AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಟ ಭಯಂಕರ’ ಪೋಸ್ಟರ್​ ರಿಲೀಸ್ ಮಾಡುವಾಗ ಬೆಚ್ಚಿದ ಸಿದ್ದರಾಮಯ್ಯ; ಕಾರಣ ವಿವರಿಸಿದ ಪ್ರಥಮ್​

ರಾಜಕೀಯ ಕ್ಷೇತ್ರದವರಿಗೂ ಸಿನಿಮಾ ರಂಗದವರಿಗೂ ಒಳ್ಳೆಯ ನಂಟಿರುತ್ತದೆ. ಅದೇ ರೀತಿ ಸಿದ್ದರಾಮಯ್ಯ ಅವರಿಗೂ ಚಿತ್ರರಂಗದ ಜತೆ ಉತ್ತಮ ಬಾಂಧವ್ಯ ಇದೆ. ಪ್ರಥಮ್​ ಅವರನ್ನು ಕಂಡರೆ ಸಿದ್ದರಾಮಯ್ಯ ಅವರಿಗೆ ಅಚ್ಚುಮೆಚ್ಚು.

‘ನಟ ಭಯಂಕರ’ ಪೋಸ್ಟರ್​ ರಿಲೀಸ್ ಮಾಡುವಾಗ ಬೆಚ್ಚಿದ ಸಿದ್ದರಾಮಯ್ಯ; ಕಾರಣ ವಿವರಿಸಿದ ಪ್ರಥಮ್​
‘ನಟ ಭಯಂಕರ’ ಪೋಸ್ಟರ್​ ರಿಲೀಸ್​ ಮಾಡಿದ ಸಿದ್ದರಾಮಯ್ಯ
TV9 Web
| Edited By: |

Updated on:Feb 24, 2022 | 3:09 PM

Share

‘ಬಿಗ್​ ಬಾಸ್​’ (Bigg Boss) ವಿನ್​ ಆಗೋ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ನಟ ‘ಒಳ್ಳೇ ಹುಡುಗ’ ಪ್ರಥಮ್ (Olle Hudga Pratham)​. ಅವರು ಈಗ ನಟನಾಗಿ, ನಿರ್ದೇಶಕನಾಗಿ ಸ್ಯಾಂಡಲ್​ವುಡ್​ನಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇಂದು (ಫೆಬ್ರವರಿ 24) ಅವರ ಬರ್ತ್​ಡೇ. ಈ ಪ್ರಯುಕ್ತ ಅವರು ನಿರ್ದೇಶಿಸಿ, ನಟಿಸುತ್ತಿರುವ ‘ನಟ ಭಯಂಕರ’ ಸಿನಿಮಾದ (Nata Bhayankara) ಪೋಸ್ಟರ್​ ರಿಲೀಸ್​ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪೋಸ್ಟರ್​ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಇದನ್ನು ರಿಲೀಸ್​ ಮಾಡುವಾಗ ಒಂದು ನಿಮಿಷ ಅವರು ಬೆಚ್ಚಿದರಂತೆ. ಇದಕ್ಕೆ ಕಾರಣವನ್ನು ವಿವರಿಸಿದ್ದಾರೆ ಪ್ರಥಮ್​.

ರಾಜಕೀಯ ಕ್ಷೇತ್ರದವರಿಗೂ ಸಿನಿಮಾ ರಂಗದವರಿಗೂ ಒಳ್ಳೆಯ ನಂಟಿರುತ್ತದೆ. ಅದೇ ರೀತಿ ಸಿದ್ದರಾಮಯ್ಯ ಅವರಿಗೂ ಚಿತ್ರರಂಗದ ಜತೆ ಉತ್ತಮ ಬಾಂಧವ್ಯ ಇದೆ. ಪ್ರಥಮ್​ ಅವರನ್ನು ಕಂಡರೆ ಸಿದ್ದರಾಮಯ್ಯ ಅವರಿಗೆ ಅಚ್ಚುಮೆಚ್ಚು. ಅವರು ಮಾಡುವ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ ಸಿದ್ದರಾಮಯ್ಯ. ಇಂದು ಪ್ರಥಮ್​ ಬರ್ತ್​ಡೇ ಹಿನ್ನೆಲೆಯಲ್ಲಿ ‘ನಟ ಭಯಂಕರ’ ಪೋಸ್ಟರ್​ ಬಿಡುಗಡೆ ಮಾಡಿ ಚಿತ್ರತಂಡದವರಿಗೆ ವಿಶ್​ ಮಾಡಿದ್ದಾರೆ. ಈ ಬಗ್ಗೆ ಪ್ರಥಮ್​ ಮಾಹಿತಿ ನೀಡಿದ್ದಾರೆ.

‘ಸಿದ್ದರಾಮಯ್ಯ ಅವರು ಬೆಳಗ್ಗೆ ದೆಹಲಿಗೆ ತೆರಳುವವರಿದ್ದರು. ಅದಕ್ಕೂ ಮೊದಲು ಮನೆಗೆ ಬರೋಕೆ ಹೇಳಿದ್ದರು. ನಾವು ತಂಡದ ಜತೆ ಅವರ ಮನೆಗೆ ತೆರಳಿದೆವು. ದೆವ್ವದ ಪಾತ್ರ ಮಾಡಿದವರು ಕೂಡ ಇದ್ದರು. ಸರ್​ ಅವರ ಪಕ್ಕ ನಿಲ್ಲಬೇಡಿ, ಅವಳು ದೆವ್ವ ಎಂದೆ. ಅವರು ಒಮ್ಮೆ ಗಾಬರಿ ಆದರು. ಸಿದ್ದರಾಮಯ್ಯ ಅವರೇ ಅವಳು ಸಿನಿಮಾದಲ್ಲಷ್ಟೇ ದೆವ್ವ ಎಂದೆ. ಆಗ ಕೊಂಚ ರಿಲೀಫ್​ ಆದರು’ ಎಂದು ಘಟನೆ ವಿವರಿಸಿದರು ಪ್ರಥಮ್.

‘ಈ ಪೋಸ್ಟರ್​ ವಿಶೇಷವಾಗಿದೆ. ರಾಮನ ಭಕ್ತ ಹನುಮಂತ ಹಾಗೂ ದೆವ್ವದ ನಡುವೆ ನಡೆಯುವ ಕಾಳಗದ ಪೋಸ್ಟರ್​ ಇದು. ಪೋಸ್ಟರ್​ ನೋಡಿ ಖುಷಿಪಟ್ಟರು. ನಮ್ಮ ಜತೆ ಬಂದ ಎಲ್ಲರ ಜತೆಗೂ ಮಾತನಾಡಿದರು. ನಿನ್ನ ಡೈರೆಕ್ಷನ್​ ಸಿನಿಮಾ ಎಂದರೆ ಪೂರ್ತಿಯಾಗಿ ನೋಡುತ್ತೇನೆ ಎಂಬುದಾಗಿ ಸಿದ್ದರಾಮಯ್ಯ ಅವರು ಪ್ರಾಮಿಸ್​ ಮಾಡಿದ್ದಾರೆ’ ಎಂದರು ಪ್ರಥಮ್​.

ಮಾರ್ಚ್​ 17ರಂದು ‘ಜೇಮ್ಸ್​’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಹಲವು ವಾರಗಳ ಕಾಲ ಈ ಸಿನಿಮಾದ ಹವಾ ಇರಲಿದೆ. ಹೀಗಾಗಿ, ಏಪ್ರಿಲ್​ ತಿಂಗಳಲ್ಲಿ ‘ನಟ ಭಯಂಕರ​’ ಸಿನಿಮಾ ತೆರೆಗೆ ತರಲು ನಿರ್ದೇಶಕರು ಪ್ಲ್ಯಾನ್​ ರೂಪಿಸಿದ್ದಾರೆ. ರಿಲೀಸ್​ ದಿನಾಂಕ ಶೀಘ್ರವೇ ಘೋಷಣೆ ಆಗಲಿದೆ.

ಪ್ರಥಮ್​, ಸುಷ್ಮಿತಾ ಜೋಶಿ, ನಿಹಾರಿಕಾ ಶೆಣೋಯ್​, ಸಾಯಿಕುಮಾರ್​, ಲೀಲಾವತಿ, ಶೋಭರಾಜ್​, ಕುರಿ ಪ್ರತಾಪ್​, ಓಂ​ ಪ್ರಕಾಶ್​ ರಾವ್​, ಬೀರಾದಾರ್​ ಮೊದಲಾದವರು ನಟಿಸಿದ್ದಾರೆ.

ಇದನ್ನೂ ಓದಿ: ‘ಬೇರೆಯವರ ದುಡ್ಡಲ್ಲಿ ನಾನೇಕೆ ಬಿಲ್ಡಪ್​ ತೆಗೆದುಕೊಳ್ಳಲಿ?’; ಸ್ವಂತ ಖರ್ಚಲ್ಲಿ ‘ನಟ ಭಯಂಕರ’ ಸಿನಿಮಾ ಕಾರ್ಮಿಕರಿಗೆ ಪ್ರಥಮ್​ ಸಹಾಯ

Meghana Raj: ಮೇಘನಾ ರಾಜ್​ ಎರಡನೇ ಮದುವೆ ಬಗ್ಗೆ ಸುಳ್ಳು ಸುದ್ದಿ; ನಟ ಪ್ರಥಮ್​ ಆಕ್ರೋಶ

Published On - 3:08 pm, Thu, 24 February 22

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ