Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶ್’ ಚಿತ್ರದಲ್ಲೇಕೆ ಬರ್ತಾರೆ ಉಪೇಂದ್ರ? ಆ ಟ್ವಿಸ್ಟ್ ಕೊಡಲು ಇತ್ತು ಕಾರಣ  

18 ಲಕ್ಷದಲ್ಲಿ ‘ಶ್​’ ಸಿನಿಮಾ ರೆಡಿ ಆಗಿತ್ತು. ಈ ಸಿನಿಮಾದಲ್ಲಿ ನಟಿಸೋಕೆ ಕಾಶಿನಾಥ್ ಒಪ್ಪಿಕೊಂಡರು. ಆ ರೀತಿ ಆದಾಗ ಮೂಡಿಬಂದಿದ್ದು ‘ಶ್​’ ಸಿನಿಮಾ. ಈ ಚಿತ್ರ ಹಾರರ್​ ಶೈಲಿಯಲ್ಲಿ ಇತ್ತು. ಆಗಿನ ಕಾಲದಲ್ಲಿ ಸೂಪರ್ ಹಿಟ್ ಆದ ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ಸಿಕ್ಕಿತ್ತು. ಈಗಲೂ ಅನೇಕರ ಫೇವರಿಟ್ ಆಗಿ ಈ ಸಿನಿಮಾ ಇದೆ.

‘ಶ್’ ಚಿತ್ರದಲ್ಲೇಕೆ ಬರ್ತಾರೆ ಉಪೇಂದ್ರ? ಆ ಟ್ವಿಸ್ಟ್ ಕೊಡಲು ಇತ್ತು ಕಾರಣ  
ಉಪೇಂದ್ರ (ಚಿತ್ರ ಕೃಪೆ: ಎಸ್​ಜಿವಿ)
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Dec 10, 2024 | 7:47 AM

‘ಶ್’ ಸಿನಿಮಾ ಈಗಲೂ ಪ್ರೇಕ್ಷಕರಿಗೆ ಸಖತ್ ಇಷ್ಟ. ಈ ಸಿನಿಮಾ ಅನೇಕರ ಫೇವರಿಟ್ ಎನಿಸಿಕೊಂಡಿದೆ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಉಪೇಂದ್ರ ಅವರು. ಈ ಚಿತ್ರದಲ್ಲಿ ಅವರು ಅತಿಥಿ ಪಾತ್ರ ಕೂಡ ಮಾಡಿದ್ದರು. ಅವರ ಪಾತ್ರ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಅತಿಥಿಯಾಗಿ ಬಂದು ಹೋಗುವ ಅವರು ಸಾಕಷ್ಟು ಗಮನ ಸೆಳೆದಿದ್ದರು. ಈ ಪಾತ್ರವನ್ನು ತರಬೇಕು ಎನ್ನುವ ಕಾನ್ಸೆಪ್ಟ್ ಬಂದಿದ್ದು ಹೇಗೆ ಎಂಬ ಬಗ್ಗೆ ಉಪೇಂದ್ರ ಹೇಳಿಕೊಂಡಿದ್ದರು.

ಕಾಶಿನಾಥ್ ಅವರು ‘ಶ್​’ ಚಿತ್ರದಲ್ಲಿ ಡೈರೆಕ್ಟರ್ ಪಾತ್ರ ಮಾಡಿದ್ದಾರೆ. ಅವರು ಶೂಟಿಂಗ್​ಗೆ ತೆರಳುತ್ತಾರೆ. ಮಧ್ಯಂತರ ಸಂದರ್ಭದಲ್ಲಿ ಉಪೇಂದ್ರ ಅವರು ಪೊಲೀಸ್ ಅಧಿಕಾರಿಯಾಗಿ ಎಂಟ್ರಿ ಕೊಡುತ್ತಾರೆ. ‘ಕಾಶಿನಾಥ್ ನಕಲಿ ಡೈರೆಕ್ಟರ್’ ಎಂದು ಹೇಳುತ್ತಾರೆ. ಅಲ್ಲಿಗೆ ಮಧ್ಯಂತರ. ಆ ಬಳಿಕ ಟ್ಯಾಲೆಂಟ್ ತೋರಿಸಲು ಈ ರೀತಿ ಮಾಡಿದೆ ಎಂದು ಉಪೇಂದ್ರ ಹೇಳುವಾಗ ಅವರಿಗೆ ಏಟುಗಳು ಬೀಳುತ್ತವೆ. ಈ ದೃಶ್ಯ ಇಟ್ಟಿದ್ದು ಏಕೆ ಎಂಬುದನ್ನು ಉಪೇಂದ್ರ ಹೇಳಿದ್ದರು.

‘ಮಧ್ಯಂತರಕ್ಕೆ ಒಂದು ಜರ್ಕ್ ಬೇಕಿತ್ತು. ಆಗ ಈ ಐಡಿಯಾ ಬಂತು. ಬಂದು ಯಾರನ್ನಾದರೂ ಅರೆಸ್ಟ್ ಮಾಡಿದ್ರೆ ಹೇಗೆ? ಕಾಶಿನಾಥ್​ನ ಅರೆಸ್ಟ್ ಮಾಡಿ ಅದಕ್ಕೆ ಲಾಜಿಕ್ ಕೊಟ್ವಿ. ನಂತರ ಟ್ಯಾಲೆಂಟ್ ತೋರಿಸೋಕೆ ಬಂದೆ ಅಂತ ಹೇಳಿದೆವು. ಆ ಪಾತ್ರದಲ್ಲಿ ನಾನೇ ನಟಿಸುತ್ತೇನೆ ಎಂದು ಮುಂದೆಬಂದೆ’ ಎಂದಿದ್ದಾರೆ ಉಪೇಂದ್ರ. ಶಂಕರ್​ನಾಗ್ ಅವರಿಂದ ಸ್ಫೂರ್ತಿ ಪಡೆದು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು ಉಪೇಂದ್ರ.

18 ಲಕ್ಷದಲ್ಲಿ ‘ಶ್​’ ಸಿನಿಮಾ ರೆಡಿ ಆಗಿತ್ತು. ಈ ಸಿನಿಮಾದಲ್ಲಿ ನಟಿಸೋಕೆ ಕಾಶಿನಾಥ್ ಒಪ್ಪಿಕೊಂಡರು. ಆ ರೀತಿ ಆದಾಗ ಮೂಡಿಬಂದಿದ್ದು ‘ಶ್​’ ಸಿನಿಮಾ. ಈ ಚಿತ್ರ ಹಾರರ್​ ಶೈಲಿಯಲ್ಲಿ ಇತ್ತು. ಆಗಿನ ಕಾಲದಲ್ಲಿ ಸೂಪರ್ ಹಿಟ್ ಆದ ಈ ಚಿತ್ರಕ್ಕೆ ಭರ್ಜರಿ ಮೆಚ್ಚುಗೆ ಸಿಕ್ಕಿತ್ತು. ಈಗಲೂ ಅನೇಕರ ಫೇವರಿಟ್ ಆಗಿ ಈ ಸಿನಿಮಾ ಇದೆ.

ಇದನ್ನೂ ಓದಿ: ಶಿವಣ್ಣ-ಉಪೇಂದ್ರರ ಸಿನಿಮಾ ತಂಡ ಸೇರಿದ ಹಾಲಿವುಡ್ ತಂತ್ರಜ್ಞರು

ಉಪೇಂದ್ರ ಅವರು ‘ಯುಐ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ಡಿಸೆಂಬರ್ 20ರಂದು ರಿಲೀಸ್ ಆಗಲಿದೆ. ಈ ಚಿತ್ರ ಪ್ರಚಾರದಲ್ಲಿ ಅವರು ಬ್ಯುಸಿ ಇದ್ದಾರೆ. ಈ ಚಿತ್ರ ಭವಿಷ್ಯದಲ್ಲಿ ಸಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Published On - 7:45 am, Tue, 10 December 24

ಆರೋಪಿಗಳು ಬಾಗಪ್ಪನ ಹತ್ಯೆ ನಂತರ ಕಾಡಲ್ಲಿ ಓಡಾಡಿಕೊಂಡಿದ್ದರು: ಎಸ್​ ಪಿ
ಆರೋಪಿಗಳು ಬಾಗಪ್ಪನ ಹತ್ಯೆ ನಂತರ ಕಾಡಲ್ಲಿ ಓಡಾಡಿಕೊಂಡಿದ್ದರು: ಎಸ್​ ಪಿ
ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್​ಬಾಸ್ ನೀತು ಮಾತು
ಪವಿತ್ರಾ ಬದುಕಿನ ಏಳು-ಬೀಳಿನ ಬಗ್ಗೆ ಬಿಗ್​ಬಾಸ್ ನೀತು ಮಾತು
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ
ಟ್ರಂಪ್ ಜೊತೆಗಿನ ಮೋದಿ ಮಾತುಕತೆಗೆ ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ
ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ಮೋದಿ; ಇಲ್ಲಿವೆ ಹೈಲೈಟ್ಸ್
ಅಮೆರಿಕ ಪ್ರವಾಸ ಮುಗಿಸಿ ಭಾರತಕ್ಕೆ ಹೊರಟ ಪ್ರಧಾನಿ ಮೋದಿ; ಇಲ್ಲಿವೆ ಹೈಲೈಟ್ಸ್
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ಕುಸಿತ: ತಪ್ಪಿದ ಅನಾಹುತ
ಕಾಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಪಿಲ್ಲರ್ ಕುಸಿತ: ತಪ್ಪಿದ ಅನಾಹುತ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರ ಅತ್ಮಸ್ಥೈರ್ಯ ಕುಂದಿದೆ: ಅಶೋಕ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪೊಲೀಸರ ಅತ್ಮಸ್ಥೈರ್ಯ ಕುಂದಿದೆ: ಅಶೋಕ
ಇನ್ನೂ ಕಾರ್ಯಪ್ರವೃತ್ತರಾಗದ ಅರಣ್ಯ ಇಲಾಖೆ ಅಧಿಕಾರಿಗಳು
ಇನ್ನೂ ಕಾರ್ಯಪ್ರವೃತ್ತರಾಗದ ಅರಣ್ಯ ಇಲಾಖೆ ಅಧಿಕಾರಿಗಳು
Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್​ ಟ್ರಂಪ್
Video: ಪ್ರಧಾನಿ ಮೋದಿಗೆ ವಿಶೇಷ ಉಡುಗೊರೆ ನೀಡಿದ ಡೊನಾಲ್ಡ್​ ಟ್ರಂಪ್
ನಾನು ರೆಸ್ಟ್​ನಲ್ಲಿದ್ದೇನೆ, ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ನಾನು ರೆಸ್ಟ್​ನಲ್ಲಿದ್ದೇನೆ, ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ
ವೈಷಮ್ಯ, ಹೆಣ್ಣು ಮತ್ತು ಮಣ್ಣು-ಬಾಗಪ್ಪ ಕೊಲೆ ಹಿಂದಿನ ಕಾರಣಗಳು: ಎಸ್​ಪಿ