Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾಟು ನಾಟು ಕ್ರೆಡಿಟ್ ನೀವೇ ತೆಗೆದುಕೊಂಡ್ರಿ’ ಎಂದವರಿಗೆ ರಾಜಮೌಳಿ ಕೊಟ್ರು ಉತ್ತರ

‘ನಾಟು ನಾಟು..’ ಹಾಡಿನ ಕ್ರೆಡಿಟ್ ವಿಚಾರವಾಗಿ ಮಾತನಾಡಿದ್ದಾರೆ. ರಾಜಮೌಳಿ ಅವರು ಈ ಹಾಡಿನ ಕೊರಿಯೋಗ್ರಾಫರ್ ಪ್ರೇಮ್ ರಕ್ಷಿತ್​ಗೂ ಕ್ರೆಡಿಟ್ ನೀಡಿದ್ದಾರೆ. ಈ ಮೂಲಕ ವದಂತಿಗೆ ಅವರು ತೆರೆ ಎಳೆದಿದ್ದಾರೆ.  

‘ನಾಟು ನಾಟು ಕ್ರೆಡಿಟ್ ನೀವೇ ತೆಗೆದುಕೊಂಡ್ರಿ’ ಎಂದವರಿಗೆ ರಾಜಮೌಳಿ ಕೊಟ್ರು ಉತ್ತರ
‘ಆರ್​ಆರ್​ಆರ್​’ ಚಿತ್ರದಲ್ಲಿ ಜೂ.ಎನ್​ಟಿಆರ್​​, ರಾಮ್​ ಚರಣ್​
Follow us
ರಾಜೇಶ್ ದುಗ್ಗುಮನೆ
|

Updated on:Feb 20, 2023 | 10:11 AM

ನಿರ್ದೇಶಕ ಎಸ್.ಎಸ್​. ರಾಜಮೌಳಿ (SS Rajamouli) ಅವರ ಜನಪ್ರಿಯತೆ ದುಪ್ಪಟ್ಟಾಗಿದೆ. ಇದಕ್ಕೆ ಕಾರಣ ಆಗಿದ್ದು ‘ಆರ್​ಆರ್​ಆರ್​’ ಸಿನಿಮಾ ಹಾಗೂ ಅದರಲ್ಲಿ ಬರುವ ‘ನಾಟು ನಾಟು..’ ಹಾಡು. ಈ ಹಾಡು ಆಸ್ಕರ್​ ರೇಸ್​ನಲ್ಲಿದೆ. ಇದಲ್ಲದೆ ವಿದೇಶದ ಕೆಲವು ಪ್ರತಿಷ್ಠಿತ ಅವಾರ್ಡ್​ ಫಂಕ್ಷನ್​ನಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಇದು ರಾಜಮೌಳಿ ಖ್ಯಾತಿ ಹೆಚ್ಚಿಸಿದೆ. ಹೀಗಾಗಿ, ಹೋದಲ್ಲಿ ಬಂದಲ್ಲಿ ರಾಜಮೌಳಿ ಅವರನ್ನು ಮಾಧ್ಯಮದವರು ಎದುರುಗೊಳ್ಳುತ್ತಿದ್ದಾರೆ. ಅವರಿಗೆ ವಿವಿಧ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕೆಲವು ವದಂತಿಗಳು ಕೂಡ ಹುಟ್ಟಿಕೊಂಡಿವೆ. ಇದಕ್ಕೆ ರಾಜಮೌಳಿ ಕಡೆಯಿಂದ ಸ್ಪಷ್ಟನೆ ನೀಡುವ ಕೆಲಸ ಆಗುತ್ತಿದೆ.

ನ್ಯೂಯಾರ್ಕರ್​​ಗೆ ನೀಡಿದ ಸಂದರ್ಶನದಲ್ಲಿ ರಾಜಮೌಳಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ಬಿಜೆಪಿ ಅಜೆಂಡಾ ರೀತಿಯಲ್ಲೇ ಸಿನಿಮಾ ಮಾಡುತ್ತೀರಿ’ ಎನ್ನುವ ಆರೋಪಕ್ಕೆ ರಾಜಮೌಳಿ ಸ್ಪಷ್ಟನೆ ನೀಡಿದ್ದರು. ಈಗ ‘ನಾಟು ನಾಟು..’ ಹಾಡಿನ ಕ್ರೆಡಿಟ್ ವಿಚಾರವಾಗಿ ಮಾತನಾಡಿದ್ದಾರೆ. ರಾಜಮೌಳಿ ಅವರು ಈ ಹಾಡಿನ ಕೊರಿಯೋಗ್ರಾಫರ್ ಪ್ರೇಮ್ ರಕ್ಷಿತ್​ಗೂ ಕ್ರೆಡಿಟ್ ನೀಡಿದ್ದಾರೆ. ಈ ಮೂಲಕ ವದಂತಿಗೆ ಅವರು ತೆರೆ ಎಳೆದಿದ್ದಾರೆ.

‘ನಾಟು ನಾಟು..’ ಹಾಡಿನ ಕೊರಿಯೋಗ್ರಾಫಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಪ್ರೇಮ್ ರಕ್ಷಿತ್ ಅವರು ‘ಆರ್​ಆರ್​ಆರ್​’ ಇವೆಂಟ್​ನಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಇದಕ್ಕೆ ರಾಜಮೌಳಿ ಅವರನ್ನು ದೂರುವ ಕೆಲಸ ಆಗಿತ್ತು. ಈ ಬಗ್ಗೆ ಮಾತನಾಡಿರುವ ಅವರು, ‘ಯಾವುದೇ ಪ್ರಶಸ್ತಿ ಸಮಾರಂಭದಲ್ಲಿ ನಾಟು ನಾಟು ಹಾಡಿನ ವಿಚಾರ ಬಂದಾಗ ಎಂ.ಎಂ. ಕೀರವಾಣಿ (ಸಂಗೀತ ಸಂಯೋಜಕ) ಹಾಗೂ ಚಂದ್ರಬೋಸ್​ಗೆ (ಗೀತ ಸಾಹಿತಿ) ಕ್ರೆಡಿಟ್ ಸಿಗಬಹುದು. ಆದರೆ, ಪ್ರೇಮ್​ ರಕ್ಷಿತ್ ನಿಜವಾದ ವಿನ್ನರ್. ಈ ಹಾಡು ಹೆಚ್ಚಿನ ಜನರಿಗೆ ತಲುಪೋಕೆ ಅವರ ಕೊರಿಯೋಗ್ರಫಿ ಕಾರಣ. ನಾಲ್ಕೈದು ಸ್ಟೆಪ್​ನ ಐಡಿಯಾಗಳನ್ನು ರೆಡಿ ಮಾಡೋಕೆ ಅವರಿಗೆ 7 ವಾರಗಳು ಬೇಕಾಗುತ್ತಿದ್ದವು’ ಎಂದಿದ್ದಾರೆ ರಾಜಮೌಳಿ.

ಇದನ್ನೂ ಓದಿ
Image
SS Rajamouli: ಎಸ್​ಎಸ್​​ ರಾಜಮೌಳಿ ಬಿಜೆಪಿ ಪರವೇ? ಮೌನ ಮುರಿದ ನಿರ್ದೇಶಕ  
Image
‘ಆರ್​ಆರ್​ಆರ್​’ ಸಿನಿಮಾ ಹೇಗೆ ಮಾಡಿದಿರಿ?’; ರಾಜಮೌಳಿಗೆ ಹಾಲಿವುಡ್​ ದಿಗ್ಗಜ ​ಸ್ಪೀಲ್​ಬರ್ಗ್ ಪ್ರಶ್ನೆ
Image
SS Rajamouli: ‘ಕಬ್ಜ’ ಸಾಂಗ್​ ರಿಲೀಸ್​​​ಗೆ ಬರ್ತಿಲ್ಲ ರಾಜಮೌಳಿ; ಕಾರಣ ತಿಳಿಸಿದ ನಿರ್ದೇಶಕ

ಇದನ್ನೂ ಓದಿ: ‘ಆರ್​ಆರ್​ಆರ್​’ ಸಿನಿಮಾ ಹೇಗೆ ಮಾಡಿದಿರಿ?’; ರಾಜಮೌಳಿಗೆ ಹಾಲಿವುಡ್​ ದಿಗ್ಗಜ ​ಸ್ಪೀಲ್​ಬರ್ಗ್ ಪ್ರಶ್ನೆ

‘ನಾಟು ನಾಟು..’ ಹಾಡು ಮಾತ್ರವಲ್ಲದೆ ಪ್ರೀ-ಕ್ಲೈಮ್ಯಾಕ್ಸ್​ನಲ್ಲಿ ಬರುವ ಫೈಟ್​ನಲ್ಲಿ ರಾಮ್ ಚರಣ್ ಅವರನ್ನು ಜೂ. ಎನ್​ಟಿಆರ್​ ಎತ್ತಿಕೊಂಡು ಹೋಗುತ್ತಾರೆ. ಈ ಐಡಿಯಾ ನೀಡಿದ್ದು ಕೂಡ ಪ್ರೇಮ್ ರಕ್ಷಿತ್ ಅವರೇ. ಈ ವಿಚಾರವನ್ನು ರಾಜಮೌಳಿ ರಿವೀಲ್ ಮಾಡಿದ್ದಾರೆ. ಜೊತೆಗೆ ಪ್ರೇಮ್ ರಕ್ಷಿತ್​​ಗೆ ವಿಶೇಷ ಕ್ರೆಡಿಟ್ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:17 am, Mon, 20 February 23

ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
ನೋ ಬಾಲ್, ಫ್ರೀ ಹಿಟ್, ರನೌಟ್​: ಸೂಪರ್​ ಓವರ್​ನಲ್ಲಿ ಡೆಲ್ಲಿಗೆ ರೋಚಕ ಜಯ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Devotional: ಧಾರ್ಮಿಕ ಕ್ಷೇತ್ರಗಳಲ್ಲಿ ಪಂಕ್ತಿ ಭೋಜನದ ಮಹತ್ವ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
Daily Horoscope: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಅನುಗ್ರಹ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ