Anirudh Jatkar: ‘ಜೊತೆ ಜೊತೆಯಲಿ’ ಸೀರಿಯಲ್​ ತಂಡದಲ್ಲಿ ​ಕಿರಿಕ್​; ಧಾರಾವಾಹಿಯಿಂದ ಹೊರಹೋಗ್ತಾರಾ ಅನಿರುದ್ಧ್​?

| Updated By: ಮದನ್​ ಕುಮಾರ್​

Updated on: Aug 19, 2022 | 10:03 AM

Jothe Jotheyali Serial Aryavardhan: ಖ್ಯಾತ ನಟ ಅನಿರುದ್ಧ್​ ಮತ್ತು ‘ಜೊತೆ ಜೊತೆಯಲಿ’ ಸೀರಿಯಲ್​ ತಂಡದ ನಡುವೆ ಮನಸ್ತಾಪ ಉಂಟಾಗಿದೆ. ಶೂಟಿಂಗ್​ ವೇಳೆ ಕಿರಿಕ್​ ಆಗಿದೆ.

Anirudh Jatkar: ‘ಜೊತೆ ಜೊತೆಯಲಿ’ ಸೀರಿಯಲ್​ ತಂಡದಲ್ಲಿ ​ಕಿರಿಕ್​; ಧಾರಾವಾಹಿಯಿಂದ ಹೊರಹೋಗ್ತಾರಾ ಅನಿರುದ್ಧ್​?
ಅನಿರುದ್ಧ್
Follow us on

ಜನಮೆಚ್ಚಿದ ‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಆದರೆ ಈಗ ಈ ತಂಡದಲ್ಲಿ ಮನಸ್ತಾಪ ಸೃಷ್ಟಿ ಆಗಿದೆ. ನಟ ಅನಿರುದ್ಧ್​ ಅವರು ಆರ್ಯವರ್ಧನ್​ ಎಂಬ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು, ಅವರ ಜೊತೆ ತಂತ್ರಜ್ಞರ ತಂಡ ಮುನಿಸಿಕೊಂಡಿದೆ. ಶೂಟಿಂಗ್​ ಸೆಟ್​ನಲ್ಲಿ ಕಿರಿಕ್​ ನಡೆದಿದೆ ಎಂಬ ಮಾಹಿತಿ ಕೇಳಿಬಂದಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಅನಿರುದ್ಧ್ (Anirudh Jatkar)​ ಅವರು ‘ಜೊತೆ ಜೊತೆಯಲಿ’ ಸೀರಿಯಲ್​ನಲ್ಲಿ ನಟಿಸುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಒಟ್ಟಾರೆ ಘಟನೆಗಳ ಬಗ್ಗೆ ಈವರೆಗೂ ಜೀ ಕನ್ನಡ (Zee Kannada) ವಾಹಿನಿ ಕಡೆಯಿಂದಾಗಲಿ, ನಿರ್ದೇಶಕ ಆರೂರು ಜಗದೀಶ್​ ಅವರ ಕಡೆಯಿಂದಾಗಲಿ ಅಥವಾ ನಟ ಅನಿರುದ್ಧ್​ ಅವರಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ಕರೆಯುವ ಸಾಧ್ಯತೆ ದಟ್ಟವಾಗಿದೆ.

ಮೂಲಗಳ ಪ್ರಕಾರ, ‘ಜೊತೆ ಜೊತೆಯಲಿ’ ಸೀರಿಯಲ್​ ಸೆಟ್​ನಲ್ಲಿ ಅನಿರುದ್ಧ್​ ಅವರು ಅಸಹಕಾರ ತೋರಿದ್ದಾರೆ. 150 ಸಂಚಿಕೆಗಳು ಪೂರ್ಣಗೊಂಡ ಬಳಿಕ ಈ ರೀತಿ ವರ್ತನೆ ಮರುಕಳಿಸಲು ಶುರುವಾಯಿತು. ಅದರ ನಡುವೆಯೂ ಸೀರಿಯಲ್​ ಕೆಲಸಗಳು ಮುಂದುವರಿಯುತ್ತಿದ್ದವು. ಆದರೆ ಈಗ ಎಲ್ಲವೂ ಮಿತಿ ಮೀರಿದ್ದರಿಂದ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಅನಿರುದ್ಧ್​ ಅವರನ್ನು ಬ್ಯಾನ್​ ಮಾಡುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ ಎಂದು ಕೆಲವೆಡೆ ಸುದ್ದಿ ಪ್ರಕಟ ಆಗಿದೆ. ಈ ಬಗ್ಗೆ ಜೀ ಕನ್ನಡ ವಾಹಿನಿ ಹಾಗೂ ಕಿರುತೆರೆ ನಿರ್ಮಾಪಕರ ಸಂಘ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕೆ ಈ ಘಟನೆ ಕುರಿತು ಪ್ರತಿಕ್ರಿಯಿಸಲು ಅನಿರುದ್ಧ್​ ನಿರಾಕರಿಸಿದ್ದಾರೆ.

ಇದನ್ನೂ ಓದಿ
Jothe Jotheyali Serial Song: 3 ಕೋಟಿ ಬಾರಿ ವೀಕ್ಷಣೆ ಕಂಡ ‘ಜೊತೆ ಜೊತೆಯಲಿ’ ಧಾರಾವಾಹಿ ಹಾಡು
Jothe Jotheyali: ‘ಜೊತೆ ಜೊತೆಯಲಿ’ ಧಾರಾವಾಹಿ ನೋಡೋ ವೀಕ್ಷಕರಿಗೆ ನಟ ಅನಿರುದ್ಧ ವಿಶೇಷ ಮನವಿ
ಮನೆಯಲ್ಲಿದ್ದರೂ ಸುಮ್ಮನೆ ಕೂತಿಲ್ಲ ‘ಜೊತೆ ಜೊತೆಯಲಿ’ ಅನಿರುದ್ಧ್​​; ಸಂಕಷ್ಟದ ಸಮಯದಲ್ಲಿ ಅಳಿಲು ಸೇವೆ
ನಾವು ತುಂಬಾ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆ; ಕೊವಿಡ್​ನಿಂದ ಆಪ್ತನನ್ನು ಕಳೆದುಕೊಂಡು ಭಾವುಕರಾದ ನಟ ಅನಿರುದ್ಧ್​​

‘ನನಗೆ ವಾಹಿನಿ ಕಡೆಯಿಂದ ಅಥವಾ ನಿರ್ದೇಶಕರ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಅವರು ನೇರವಾಗಿ ಮಾತನಾಡಿದ ಬಳಿಕ ಸುದ್ದಿಗೋಷ್ಠಿ ಕರೆದು ಎಲ್ಲದಕ್ಕೂ ಸ್ಪಷ್ಟನೆ ನೀಡುತ್ತೇನೆ’ ಎಂದು ಅನಿರುದ್ಧ್​ ಅವರು ‘ಟಿವಿ9 ಕನ್ನಡ’ ಡಿಜಿಟಲ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅನಿರುದ್ಧ್​ ಮಾಡುತ್ತಿರುವ ಆರ್ಯವರ್ಧನ್​ ಪಾತ್ರ ತುಂಬ ಫೇಮಸ್​ ಆಗಿದೆ. ಆ ಪಾತ್ರದಲ್ಲಿ ಬೇರೆ ನಟನನ್ನು ಕಲ್ಪಿಸಿಕೊಳ್ಳಲು ಪ್ರೇಕ್ಷಕರು ಸಿದ್ಧರಿಲ್ಲ. ಒಂದು ವೇಳೆ ಅನಿರುದ್ಧ್​ ಈ ಸೀರಿಯಲ್​ನಿಂದ ಹೊರನಡೆದರೆ ಮುಂದೇನು ಎಂಬ ಪ್ರಶ್ನೆ ಮೂಡಿದೆ.

ಡಿಫರೆಂಟ್​ ಆದ ಪ್ರೇಮಕಥೆಯನ್ನು ಒಳಗೊಂಡಿರುವ ‘ಜೊತೆ ಜೊತೆಯಲಿ’ ಸೀರಿಯಲ್​ನಲ್ಲಿ ಅನಿರುದ್ಧ್​ ಮತ್ತು ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಒಂದಷ್ಟು ಎಪಿಸೋಡ್​ಗಳ ಚಿತ್ರೀಕರಣ ಆಗಿದೆ. ವಿವಾದ ಬಗೆಹರಿಯುವವರೆಗೆ ಆ ಸಂಚಿಕೆಗಳು ಪ್ರಸಾರ ಆಗುತ್ತವೆ ಎನ್ನಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:58 am, Fri, 19 August 22