AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜುವಿನ ಅನುಕಂಪಕ್ಕೆ ಸಿಟ್ಟಾದ ಅನು; ಕಣ್ಣೀರಿಟ್ಟವಳಿಗೆ ಬಂತು ಆರ್ಯವರ್ಧನ್​ನ ನೆನಪು

ಪದೇಪದೇ ಆರ್ಯವರ್ಧನ್​ನ ನೆನಪಿಸುವ ಕೆಲಸವನ್ನು ಅನುಗೆ ಸಂಜು ಮಾಡಿಸುತ್ತಿದ್ದಾನೆ. ಈ ವಿಚಾರದಲ್ಲಿ ಆಕೆಗೆ ಬೇಸರವಿದೆ. ಸಂಜುವಿನಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಆಕೆ ನಿರ್ಧರಿಸಿದ್ದಾಳೆ. ಆದರೆ ಅವಳಿಂದ ಇದು ಸಾಧ್ಯವಾಗುತ್ತಿಲ್ಲ.

ಸಂಜುವಿನ ಅನುಕಂಪಕ್ಕೆ ಸಿಟ್ಟಾದ ಅನು; ಕಣ್ಣೀರಿಟ್ಟವಳಿಗೆ ಬಂತು ಆರ್ಯವರ್ಧನ್​ನ ನೆನಪು
ಸಂಜು-ಅನು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 29, 2022 | 2:03 PM

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ಸಮಯ: ರಾತ್ರಿ 8.30

ಇದನ್ನೂ ಓದಿ
Image
Kantara: ‘ಕಾಂತಾರ’ ಚಿತ್ರದಿಂದ ಅಲ್ಲು ಅರ್ಜುನ್​ ತಂದೆಗೆ ಭಾರಿ ಲಾಭ; ಎಷ್ಟಕ್ಕೆ ನಡೆಯಿತು ತೆಲುಗು ವ್ಯವಹಾರ?
Image
Rishab Shetty: ಒಂದೇ ದಿನಕ್ಕೆ 15 ಕೋಟಿ ರೂಪಾಯಿ ಬಾಚಿದ ‘ಕಾಂತಾರ’; ಪರಭಾಷೆಯಲ್ಲಿ ಭರ್ಜರಿ ಕಮಾಯಿ
Image
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Image
Rishab Shetty: ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​; ಹಿಂದಿ ಪ್ರೇಕ್ಷಕರಲ್ಲಿ ಹೆಚ್ಚಿತು ‘ಕಾಂತಾರ’ ಸೆನ್ಸೇಷನ್​

ರಾಜ ನಂದಿನಿ ವಿಲಾಸಕ್ಕೆ ಹೊಸ ಆರ್ಯವರ್ಧನ್ ಬಂದಿದ್ದಾನೆ. ಆತನನ್ನು ಸಂಜು ಆಗಿ ಪರಿಚಯಿಸಲಾಗಿದೆ. ಆತ ನಡೆದುಕೊಳ್ಳುವ ರೀತಿ ಎಲ್ಲರಿಗೂ ಆರ್ಯವರ್ಧನ್​ನ ನೆನಪಿಸುತ್ತಿದೆ. ಅನು ಕೂಡ ಇದಕ್ಕೆ ಹೊರತಾಗಿಲ್ಲ. ಹಂತ ಹಂತದಲ್ಲೂ ಆರ್ಯವರ್ಧನ್ ಆಕೆಗೆ ನೆನಪಾಗುತ್ತಿದ್ದಾನೆ. ಇದಕ್ಕೆ ಕಾರಣ ಸಂಜು. ಆತನ ಪ್ರತಿ ಹೆಜ್ಜೆ ಆಕೆಗೆ ಪತಿಯನ್ನು ನೆನಪಿಸುತ್ತಿದೆ. ಸಂಜುವಿನ ಅನುಕಂಪಕ್ಕೆ ಆಕೆ ಕಣ್ಣೀರು ಹಾಕಿದ್ದಾಳೆ.

ಅನುಗೆ ವಿಧವೆ ಎಂಬ ಟೀಕೆ

ಆರ್ಯವರ್ಧನ್ ಸತ್ತಿದ್ದಾನೆ ಎಂದು ಎಲ್ಲರೂ ಭಾವಿಸಿದ್ದಾರೆ. ಅನುಗೆ ಆರ್ಯ ಇಲ್ಲ ಎಂಬುದನ್ನು ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಆತ ಇಲ್ಲದೆ ಆಕೆ ಚಿತ್ರಹಿಂಸೆ ಅನುಭವಿಸುತ್ತಿದ್ದಾಳೆ. ಇವುಗಳ ಮಧ್ಯೆ ಅಕ್ಕಪಕ್ಕದ ಮನೆಯವರು ಅನುನ ವಿಧವೆ ಎಂದು ಟೀಕೆ ಮಾಡುತ್ತಿದ್ದಾರೆ. ಇದರಿಂದ ಅನು ದುಃಖಿತಳಾಗಿದ್ದಾಳೆ.

ಅನುನ ಗೆಳತಿ ಮನೆಗೆ ಗಂಡಿನ ಕಡೆಯವರು ಬರುವವರಿದ್ದರು. ಈ ಸಂದರ್ಭದಲ್ಲಿ ಅನು ಕೂಡ ಇರಬೇಕು ಎಂದುಕೊಂಡಿದ್ದಳು. ಆದರೆ, ಇದಕ್ಕೆ ಗೆಳತಿಯ ತಾಯಿ ಅಪಸ್ವರ ತೆಗೆದಿದ್ದಾಳೆ. ‘ಶುಭಕಾರ್ಯಕ್ಕೆ ಗಂಡ ಸತ್ತವರು ಇರಬಾರದು ಎಂಬುದು ಗೊತ್ತಿಲ್ಲವೇನಮ್ಮ ಅನು’ ಎಂದು ಪ್ರಶ್ನೆ ಮಾಡಿದ್ದಾಳೆ ಆಕೆ. ಇದನ್ನು ಕೇಳಿ ಅನುಗೆ ದುಃಖ ಆಗಿದೆ. ಬೇಸರ ತಡೆಯಲಾರದೆ ಕಚೇರಿಗೆ ಬಂದಿದ್ದಾಳೆ.

ಇತ್ತ, ಯಾಕೆ ಅನು ಇನ್ನೂ ಕಚೇರಿಗೆ ಬಂದಿಲ್ಲ ಎಂಬ ಚಿಂತೆ ಸಂಜುಗೆ ಕಾಡಿದೆ. ತಾನೇ ಆಕೆಗೆ ಕರೆ ಮಾಡಬೇಕು ಎಂದುಕೊಂಡಿದ್ದ. ಆದರೆ, ಅದು ಸಾಧ್ಯವಾಗಿಲ್ಲ. ಸ್ವಲ್ಪ ಸಮಯ ಬಿಟ್ಟು ಅನು ಬಂದಿದ್ದಾಳೆ. ಆಗ ಸಂಜುಗೆ ಖುಷಿ ಆಗಿದೆ. ಆತನ ಪ್ರಶ್ನೆಯಿಂದ ಅನು ಸಿಟ್ಟಾಗಿದ್ದಾಳೆ.

ಕಣ್ಣೀರು ಹಾಕಿದ ಅನು

ಅನು ಬಂದ ನಂತರ ಆಕೆಯ ಚೇಂಬರ್​ಗೆ ಸಂಜು ಹೋಗಿದ್ದಾನೆ. ವಿಧವೆ ಎಂದು ಟೀಕೆ ಮಾಡಿದ ವಿಚಾರದಲ್ಲಿ ಅನು ಬೇಸರಗೊಂಡಿದ್ದಳು. ಆಕೆಯ ಮುಖ ನೋಡಿದ ಕೂಡಲೇ ಏನೋ ಆಗಿದೆ ಎಂಬ ಅನುಮಾನ ಸಂಜುಗೆ ಮೂಡಿದೆ. ಹೀಗಾಗಿ, ಆತ ಆಕೆಯ ಬಳಿ ಪ್ರಶ್ನೆ ಮಾಡಿದ್ದಾನೆ.

‘ಅನು ಅವ್ರೆ ನಿಮಗೆ ಏನೋ ಆಗಿದೆ. ನಿಮ್ಮ ಮೂಡ್ ಸರಿ ಇಲ್ಲ ಅನಿಸುತ್ತಿದೆ’ ಎಂದು ಪದೇ ಪದೇ ಹೇಳಿದ್ದಾನೆ ಸಂಜು. ಇದಕ್ಕೆ ಸಿಟ್ಟಾದ ಅನು, ಸಂಜುಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ಇದರಿಂದ ಸಂಜುಗೆ ಬೇಸರವಾಗಿದೆ. ಸಂಜು ತೋರಿಸುವ ಅನುಕಂಪ ಹಾಗೂ ಹಳೆಯ ಘಟನೆಗಳು ಆಕೆಗೆ ದುಃಖ ತಂದಿದೆ. ಆಕೆ ಕಣ್ಣೀರು ಹಾಕಲು ಶುರು ಮಾಡಿದ್ದಾಳೆ. ಈ ವೇಳೆ ಸಂಜು ಕರ್ಚೀಪ್ ನೀಡಿದ್ದಾನೆ. ಆರ್ಯವರ್ಧನ್ ಕೂಡ ಇದೇ ರೀತಿಯಲ್ಲಿ ಕರ್ಚೀಪ್ ನೀಡುತ್ತಿದ್ದ. ಇದನ್ನು ನೋಡಿ ಆಕೆಗೆ ಹಳೆಯ ಘಟನೆ ನೆನಪಾಗಿದೆ.

ಪದೇಪದೇ ಆರ್ಯವರ್ಧನ್​ನ ನೆನಪಿಸುವ ಕೆಲಸವನ್ನು ಆಕೆಗೆ ಸಂಜು ಮಾಡಿಸುತ್ತಿದ್ದಾನೆ. ಈ ವಿಚಾರದಲ್ಲಿ ಆಕೆಗೆ ಬೇಸರವಿದೆ. ಸಂಜುವಿನಿಂದ ಅಂತರ ಕಾಯ್ದುಕೊಳ್ಳಬೇಕು ಎಂದು ಆಕೆ ನಿರ್ಧರಿಸಿದ್ದಾಳೆ. ಆದರೆ ಅವಳಿಂದ ಇದು ಸಾಧ್ಯವಾಗುತ್ತಿಲ್ಲ.

ಆರಾಧನಾ ಬಗ್ಗೆ ಕಾಡಿದೆ ಚಿಂತೆ

ವಿಶ್ವನ ಹೆಂಡತಿ ಹೆಸರು ಆರಾಧನಾ. ವಿಶ್ವ ಮೃತಪಟ್ಟಿದ್ದಾನೆ. ಆತನ ಹೆಸರಲ್ಲಿ ಆರ್ಯವರ್ಧನ್ ರಾಜ ನಂದಿನಿ ವಿಲಾಸಕ್ಕೆ ಬಂದಿದ್ದಾನೆ. ಈ ಕಾರಣಕ್ಕೆ ಆತನಿಗೆ ಪತ್ನಿ ಆರಾಧನಾ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾಳೆ. ನಿರಂತರವಾಗಿ ಈ ವಿಚಾರವಾಗಿ ಆತನಿಗೆ ಈ ಬಗ್ಗೆ ಕೇಳುತ್ತಿರುವುದರಿಂದ ಚಿಂತೆ ಶುರುವಾಗಿದೆ. ಮುಂದೇನು ಮಾಡಬೇಕು ಎಂಬ ವಿಚಾರ ಆತನಿಗೆ ತಿಳಿಯುತ್ತಿಲ್ಲ.

ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ