AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀದೇವಿನ ಕನ್ನಡಕ್ಕೆ ಕರೆತರಲು ಹೋಗಿದ್ದ ರವಿಚಂದ್ರನ್; ಆಮೇಲೆ ಆಗಿದ್ದೇನು?

ವಿ. ರವಿಚಂದ್ರನ್ ಅವರು ಶ್ರೀದೇವಿ ಮತ್ತು ಐಶ್ವರ್ಯಾ ರೈ ಜೊತೆ ಕೆಲಸ ಮಾಡಲು ಪ್ರಯತ್ನಿಸಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಶ್ರೀದೇವಿಯೊಂದಿಗೆ "ಚೆಲುವ" ಚಿತ್ರಕ್ಕೆ ಒಪ್ಪಂದವೂ ಆಗಿತ್ತು ಆದರೆ ಚಿತ್ರ ನಿರ್ಮಾಣ ಆಗಲಿಲ್ಲ. ಐಶ್ವರ್ಯಾ ರೈ ಅವರಿಗೆ ಮಿಸ್ ವರ್ಲ್ಡ್ ಆಗುವ ಮೊದಲೇ ಅವರು ನಟನೆಯಲ್ಲಿ ಭವಿಷ್ಯವಿದೆ ಎಂದು ತಿಳಿದು ಪತ್ರ ಬರೆದಿದ್ದರು.

ಶ್ರೀದೇವಿನ ಕನ್ನಡಕ್ಕೆ ಕರೆತರಲು ಹೋಗಿದ್ದ ರವಿಚಂದ್ರನ್; ಆಮೇಲೆ ಆಗಿದ್ದೇನು?
ರವಿಚಂದ್ರನ್-ಶ್ರೀದೇವಿ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Apr 22, 2025 | 8:11 AM

ವಿ. ರವಿಚಂದ್ರನ್ (V Ravichandran) ಅವರು ನಟನೆಯ ಜೊತೆಗೆ ಅನೇಕ ಸಿನಿಮಾಗಳನ್ನು ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಅವರ ಖ್ಯಾತಿ ಎಂದಿಗೂ ಕಡಿಮೆ ಆಗುವಂಥದ್ದಲ್ಲ. ಅವರು ಕನ್ನಡ ಚಿತ್ರರಂಗಕ್ಕೆ ಖುಷ್ಬೂ ಸುಂದರ್, ಶಿಲ್ಪಾ ಶೆಟ್ಟಿ ಸೇರಿದಂತೆ ಅನೇಕ ಹೀರೋಯಿನ್​ಗಳನ್ನು ಪರಿಚಯಿಸಿದ್ದರು. ಅವರಿಗೆ ಶ್ರೀದೇವಿಯನ್ನು ಕನ್ನಡ ಚಿತ್ರರಂಗಕ್ಕೆ ಕರೆಸೋ ಪ್ಲ್ಯಾನ್ ಇತ್ತು. ಆದರೆ, ಅದು ಸಾಧ್ಯವಾಗಿಲ್ಲ. ಈ ಬಗ್ಗೆ ರವಿಚಂದ್ರನ್ ಅವರು ಮಾತನಾಡಿದ್ದಾರೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಅಲ್ಲದೆ, ಐಶ್ವರ್ಯಾ ರೈ ಬಗ್ಗೆಯೂ ಮಾತನಾಡಿದ್ದಾರೆ.

ರವಿಚಂದ್ರನ್ ಅವರು ಚಿತ್ರರಂಗದ ಜೊತೆ ಕಿರುತೆರೆ ಲೋಕದಲ್ಲೂ ಬ್ಯುಸಿ ಇದ್ದಾರೆ. ಅವರು ರಿಯಾಲಿಟಿ ಶೋಗಳಿಗೆ ಜಡ್ಡ್ ಆಗುತ್ತಿದ್ದಾರೆ. ಜೀ ಕನ್ನಡದ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ಜಡ್ಜ್ ಸ್ಥಾನದಲ್ಲಿ ಇದ್ದಾರೆ. ಇವರ ಜೊತೆ ರಚಿತಾ ರಾಮ್ ಕೂಡ ಇದ್ದರು. ಅವರ ಎದುರು ರವಿಚಂದ್ರನ್ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ.

ಇದನ್ನೂ ಓದಿ
Image
ಚಾಕು ಇರಿತ ಪ್ರಕರಣ ನಡೆದ 3 ತಿಂಗಳಿಗೆ ಹೊಸ ಮನೆ ಖರೀದಿಸಿದ ಸೈಫ್ ಅಲಿ ಖಾನ್
Image
‘ನಾನು ಮಾತ್ರ ಅಲ್ಲಾರೀ’; ಸ್ಟಾರ್ ಕಲಾವಿದರ ಡ್ರಗ್ಸ್ ಪುರಾಣ ಬಿಚ್ಚಿಟ್ಟ ಶೈನ್
Image
ಈಗ ಪತ್ನಿಯೇ ಸರ್ವಸ್ವ; ವಿಜಯಲಕ್ಷ್ಮೀ ಜೊತೆ ಭರನಾಟ್ಯ ನೋಡಲು ಬಂದ ದರ್ಶನ್
Image
ಶಿವರಾಜ್​ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..

‘ಅವರ ಸಿನಿಮಾದಲ್ಲಿ ಎಲ್ಲಾ ಭಾಷೆಯ ಹೀರೋಯಿನ್​ಗಳನ್ನು ನೋಡಿದ್ದೇನೆ. ಶ್ರೀದೇವಿ, ಐಶ್ವರ್ಯಾ ರೈ ಜೊತೆ ನೀವು ನಟಿಸಬೇಕಿತ್ತು. ಅವರನ್ನು ಕರೆತರೋ ತಾಕತ್ತು ಇವರಿಗೆ ಮಾತ್ರ ಇತ್ತು’ ಎಂದಿದ್ದಾರೆ ರಚಿತಾ ರಾಮ್. ಇದಕ್ಕೆ ರವಿಚಂದ್ರನ್ ಅವರು ಒಂದು ಅಚ್ಚರಿ ವಿಚಾರ ರಿವೀಲ್ ಮಾಡಿದ್ದಾರೆ.

‘ಚೆಲುವ ಸಿನಿಮಾ ಮಾಡಿದೆವು. ಅದಕ್ಕೆ ಚೆಲುವೆ ಅಂತಾನೇ ಹಸರು ಇಟ್ಟಿದ್ದೆವು. ಅದಕ್ಕೆ ಶ್ರೀದೇವಿ ನಟಿಯಾಗಿತ್ತು. ಅವರನ್ನು ಕರೆದುಕೊಂಡು ಬಂದರೆ ನನಗೆ ಸಂಭಾವನೆಯೇ ಬೇಡ ಎಂದೆ. ಈ ಚಿತ್ರ ಸಹಿ ಕೂಡ ಆಯ್ತು. ಅದನ್ನು ನಾನೇ ಡೈರೆಕ್ಟ್ ಮಾಡಬೇಕಿತ್ತು. ಆದರೆ, ಸಿನಿಮಾ ಸೆಟ್ಟೇರಿಲ್ಲ’ ಎಂದರು ರವಿಚಂದ್ರನ್.

ಇದನ್ನೂ ಓದಿ: ಮದುವೆ ಯಾಕಾಗಬೇಕು? ರವಿಚಂದ್ರನ್ ಮಾತಿಗೆ ಚಪ್ಪಾಳೆಯ ಸುರಿಮಳೆ

‘ಮಿಸ್​ ವರ್ಲ್ಡ್ ಆಗುವುದಕ್ಕೂ ಮೊದಲೇ ಐಶ್ವರ್ಯಾ ರೈಗೆ ನಾನು ಪತ್ರ ಬರೆದಿದ್ದೆ. ನೀವು ನಟನೆಗೆ ಬರಬೇಕು ಎಂದಿದ್ದೆ. ಎಲ್ಲಿಯೋ ಅವರ ಫೋಟೋ ನೋಡಿ ಅವರಿಗೆ ನಟನೆಯಲ್ಲಿ ಭವಿಷ್ಯ ಇದೆ ಎಂದು ನನಗೆ ಅನಿಸಿತ್ತು. ಆದರೆ, ಆ ಸಂದರ್ಭದಲ್ಲಿ ಅವರಿಗೆ ನಟನೆಯ ಬಗ್ಗೆ ಆಸಕ್ತಿಯೇ ಇರಲಿಲ್ಲ. ಅವರು ಕರ್ನಾಟಕಕ್ಕೆ ಮಿಸ್ ವರ್ಲ್ಡ್ ಕ್ರೌನ್ ತಂದಾಗ ಅದನ್ನು ಮೊದಲು ಅವರಿಗೆ ಹಾಕಿದ್ದು ನಾನೇ’ ಎಂದಿದ್ದಾರೆ ರವಿಚಂದ್ರನ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:53 am, Tue, 22 April 25

ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಡಿಜೆ ಸೌಂಡ್, ಅತಿಯಾದ ಬೆಳಕು ಹೃದಯಾಘಾತಕ್ಕೆ ಕಾರಣವಾಗುತ್ತದೆಯೇ?
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಐಪಿಎಲ್: ಬೆಂಗಳೂರಿನ ಈ ರಸ್ತೆಗಳಲ್ಲಿ ಕಿಲೋಮೀಟರ್​ಗಟ್ಟಲೇ ಟ್ರಾಫಿಕ್ ಜಾಮ್
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ಒಡಿಷಾದಿಂದ ಬಂದಿರುವ ಕೊಹ್ಲಿ ಕಟ್ಟಾಭಿಮಾನಿಗೆ ಟಿಕೆಟ್ ಸಿಕ್ಕಿಲ್ಲ
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ಮದುಮಗ ಸಾವು: ಅಸಲಿಗೆ ಆಗಿದ್ದೇನು?
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಸೇನೆ ಹೇಳುವುದನ್ನು ಕಾಂಗ್ರೆಸ್ ಪ್ರಶ್ನಿಸುವುದಿಲ್ಲ: ರಾಮಲಿಂಗಾರೆಡ್ಡಿ
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಗುರುವಿನ ಮನೆಯಲ್ಲೇ ಶನಿ; ಹೇಗಿರಿದೆ ಈ ವರ್ಷ ಮೀನ ರಾಶಿಯವರ ಭವಿಷ್ಯ?
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಕುಂಭ ರಾಶಿಗೆ ಗುರುವಿನ ನೇರ ದೃಷ್ಟಿ; ಈ ವರ್ಷ ಅದೃಷ್ಟವೋ ಅದೃಷ್ಟ!
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಬಾಗಲಕೋಟೆ: ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಮಕರ ರಾಶಿಯ ಮೇಲೆ ಗುರು ಸಂಚಾರದ ಪ್ರಭಾವ ಹೇಗಿರಲಿದೆ?
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್
ಸಂತೋಷ್ ಲಾಡ್​ಗೆ ತಮ್ಮ ಇಲಾಖೆಯಲ್ಲಿ ಏನು ನಡೆದಿದೆಯಂತ ಗೊತ್ತಿಲ್ಲ: ಪ್ರತಾಪ್