AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಕೆ ನೇಮೋತ್ಸವದಲ್ಲಿ ‘ಕಾಂತಾರ: ಚಾಪ್ಟರ್ 3’ ಸಿನಿಮಾಗೆ ಸಿಕ್ತು ದೈವದ ಗ್ರೀನ್ ಸಿಗ್ನಲ್

‘ಕಾಂತಾರ’ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ವತಿಯಿಂದ ಹರಕೆ ನೇಮೋತ್ಸವ ಮಾಡಲಾಗಿದೆ. ಡಿಸೆಂಬರ್ 4ರಂದು ಮಧ್ಯರಾತ್ರಿವರೆಗೂ ವರಾಹ ಪಂಜುರ್ಲಿ-ಜಾರಂದಾಯ, ಬಂಟ ಕೋಲ ನಡೆಯಿತು. ಬಾಕಿ ಇರುವ ಹರಕೆ ತೀರಿಸಿದ ನಂತರ ‘ಕಾಂತಾರ: ಚಾಪ್ಟರ್ 3’ ಚಿತ್ರೀಕರಣ ಶುರು ಆಗುವ ಸಾಧ್ಯತೆ ಇದೆ.

ಹರಕೆ ನೇಮೋತ್ಸವದಲ್ಲಿ ‘ಕಾಂತಾರ: ಚಾಪ್ಟರ್ 3’ ಸಿನಿಮಾಗೆ ಸಿಕ್ತು ದೈವದ ಗ್ರೀನ್ ಸಿಗ್ನಲ್
ರಿಷಬ್
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Dec 05, 2025 | 6:48 PM

Share

ಗುರುವಾರ (ಡಿಸೆಂಬರ್ 4) ಮದ್ಯರಾತ್ರಿವರೆಗೂ ನಡೆದ ದೈವಕೋಲದಲ್ಲಿ ರಿಷಬ್ ಶೆಟ್ಟಿ (Rishab Shetty) ಭಾಗಿಯಾಗಿದ್ದರು. ‘ಕಾಂತಾರ’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ‘ಕಾಂತಾರ: ಚಾಪ್ಟರ್ 1’ ಚಿತ್ರತಂಡಕ್ಕೆ ಸಾಕಷ್ಟು ಅಡೆತಡೆಗಳು ಬಂದಿದ್ದವು. ಸಿನಿಮಾ ಚಿತ್ರೀಕರಣಕ್ಕೆ ಹಲವಾರು ತೊಂದರೆಗಳು ಉಂಟಾಗುತ್ತಿತ್ತು. ಈ ವೇಳೆ ನಿರ್ದೇಶಕ ರಿಷಬ್ ಶೆಟ್ಟಿ ಸಾಕಷ್ಟು ಹರಕೆಗಳನ್ನು ಮಾಡಿಕೊಂಡಿದ್ದರು. ಹಾಗಾಗಿ ಮಂಗಳೂರಿಗೆ ಬಂದ ಚಿತ್ರತಂಡ ಹರಕೆ ನೇಮೋತ್ಸವವನ್ನು ನೆರವೇರಿಸಿದೆ. ಈ ವೇಳೆ ‘ಕಾಂತಾರ: ಚಾಪ್ಟರ್ 3’ (Kantara Chapter 3) ಸಿನಿಮಾಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಇಡೀ ವಿಶ್ವಾದ್ಯಂತ ಕರಾವಳಿಯ ದೈವ ಹಾಗೂ ಕೋಲ-ನೇಮೋತ್ಸವದ ಬಗ್ಗೆ ಕಾಂತಾರ ಸಿನಿಮಾ ಪರಿಚಯಿಸಿತ್ತು. ಕನ್ನಡ ಸಿನಿಮಾ ಭಾರತದ ಸಿನಿರಂಗದಲ್ಲೇ ಭಾರೀ ಸದ್ದು ಮಾಡಿತ್ತು. ಆಗ ಎಲ್ಲರಿಗೂ ಕುತೂಹಲಕ್ಕೆ ಕಾರಣವಾಗಿದ್ದ ಕಾಂತಾರ ಚಾಪ್ಟರ್ 1. ಅಂದ್ರೆ ಕಾಂತಾರ ಸಿನಿಮಾದ ಎರಡನೇ ಭಾಗ. ಸದ್ದಿಲ್ಲದೇ ಚಿತ್ರೀಕರಣಗೊಂಡು ಭಾರೀ ಜನಮನ್ನಣೆಗೆ ಕಾರಣವಾಗಿದ್ದು ಕಾಂತಾರ. ಆದ್ರೆ ಕಾಂತಾಯ ಚಾಪ್ಟರ್ 1 ಮಾತ್ರ ಸಿನಿಮಾ ಶೂಟಿಂಗ್ ಸಮಯದಲ್ಲಿ ವಿಘ್ನಗಳನ್ನು ಎದುರಿಸಿತ್ತು.

ಚಿತ್ರೀಕರಣದ ವೇಳೆ ನಡೆದ ಅವಘಡಗಳು, ಅವಾಂತರಗಳು ಚಿತ್ರತಂಡದ ಮೇಲೆ ದೈವಗಳ ಕೋಪ ಕಾರಣ ಎಂದು ಬಿಂಬಿತವಾಗಿತ್ತು. ಆ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಪ್ರೊಡಕ್ಷನ್ ಸಾಕಷ್ಟು ಕಡೆ ಹರಕೆಯನ್ನು ಹೊತ್ತಿತ್ತು. ಅದರಲ್ಲಿ ಒಂದು ಮಂಗಳೂರಿನ ಬಾರೆಬೈಲ್​ನಲ್ಲಿ ಇರುವ ದೈವಸ್ಥಾನದಲ್ಲಿ ಹೊತ್ತ ಹರಕೆ. ನಿನ್ನೆ ಮೊದಲು ನಡೆದ ಎಣ್ಣೆ ಭೂಳ್ಯ ನೇಮದಲ್ಲಿ ದೈವ ಅಭಯ ನೀಡಿತ್ತು. ‘ನಿನ್ನೆ ಕಣ್ಣೀರು ಒರೆಸುತ್ತೇನೆ. ನನ್ನ ನುಡಿ ಇದೆ. ಧೈರ್ಯವಾಗಿ ಸಾಗು’ ಎಂದು ರಿಷಬ್ ಮಡಿಲಿನಲ್ಲಿ ಮಲಗಿ ಸಂಪೂರ್ಣ ಆಶೀರ್ವಾದವನ್ನು ನೀಡಿತ್ತು.

ಇದೆಲ್ಲಾ ನಡೆದಿದ್ದು ಮಂಗಳೂರಿನ ಬಾರೆಬೈಲ್​​ನಲ್ಲಿರೋ ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದ ಹರಕೆ ನೇಮೋತ್ಸವದಲ್ಲಿ. ಚಿತ್ರತಂಡ ವಾರಾಹಿ ಪಂಜುರ್ಲಿ ದೈವದ ನೇಮದಲ್ಲಿ ಭಾಗಿಯಾಗಿತ್ತು. ಪತ್ನಿ-ಮಕ್ಕಳ ಜೊತೆ ರಿಷಬ್ ಶೆಟ್ಟಿ ಭಾಗಿಯಾಗಿದ್ರು. ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ ರಾಮ್ ಸೇರಿದಂತೆ ಚಿತ್ರರಂಗದ ಹಲವರು ಭಾಗಿಯಾಗಿದ್ದರು.

ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕಾರ್ಯದಲ್ಲಿ ಕಾಂತಾರ ಚಿತ್ರತಂಡ ಭಾಗಿಯಾಗಿತ್ತು. ಕಳೆದ ಎಪ್ರಿಲ್​ನಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ಕುಟುಂಬ ಭಾಗಿಯಾಗಿತ್ತು. ಮಗನ ಹುಟ್ಟುಹಬ್ಬದ ದಿನ ಬಾರೆಬೈಲು ದೇವಸ್ಥಾನಕ್ಕೆ ರಿಷಬ್ ಆಗಮಿಸಿದ್ದರು. ಈಗ ಅದೇ ದೇವಸ್ಥಾನದಲ್ಲಿ ಹರಕೆ ನೇಮೋತ್ಸವ ಸಲ್ಲಿಸಿದ್ದಾರೆ. ಕಳೆದ ಬಾರಿ ‘ಸಿನಿಮಾ ಸಂಸಾರ’ದಲ್ಲಿ ಜಾಗರೂಕತೆಯಿಂದ ಇರುವಂತೆ ದೈವ ಎಚ್ಚರಿಕೆ ನೀಡಿತ್ತು. ಸಿನಿಮಾ ಕ್ಷೇತ್ರ ಅಂದಾಗ ಅಲ್ಲಿ ದುಷ್ಮನ್​ಗಳು ಇರ್ತಾರೆ, ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ ಸೂಚನೆ ಕೊಟ್ಟಿತ್ತು. ಹರಕೆ ಕಟ್ಟಿಕೊಂಡಿದ್ದರೆ ಅದನ್ನು ಕೊಟ್ಟು ಬಿಡು ಎಂದು ರಿಷಬ್ ಶೆಟ್ಟಿಗೆ ದೈವ ಸೂಚಿಸಿತ್ತು. ಅದರಂತೆ ರಿಷಬ್ ಬಂದು ಹರಕೆ ತೀರಿಸಿದ್ದಾರೆ.

ಇದನ್ನೂ ಓದಿ: ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ; ರಿಷಬ್​ಗೆ ಅಭಯ ನೀಡಿದ ದೈವ

ಇನ್ನು, ಈ ಹರಕೆ ನೇಮೋತ್ಸವದಲ್ಲಿ ‘ಕಾಂತಾರ ಚಾಪ್ಟರ್ 3’ ಬಗ್ಗೆ ಕೂಡ ರಿಷಬ್ ಕೇಳಿದ್ದು ಅದಕ್ಕೂ ಕೂಡ ದೈವ ಗ್ರೀನ್ ಸಿಗ್ನಲ್ ಕೊಟ್ಟಿದೆ. ‘ನಾನಿದ್ದೇನೆ ಮುಂದೆ ಸಾಗು’ ಅಂತ ಹೇಳಿದೆ. ದೈವದ ಅಭಯ ಸಿಕ್ಕಿರೋ ಖುಷಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ರಿಷಬ್ ಶೆಟ್ಟಿ ವಾಪಸ್ ಆಗಿದ್ದಾರೆ. ಬಾಕಿ ಇರುವ ಹರಕೆಗಳನ್ನು ತೀರಿಸಿ ನಂತರ ಕಾಂತಾರ ಸಿನಿಮಾದ ಮುಂದಿನ ಭಾಗದ ಚಿತ್ರೀಕರಣ ಆರಂಭವಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್