AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Yuvarathnaa Song: ಭಾರಿ ಬೇಸರದಲ್ಲಿ ಪುನೀತ್​ ರಾಜ್​ಕುಮಾರ್ ಫ್ಯಾನ್ಸ್; ಯುವರತ್ನ ಹಾಡು ಡಿಲೀಟ್ ಮಾಡುವಂತೆ ಅಭಿಮಾನಿಗಳ ಮೊರೆ

Puneet Rajkumar: ಬಹುನಿರೀಕ್ಷಿತ ಯುವರತ್ನ ಚಿತ್ರದ ಊರಿಗೊಬ್ಬ ರಾಜಾ ಆ ರಾಜಂಗೊಬ್ಬಳು ರಾಣಿ ಹಾಡು ಹೊಂಬಾಳೆ ಫಿಲ್ಮ್ಸ್​ನ ಯೂಟ್ಯೂಬ್ ಚಾನೆಲ್ ಬಿಡುಗಡೆ ಮಾಡಿತ್ತು. ಹಾಡಿನಲ್ಲಿ ಪುನೀತ್ ರಾಜ್​ಕುಮಾರ್​ ಜೊತೆಗೆ ಚಿತ್ರ ನಾಯಕಿ ಸಹೇಷಾ ಸೆಹಗಲ್ ಸ್ಟೆಪ್ ಹಾಕಿದ್ದಾರೆ.

Yuvarathnaa Song: ಭಾರಿ ಬೇಸರದಲ್ಲಿ ಪುನೀತ್​ ರಾಜ್​ಕುಮಾರ್ ಫ್ಯಾನ್ಸ್; ಯುವರತ್ನ ಹಾಡು ಡಿಲೀಟ್ ಮಾಡುವಂತೆ ಅಭಿಮಾನಿಗಳ ಮೊರೆ
ಊರಿಗೊಬ್ಬ ರಾಜಾ..ಹಾಡಿನ ದೃಶ್ಯ
Follow us
sandhya thejappa
| Updated By: Digi Tech Desk

Updated on:Feb 27, 2021 | 12:25 PM

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ (Puneet Rajkumar) ನಟನೆಯ ಯುವರತ್ನ (Yuvarathnaa) ಸಿನಿಮಾದ ‘ಊರಿಗೊಬ್ಬ ರಾಜಾ ಆ ರಾಜಂಗೊಬ್ಬಳು ರಾಣಿ’ ಎನ್ನವ ಹಾಡು ಇದೇ ತಿಂಗಳ (ಫೆಬ್ರವರಿ) 25ಕ್ಕೆ ಬಿಡುಗಡೆಯಾಗಿತ್ತು. ಆದರೆ ಈ ಹಾಡಿಗೆ ಅಪ್ಪು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಪವರ್ ಸ್ಟಾರ್ ರೇಂಜಿಗೆ ಈ ಸಾಂಗ್ ಅಲ್ಲ ಎಂದು ಹೇಳುತ್ತಿರುವ ಪುನೀತ್ ಫ್ಯಾನ್ಸ್ ತಮನ್.ಎಸ್ ಸಂಗೀತ ಮತ್ತು ಸಂತೋಷ್ ಆನಂದ್ ರಾಮ್ ಸಾಹಿತ್ಯದಿಂದ ನಿರಾಸೆಗೊಂಡಿದ್ದಾರೆ.

ಬಹುನಿರೀಕ್ಷಿತ ಯುವರತ್ನ ಚಿತ್ರದ ಊರಿಗೊಬ್ಬ ರಾಜಾ ಆ ರಾಜಂಗೊಬ್ಬಳು ರಾಣಿ ಹಾಡು ಹೊಂಬಾಳೆ ಫಿಲ್ಮ್ಸ್​ನ ಯೂಟ್ಯೂಬ್ ಚಾನೆಲ್ ಬಿಡುಗಡೆ ಮಾಡಿತ್ತು. ಹಾಡಿನಲ್ಲಿ ಪುನೀತ್ ರಾಜ್​ಕುಮಾರ್​ ಜೊತೆಗೆ ಚಿತ್ರ ನಾಯಕಿ ಸಹೇಷಾ ಸೆಹಗಲ್ ಸ್ಟೆಪ್ಸ್​ ಹಾಕಿದ್ದಾರೆ. ಹಾಡಿನಲ್ಲಿ ಪುನೀತ್ ರಾಜ್​ಕುಮಾರ್​ ಡಾನ್ಸ್ ಬಿಟ್ಟರೆ ಮತ್ತೇನೂ ಸಮಂಜಸವಾಗಿಲ್ಲ ಎಂದು ಹೇಳುತ್ತಿರುವ ಸಿನಿಪ್ರಿಯರು ಹಾಡನ್ನು ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿರುವ ಅಪ್ಪು ಅಭಿಮಾನಿಗಳು ಈ ಊರಿಗೊಬ್ಬ ರಾಜಾ ಆ ರಾಜಂಗೊಬ್ಬಳು ರಾಣಿ ಹಾಡು ಪವರ್ ಸ್ಟಾರ್ ರೇಂಜಿಗೆ ಅಲ್ಲ ಎನ್ನುತ್ತಿದ್ದಾರೆ. ಹಾಡು ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಹೆಚ್ಚು ವ್ಯೂಸ್​ ಪಡೆದುಕೊಂಡಿದ್ದರೂ ಈ ಹಾಡಿಗೆ ಅದೆಷ್ಟೋ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿ ಸಾಂಗನ್ನ ಡಿಲೀಟ್ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ ಪುನೀತ್ ರಾಜ್​ಕುಮಾರ್ ಅಭಿಮಾನಿಗಳು

ಹಾಡನ್ನು ಡಿಲೀಟ್​ ಮಾಡಿ ಎಂದು ಆಗ್ರಹಿಸುತ್ತಿರುವ ಅಪ್ಪು ಫ್ಯಾನ್ಸ್​

ಹಾಯ್​ ಪುನೀತ್​ ಸರ್​. ಏನಿದು ಮ್ಯೂಸಿಕ್​ ಸರ್​? ನಿಮ್ಮ ರೇಂಜಿಗೆ ಈ ಹಾಡು ಇಲ್ಲ. ಹಾಡು ಸ್ವಲ್ಪನೂ ಸರಿಯಿಲ್ಲ. ನಿಮ್ಮ ಮತ್ತು ಸಹೇಷಾ ಸೆಹಗಲ್ ಡ್ಯಾನ್ಸ್ ಬಿಟ್ಟರೆ ಮತ್ತೇನೂ ಇಷ್ಟವಾಗಲಿಲ್ಲ. ದಯವಿಟ್ಟು ಕನ್ನಡದ ಮ್ಯೂಸಿಕ್​ ಡೈರೆಕ್ಟರ್​ಗೆ ಚಾನ್ಸ್ ಕೊಡಿ. ಕನ್ನಡದ ಬಗ್ಗೆಗಂಧ ಗಾಳಿಯೂ ಗೊತ್ತಿಲ್ಲದವರಿಗೆ ಅವಕಾಶಗಳು ಕೊಟ್ಟರೆ ಹೀಗೆ ಆಗೋದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ನಾನು ಪಕ್ಕಾ ಅಪ್ಪು ಫ್ಯಾನ್​. ಈ ಹಾಡನ್ನು ಒಂದು ಸಾರಿನು ಕೇಳುವುದಕ್ಕೆ ಆಗುತಿಲ್ಲ. ದಯವಿಟ್ಟು ಈ ರೀತಿ ಬೇಜಾರು ಮಾಡಬೇಡಿ ಎಂದು ಹೇಳಿದ್ದಾರೆ. ಜೊತೆಗೆ ಸಂತೋಷ್​ರವರು ಹಾಡು ಬರಿಯದೇ ಇದ್ದರೆ ಒಳ್ಳೆಯದು ಎಂದು ಪುನೀತ್​ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ

Yuvarathnaa Song: ಯುವರತ್ನ ಕಮಾಲ್​.. ‘ಊರಿಗೊಬ್ಬ ರಾಜಾ.. ಆ ರಾಜಂಗೊಬ್ಬಳು ರಾಣಿ’ ಹಾಡು ಬಿಡುಗಡೆ; ಪವರ್​ಸ್ಟಾರ್ ಪವರ್​ಫುಲ್​ ಸ್ಟೆಪ್​

ಪುನೀತ್ ರಾಜ್​ಕುಮಾರ್ ಅಭಿನಯದ ಯುವರತ್ನ ಟ್ರೈಲರ್​ಗೆ ಕೌಂಟ್​ಡೌನ್

Published On - 12:21 pm, Sat, 27 February 21

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ