AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆರೆಯ ಮೇಲೆ ಎದುರಾ ಬದುರಾಗುತ್ತಿದ್ದಾರೆ ಸ್ಟಾರ್ ಸಹೋದರರು, ಬ್ಲಾಸ್ಟ್ ಪಕ್ಕಾ

ಸೂರ್ಯ ನಟಿಸುತ್ತಿರುವ ‘ಕನಗುವ’ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದ್ದು, ಸಿನಿಮಾದ ಎರಡನೇ ಭಾಗದಲ್ಲಿ ಸಹೋದರರಾದ ಸೂರ್ಯ ಮತ್ತು ಕಾರ್ತಿ ಒಟ್ಟಿಗೆ ನಟಿಸಲಿದ್ದಾರೆ. ಸಿನಿಮಾದಲ್ಲಿ ಸೂರ್ಯ ನಾಯಕ ಆಗಿದ್ದರೆ ಕಾರ್ತಿ ವಿಲನ್ ಆಗಿದ್ದಾರೆ.

ತೆರೆಯ ಮೇಲೆ ಎದುರಾ ಬದುರಾಗುತ್ತಿದ್ದಾರೆ ಸ್ಟಾರ್ ಸಹೋದರರು, ಬ್ಲಾಸ್ಟ್ ಪಕ್ಕಾ
ಮಂಜುನಾಥ ಸಿ.
|

Updated on: Jul 30, 2024 | 5:07 PM

Share

ನಿಜ ಜೀವನದಲ್ಲಿ ಅಣ್ಣ-ತಮ್ಮಂದಿರು ಸಿನಿಮಾಗಳಲ್ಲಿಯೂ ಅಣ್ಣ-ತಮ್ಮಂದಿರಾಗಿ, ಗೆಳೆಯರಾಗಿ ನಟಿಸಿದ್ದಾರೆ. ಆದರೆ ಹೀರೋ-ವಿಲನ್ ಆಗಿ ನಟಿಸಿರುವ ಉದಾಹರಣೆ ಸಿಗುವುದು ಬಹಳ ಅಪರೂಪ. ಆದರೆ ಇದೀಗ ತಮಿಳು ಚಿತ್ರರಂಗದ ಇಬ್ಬರು ಸ್ಟಾರ್ ಸಹೋದರರು ಸಿನಿಮಾದಲ್ಲಿ ಪರಸ್ಪರ ಎದುರಾಳಿಗಳಾಗಿ ನಟಿಸುತ್ತಿದ್ದಾರೆ. ತಮಿಳಿನ ಸ್ಟಾರ್ ನಟರಾದ ಸೂರ್ಯ ಮತ್ತು ಕಾರ್ತಿ ನಿಜ ಜೀವನದಲ್ಲಿ ಅಣ್ಣ-ತಮ್ಮಂದಿರು ಆದರೆ ಸಿನಿಮಾದಲ್ಲಿ ಪರಸ್ಪರ ಎದುರಾಳಿಗಳಾಗಿ ನಟಿಸುತ್ತಿದ್ದಾರೆ. ಈ ಸುದ್ದಿಯನ್ನು ಚಿತ್ರತಂಡವೇ ಖಾತ್ರಿ ಪಡಿಸಿದೆ.

ಸೂರ್ಯ ಹಾಗೂ ಕಾರ್ತಿ ಇಬ್ಬರೂ ಲೋಕೇಶ್ ಕನಗರಾಜ್​ರ ಎಲ್​ಎಸ್​ಯು ಯೂನಿವರ್ಸ್​ನ ಎರಡು ಭಿನ್ನ ಸಿನಿಮಾಗಳ ಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಸೂರ್ಯ ವಿಲನ್ ಆಗಿ ನಟಿಸಿದ್ದರೆ, ಕಾರ್ತಿ ಹೀರೋ ಆಗಿ ನಟಿಸಿದ್ದಾರೆ. ಎಲ್​ಸಿಯುನ ಮುಂದಿನ ಸಿನಿಮಾದಲ್ಲಿ ಇವರಿಬ್ಬರೂ ಹೀರೋ-ವಿಲನ್ ಆಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದಕ್ಕೆ ಮುಂಚಿತವಾಗಿಯೇ ಬೇರೊಂದು ಸಿನಿಮಾದಲ್ಲಿ ಇವರಿಬ್ಬರು ಹೀರೋ ಮತ್ತು ವಿಲನ್ ಆಗಿ ಮಿಂಚಲಿದ್ದಾರೆ.

ಸೂರ್ಯ ನಟಿಸುತ್ತಿರುವ ಭಾರಿ ದೊಡ್ಡ ಬಜೆಟ್ ಸಿನಿಮಾ ‘ಕನಗುವ’ನಲ್ಲಿ ಕಾರ್ತಿ ನಟಿಸಲಿದ್ದಾರಂತೆ. ಸಿನಿಮಾಕ್ಕೆ ಸಂಭಾಷಣೆ ಮತ್ತು ಹಾಡುಗಳನ್ನು ಬರೆಯುತ್ತಿರುವ ವಿವೇಕ್ ಈ ವಿಷಯವನ್ನು ಖಾತ್ರಿ ಪಡಿಸಿದ್ದು, ಕಾರ್ತಿ ಹೀರೋ ಆಗಿ ಅಲ್ಲ ಬದಲಿಗೆ ವಿಲನ್ ಆಗಿ ನಟಿಸಲಿದ್ದಾರಂತೆ. ‘ಕನಗುವ’ ಸಿನಿಮಾನಲ್ಲಿ ಸೂರ್ಯ ನಾಯಕ, ಕಾರ್ತಿ ವಿಲನ್. ಅಂದಹಾಗೆ ಇದೇ ಸಿನಿಮಾದಲ್ಲಿ ಬಾಲಿವುಡ್ ನಟ ಬಾಬಿ ಡಿಯೋಲ್ ಸಹ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ:ನವೆಂಬರ್ 1 ರಿಂದ ತಮಿಳು ಸಿನಿಮಾ ಚಿತ್ರೀಕರಣ ಬಂದ್: ನಿರ್ಮಾಪಕ ನಿರ್ಧಾರ

ಲೋಕೇಶ್ ಕನಗರಾಜ್ ಸಿನಿಮಾದಲ್ಲಿ ಸೂರ್ಯ ರೋಲೆಕ್ಸ್ ಹೆಸರಿನ ವಿಲನ್ ಪಾತ್ರದಲ್ಲಿ ನಟಿಸಿದ್ದರೆ ಕಾರ್ತಿ ಡೆಲ್ಲಿ ಹೆಸರಿನ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಮುಂದಿನ ಸಿನಿಮಾದಲ್ಲಿ ಸೂರ್ಯ ಹಾಗೂ ಕಾರ್ತಿ ಎದುರುಬದರಾಗಲಿದ್ದಾರೆ ಆದರೆ ಅಲ್ಲಿ ಸೂರ್ಯ ವಿಲನ್ ಆಗಿದ್ದರೆ ಕಾರ್ತಿ ನಾಯಕ ಆಗಿರಲಿದ್ದಾರೆ. ‘ಕನಗುವ’ ಸಿನಿಮಾನಲ್ಲಿ ಇದು ಉಲ್ಟಾ ಆಗಿದೆ. ಇಲ್ಲಿ ಸೂರ್ಯ ಹೀರೋ, ಕಾರ್ತಿ ವಿಲನ್.

ಕಾರ್ತಿ ಪ್ರಸ್ತುತ ‘ವಾ ವಾತಿಯಾರ್’, ‘ಸರ್ದಾರ್ 2’ ಮತ್ತು ‘ಮಿಯಳಾಗನ್’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಸೂರ್ಯ ‘ಕನಗುವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಭಾರಿ ದೊಡ್ಡ ಬಜೆಟ್​ನ ಸಿನಿಮಾ ಆಗಿದ್ದು, ಇದೊಂದು ಪೀರಿಯಡ್ ಡ್ರಾಮಾ ಆಗಿದೆ. ಆಧುನಿಕ ಕಾಲ ಮತ್ತು ಶಿಲಾಯುಗದ ಸಮಯದಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಸಿನಿಮಾಕ್ಕೆ ಜ್ಞಾನವೇಲು ಬಂಡವಾಳ ಹೂಡಿದ್ದು, ಶಿವ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ದಿಶಾ ಪಟಾನಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!