Asim Riaz: ‘ಬಿಗ್​ ಬಾಸ್​ ಫಿನಾಲೆಯಲ್ಲಿ ನಡೆದಿತ್ತು ಮೋಸ’: ಸತ್ತ ವ್ಯಕ್ತಿ ಬಗ್ಗೆಯೂ ಟೀಕೆ ಮಾಡಿದ ಮಾಜಿ ಸ್ಪರ್ಧಿ

Bigg Boss 13 Winner | Sidharth Shukla: ಪ್ರತಿ ಬಾರಿ ಬಿಗ್​ ಬಾಸ್​ ಫಿನಾಲೆ ಮುಗಿದ ಬಳಿಕ ಒಂದು ವರ್ಗದ ಪ್ರೇಕ್ಷಕರು ಅಸಮಾಧಾನ ಹೊರಹಾಕುವುದು ಸಹಜ. ಆದರೆ ಸ್ವತಃ ಸ್ಪರ್ಧಿಗಳೇ ಈ ರೀತಿ ಆರೋಪ ಮಾಡಿದ್ದು ವಿರಳ.

Asim Riaz: ‘ಬಿಗ್​ ಬಾಸ್​ ಫಿನಾಲೆಯಲ್ಲಿ ನಡೆದಿತ್ತು ಮೋಸ’: ಸತ್ತ ವ್ಯಕ್ತಿ ಬಗ್ಗೆಯೂ ಟೀಕೆ ಮಾಡಿದ ಮಾಜಿ ಸ್ಪರ್ಧಿ
ಆಸಿಮ್ ರಿಯಾಜ್, ಸಿದ್ದಾರ್ಥ್ ಶುಕ್ಲಾ

Updated on: Feb 27, 2023 | 7:05 PM

ಕಿರುತೆರೆ ಪ್ರೇಕ್ಷಕರಿಗೆ ‘ಬಿಗ್​ ಬಾಸ್​’ (Bigg Boss) ರಿಯಾಲಿಟಿ ಶೋ ಬಗ್ಗೆ ಎಲ್ಲಿಲ್ಲದ ಕ್ರೇಜ್​ ಇರುತ್ತದೆ. ಹಿಂದಿ, ಕನ್ನಡ, ತಮಿಳು, ಮಲಯಾಳಂ, ತೆಲುಗು ಮುಂತಾದ ಭಾಷೆಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಹಿಂದಿಯಲ್ಲಿ 16 ಆವೃತ್ತಿಗಳು ಪೂರ್ಣಗೊಂಡಿವೆ. ಹಲವು ವರ್ಷಗಳಿಂದ ನಟ ಸಲ್ಮಾನ್​ ಖಾನ್​ ಅವರು ಈ ಶೋ ನಡೆಸಿಕೊಡುತ್ತಿದ್ದಾರೆ. ಇದೊಂದು ವಿವಾದಿತ ಕಾರ್ಯಕ್ರಮ ಎಂದರೂ ತಪ್ಪಿಲ್ಲ. ದೊಡ್ಮನೆಯ ಒಳಗೆ ಸಾಕಷ್ಟು ಕಿರಿಕ್​ಗಳು ಆಗುತ್ತವೆ. ಮನೆಯಿಂದ ಹೊರಬಂದ ಬಳಿಕವೂ ಸ್ಪರ್ಧಿಗಳು ನೀಡುವ ಕೆಲವು ಹೇಳಿಕೆಗಳಿಂದ ವಿವಾದ ಭುಗಿಲೇಳುತ್ತದೆ. ‘ಹಿಂದಿ ಬಿಗ್​ ಬಾಸ್​ 13’ರಲ್ಲಿ ಸ್ಪರ್ಧಿಸಿದ್ದ ಆಸಿಮ್​ ರಿಯಾಜ್​ (Asim Riaz)​ ಅವರ ಈಗ ಒಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದಿವಂಗತ ನಟ ಸಿದ್ದಾರ್ಥ್​ ಶುಕ್ಲಾ (Sidharth Shukla) ಬಗ್ಗೆ ಅವರು ಟೀಕೆ ಮಾಡಿದ್ದಾರೆ.

‘ಬಿಗ್​ ಬಾಸ್​ 13’ರಲ್ಲಿ ಸಿದ್ದಾರ್ಥ್​ ಶುಕ್ಲಾ ಮತ್ತು ಆಸಿಮ್ ರಿಯಾಸ್​ ಅವರು ಫಿನಾಲೆ ತಲುಪಿದ್ದರು. ಅಂತಿಮವಾಗಿ ಸಿದ್ದಾರ್ಥ್​ ಶುಕ್ಲಾ ಪಾಲಿಗೆ ಟ್ರೋಫಿ ಒಲಿದಿತ್ತು. ಮರುವರ್ಷ ಅವರು ಹೃದಯಾಘಾತದಿಂದ ನಿಧನರಾಗಿದ್ದು ನೋವಿನ ಸಂಗತಿ. ಆದರೆ ಈಗ ಆಸಿಮ್​ ರಿಯಾಜ್​​ ಅವರು ‘ಬಿಗ್​ ಬಾಸ್​ 13’ರ ಫಿನಾಲೆ ಬಗ್ಗೆ ತಕರಾರು ತೆಗೆದಿದ್ದಾರೆ. ಅದರಲ್ಲಿ ಮೋಸ ನಡೆದಿತ್ತು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಬಿಗ್​ ಬಾಸ್​ 9’ ವಿನ್ನರ್​ ರೂಪೇಶ್​ ಶೆಟ್ಟಿ

ಇದನ್ನೂ ಓದಿ
Rakesh Adiga: ‘ಬಿಗ್​ ಬಾಸ್​’ ವಿನ್​ ಆಗದಿದ್ರೂ 12 ಲಕ್ಷ ರೂಪಾಯಿಗೂ ಅಧಿಕ ನಗದು ಬಹುಮಾನ ಪಡೆದ ರಾಕೇಶ್​ ಅಡಿಗ
Deepika Das: ದೀಪಿಕಾ ದಾಸ್​ ಬಿಗ್​ ಬಾಸ್​ ಫಿನಾಲೆಗೆ ಬಂದರೂ ಸಿಗಲಿಲ್ಲ ಟ್ರೋಫಿ; ಎಡವಿದ್ದು ಎಲ್ಲಿ?
Bigg Boss Winner Roopesh Shetty: ‘ನಾನು ಗೆದ್ದಿಲ್ಲ, ನೀವು ಗೆಲ್ಲಿಸಿದ್ದೀರಿ’: ಬಿಗ್​ ಬಾಸ್​ ವಿನ್ನರ್​ ರೂಪೇಶ್​ ಶೆಟ್ಟಿ ಮೊದಲ ರಿಯಾಕ್ಷನ್​
Rakesh Adiga: ‘ಬಿಗ್​ ಬಾಸ್​’ ರನ್ನರ್​ ಅಪ್​ ಆದ ರಾಕೇಶ್​ ಅಡಿಗ; ವಿನ್ನರ್​ ಪಟ್ಟ ಜಸ್ಟ್​ ಮಿಸ್​

‘ನಾನು ವಿನ್​ ಆಗುವುದು ಬಿಗ್​ ಬಾಸ್​ ಆಯೋಜಕರಿಗೆ ಇಷ್ಟ ಇರಲಿಲ್ಲ. ಅವರು ತಮ್ಮ ವೋಟಿಂಗ್​ ವ್ಯವಸ್ಥೆ ಬದಲಿಸಿದರು. ಸಿದ್ದಾರ್ಥ್​ ಶುಕ್ಲಾ ವಿನ್​ ಆಗುವ ರೀತಿಯಲ್ಲಿ ತಂತ್ರಗಾರಿಕೆ ಮಾಡಿ ವೋಟಿಂಗ್​ ಲೈನ್ಸ್​ ಓಪನ್​ ಮಾಡಿದರು’ ಎಂದು ಆಸಿಮ್​ ರಿಯಾಜ್​​ ಹೇಳಿದ್ದಾರೆ. ಆ ಮೂಲಕ ‘ಬಿಗ್​ ಬಾಸ್​’ ಕಾರ್ಯಕ್ರಮದಲ್ಲಿ ಮೋಸ ಆಗಿತ್ತು ಎಂದು ಅವರು ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ: ಇಷ್ಟು ಸೀಸನ್​ಗಳಲ್ಲಿ ಬಿಗ್​ ಬಾಸ್​ ಗೆದ್ದ ಸ್ಪರ್ಧಿಗಳಿವರು

ಬಿಗ್​ ಬಾಸ್​ ಫಿನಾಲೆ ಮುಗಿದ ಬಳಿಕ ಒಂದು ವರ್ಗದ ಪ್ರೇಕ್ಷಕರು ಅಸಮಾಧಾನ ಹೊರಹಾಕುವುದು ಸಹಜ. ಆದರೆ ಸ್ವತಃ ಸ್ಪರ್ಧಿಗಳೇ ಈ ರೀತಿ ಆರೋಪ ಮಾಡಿದ್ದು ವಿರಳ. ಆಸಿಮ್​ ರಿಯಾಜ್​ ಅವರ ಈ ಹೇಳಿಕೆಯಿಂದ ಸಿದ್ದಾರ್ಥ್​ ಶುಕ್ಲಾ ಅಭಿಮಾನಿಗಳಿಗೆ ಬೇಸರ ಆಗಿದೆ. ಸತ್ತು ಹೋಗಿರುವ ವ್ಯಕ್ತಿಯ ಬಗ್ಗೆ ಇಂಥ ಟೀಕೆ ಮಾಡಿದ್ದು ಸರಿಯಲ್ಲ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ನಿಂದ ಹೊರಬಂದ ನಂತರ ಸಾನ್ಯಾ ಬದಲಾಗಿದ್ದಾರಾ? ರೂಪೇಶ್ ಶೆಟ್ಟಿ ಪ್ರತಿಕ್ರಿಯಿಸಿದ್ದು ಹೀಗೆ

2020ರ ಫೆಬ್ರವರಿಯಲ್ಲಿ ಸಿದ್ದಾರ್ಥ್​ ಶುಕ್ಲಾ ಬಿಗ್​ ಬಾಸ್​ ಟ್ರೋಫಿ ಗೆದ್ದರು. ಆದರೆ 2021ರ ಸೆಪ್ಟೆಂಬರ್​ 2ರಂದು ಅವರು ಹೃದಯಾಘಾತದಿಂದ ನಿಧನರಾದರು. ಏನೇ ಟೀಕೆಗಳು ಇದ್ದರೂ ಕೂಡ ಅವರು ಬದುಕಿದ್ದಾಗಲೇ ಮಾಡಬೇಕಿತ್ತು ಎಂದು ಆಸಿಮ್​ ರಿಯಾಜ್​ ವಿರುದ್ಧ ಸಿದ್ದಾರ್ಥ್​ ಶುಕ್ಲಾ ಅಭಿಮಾನಿಗಳು ಗರಂ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:05 pm, Mon, 27 February 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us