AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉರಿಯುವ ಬೆಂಕಿಗೆ ತುಪ್ಪ; ಗುಟ್ಟಾಗಿ ನಡೆದ ಮಾತುಕತೆ ರಟ್ಟು ಮಾಡಿ ಜಗಳ ತಂದಿಟ್ಟ ಬಿಗ್ ಬಾಸ್

ಬಿಗ್ ಬಾಸ್ ಕನ್ನಡದ ಮನೆಯಲ್ಲಿ ಸ್ಪರ್ಧಿಗಳ ರಹಸ್ಯ ಸಂಭಾಷಣೆಗಳು ಬಹಿರಂಗಗೊಂಡಿದ್ದು, ಮನೆಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಒಬ್ಬರ ಮೇಲೆ ಮತ್ತೊಬ್ಬರು ಮಾಡಿದ ಕಮೆಂಟ್‌ಗಳು ಮತ್ತು ಅವರ ನಿಜವಾದ ಅಭಿಪ್ರಾಯಗಳು ಬಹಿರಂಗವಾಗಿವೆ. ಐಶ್ವರ್ಯಾ, ಭವ್ಯಾ ಮುಂತಾದವರ ಬಗ್ಗೆ ನಡೆದ ಮಾತುಕತೆಗಳು ದೊಡ್ಡ ವಿವಾದಕ್ಕೆ ಕಾರಣವಾಗಿವೆ. ಈ ಘಟನೆಯಿಂದ ಮನೆಯ ವಾತಾವರಣ ಬದಲಾಗಿದೆ.

ಉರಿಯುವ ಬೆಂಕಿಗೆ ತುಪ್ಪ; ಗುಟ್ಟಾಗಿ ನಡೆದ ಮಾತುಕತೆ ರಟ್ಟು ಮಾಡಿ ಜಗಳ ತಂದಿಟ್ಟ ಬಿಗ್ ಬಾಸ್
ಬಿಗ್ ಬಾಸ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Nov 05, 2024 | 7:05 AM

Share

ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಾ ಇರುತ್ತವೆ. ಒಬ್ಬರು ಆಡಿದ ಮಾತನ್ನು ಮತ್ತೊಬ್ಬರಿಗೆ ತೋರಿಸೋದಿಲ್ಲ. ಹೀಗೆ ತೋರಿಸಿದರೆ ಇಡೀ ಮನೆ ರಣರಂಗ ಆಗುತ್ತದೆ. ಈ ಕಾರಣಕ್ಕೆ ಒಬ್ಬರ ಬಗ್ಗೆ ಮತ್ತೊಬ್ಬರು ಏನು ಮಾತನಾಡಿಕೊಳ್ಳುತ್ತಾರೆ ಎಂಬ ವಿಡಿಯೋನ ತೋರಿಸಲ್ಲ. ಆದರೆ, ಈ ಬಾರಿ ಮನೆಯವರ ಮಧ್ಯೆ ಪಿಟ್ಟಿಂಗ್ ಇಡುವ ಕೆಲಸ ಆಗಿದೆ. ಇದರಿಂದ ಇಡೀ ಮನೆ ಹೊತ್ತು ಉರಿದಿದೆ.

ಬಿಗ್ ಬಾಸ್​ನಲ್ಲಿ ಸ್ಪರ್ಧಿಗಳಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಆದರೆ, ಎದುರಿನಿಂದ ಎಲ್ಲರೂ ಒಳ್ಳೆಯವರ ರೀತಿ ತೋರಿಸಿಕೊಳ್ಳುತ್ತಾರೆ. ಹಿಂದಿನಿಂದ ಆಡಿದ ಮಾತುಗಳು ಯಾರಿಗೂ ತಿಳಿಯಲ್ಲ ಎನ್ನುವ ಧೈರ್ಯದ ಮೇಲೆ ಒಬ್ಬರಿಗೊಬ್ಬರು ಚೆನ್ನಾಗಿ ಇರುತ್ತಾರೆ. ಈಗ ಹಿಂದಿನಿಂದ ಆಡಿದ ಮಾತುಗಳೇ ಅವರಿಗೆ ಮುಳುವಾಗಿದೆ.

ಬಿಗ್ ಬಾಸ್ ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಈ ಚಟುವಟಿಕೆಯ ಪ್ರಕಾರ ಪ್ರತಿ ಸ್ಪರ್ಧಿಯ ಫೋಟೋ ಬರುತ್ತದೆ ಮತ್ತು ಅವರು ಆಡಿದ ಮಾತನ್ನು ಪ್ರಸಾರ ಮಾಡಲಾಗುತ್ತದೆ. ಅದನ್ನು ಯಾವ ಜಾಗದಲ್ಲಿ ಹೇಳಲಾಗಿದೆ ಎಂಬುದನ್ನು ಊಹಿಸಬೇಕು. ಸರಿಯಾಗಿ ಊಹಿಸಿದರೆ ಮನೆಗೆ ದಿನಸಿ ಸಿಗುತ್ತದೆ. ಆ ಬಳಿಕ ವಿಡಿಯೋ ಕೂಡ ಪ್ರಸಾರ ಮಾಡಲಾಗುತ್ತದೆ.

ಸದ್ಯ ಪ್ರಸಾರ ಮಾಡಿರುವ ವಿಡಿಯೋಗಳು ಇಡೀ ಮನೆಯನ್ನು ಹೊತ್ತು ಉರಿಯುವಂತೆ ಮಾಡಿದೆ. ಗುಟ್ಟಾಗಿ ನಡೆದ ಮಾತುಗಳು ರಿವೀಲ್ ಆಗಿವೆ. ಇದು ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪ್ರೀತಿಸಿದ ಹುಡುಗಿಯ ಹೆಸರನ್ನು ಬಿಗ್ ಬಾಸ್​ನಲ್ಲಿ ರಿವೀಲ್ ಮಾಡಿದ ಹನುಮಂತ?

ಗುಟ್ಟಾಗಿ ನಡೆದ ಮಾತುಕತೆಗಳು ರಿವೀಲ್ ಆಗುವುದು ತುಂಬಾನೇಕಡಿಮೆ. ಈ ರೀತಿ ಮಾತುಕತೆ ರಿವೀಲ್ ಆಗುತ್ತಾ ಹೋದರೆ ಪ್ರತಿ ಸ್ಪರ್ಧಿ ಬಗ್ಗೆ ಸಹ ಸ್ಪರ್ಧಿಗೆ ಇರುವ ಅಭಿಪ್ರಾಯ ಬದಲಾಗುತ್ತಾ ಹೋಗುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಇದೇ ಆಗಿದೆ.. ಐಶ್ವರ್ಯಾ ಅವರು ಅಸಮರ್ಥರು ಎಂದು ಸುರೇಶ್ ಮಾತನಾಡಿದ್ದರು. ಅದೇ ರೀತಿ ಭವ್ಯಾ ಬಗ್ಗೆ ಮೋಕ್ಷಿತಾ ಹಾಗೂ ಕೆಲವರು ಕಮೆಂಟ್ ಪಾಸ್ ಮಾಡಿದ್ದರು. ಇದು ಕೂಡ ಸಖತ್ ಚರ್ಚೆ ಆಗುತ್ತಿದೆ. ತ್ರಿವಿಕ್ರಂ ಹೇಳಿದ ಮಾತಿನಿಂದ ಮೋಕ್ಷಿತಾ ಕಣ್ಣೀರು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:04 am, Tue, 5 November 24

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ