AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೌನ್ ಬನೇಗಾ ಕರೋಡ್​ಪತಿ’ ಶೋನಲ್ಲಿ ರಶ್ಮಿಕಾ ಅಭಿಮಾನಿ: ಆಸೆ ಈಡೇರಿಸಿದ ಅಮಿತಾಭ್

Rashmika Mandanna: ಹಾಟ್​ಸೀಟ್​ನಲ್ಲಿ ರಶ್ಮಿಕಾ ಮಂದಣ್ಣ ಅಭಿಮಾನಿ, ಅಭಿಮಾನಿಯ ಆಸೆ ಈಡೇರಿಸಿದ ಅಮಿತಾಭ್ ಬಚ್ಚನ್.

‘ಕೌನ್ ಬನೇಗಾ ಕರೋಡ್​ಪತಿ’ ಶೋನಲ್ಲಿ ರಶ್ಮಿಕಾ ಅಭಿಮಾನಿ: ಆಸೆ ಈಡೇರಿಸಿದ ಅಮಿತಾಭ್
ರಶ್ಮಿಕಾ-ಬಚ್ಚನ್
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Dec 09, 2023 | 6:51 PM

ರಶ್ಮಿಕಾ ಮಂದಣ್ಣ (Rashmika Mandanna) ಅವರ ಜನಪ್ರಿಯತೆ ದಿನ ಕಳೆದಂತೆ ಹೆಚ್ಚುತ್ತಿದೆ. ಅವರ ಅಭಿಮಾನಿ ಬಳಗ ದೊಡ್ಡದಾಗುತ್ತಲೇ ಇದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರನ್ನು 4 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ಇತ್ತೀಚೆಗೆ ‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ ರಶ್ಮಿಕಾ ಮಂದಣ್ಣ ಅವರ ಹೆಸರು ಚರ್ಚೆಗೆ ಬಂದಿದೆ. ರಶ್ಮಿಕಾ ಅವರಿಗೆ ಸ್ವತಃ ಅಮಿತಾಭ್ ಕರೆ ಮಾಡಿದ್ದಾರೆ. ಅವರು ಈ ರೀತಿ ದೂರವಾಣಿ ಕರೆ ಮಾಡುವುದಕ್ಕೂ ಒಂದು ಕಾರಣ ಇದೆ. ಆ ಬಗ್ಗೆ ಈ ಸ್ಟೋರಿಯಲ್ಲಿದೆ ಉತ್ತರ.

‘ಕೌನ್ ಬನೇಗಾ ಕರೋಡ್​ಪತಿ’ ಶೋಗೆ ಪ್ರಮೋದ್ ಭಾಸ್ಕೆ ಎಂಬುವರು ಸ್ಪರ್ಧಿ ಆಗಿ ಬಂದಿದ್ದರು. ಇವರು ಮಹಾರಾಷ್ಟ್ರದವರು. ಹಾಟ್ ಸೀಟ್​ನಲ್ಲಿ ಕುಳಿತು ಪ್ರಶ್ನೆಗಳನ್ನು ಎದುರಿಸಿದರು. ಅವರು 2016ರಿಂದ ಈ ಶೋಗೆ ಬರಲು ಪ್ರಯತ್ನಿಸಿದ್ದರಂತೆ. ಪ್ರಮೋದ್​ಗೆ ಮೊದಲ ಪ್ರಶ್ನೆ ಸಾಕಷ್ಟು ಸುಲಭವಾಗಿತ್ತು. ಈ ವರ್ಷ ರಿಲೀಸ್ ಆದ ರಣಬೀರ್ ಕಪೂರ್ ಸಿನಿಮಾ ಯಾವುದು ಎಂದು ಕೇಳಲಾಯಿತು. ಇದಕ್ಕೆ ‘ಅನಿಮಲ್’ ಎಂದು ಸರಿ ಉತ್ತರ ಕೊಟ್ಟರು ಅವರು. ಆ ಬಳಿಕ ಪ್ರಮೋದ್ ಹಲವು ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಈ ವೇಳೆ ಅವರು ರಶ್ಮಿಕಾ ಮಂದಣ್ಣ ಬಗ್ಗೆ ಮಾತನಾಡಿದರು.

‘ನಾನು ರಶ್ಮಿಕಾ ಅವರ ದೊಡ್ಡ ಫ್ಯಾನ್​. ಅವರು 2016ರಲ್ಲಿ ಕನ್ನಡದ ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಸೋಶಿಯಲ್ ಮೀಡಿಯಾದಲ್ಲಿ ಅವರು ನನ್ನ ಮೆಸೇಜ್​ಗೆ ಮೂರು ಬಾರಿ ಉತ್ತರಿಸಿದ್ದಾರೆ. ನನಗಿಂತ ದೊಡ್ಡ ಅಭಿಮಾನಿ ಅವರಿಗೆ ಇರಲಿಕ್ಕಿಲ್ಲ. ನಾನು ಅವರಿಗೆ ಮದುವೆ ಪ್ರಪೋಸಲ್ ಕೂಡ ಕಳುಹಿಸಿದ್ದೆ’ ಎಂದಿದ್ದಾರೆ ಪ್ರಮೋದ್. ಅಮಿತಾಭ್ ಇದಕ್ಕೆ ನಕ್ಕರು.

ಇದನ್ನೂ ಓದಿ:4 ಕೋಟಿಗೆ ಏರಿತು ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​ ಫಾಲೋವರ್ಸ್​ ಸಂಖ್ಯೆ; ನಟಿಗೆ ಡಬಲ್​ ಖುಷಿ

12,50,000 ರೂಪಾಯಿಯ ಪ್ರಶ್ನೆಗೆ ಪ್ರಮೋದ್ ಉತ್ತರ ಕೊಟ್ಟರು. ಆ ಬಳಿಕ ರಶ್ಮಿಕಾಗೆ ದೂರವಾಣಿ ಕರೆ ಮಾಡಿದರು ಅಮಿತಾಭ್. ಈ ವೇಳೆ ವೈಯಕ್ತಿಕವಾಗಿ ಪ್ರಮೋದ್ ಅವರನ್ನು ಭೇಟಿ ಮಾಡುವ ಭರವಸೆಯನ್ನು ರಶ್ಮಿಕಾ ನೀಡಿದರು. ಈ ವೇಳೆ ಅಮಿತಾಭ್ ಅವರು ರಶ್ಮಿಕಾ ಅವರನ್ನು ಹೊಗಳಿದರು. ‘ನಿಮಗೆ ಆಲ್​ ದಿ ಬೆಸ್ಟ್. ಇತ್ತೀಚೆಗೆ ನಿಮ್ಮ ಪರ್ಫಾರ್ಮೆನ್ಸ್ ಅದ್ಭುತವಾಗಿತ್ತು. ‘ಅನಿಮಲ್’ ಸಿನಿಮಾದಲ್ಲಿ ನಿಮ್ಮ ನಟನೆ ಇಷ್ಟ ಆಯಿತು. ನಾವು ಒಂದು ದಿನ ಭೇಟಿ ಆಗಿ ಈ ಬಗ್ಗೆ ಮಾತನಾಡೋಣ’ ಎಂದರು ಅಮಿತಾಭ್​.

ರಶ್ಮಿಕಾ ಮಂದಣ್ಣ ಅವರಿಗೆ ಬಾಲಿವುಡ್​ನಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ‘ಗುಡ್​ ಬೈ’ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆಯಿತು. ಈ ಚಿತ್ರದ ಶೂಟಿಂಗ್ ವೇಳೆ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು. ಇದು ರಶ್ಮಿಕಾ ಅವರ ಮೊದಲ ಹಿಂದಿ ಸಿನಿಮಾ. ಆ ಬಳಿಕ ರಶ್ಮಿಕಾ ಅವರು, ‘ಮಿಷನ್ ಮಜ್ನು’ ಚಿತ್ರದಲ್ಲಿ ನಟಿಸಿದರು. ಈಗ ‘ಅನಿಮಲ್’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲೊ 300 ಕೋಟಿ ರೂಪಾಯಿ ಗಳಿಸಿದೆ. ರಣಬೀರ್ ಕಪೂರ್ ಪತ್ನಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ‘ಪುಷ್ಪ 2’, ‘ರೇನ್​ಬೋ’ ಮೊದಲಾದ ಸಿನಿಮಾಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಸಂಜು ವೆಡ್ಸ್ ಗೀತಾ 2’ ನೋಡಿದ ಕಾರುಣ್ಯ ರಮ್ಯಾ ಹೇಳಿದ್ದು ಹೀಗೆ..
‘ಸಂಜು ವೆಡ್ಸ್ ಗೀತಾ 2’ ನೋಡಿದ ಕಾರುಣ್ಯ ರಮ್ಯಾ ಹೇಳಿದ್ದು ಹೀಗೆ..
ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
ಮಂಗಳೂರು: NH 169ರಲ್ಲಿ ಗುಡ್ಡ ಕುಸಿತ, ಒಂದು ಬದಿ ರಸ್ತೆ ಸಂಚಾರ ಬಂದ್​
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ