ ಆಗಿದ್ದೇವೆ’: ಅಪ್ಪು ಹೇಳಿಕೊಟ್ಟ ಪಾಠಗಳ ಬಗ್ಗೆ ನಿಖಿಲ್​ ಮಾತು

ನಾನು ಇನ್ಮುಂದೆ ಕಣ್ಣೀರು ಹಾಕಲ್ಲ: ಮಂಡ್ಯದಲ್ಲಿ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹೇಳಿಕೆ

Published On - 8:22 pm, Thu, 16 December 21