
ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ (Shivarajkumar) ಹಾಗೂ ಆರ್. ಚಂದ್ರು ಅವರ ಕಾಂಬಿನೇಷನ್ನ ಹೊಸ ಸಿನಿಮಾ ‘ಒರಿಜಿನಲ್ ಮಾನ್ಸ್ಟರ್’ ಘೋಷಣೆ ಮಾಡಲು ಮುಂಬೈನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಶಿವಣ್ಣ ಅವರಿಗೆ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾಗೆ ವ್ಯಕ್ತವಾಗುತ್ತಿರುವ ನೆಗೆಟಿವ್ ಹಾಗೂ ಮಿಶ್ರ ಪ್ರತಿಕ್ರಿಯೆಗಳ ಕುರಿತು ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದರು.ಇದಕ್ಕೆ ಶಿವಣ್ಣ ಖಡಕ್ ಆಗಿ ಉತ್ತರ ನೀಡಿದ್ದಾರೆ.
‘ಟಾಕ್ಸಿಕ್’ ಸಿನಿಮಾ ನೋಡಿದ್ರಾ? ನೆಗೆಟಿವ್ ವಿಮರ್ಶೆ ಕೇಳಿ ಬರುತ್ತಿದೆಯಲ್ಲ’ ಎಂದು ಶಿವಣ್ಣಗೆ ಕೇಳಲಾಯಿತು. ಪತ್ರಕರ್ತನ ಪ್ರಶ್ನೆಗೆ ಧೈರ್ಯವಾಗಿ ಮತ್ತು ನೇರವಾಗಿ ಉತ್ತರಿಸಿದ ಶಿವಣ್ಣ, ‘ಚಿತ್ರರಂಗದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಶೈಲಿಯಲ್ಲಿ ಸಿನಿಮಾ ಮಾಡುವ ಹಾಗೂ ಹೊಸ ಕಥೆಯನ್ನು ವಿಭಿನ್ನವಾಗಿ ಹೇಳುವ ಹಕ್ಕಿರುತ್ತದೆ’ ಎಂದು ಬೆಂಬಲಿಸಿ ನಿಂತರು.
Shivarajkumar On Toxic 💥
I Haven’t Get Time Actually But I’ll Be Watching The Toxic Film.
Reporter – How The Response?
Shivaraj – Some People Liking The Film Because It’s Very Good Attempt, So After Watching The Film I’m Tell You But Right Now It’s Good.#ToxicTheMovie #Yash pic.twitter.com/DfpM7XzKyh
— Filmy_Duniya (@nawa75436) August 28, 2026
ಮುಂದುವರಿದು ಮಾತನಾಡಿದ ಅವರು, ‘ಸಿನಿಮಾ ತಂಡ ಏನನ್ನೋ ಹೊಸದಾಗಿ ಪ್ರೇಕ್ಷಕರಿಗೆ ತಲುಪಿಸಲು ಪ್ರಯತ್ನಿಸಿದೆ. ಅದೊಂದು ಅತ್ಯುತ್ತಮ ಪ್ರಯತ್ನವಾಗಿದ್ದು, ಈಗಾಗಲೇ ಹಲವರು ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಪ್ರತಿಯೊಬ್ಬ ವೀಕ್ಷಕನು ಯಾವ ದೃಷ್ಟಿಕೋನದಿಂದ ಸಿನಿಮಾವನ್ನು ನೋಡುತ್ತಾನೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಸಂಪೂರ್ಣ ಸಿನಿಮಾ ನೋಡಿದ ಮೇಲಷ್ಟೇ ಅದರ ಬಗ್ಗೆ ನಿಖರವಾಗಿ ಮಾತನಾಡಲು ಸಾಧ್ಯ. ಪ್ರಸ್ತುತ ಸಿನಿಮಾಕ್ಕೆ ಉತ್ತಮ ರಿಯಾಕ್ಷನ್ ಸಿಗುತ್ತಿದೆ’ ಎಂದು ಹೇಳುವ ಮೂಲಕ ನೆಗೆಟಿವ್ ಟೀಕೆಗಳಿಗೆ ತಕ್ಕ ಉತ್ತರ ನೀಡಿದರು.
ಇದನ್ನೂ ಓದಿ: ಮುಂಬೈನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ಶಿವಣ್ಣ, ಆರ್. ಚಂದ್ರು
ಆರ್. ಚಂದ್ರು ಈಗ ನಿರ್ಮಾಪಕರಾಗಿ ಬಾಲಿವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಪ್ರಸಿದ್ಧ ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಅವರೊಂದಿಗೆ ಕೈಜೋಡಿಸಿರುವ ಅವರು, ಬೃಹತ್ ಮಟ್ಟದಲ್ಲಿ ನೂತನ ಹಿಂದಿ ಸಿನಿಮಾವೊಂದನ್ನು ನಿರ್ಮಿಸಲು ಸಜ್ಜಾಗಿದ್ದಾರೆ. ಈ ಬಹುಭಾಷಾ ಯೋಜನೆಯು ಹಿಂದಿ, ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಮೂಡಿಬರಲಿದೆ. ಚಿತ್ರದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹಾಗೂ ತೆಲುಗಿನ ಖ್ಯಾತ ನಟ ಸುನೀಲ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸ್ತುತ ಈ ಬಿಗ್ ಬಜೆಟ್ ಸಿನಿಮಾಗೆ ‘ಒರಿಜಿನಲ್ ಮಾನ್ಸ್ಟರ್’ ಎಂದು ಹೆಸರಿಡಲಾಗಿದ್ದು, ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.