AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಂಗನಸು: ಜಗತಿ ಆಸೆ ಈಡೇರಿಸಿದ ವಸೂಧರಾ; ಅಮ್ಮ ಕೊಟ್ಟ ಉಡುಗೊರೆ ಎಂದು ರಿಷಿಗೆ ಗೊತ್ತಾಯ್ತಾ?

Honganasu Serial Update: ಜಗತಿ ತನ್ನ ಮಗ ರಿಷಿಗಾಗಿ ಉಡುಗೊರೆ ತಂದಿದ್ದಳು. ಹೇಗೆ ಕೊಡುವುದೆಂದು ಯೋಚಿಸುತ್ತಿದ್ದಳು. ತಾಯಿ ತಂದ ಉಡುಗೊರೆ ಎಂದರೆ ರಿಷಿ ಖಂಡಿತ ತೆಗೆದುಕೊಳ್ಳಲ್ಲ ಎನ್ನುವ ಸತ್ಯ ಜಗತಿ ಗೊತ್ತಿತ್ತು.

ಹೊಂಗನಸು: ಜಗತಿ ಆಸೆ ಈಡೇರಿಸಿದ ವಸೂಧರಾ; ಅಮ್ಮ ಕೊಟ್ಟ ಉಡುಗೊರೆ ಎಂದು ರಿಷಿಗೆ ಗೊತ್ತಾಯ್ತಾ?
ಹೊಂಗನಸು ಸೀರಿಯಲ್
TV9 Web
| Edited By: |

Updated on:Oct 06, 2022 | 4:06 PM

Share

ಹಬ್ಬದ ಖುಷಿಯಲ್ಲಿ ಎಲ್ಲರೂ ಸಿಹಿ ಸವಿಯುತ್ತಿದ್ದಾರೆ. ಆದರೆ ವಸೂಧರಾ ತಿನ್ನುತ್ತಿದ್ದ ಪಾಯಸವನ್ನು ರಿಷಿ ಕೆಳಗೆ ಬೀಳಿಸಿದ. ಬಳಕ ರಿಷಿ ತಾನೇ ತಿನ್ನುತ್ತಿದ್ದ ಪಾಯಸವನ್ನು ವಸೂಧರಾಳಿಗೆ ನೀಡಿದ. ರಿಷಿ ಎಂಜಲು ಮಾಡಿದ ಪಾಯಸವನ್ನು ವಸೂಧರಾ ತಿಂದಳು ಎಂದು ದೇವಯಾನಿ ಕೋಪ ಮಾಡಿಕೊಂಡು ಎದ್ದು ನಡೆದಳು. ರಿಷಿ ಮತ್ತು ವಸೂಧರಾಳ ಆತ್ಮೀಯತೆ ನೋಡಿದ ಜಗತಿ ಇಬ್ಬರ ನಡುವೆ ಪ್ರೀತಿ ಇದೆ ಎಂದು ತನ್ನ ಪತಿ ಮಹೇಂದ್ರನ ಬಳಿ ಹೇಳಿದಳು. ಅದನ್ನು ಒಪ್ಪಿಕೊಳ್ಳಲು ರಿಷಿ ತಯಾರಿಲ್ಲ ಎಂದು ಮಹೇಂದ್ರ ಹೇಳಿದ. ಸಿಹಿ ತಿಂದು ಎಲ್ಲರೂ ಹಬ್ಬದ ಸಂಭ್ರಮದಲ್ಲಿ ಡಾನ್ಸ್ ಮಾಡಿ ಕುಣಿದು ಕುಪ್ಪಳಿಸಿದರು. ಮನೆಯವರ ಸಂತಸ ನೋಡಿ ದೇವಯಾನಿ ಮತ್ತಷ್ಟು ಉರಿದುಕೊಂಡು ಡಾನ್ಸ್ ಅರ್ಧದಲ್ಲೇ ಬಿಟ್ಟು ಹೋದಳು.

ಹಬ್ಬಕ್ಕೆ ಸುಂದರವಾಗಿ ರೆಡಿಯಾಗಿದ್ದ ವಸೂಧರಾಳನ್ನು ರಿಷಿ ಹಾಡಿಹೊಗಳಿದ. ಅಷ್ಟರಲ್ಲೇ ಗೌತಮ್ ಕೂಡ ವಸೂಧರಾಳನ್ನು ಹೊಗಳಿದ. ರಿಷಿ ಮತ್ತು ಗೌತಮ್ ಇಬ್ಬರೂ ಪೈಪೋಟಿಗೆ ಬಿದ್ದ ಹಾಗೆ ವಸೂಧರಾಳನ್ನು ಪಟಾಯಿಸಲು ಪ್ರಯತ್ನಿಸುತ್ತಿದ್ದಾರೆ. ಕಾಂಪ್ಲಿಮೆಂಟ್‌ನಲ್ಲೂ ರಿಷಿ ತನಗೆ ಪೈಪೋಟಿ ಆಗಿದ್ದಾನೆ ಎಂದು ಗೌತಮ್ ಮನಸಲ್ಲೇ ಬೈಯ್ದುಕೊಂಡ.

ಜಗತಿ ತನ್ನ ಮಗ ರಿಷಿಗಾಗಿ ಉಡುಗೊರೆ ತಂದಿದ್ದಳು. ಹೇಗೆ ಕೊಡುವುದೆಂದು ಯೋಚಿಸುತ್ತಿದ್ದಳು. ತಾಯಿ ತಂದ ಉಡುಗೊರೆ ಎಂದರೆ ರಿಷಿ ಖಂಡಿತ ತೆಗೆದುಕೊಳ್ಳಲ್ಲ ಎನ್ನುವ ಸತ್ಯ ಜಗತಿ ಗೊತ್ತು. ಹಾಗಾಗಿ ಜಗತಿ ಉಡುಗೊರೆಯನ್ನು ವಸೂಧರಾಗೆ ಕೊಟ್ಟು ರಿಷಿಗೆ ಕೊಡುವಂತೆ ಹೇಳಿದಳು. ಜಗತಿ ಮತ್ತು ವಸೂಧರಾ ಇಬ್ಬರೂ ಮಾತನಾಡಿದ್ದನ್ನು ದೇವಯಾನಿ ಕೇಳಿಸಿಕೊಂಡಳು. ತಾನೆ ನಿನಗೆ ಸರಿಯಾದ ಗಿಫ್ಟ್ ಕೊಡ್ತೀನಿ ಎಂದು ಹೇಳುತ್ತಾ ಅಲ್ಲಿಂದ ಹೊರಟಳು. ಬಳಿಕ ವಸೂಧರಾ, ಜಗತಿ ಆಸೆಯಂತೆ ಕೊಟ್ಟ ಉಡುಗೊರೆಯನ್ನು ರಿಷಿಗೆ ನೀಡಿದಳು. ಬೇಡ ಎನ್ನಬಾರದು ಎನ್ನುವ ಕಂಡೀಷನ್ ಹಾಕಿ ರಿಷಿಗೆ ಉಡುಗೊರೆ ನೀಡಿದಳು. ವಸೂಧರಾ ಕೊಟ್ಟ ಉಡುಗೊರೆ ಎಂದು ರಿಷಿ ಖುಷಿಯಾಗಿ ತೆಗೆದುಕೊಂಡ.

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ವಸೂಧರಾ ಮತ್ತೊಂದು ಗೇಮ್ ಪ್ಲಾನ್ ಮಾಡಿದಳು. ಗೇಮ್‌ನಲ್ಲಿ ಸೋತವರು ದಿನಪೂರ್ತಿ ಗೆದ್ದವರ ಮಾತು ಕೇಳಬೇಕು ಎಂದು ವಸೂಧರಾ ಹೇಳಿದಳು. ರಿಷಿ ಒಪ್ಪಿಕೊಂಡು ಗೇಮ್‌ಗೆ ರೆಡಿಯಾದ. ಆದರೆ ಗೇಮ್‌ನಲ್ಲಿ ವಸೂಧರಾ ಗೆದ್ದಳು. ಬಳಿಕ ರಿಷಿ ಜಗತಿಯನ್ನು ಅಮ್ಮ ಎಂದು ಕರೆಯುವಂತೆ ವಸೂಧರಾ ಈಗ ಹೇಳುತ್ತಾಳೆ ಎಂದು ಮನಸ್ಸಿನಲ್ಲೇ ಊಹಿಸಿಕೊಂಡು ಗಾಬರಿಯಾದ. ಆದರೆ ವಸೂಧರಾ ದಿನ ಪೂರ್ತಿ ಕೋಪ ಮಾಡಿಕೊಳ್ಳಬಾರದು ಎಂದು ರಿಷಿಗೆ ಕಂಡೀಷನ್ ಹಾಕಿದಳು. ವಸೂಧರಾ ಮಾತು ಕೇಳಿ ರಿಷಿ ‘ಇಷ್ಟೆನಾ.. ಇನ್ನೇನೋ ಹೇಳ್ತೀಯಾ ಅಂತ ಅಂದುಕೊಂಡಿದ್ದೆ’ ಎಂದು ನಿಟ್ಟುಸಿರುಬಿಟ್ಟು ಗಿಫ್ಟ್ ತೆಗೆದುಕೊಂಡು ಹೋದ.

ಇತ್ತ ಅಡುಗೆ ಮಾಡುತ್ತಿದ್ದ ಜಗತಿ ಬಳಿ ಬಂದ ದೇವಯಾನಿ ತುಂಬಾ ಸಂಭ್ರಮ ಪಡಬೇಡ ಜಾಸ್ತಿ ಹೊತ್ತು ಇರಲು ನಾನು ಬಿಡಲ್ಲ ಎಂದು ಹೇಳಿದಳು. ಜಗತಿ ಕೂಡ ಅಕ್ಕ ದೇವಯಾನಿಗೆ ಸರಿಯಾಗೆ ಟಾಂಗ್ ನೀಡಿ ಹೋದಳು. ಜಗತಿ ತನ್ನ ಗಂಡನ ಮನೆಯಲ್ಲೇ ಇರ್ತಾಳಾ ಅಥವಾ ಹಬ್ಬ ಮುಗಿಸಿ ವಾಪಾಸ್ ಹೊರಡುತ್ತಾಳಾ? ರಿಷಿ ತನ್ನ ತಾಯಿಯನ್ನು ಒಪ್ಪಿಕೊಳ್ತಾನಾ ಎಂದು ತಿಳಿದುಕೊಳ್ಳಬೇಕೆಂದರೆ ಮುಂದಿನ ಸಂಚಿಕೆವರೆಗೂ ಕಾಯಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:06 pm, Thu, 6 October 22

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು