AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೇವರಿಗೆ ಗೊತ್ತು ಅಷ್ಟೆ ಸಾಕು’ ಎಂದ ವಿಜಯಲಕ್ಷ್ಮಿ ದರ್ಶನ್, ಕಾರಣವೇನು?

Vijayalakshmi Darshan Instagram: ದರ್ಶನ್, ಜೈಲಿಗೆ ಹೋದಾಗಿನಿಂದಲೂ ಪತ್ನಿ ವಿಜಯಲಕ್ಷ್ಮಿ ಹೊರಗಿದ್ದುಕೊಂಡು ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೊರಗಿದ್ದುಕೊಂಡು ಪತಿಗೆ ಅಗತ್ಯ ಕಾನೂನು ನೆರವು ಇನ್ನಿತರೆಗಳು ಧಕ್ಕಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ಇತ್ತೀಚೆಗೆ ವಿಜಯಲಕ್ಷ್ಮಿ ಅವರ ಬಗ್ಗೆ ಕೆಲವು ಋಣಾತ್ಮಕ ಸುದ್ದಿಗಳು ಹರಿದಾಡುತ್ತಿವೆ. ವಿಶೇಷವಾಗಿ ದರ್ಶನ್ ಆಪ್ತ, ಸಹೋದರ ಸಮಾನ ಎನಿಸಿಕೊಂಡಿರುವ ಧನ್ವೀರ್ ಮತ್ತು ವಿಜಯಲಕ್ಷ್ಮಿ ಅವರ ನಡುವೆ ಮನಸ್ಥಾಪ ಉಂಟಾಗಿದೆ ಎನ್ನಲಾಗುತ್ತಿದೆ. ಇವುಗಳ ನಡುವೆಯೇ ವಿಜಯಲಕ್ಷ್ಮಿ ಅವರ ಇನ್​ಸ್ಟಾಗ್ರಾಂ ಪೋಸ್ಟ್ ಸುದ್ದಿಗಳಿಗೆ ಮತ್ತಷ್ಟು ಇಂಬು ನೀಡಿದೆ.

‘ದೇವರಿಗೆ ಗೊತ್ತು ಅಷ್ಟೆ ಸಾಕು’ ಎಂದ ವಿಜಯಲಕ್ಷ್ಮಿ ದರ್ಶನ್, ಕಾರಣವೇನು?
Darshan Vijayalakshmi
ಮಂಜುನಾಥ ಸಿ.
|

Updated on:Aug 13, 2026 | 3:17 PM

Share

ಮುಖ್ಯಾಂಶಗಳು

  • ದರ್ಶನ್ ಪತ್ನಿ ವಿಜಯಲಕ್ಷ್ಮಿ ಇನ್​ಸ್ಟಾಗ್ರಾಂ ಪೋಸ್ಟ್
  • ಕ್ರಿಪ್ಟಿಕ್ ಪೋಸ್ಟ್ ಒಂದನ್ನು ವಿಜಯಲಕ್ಷ್ಮಿ ಹಂಚಿಕೊಂಡಿದ್ದಾರೆ.
  • ಅನುಮಾನಗಳನ್ನು ಮೂಡಿಸುತ್ತಿರುವ ವಿಜಯಲಕ್ಷ್ಮಿ ಪೋಸ್ಟ್

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣ ವಿಚಾರಣೆ ಜಾರಿಯಲ್ಲಿದ್ದು, ನ್ಯಾಯಾಲಯದಲ್ಲಿ ಪ್ರತಿ ದಿನವೂ ಒಂದು ಹೊಸ ಆಸಕ್ತಿಕರ ಬೆಳವಣಿಗೆ ಆಗುತ್ತಿದೆ. ಆರೋಪಿ ದರ್ಶನ್​​ಗೆ ಒಂದರ ಹಿಂದೊಂದು ಸಂಕಷ್ಟಗಳು ಎದುರಾಗುತ್ತಿವೆ. ದರ್ಶನ್, ಜೈಲಿಗೆ ಹೋದಾಗಿನಿಂದಲೂ ಪತ್ನಿ ವಿಜಯಲಕ್ಷ್ಮಿ ಹೊರಗಿದ್ದುಕೊಂಡು ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹೊರಗಿದ್ದುಕೊಂಡು ಪತಿಗೆ ಅಗತ್ಯ ಕಾನೂನು ನೆರವು ಇನ್ನಿತರೆಗಳು ಧಕ್ಕಿಸುವ ಪ್ರಯತ್ನದಲ್ಲಿದ್ದಾರೆ. ಆದರೆ ಇತ್ತೀಚೆಗೆ ವಿಜಯಲಕ್ಷ್ಮಿ ಅವರ ಬಗ್ಗೆ ಕೆಲವು ಋಣಾತ್ಮಕ ಸುದ್ದಿಗಳು ಹರಿದಾಡುತ್ತಿವೆ. ವಿಶೇಷವಾಗಿ ದರ್ಶನ್ ಆಪ್ತ, ಸಹೋದರ ಸಮಾನ ಎನಿಸಿಕೊಂಡಿರುವ ಧನ್ವೀರ್ ಮತ್ತು ವಿಜಯಲಕ್ಷ್ಮಿ ಅವರ ನಡುವೆ ಮನಸ್ಥಾಪ ಉಂಟಾಗಿದೆ ಎನ್ನಲಾಗುತ್ತಿದೆ. ಇವುಗಳ ನಡುವೆಯೇ ವಿಜಯಲಕ್ಷ್ಮಿ ಅವರ ಇನ್​ಸ್ಟಾಗ್ರಾಂ ಪೋಸ್ಟ್ ಸುದ್ದಿಗಳಿಗೆ ಮತ್ತಷ್ಟು ಇಂಬು ನೀಡಿದೆ.

ವಿಜಯಲಕ್ಷ್ಮಿ ಅವರು ಇಂದು ಇನ್​​ಸ್ಟಾಗ್ರಾಂನಲ್ಲಿ ಕಾಮಾಕ್ಯ ದೇವರ ಚಿತ್ರಗಳನ್ನು ಹಂಚಿಕೊಂಡಿದ್ದು, ‘ದೇವರಿಗೆ ಗೊತ್ತು ಅಷ್ಟೆ ಸಾಕು’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಒಳ್ಳೆತನ, ವ್ಯಕ್ತಿತ್ವವನ್ನು ಯಾರಿಗೂ ತೋರಿಸುವ ಅಗತ್ಯವಿಲ್ಲ, ಅದು ದೇವರಿಗೆ ಗೊತ್ತಿದೆ ಅಷ್ಟೇ ಸಾಕು ಎಂದಿದ್ದಾರೆ. ಚಿತ್ರದ ಹಿನ್ನೆಲೆಯಲ್ಲಿ ‘ಎಲ್ಲಿಗೆ ಓಡುವೆ ಓ ಮನುಜ ನಿನ್ನ ಕರ್ಮಗಳೆಲ್ಲ ಇಲ್ಲೇ ಕೊನೆ’ ಎಂಬ ಹಾಡನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೆ ವಿಜಯಲಕ್ಷ್ಮಿ ಅವರು ‘ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ, ಅದು ವಸ್ತುವಾಗಲಿ, ವ್ಯಕ್ತಿಯಾಗಲಿ’ ಎಂಬ ಪೋಸ್ಟ್ ಹಂಚಿಕೊಂಡಿದ್ದರು. ವಿಜಯಲಕ್ಷ್ಮಿ ಅವರು ಆ ಪೋಸ್ಟ್ ಹಂಚಿಕೊಂಡಾಗಲೇ ಧನ್ವೀರ್ ಹಾಗೂ ವಿಜಯಲಕ್ಷ್ಮಿ ನಡುವೆ ಮನಸ್ಥಾಪದ ಸುಳಿವು ಹಲವರಿಗೆ ದೊರಕಿತ್ತು. ವಿಜಯಲಕ್ಷ್ಮಿ ಅವರು ಆ ಪೋಸ್ಟ್ ಹಂಚಿಕೊಂಡ ಕೆಲ ದಿನಗಳ ಬಳಿಕ, ಧನ್ವೀರ್ ಅವರು ದರ್ಶನ್ ಅನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿ ನೀಡಿದ್ದರು. ಅದಾದ ಬಳಿಕ ಧನ್ವೀರ್ ಸಹ ಅದೇ ಪೋಸ್ಟ್ ಅನ್ನು ಹಂಚಿಕೊಂಡು, ವಿಜಯಲಕ್ಷ್ಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಈಗ ವಿಜಯಲಕ್ಷ್ಮಿ ಅವರು ಮತ್ತೊಮ್ಮೆ ‘ಕ್ರಿಪ್ಟಿಕ್ ಪೋಸ್ಟ್’ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಪ್ರದೋಷ್ ಮಾಫಿ ಕೇಸ್: ಕೋರ್ಟ್​ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್‌

ಇನ್ನು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬಿರುಸಿನಿಂದ ಸಾಗುತ್ತಿದ್ದು, ದರ್ಶನ್ ಆಪ್ತ ಮತ್ತು ರೇಣುಕಾ ಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿಯೂ ಆಗಿರುವ ಪ್ರದೋಶ್, ತಮ್ಮನ್ನು ಮಾಫಿ ಸಾಕ್ಷಿ (ಅಪ್ರೂವರ್) ಆಗಿ ಪರಿಗಣಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಆದರೆ ದರ್ಶನ್ ಪರ ವಕೀಲರು, ಆಗಸ್ಟ್ 18ರ ವರೆಗೆ ಪ್ರದೋಶ್ ಹೇಳಿಕೆ ದಾಖಲಿಗೆ ಅನುಮತಿ ನೀಡಬಾರದು ಎಂದಿದ್ದು, ಅದರಂತೆ ನ್ಯಾಯಾಲಯವು ದರ್ಶನ್ ವಕೀಲರ ಮನವಿಗೆ ಒಪ್ಪಿಗೆ ನೀಡಿದೆ. ಇದರ ಜೊತೆಗೆ ಮುಂದಿನ ಸಾಕ್ಷಿಗಳ ವಿಚಾರಣೆ ವೇಳೆ ದರ್ಶನ್, ಖುದ್ದು ನ್ಯಾಯಾಲಯದಲ್ಲಿ ಹಾಜರರಿರಲು ಅನುಮತಿ ನೀಡಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ನ್ಯಾಯಾಲಯವು ಈ ಕುರಿತಂತೆ ಇನ್ನಷ್ಟೆ ಆದೇಶ ಹೊರಡಿಸಬೇಕಿದೆ. ಇಂದು (ಆಗಸ್ಟ್ 13) ನ್ಯಾಯಾಲಯದಲ್ಲಿ ಕೆಲ ಪ್ರಮುಖ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:16 pm, Thu, 13 August 26

Follow Us