AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ವಿನ್ನರ್ ಘೋಷಣೆ ಮಾಡಿದ ನಟ ರಿತೇಶ್ ದೇಶ್​​ಮುಖ್

ಬಿಗ್ ಬಾಸ್ ಮರಾಠಿ ಸೀಸನ್ 6 ಗ್ರ್ಯಾಂಡ್ ಫಿನಾಲೆಯಲ್ಲಿ ತನ್ವಿ ಕೋಲ್ಟೆ ವಿಜೇತರಾಗಿ ಹೊರಹೊಮ್ಮಿದ್ದಾರೆ. 15 ಲಕ್ಷ ನಗದು, ವಜ್ರದ ವೋಚರ್ ಮತ್ತು ಇ-ಬೈಕ್ ಗೆದ್ದ ತನ್ವಿ, ತಮ್ಮ ಪ್ರಯಾಣದ ಬಗ್ಗೆ ಮಾತನಾಡಿದರು. ಈ ಗೆಲುವನ್ನು ಕುಟುಂಬಕ್ಕೆ ಹಾಗೂ ತಮ್ಮನ್ನು ನಂಬಿದವರಿಗೆ ಅರ್ಪಿಸಿದ್ದಾರೆ. ಬಿಗ್ ಬಾಸ್ ಮರಾಠಿ ತಮ್ಮನ್ನು ಬ್ರ್ಯಾಂಡ್ ಆಗಿ ಪರಿವರ್ತಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ವಿನ್ನರ್ ಘೋಷಣೆ ಮಾಡಿದ ನಟ ರಿತೇಶ್ ದೇಶ್​​ಮುಖ್
Tanvi
 ಶ್ರೀಲಕ್ಷ್ಮೀ ಎಚ್
| Edited By: |

Updated on: Apr 20, 2026 | 12:00 PM

Share

‘ಬಿಗ್ ಬಾಸ್’ ಶೋ ವಿವಿಧ ಭಾಷೆಯಲ್ಲಿ ಪ್ರಸಾರ ಕಾಣುತ್ತಿದೆ. ಅದೇ ರೀತಿ ಮರಾಠಿಯಲ್ಲಿ ‘ಬಿಗ್ ಬಾಸ್ 6′ ಸೀಸನ್ ಪೂರ್ಣಗೊಂಡಿದೆ. ಮೂರು ತಿಂಗಳ ಹಿಂದೆ ಕಲರ್ಸ್ ಮರಾಠಿ ಚಾನೆಲ್‌ನಲ್ಲಿ ಈ ಶೋ ಪ್ರಾರಂಭವಾಯಿತು. ಬಿಗ್ ಬಾಸ್ ಮರಾಠಿಯ ಈ ಸೀಸನ್‌ನಲ್ಲಿ, ಒಟ್ಟು 17 ಸದಸ್ಯರು 100 ದಿನಗಳ ಕಾಲ ಇದ್ದರು. ಈ ಪ್ರಯಾಣವು ಏಪ್ರಿಲ್ 19ರಂದು ಕೊನೆಗೊಂಡಿತು. ‘ಬಿಗ್ ಬಾಸ್ ಮರಾಠಿ ಸೀಸನ್ 6’ ರ ಗ್ರ್ಯಾಂಡ್ ಫಿನಾಲೆಯಲ್ಲಿ ತನ್ವಿ ಕೋಲ್ಟೆ ಪ್ರಶಸ್ತಿಯನ್ನು ಗೆದ್ದರು.

ಕೊನೆಯವರೆಗೂ ಯಾರು ಗೆಲ್ಲುತ್ತಾರೆ ಎಂಬ ಕುತೂಹಲ ಇತ್ತು. ತನ್ವಿ ಗೆಲುವಿನ ನಗೆ ಬೀರಿದರು. ವಿಜೇತರಿಗೆ ಕಲರ್ಸ್ ಮರಾಠಿಯಿಂದ 15 ಲಕ್ಷ ರೂ. ನಗದು ಬಹುಮಾನ ಮತ್ತು ಟ್ರೋಫಿಯನ್ನು ನೀಡಲಾಯಿತು . ವಜ್ರದ ಆಭರಣಗಳನ್ನು ಖರೀದಿಸಲು 10 ಲಕ್ಷ ರೂ.ಗಳ ವೋಚರ್ ಅನ್ನು ನೀಡಲಾಯಿತು. ವಿಜೇತರಿಗೆ ಇ-ಬೈಕ್ ಅನ್ನು ಸಹ ನೀಡಲಾಗಿದೆ. ರಿತೇಶ್ ದೇಶ್​​ಮುಖ್ ಈ ಘೋಷಣೆ ಮಾಡಿದರು.

View this post on Instagram

A post shared by Tanvi Kolte (@tanvikolte06)

ಆ ಬಳಿಕ ಮಾತನಾಡಿದ ತನ್ವಿ, ‘ಈ ಪ್ರಯಾಣ ನನಗೆ ತುಂಬಾ ವಿಶೇಷವಾಗಿದೆ. ಈ ಮನೆ ನನ್ನನ್ನು ನಾನು ತಿಳಿದುಕೊಳ್ಳಲು, ಪ್ರತಿಯೊಂದು ಸನ್ನಿವೇಶದಲ್ಲೂ ಬಲವಾಗಿರಲು ನನಗೆ ಕಲಿಸಿದೆ. ಪ್ರೇಕ್ಷಕರು ನೀಡಿದ ಪ್ರೀತಿ ಮತ್ತು ಬೆಂಬಲವೇ ನನ್ನ ನಿಜವಾದ ಶಕ್ತಿ. ನಾನು ಈ ಗೆಲುವನ್ನು ನನ್ನ ಕುಟುಂಬ ಮತ್ತು ನನ್ನಲ್ಲಿ ನಂಬಿಕೆ ಇಡುವ ಎಲ್ಲರಿಗೂ ಅರ್ಪಿಸುತ್ತೇನೆ’ ಎಂದರು.

ಇದನ್ನೂ ಓದಿ: ‘ನಷ್ಟ ಪರಿಹಾರ ಕೊಡಿ’: ಬಿಗ್ ಬಾಸ್​​ಗೆ ನೊಟೀಸ್ ಕಳಿಸಿದ ಮಾಜಿ ಸ್ಪರ್ಧಿ

‘ಮನೆಯಲ್ಲಿ ಎಲ್ಲರೂ ನನ್ನೊಂದಿಗೆ ಮಾತನಾಡುತ್ತಿದ್ದರು. ನಾನು ಏನು ಕೆಲಸ ಮಾಡಿದ್ದೇನೆ. ನಾನು ಯಾರು ಎಂದು ಅನೇಕರು ಕೇಳುತ್ತಿದ್ದರು. ಆಗ ನನಗೆ ಕೆಟ್ಟ ಭಾವನೆ ಬಂತು. ಆದರೆ ನಾನು ಈ ಮನೆಯಿಂದ ಹೊರಬಂದಾಗ, ನನ್ನ ಹೆಸರು ಎಲ್ಲರ ಬಾಯಲ್ಲೂ ಇರುತ್ತದೆ ಎಂದು ನಾನು ನಿರ್ಧರಿಸಿದ್ದೆ. ಬಿಗ್ ಬಾಸ್ ಮರಾಠಿ ನನ್ನ ಹೆಸರನ್ನು ದೊಡ್ಡದಾಗಿಸಿದೆ. ನಾನು ತನ್ವಿ ಕೋಲ್ಟೆಯಾಗಿ ಬಂದಿದ್ದೇನೆ ಮತ್ತು ಈಗ ತನ್ವಿ ಕೋಲ್ಟೆ ಒಂದು ಬ್ರಾಂಡ್ ಆಗಿದೆ’ ಎಂದು ಹೆಮ್ಮೆ ಹೊರಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ