AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನ್​ಗೆ ಟಾರ್ಗೆಟ್ ಆದ ಆಸಿಯಾ? ಮನೆಯಿಂದ ಹೊರ ಹೋಗುವ ಭಯ

ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಜಟಾಪಟಿ ಆರಂಭವಾಗಿದೆ. ಗಗನ್ ನಡೆಸಿದ ಟಾರ್ಗೆಟ್ ಪ್ಲ್ಯಾನ್‌ಗೆ ಸಿಲುಕಿ ಆಸಿಯಾ ಕಣ್ಣೀರು ಹಾಕಿದ್ದಾರೆ. ಡೈಮಂಡ್ ಟಾಸ್ಕ್‌ನಲ್ಲಿ ಫ್ಲೈಟ್‌ಗೆ ಮರಳಿದ ಆಸಿಯಾಗೆ ನಾಮಿನೇಷನ್ ಭೀತಿ ಎದುರಾಗಿದ್ದು, ದೊಡ್ಮನೆಯಲ್ಲಿ ಈ ತಂತ್ರಗಾರಿಕೆ ಸದ್ಯ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ಗಗನ್​ಗೆ ಟಾರ್ಗೆಟ್ ಆದ ಆಸಿಯಾ? ಮನೆಯಿಂದ ಹೊರ ಹೋಗುವ ಭಯ
ಗಗನ್-ಆಸಿಯಾ
ರಾಜೇಶ್ ದುಗ್ಗುಮನೆ
|

Updated on: Sep 09, 2026 | 7:01 AM

Share

ಮುಖ್ಯಾಂಶಗಳು

  • ಮೊದಲ ದಿನವೇ ಟಾರ್ಗೆಟ್ ಗೇಮ್
  • ಗಗನ್ ತಂತ್ರಕ್ಕೆ ಆಸಿಯಾ ಸೈಲೆಂಟ್
  • ಡೈಮಂಡ್ ಟಾಸ್ಕ್‌ನಲ್ಲಿ ಭಾರಿ ಟ್ವಿಸ್ಟ್

ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಕಿತ್ತಾಟ ಶುರುವಾಗಿದೆ. ಉದ್ದೇಶಪೂರ್ವಕವಾಗಿ ಒಬ್ಬರನ್ನೊಬ್ಬರು ಟಾರ್ಗೆಟ್ ಮಾಡುತ್ತಿರುವ ಕುರಿತು ಚರ್ಚೆ ನಡೆಯುತ್ತಿದೆ. ಬಿಗ್ ಬಾಸ್​​ನಲ್ಲಿಆಸಿಯಾರನ್ನು ಗಗನ್ ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಿದರೇ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದನ್ನು ಅವರು ಬಾಯಿ ಬಿಟ್ಟೇ ಹೇಳಿದ್ದುಮತ್ತಷ್ಟು ಚರ್ಚೆಗೆ ಕಾರಣ ಆಗಿದೆ.

ಆಸಿಯಾ ಅವರು ಬಿಗ್ ಬಾಸ್ ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದಾರೆ. ತಾವಾಯಿತು, ತಮ್ಮ ಪಾಡಾಯಿತು ಎಂದು ಇರೋ ಅವರು ಈಗ ಒಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಾಮಿನೇಟ್ ಆಗಿ ಮನೆಯಿಂದ ಹೊರ ಹೋಗುವ ಭಯ ಅವರನ್ನು ಅತಿಯಾಗಿ ಕಾಡುತ್ತಿದೆ. ಈ ಎಲ್ಲ ಬೆಳವಣಿಗೆಯಿಂದ ಅವರು ಕಣ್ಣೀರು ಹಾಕಿದ್ದಾರೆ.

ಸದ್ಯ ಫ್ಲೈಟ್​ನಲ್ಲಿ ಒಂದಷ್ಟು ಜನ ಹಾಗೂ ದೊಡ್ಮನೆ ಒಳಗೆ ಒಂದಷ್ಟು ಜನ ಇದ್ದಾರೆ. ಮನೆಯಲ್ಲಿ ಇರುವವರಿಗೆ ಡೈಮಂಡ್ ಟಾಸ್ಕ್ ನೀಡಲಾಗಿತ್ತು. ಬಿಗ್ ಬಾಸ್ ಮನೆ ಒಳಗಿರುವ ಸದಸ್ಯರಿಗೆ ಒಂದು ಚಿಕ್ಕ ಬಾಕ್ಸ್ ನೀಡುತ್ತಾರೆ. ಓರ್ವ ವ್ಯಕ್ತಿಯ ಬಾಕ್ಸ್​​ನಲ್ಲಿ ಮಾತ್ರ ಡೈಮಂಡ್ ಇರುತ್ತದೆ. ಅವರನ್ನು ಸರಿಯಾಗಿ ಗುರುತಿಸಬೇಕು. ಇದರಲ್ಲಿ ವಿಫಲವಾದಲ್ಲಿ ಡೈಮಂಡ್ ಇರುವ ಸ್ಪರ್ಧಿ ಈ ವಾರದ ನಾಮಿನೇಷನ್​ನಿಂದ ಬಚಾವ್ ಆಗಿ ವಿಐಪಿ ಸ್ಪರ್ಧಿ ಆಗುತ್ತಾನೆ.

ಈ ಸ್ಪರ್ಧೆ ಆರಂಭ ಆಗುವುದಕ್ಕೂ ಮೊದಲೇ ಗಗನ್ ಅವರು ಟಾರ್ಗೆಟ್ ಮಾಡುವ ಪ್ಲ್ಯಾನ್​ನ ವ್ಯಕ್ತಪಡಿಸಿದರು. ಇದು ಆಸಿಯಾ ಕಿವಿಗೂ ಬಿತ್ತು. ಇದನ್ನು ಅವರು ಖಂಡಿಸಿದರು. ಕೊನೆಗೆ ಎಲ್ಲರೂ ಆಸಿಯಾ ಬಳಿಯೇ ಡೈಮಂಡ್ ಇದೆ ಹೇಳಿ ಅವರನ್ನು ಟಾರ್ಗೆಟ್ ಮಾಡಿದರು. ಇದು ಗಗನ್ ಪ್ಲ್ಯಾನ್ ಎಂಬುದು ಆಸಿಯಾ ಆರೋಪ.

ಇದನ್ನೂ ಓದಿ: ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಹಲವು ಸ್ಪರ್ಧಿಗಳು ನಾಮಿನೇಟ್

ಕೊನೆಗೆ ಡೈಮಂಡ್ ಇದ್ದಿದ್ದು ಗಗನ್ ಬಳಿ. ಆದರೆ, ಬಹುತೇಕರು ಹೆಸರು ಹೇಳಿದ್ದು ಆಸಿಯಾ ಅವರದ್ದು. ಹೀಗಾಗಿ, ಆಸಿಯಾ ಅವರು ದೊಡ್ಮನೆಯಿಂದ ಮರಳಿ ಫ್ಲೈಟ್​ಗೆ ಹೋಗಬೇಕಾಯಿತು. ಅವರಿಗೆ ನಾಮಿನೇಟ್ ಆಗಿ ಮನೆಯಿಂದ ಹೊರ ಹೋಗುವ ಭಯ ಕಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕುಂಭಾಭಿಷೇಕಕ್ಕೆ ಹೊಸ ಬಣ್ಣದಲ್ಲಿ ಸಿಂಗಾರಗೊಂಡ ಮಧುರೈ ಮೀನಾಕ್ಷಿ ದೇವಸ್ಥಾನ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ: ರಾಜ್ಯಕ್ಕೆ ಮಾದರಿಯಾದ ರಾಮಪುರಂ ಕುಟುಂಬ
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಎರಡೇ ತಿಂಗಳಿಗೆ 2 ಕೋಟಿ ವೆಚ್ಚದ ರಸ್ತೆ ಢಮಾರ್!
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಟ್ರಾಲಿ ಬ್ಯಾಗ್​ನಲ್ಲಿ ಸಾಗಿಸುತ್ತಿದ್ದ 180 ನಕ್ಷತ್ರ ಆಮೆಗಳು ವಶಕ್ಕೆ 
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಕೆಎನ್ ರಾಜಣ್ಣ ನಡೆ
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಸಿಎಂ ಡಿಕೆಶಿ ಆರೋಗ್ಯದಲ್ಲಿ ಕೊಂಚ ಏರುಪೇರು: ವೈದ್ಯರು ದೌಡು, ಏನಾಯ್ತು?
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ಬಿಗ್​​ಬಾಸ್​: ತಾಂಡವ್ ‘ಖಾಲಿ ಪಲಾವ್, ಗಗನ್ ‘ಕೊಳೆತ ಟೊಮ್ಯಾಟೊ’
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆ್ಯಕ್ಟಿವಿಟಿ ಮಾಡದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಅಮಾನವೀಯ ಹಲ್ಲೆ
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್
ಆರೋಪಗಳೆಲ್ಲ ಸುಳ್ಳು, ಹಣ ಕೂಡ ಅವರು ಕೊಟ್ಟದ್ದಲ್ಲ: ಪ್ರಜ್ವಲ್ ದೇವರಾಜ್