Coffee Nadu Chandu: ಕಾಫಿ ನಾಡು ಚಂದುಗೆ ಅನುಶ್ರೀ ಪ್ರೀತಿಯ ಗಿಫ್ಟ್​; ಶಿವಣ್ಣನ ಎದುರು ಎಮೋಷನಲ್​ ಆದ ರೀಲ್ಸ್​ ಹೀರೋ

| Updated By: ಮದನ್​ ಕುಮಾರ್​

Updated on: Aug 28, 2022 | 4:01 PM

Coffee Nadu Chandu Video: ‘ಡಿಕೆಡಿ’ ವೇದಿಕೆಗೆ ಬಂದ ಕಾಫಿ ನಾಡು ಚಂದುಗೆ ಎಲ್ಲರೂ ಪ್ರೀತಿಯ ಸ್ವಾಗತ ಕೋರಿದ್ದಾರೆ. ಅವರ ಜೊತೆ ನಿರೂಪಕಿ ಅನುಶ್ರೀ ತುಂಬ ಆತ್ಮೀಯವಾಗಿ ನಡೆದುಕೊಂಡಿದ್ದಾರೆ.

Coffee Nadu Chandu: ಕಾಫಿ ನಾಡು ಚಂದುಗೆ ಅನುಶ್ರೀ ಪ್ರೀತಿಯ ಗಿಫ್ಟ್​; ಶಿವಣ್ಣನ ಎದುರು ಎಮೋಷನಲ್​ ಆದ ರೀಲ್ಸ್​ ಹೀರೋ
ಕಾಫಿ ನಾಡು ಚಂದು, ನಿರೂಪಕಿ ಅನುಶ್ರೀ
Follow us on

ತಮ್ಮದೇ ಶೈಲಿಯಲ್ಲಿ ರೀಲ್ಸ್​ ಮಾಡಿ ಫೇಮಸ್​ ಆದ ಕಾಫಿ ನಾಡು ಚಂದು (Coffee Nadu Chandu) ಈಗ ನಿರೂಪಕಿ ಅನುಶ್ರೀ ಅವರನ್ನು ಭೇಟಿ ಮಾಡಿದ್ದಾರೆ. ಜೀ ಕನ್ನಡದ ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ಕಾರ್ಯಕ್ರಮಕ್ಕೆ ಚಂದು ಅತಿಥಿಯಾಗಿ ಬಂದಿದ್ದಾರೆ. ಈ ವೇಳೆ ಅವರನ್ನು ನಟ ಶಿವರಾಜ್​ಕುಮಾರ್​ (Shivarajkumar) ಭೇಟಿ ಮಾಡಿದ್ದಾರೆ. ಈ ಭೇಟಿಯಲ್ಲಿ ಚಂದುಗೆ ಅನುಶ್ರೀ (Anchor Anushree) ಕಡೆಯಿಂದ ವಿಶೇಷ ಗಿಫ್ಟ್​ ಸಿಕ್ಕಿದೆ. ನಿರೂಪಕಿಯಿಂದ ವಾಚ್​ ಪಡೆದಿರುವ ಚಂದು ಫುಲ್​ ಖುಷಿ ಆಗಿದ್ದಾರೆ. ಆ ವಿಡಿಯೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಚಂದುಗೆ ಎಲ್ಲ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ. ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ವೇದಿಕೆಯಲ್ಲಿ ಏನು ನಡೆಯಿತು ಎಂಬುದರ ಝಲಕ್​ ತೋರಿಸುವ ಪ್ರೋವೋವನ್ನು ಕೂಡ ಕಾಫಿ ನಾಡು ಚಂದು ಶೇರ್​ ಮಾಡಿಕೊಂಡಿದ್ದಾರೆ.

ಜೀ ಕನ್ನಡಕ್ಕೆ ಬಂದ ಕಾಫಿ ನಾಡು ಚಂದುಗೆ ಎಲ್ಲರೂ ಪ್ರೀತಿಯ ಸ್ವಾಗತ ಕೋರಿದ್ದಾರೆ. ಅವರ ಜೊತೆ ನಿರೂಪಕಿ ಅನುಶ್ರೀ ತುಂಬ ಆತ್ಮೀಯವಾಗಿ ನಡೆದುಕೊಂಡಿದ್ದಾರೆ. ಚಂದುಗೆ ಗಿಫ್ಟ್​ ನೀಡುವಾಗ, ‘ಚೆನ್ನಾಗಿ ಹಾಡಿ. ಇನ್ನೂ ನಾಲ್ಕೈದು ಜನರಿಗೆ ನೀವು ಸಹಾಯ ಮಾಡಬೇಕು’ ಎಂದು ಅನುಶ್ರೀ ಕಿವಿಮಾತು ಹೇಳಿದ್ದಾರೆ. ಇನ್ನು, ‘ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​’ ವೇದಿಕೆಯಲ್ಲಿ ಚಂದು ಬಗ್ಗೆ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಇದನ್ನೂ ಓದಿ
Coffee Nadu Chandu: ಈಡೇರಿತು ಕಾಫಿ ನಾಡು ಚಂದು ಆಸೆ; ಶಿವಣ್ಣನ ಭೇಟಿ ಮಾಡಿದ ವೈರಲ್​ ಸ್ಟಾರ್​ಗೆ ಅನುಶ್ರೀ ಸಾಥ್​
‘ಕಾಫಿ ನಾಡು ಚಂದು ಬಿಗ್ ಬಾಸ್‌ಗೆ ಹೋಗಬೇಕು’ ಅಭಿಯಾನ ಶುರು; ಸ್ವತಃ ಬೆಂಬಲ ನೀಡಿದ ವೈರಲ್ ಸಿಂಗರ್!
Coffee Nadu Chandu: ‘ಅನುಶ್ರೀ ಅಕ್ಕ.. ಅನುಶ್ರೀ ಅಕ್ಕ’ ಅಂತ ವಿಶೇಷ ಬೇಡಿಕೆ ಇಟ್ಟ ಕಾಫಿ ನಾಡು ಚಂದು; ಇದನ್ನು ಶಿವಣ್ಣ ಈಡೇರಿಸ್ತಾರಾ?
Coffee Nadu Chandu: ‘ಕಾಫಿ ನಾಡು ಚಂದು ಬಿಗ್​ ಬಾಸ್​ಗೆ ಬರಲಿ’: ಪರಮೇಶ್ವರ್​ ಗುಂಡ್ಕಲ್​ ಬಳಿ ಬೇಡಿಕೆ ಇಟ್ಟ ಫ್ಯಾನ್ಸ್​

‘ನಮ್ಮ ಡಿಕೆಡಿ ವೇದಿಕೆಗೆ ಕಾಫಿ ನಾಡು ಚಂದು ಯಾಕೆ ಬಂದಿದ್ದಾರೆ ಎಂಬುದು ಇಡೀ ಕರ್ನಾಟಕಕ್ಕೆ ಹೊತ್ತು. ಆ ರೀತಿಯಲ್ಲಿ ಅವರು ರಿಕ್ವೆಸ್ಟ್​ ಮಾಡಿದ್ದರು’ ಎಂದು ಅನುಶ್ರೀ ಹೇಳಿದ್ದಾರೆ. ಶಿವರಾಜ್​ಕುಮಾರ್ ಅವರನ್ನು ಭೇಟಿ ಆಗಬೇಕು ಎಂಬುದು ಚಂದು ಅವರ ಬಹುದಿನಗಳ ಕನಸಾಗಿತ್ತು. ಅದು ಈ ಶೋ ಮೂಲಕ ಈಡೇರಿದೆ. ಭಾನುವಾರ (ಆಗಸ್ಟ್​ 28) ಸಂಜೆ 7 ಗಂಟೆಗೆ ಈ ಶೋ ಪ್ರಸಾರ ಆಗಲಿದೆ.

ನೆಚ್ಚಿನ ಹೀರೋ ಶಿವಣ್ಣನನ್ನು​ ಭೇಟಿ ಮಾಡಬೇಕು ಎಂದು ಚಂದು ಅವರು ಎಲ್ಲಿಲ್ಲದ ಸರ್ಕಸ್​ ಮಾಡಿದ್ದರು. ಅನೇಕ ಮಕ್ಕಳಿಂದ ಆ ಬಗ್ಗೆ ಸಾಂಗ್​ ಮಾಡಿಸಿ ಪೋಸ್ಟ್​ ಮಾಡಿದ್ದರು. ಒಂದು ರೀಲ್ಸ್​ ಮೂಲಕ ನಿರೂಪಕಿ ಅನುಶ್ರೀ ಬಳಿಯೂ ರಿಕ್ವೆಸ್ಟ್​ ಮಾಡಿಕೊಂಡಿದ್ದರು. ಕಡೆಗೂ ಅವರ ಆಸೆ ಈಡೇರಿದೆ. ಶಿವಣ್ಣನ ಆಶೀರ್ವಾದ ಪಡೆದ ಚಂದುಗೆ ಸಖತ್​ ಖುಷಿ ಆಗಿದೆ. ಈ ವೇಳೆ ಅವರು ಎಮೋಷನಲ್​ ಆಗಿದ್ದಾರೆ. ‘ಇಂಥ ಅಭಿಯಾನಿಯನ್ನು ಪಡೆಯೋಕೆ ಬಹಳ ಪುಣ್ಯ ಮಾಡಿರಬೇಕು’ ಎಂದು ‘ಹ್ಯಾಟ್ರಿಕ್​ ಹೀರೋ’ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:01 pm, Sun, 28 August 22