AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂದ ಅತಿಥಿಗಳು ಹೊರಗೆ ಹೋಗಲಿ ಎಂದ ನಮ್ರತಾ: ಕಾರಣ?

Bigg Boss: ಈ ಸೀಸನ್​ನಲ್ಲಿ ಆಡಿ ಎಲಿಮಿನೇಟ್ ಆಗಿ ಹೊರ ಹೋದವರು ಅತಿಥಿಗಳಾಗಿ ಮನೆಗೆ ಬಂದಿದ್ದಾರೆ. ನಮ್ರತಾಗೆ ಗೆಳೆಯರು ಮರಳಿ ಬಂದಿದ್ದು ಖುಷಿಯಾಗಿಲ್ಲ ಬದಲಿಗೆ ದುಃಖವಾಗಿದೆ.

ಬಂದ ಅತಿಥಿಗಳು ಹೊರಗೆ ಹೋಗಲಿ ಎಂದ ನಮ್ರತಾ: ಕಾರಣ?
ನಮ್ರತಾ ಗೌಡ
ಮಂಜುನಾಥ ಸಿ.
|

Updated on:Jan 17, 2024 | 11:27 PM

Share

ಬಿಗ್​ಬಾಸ್ (BiggBoss) ಮನೆಗೆ ಹೊಸ ಅತಿಥಿಗಳು ಬಂದಿದ್ದಾರೆ. ಇದೇ ಸೀಸನ್​ನಲ್ಲಿ ಆಡಿ ಎಲಿಮಿನೇಟ್ ಆಗಿ ಹೊರಗೆ ಹೋಗಿರುವ ಸ್ಪರ್ಧಿಗಳನ್ನು ಅತಿಥಿಗಳಾಗಿ ಮತ್ತೆ ಕರೆತಂದಿದ್ದಾರೆ ಬಿಗ್​ಬಾಸ್. ಗೆಳೆಯರು ಮತ್ತೆ ಮನೆಗೆ ಬಂದಿರುವುದು ಮನೆಯ ಸದಸ್ಯರಿಗೆಲ್ಲ ಖುಷಿಯಾಗಿದೆ. ಆದರೆ ನಮ್ರತಾ ಮಾತ್ರ, ಮನೆಗೆ ಬಂದಿರುವ ಎಲ್ಲರೂ ವಾಪಸ್ ಹೋಗಿಬಿಡಲಿ ಎಂದಿದ್ದಾರೆ. ಗೆಳೆಯರು ಮನೆಗೆ ಬಂದಿದ್ದರಿಂದ ನಮ್ರತಾಗೆ ಖುಷಿಗಿಂತಲೂ ಹೆಚ್ಚಾಗಿ ದುಃಖವಾಗಿದೆ.

ಮನೆಗೆ ಬಂದ ಸದಸ್ಯರು ಹೊರಗೆ ಏನು ನಡೆದಿದೆ, ನಡೆಯುತ್ತಿದೆ ಎಂಬುದನ್ನು ಸೂಚ್ಯವಾಗಿ ಮನೆಯ ಸದಸ್ಯರಿಗೆ ತಿಳಿಸಿದ್ದಾರೆ. ಆದರೆ ಬಂದ ಬಹುತೇಕರು ನಮ್ರತಾ ಬಗ್ಗೆ ಹೊರಗೆ ಋಣಾತ್ಮಕ ಅಭಿಪ್ರಾಯವಿದೆ ಎಂದು ಸೂಚ್ಯವಾಗಿ ಹೇಳಿದ್ದಾರೆ. ಅದರಲ್ಲೂ ನಮ್ರತಾ ಹಾಗೂ ಕಾರ್ತಿಕ್​ರ ಬಂಧದ ಬಗ್ಗೆ ನೆಗೆಟಿವ್ ಅಭಿಪ್ರಾಯವಿದೆ ಎಂದು ಹೇಳಿದ್ದಾರೆ.

ಇದು ನಮ್ರತಾಗೆ ತೀವ್ರ ಬೇಸರ ಮೂಡಿಸಿದೆ. ನಮ್ರತಾ ಜೊತೆ ಆತ್ಮೀಯವಾಗಿದ್ದ ಸ್ನೇಹಿತ್, ಮನೆಗೆ ಬಂದಾಗ ಮೊದಲಿನಂತೆ ನಮ್ರತಾ ಜೊತೆ ಮಾತನಾಡಲಿಲ್ಲ. ಇದು ನಮ್ರತಾಗೆ ಆಶ್ಚರ್ಯ ತಂದಿದೆ. ಆ ಬಳಿಕ ಸ್ನೇಹಿತ್, ವಿನಯ್ ಗೆಲ್ಲಲಿ ಎಂದಾಗ ನಮ್ರತಾ ಸ್ನೇಹಿತ್​ಗೆ ಟಾಂಟ್ ನೀಡುವಂತೆ, ವಿನಯ್ ಮಾತ್ರ ಗೆದ್ದು ಬಿಟ್ಟರೆ ಬೇರೆಯವರೆಲ್ಲ ಏನು ಮಾಡಬೇಕು ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:‘ಸಖತ್ ಹರ್ಟ್​ ಮಾಡಿದ್ದೇನೆ’; ಸ್ನೇಹಿತ್​ನ ನೆನೆದು ಕಣ್ಣೀರು ಹಾಕಿದ ನಮ್ರತಾ ಗೌಡ

ಅದಾದ ಬಳಿಕ ನಮ್ರತಾ ಜೊತೆ ಕೆಲ ಕಾಲ ಮಾತನಾಡಿದ ಸ್ನೇಹಿತ್, ಹೊರಗೆ ನಮ್ರತಾ ಬಗ್ಗೆ ಋಣಾತ್ಮಕ ಅಭಿಪ್ರಾಯವಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಸ್ನೇಹಿತ್ ಮಾತುಗಳನ್ನು ಸೂಚ್ಯವಾಗಿ ಅರ್ಥ ಮಾಡಿಕೊಂಡ ನಮ್ರತಾ, ನನ್ನ ಹಾಗೂ ಕಾರ್ತಿಕ್ ನಡುವೆ ಅಂಥಹದ್ದೇನೂ ಇಲ್ಲ ಎಂದು ಕಣ್ಣೀರು ಹಾಕಿ, ನನ್ನನ್ನು ಇಲ್ಲಿಂದ ಹೊರಗೆ ಕಳಿಸಿಬಿಡಿ, ಆಟಕ್ಕಾಗಿ ನನ್ನ ಕ್ಯಾರೆಕ್ಟರ್ ಅನ್ನು ಕಳೆದುಕೊಳ್ಳಲು ನನಗೆ ಇಷ್ಟವಿಲ್ಲ ಎಂದಿದ್ದಾರೆ.

ಅದಾದ ಬಳಿಕ ನಡೆದ ಚಟುವಟಿಕೆ ಒಂದರಲ್ಲಿ ಸಿರಿ ಮಾತನಾಡಿ, ನಮ್ರತಾ ಹಾಗೂ ವಿನಯ್ ನನ್ನ ಬಗ್ಗೆ ಹೀಗೆ ಮಾತನಾಡುತ್ತಾರೆ ಎಂದು ತಿಳಿದುಕೊಂಡಿಲ್ಲ ಎಂದು ಹೇಳಿ ಆ ಬಳಿಕ ನಮ್ರತಾ ಬಳಿ ಹೋಗಿ ಆ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದಾಗಲೂ ಸಹ ನಮ್ರತಾ ಮತ್ತೆ ಅಳಲು ಆರಂಭಿಸಿದರು. ಮನೆಗೆ ಬಂದಿರುವ ಎಲ್ಲ ಸದಸ್ಯರು ಹೊರಗೆ ಹೋಗಲಿ ಎಂದಿದ್ದಾರೆ.

ಬಳಿಕ ನಮ್ರತಾಗೆ ಸಂಗೀತಾ ಸಮಾಧಾನ ಹೇಳಿದ್ದು, ಈಗ ಆಗಿರುವುದನ್ನು ಬದಲಾಯಿಸಲು ಸಾಧ್ಯವಿಲ್ಲ. ನೀನು ಅವರ ಮಾತು ಕಟ್ಟಿಕೊಂಡು ಆಟ ತ್ಯಜಿಸುತ್ತೀನೆಂದರೆ ಸುದೀಪ್​ ಸರ್​ಗೆ ನಿಮ್ಮ ಪೋಷಕರಿಗೆ ನೀಡಿದ ಮಾತಿನಿಂದ ಹಿಂದೆ ಸರಿದಂತೆ ಆಗುತ್ತದೆ. ನೀನು ನಿನ್ನ ಆಟವನ್ನು ಮುಂದುವರೆಸು ಎಂದು ಧೈರ್ಯ ತುಂಬಿದ್ದಾರೆ. ಆ ಬಳಿಕವಷ್ಟೆ ಅವರು ತುಸು ಸರಿ ಹೋಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:26 pm, Wed, 17 January 24

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್
ಡಿಕೆಶಿ ಸಿಎಂ, ಪರಮೇಶ್ವರ್-ಡಿಸಿಎಂ: ಇಲ್ಲಿದೆ ಸಚಿವರ ಅಧಿಕೃತ ಲಿಸ್ಟ್