AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಂಗನಸು: ‘ಮಹೇಂದ್ರನಿಗೆ ಏನಾದ್ರು ಆದ್ರೆ ನಾನು ಬದುಕಲ್ಲ’ ಎಂದ ಜಗತಿ; ಅಪ್ಪನಿಗಾಗಿ ಅಮ್ಮನನ್ನು ಒಪ್ಪಿಕೊಳ್ತಾನಾ ರಿಷಿ?

Honganasu Serial Update: ಜಗತಿಯನ್ನು ಮತ್ತಷ್ಟು ದೂರ ಇಡಲು ರಿಷಿ ಪ್ರಯತ್ನ ಮಾಡಿದ್ದಾನೆ. ಏನೋ ಮಾತನಾಡಬೇಕೆಂದು ಹೋಗಿದ್ದ ಜಗತಿಗೆ ರಿಷಿಯ ಮಾತು ತುಂಬಾ ಆಘಾತ ನೀಡಿದೆ.

ಹೊಂಗನಸು: ‘ಮಹೇಂದ್ರನಿಗೆ ಏನಾದ್ರು ಆದ್ರೆ ನಾನು ಬದುಕಲ್ಲ’ ಎಂದ ಜಗತಿ; ಅಪ್ಪನಿಗಾಗಿ ಅಮ್ಮನನ್ನು ಒಪ್ಪಿಕೊಳ್ತಾನಾ ರಿಷಿ?
ಹೊಂಗನಸು ಸೀರಿಯಲ್
TV9 Web
| Updated By: ಮದನ್​ ಕುಮಾರ್​|

Updated on: Sep 29, 2022 | 9:57 AM

Share

ಆಸ್ಪತ್ರೆಗೆ ಯಾರು ದಾಖಲಾಗಿದ್ದಾರೆ ಎಂದು ಗೊತ್ತಿಲ್ಲದೆ ರಿಷಿ ತನ್ನ ಸ್ನೇಹಿತ ಗೌತಮ್ ಜೊತೆ ಆಸ್ಪತ್ರೆಗೆ ಎಂಟ್ರಿ ಕೊಟ್ಟ. ಆಸ್ಪತ್ರೆಯೊಳಗೆ ಬರುತ್ತಿದ್ದಂತೆ ವಸೂಧರ ಮತ್ತು ಜಗತಿ ಇಬ್ಬರು ಜೋರಾಗಿ ಅಳುತ್ತಿದ್ದರು. ಗಾಬರಿಯಾದ ರಿಷಿ ಯಾರಿಗೆ ಏನಾಯಿತು ಎಂದು ಕೇಳಿದ. ವಸೂಧರ, ರಿಷಿ ಬಳಿ ಮಹೇಂದ್ರಗೆ  ಹೃದಯಾಘಾತ (Heart Attack) ಆಗಿದೆ ಎನ್ನುವ ವಿಚಾರವನ್ನು ವಿವರಿಸಿದಳು. ವಿಷಯ ತಿಳಿದು  ಶಾಕ್ ಆದ ರಿಷಿ ತಂದೆಗೆ ಏನಾಯಿತು ಎಂದು ನೋಡಲು ಓಡಿದ. ತನ್ನ ತಂದೆಯೇ ಆಸ್ಪತ್ರೆಗೆ ದಾಖಲಾಗಿದ್ದು ಎನ್ನುವ ಸತ್ಯ ಅರಗಿಸಿಕೊಳ್ಳಲಾಗದೆ ರಿಷಿ ಅಪ್ಪ ಎಂದು ಅಳತೊಡಗಿದ. ರಿಷಿ ನೋಡಿ ಜಗತಿ ಮತ್ತು ವಸೂಧರ ಇಬ್ಬರೂ ಗಾಬರಿಯಾದರು.

ಸ್ನೇಹಿತ ಗೌತಮ್  ಅಂಕಲ್‌ಗೆ ಏನು ಆಗಲ್ಲ ಎಂದು ರಿಷಿಯನ್ನು ಸಮಾಧಾನ ಪಡಿಸಿದ.ಆದರೆ ರಿಷಿ, ಈ ಜಗತ್ತಿನಲ್ಲಿ ನನಗೆ ಅಪ್ಪನೆ ಎಲ್ಲಾ, ನನಗೆ ಅಂತ ಅವರು ಮಾತ್ರ ಇರೋದು ಎಂದು ಮತ್ತೆ ಭಾವುಕನಾದ. ಬಳಿಕ ಒಬ್ಬನೆ ಕುಳಿತಿದ್ದ ರಿಷಿಗೆ ವಸೂಧರ ಪಕ್ಕದಲ್ಲೇ ಕುಳಿತು ಧೈರ್ಯ ತುಂಬುವ ಪ್ರಯತ್ನ ಮಾಡಿದಳು. ಆದರೆ ರಿಷಿ ಏನನ್ನೂ ಮಾತನಾಡದೇ  ಸುಮ್ಮನೆ ಕುಳಿತಿದ್ದ. ಬಳಿಕ ರಿಷಿ ವಸೂಧರ ಬಳಿ ತನಗೆ ಯಾಕೆ ಜಗತಿ ಅಥವಾ ನೀನು ಫೋನ್ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ. ಎಷ್ಟು  ಸರಿ ಫೋನ್ ಮಾಡಿದ್ರು ನೀವು ರಿಸೀವ್ ಮಾಡಿಲ್ಲ ಅಂತ ವಸೂಧರ ಹೇಳಿದಳು. ನಂತರ ರಿಷಿ ವಸೂಧರ ಕೈ ಹಿಡಿದು ಅಪ್ಪ ಬೇಗ ಗುಣಮುಖರಾಗಲಿ ಎಂದು ಬೇಡಿಕೊ ಅಂತ ಕೇಳಿಕೊಂಡ.

ಅಷ್ಟೊತ್ತಿಗಾಗಲೇ ಮಹೇಂದ್ರಗೆ ಎಚ್ಚರಿಕೆಯಾಗಿತ್ತು. ರಿಷಿ ಮತ್ತು ಜಗತಿ ಇಬ್ಬರೂ ಅಳುತ್ತಲೇ ಮಹೇಂದ್ರನನ್ನು ಮಾತನಾಡಿಸಿದರು. ತನಗೇನು ಆಗಿಲ್ಲ ಎಂದು ಮದೇಂದ್ರ ಹೇಳಿದರೂ ಸಹ ಇಬ್ಬರು ಜೋರಾಗಿ ಅಳಲು ಶುರುಮಾಡಿದರು. ಬಳಿಕ ನರ್ಸ್ ಬಂದು ಇಲ್ಲಿ ಗಲಾಟೆ ಮಾಡಬಾರದು ಎಂದು ಇಬ್ಬರಿಗೂ ಹೊರ ನಡೆಯುವಂತೆ ಹೇಳಿ ಕಳುಹಿಸಿದಳು.

ಇದನ್ನೂ ಓದಿ
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Lakshana Serial: ಭೂಪತಿ ಮನೆಯಲ್ಲಿ ನವರಾತ್ರಿ ಜೋರು; ಬೊಂಬೆಯಾಟದಲ್ಲಿ ನಕ್ಷತ್ರಳ ಜೀವನದ ಹಳೆಯ ನೆನಪುಗಳು
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ಬಳಿಕ ಅಪ್ಪನ ಆರೋಗ್ಯದ ಬಗ್ಗೆ ವಿಚಾರಿಸಲು ರಿಷಿ ವೈದ್ಯರ ಬಳಿ ಹೋದ. ಜಗತಿನೂ ಅಲ್ಲೇ ಕುಳಿತಿದ್ದಳು. ಮಹೇಂದ್ರ ತುಂಬಾ ಒತ್ತಡಕ್ಕೆ ಒಳಗಾದ ಹಾಗೆ ಕಾಣಿಸುತ್ತಾರೆ, ಯಾವುದೋ ವಿಚಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು  ಕೊರಗುತ್ತಿದ್ದಾರೆ ಅನಿಸುತ್ತೆ, ಅವರ ಮನಸ್ಸನ್ನು ಮೊದಲು ತಿಳಿದುಕೊಳ್ಳಬೇಕು ಅಂತ ವೈದ್ಯರು ಹೇಳಿದರು. ಇತ್ತ ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಮಹೇಂದ್ರ, ವಸೂಧರ ಬಳಿ ನಿಮ್ಮ ಎಂಡಿ ಏನ್ ಹೇಳಿದ್ರು ಅಂತ ವಿಚಾರಿಸುತ್ತಿದ್ದ. ನನ್ನ ನೋವಿಗಿಂತ ರಿಷಿ ನನ್ನನ್ನು ನೋಡಿ ಅನುಭವಿಸುವ ನೋವು ನನಗೆ ನೋಡಕ್ಕೆ ಆಗ್ತಿಲ್ಲ ಎಂದು ವಸೂಧರ ಬಳಿ ಹೇಳಿದ.

ರಿಷಿಗೆ ತಾಯಿ ಜಗತಿ ಕಂಡರೆ ಆಗಲ್ಲ, ಆದರೆ ತಂದೆ ಮಹೇಂದ್ರಗೆ ಪತ್ನಿನು ಬೇಕು ಮಗನೂ ಬೇಕು. ಜಗತಿ ತನ್ನ ಮಗ ರಿಷಿಯನ್ನು ಸರ್ ಅಂತನೇ ಕರೆಯೋದು. ಆಸ್ಪತ್ರೆಯಲ್ಲೂ ಜಗತಿ ಮಗನ ಬಳಿ ಬಂದು ಮಹೇಂದ್ರ ಬಗ್ಗೆ ಮಾತನಾಡಬೇಕು ಸರ್ ಅಂತ ಕೇಳಿಕೊಂಡಳು. ಆದರೆ ರಿಷಿ ಜಗತಿ ಮಾತನಾಡುವ ಮೊದಲೆ ಈ ಪರಿಸ್ಥಿತಿಯನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಡಿ ಎಂದು ಹೇಳಿ ಮತ್ತಷ್ಟು ನೋವಾಗುವಂತೆ ಮಾತನಾಡಿದ. ನೀವು ದೂರ ಆದಮೇಲೆ ಅಪ್ಪ ಚೆನ್ನಾಗಿಯೇ ಇದ್ದರು. ನೀವು ಮತ್ತೆ ವಾಪಾಸ್ ಬಂದಮೇಲೆಯೇ ಅಪ್ಪ ನೋವು ಅನುಭವಿಸುತ್ತಿದ್ದಾರೆ ಎಂದು ಹೇಳಿ ಜಗತಿಯನ್ನು ಮತ್ತಷ್ಟು ದೂರ ಇಡಲು ಪ್ರಯತ್ನ ಮಾಡಿದ. ಏನೋ ಮಾತನಾಡಬೇಕೆಂದು ಹೋಗಿದ್ದ ಜಗತಿಗೆ ರಿಷಿಯ ಮಾತು ಮತ್ತಷ್ಟು ಆಘಾತ ನೀಡಿತು. ಆದರೆ ವೈದ್ಯರು ಹೇಳಿದ ಕಾರಣಕ್ಕಾದರೂ ತಂದೆಗಾಗಿ  ರಿಷಿ ತಾಯಿಯನ್ನು ಮನೆ ಸೇರಿಸಿಕೊಳ್ಳುತ್ತಾನಾ? ಮಹೇಂದ್ರ ಮತ್ತು ಜಗತಿ ಒಟ್ಟಿಗೆ ಇರುವಂತೆ ಆಗಿತ್ತಾ ಎನ್ನುವುದು ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಮಾತಗಳನ್ನು ಆಡಿದ ಸೋಮಣ್ಣ
ಚುನಾವಣಾ ರಾಜಕೀಯದಿಂದ ನಿವೃತ್ತಿ ಹೊಂದುವ ಮಾತಗಳನ್ನು ಆಡಿದ ಸೋಮಣ್ಣ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಮಹಾರಾಷ್ಟ್ರದಲ್ಲಿ ವ್ಯಕ್ತಿ ಮೇಲೆ 7 ಬೀದಿ ನಾಯಿಗಳ ದಾಳಿ
ಧರ್ಮಸ್ಥಳಕ್ಕೆ ಕೆಟ್ಟ ಹೆಸರು ನಾವು ಬಿಡಲ್ಲ: ಎನ್ ಶ್ರೀನಿವಾಸ್, ಶಾಸಕ
ಧರ್ಮಸ್ಥಳಕ್ಕೆ ಕೆಟ್ಟ ಹೆಸರು ನಾವು ಬಿಡಲ್ಲ: ಎನ್ ಶ್ರೀನಿವಾಸ್, ಶಾಸಕ
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಲಿರುವ ವಕೀಲರು
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ರಾಜಣ್ಣ ಕ್ಯಾಬಿನೆಟ್​ಗೆ ವಾಪಸ್ಸಾದರೆ ನನ್ನ ಸ್ವಾಗತವಿದೆ: ಡಿಕೆ ಸುರೇಶ್
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಸಿದ್ದರಾಮಯ್ಯ ತಮ್ಮಿಂದಾದ ತಪ್ಪಿಗೆ ಬೆಲೆ ತೆರಬೇಕಾಗುತ್ತದೆ: ವಿ ಸೋಮಣ್ಣ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಮುಸುಕುಧಾರಿ​ ಬಂಧನ: ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ಚಿನ್ನಯ್ಯನ ಅಣ್ಣ ತಾನಾಸಿಯ ವಿಚಾರಣೆಯನ್ನೂ ನಡೆಸುತ್ತಿರುವ ಎಸ್ಐಟಿ
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ನನ್ನನ್ನು ಎಸ್​ಐಟಿ ವಿಚಾರಣೆಗೆ ಕರೆದರೆ ಹೋಗುತ್ತೇನೆ: ಗಿರೀಶ್ ಮಟ್ಟಣ್ಣನವರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್
ಒಂದೇ ಓವರ್​ನಲ್ಲಿ 6 ಸಿಕ್ಸ್ ಸಿಡಿಸಿದ ರಾಸ್ ಟೇಲರ್