AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jothe Jotheyali: ಆರ್ಯ ಯಾವಾಗ ಬರ್ತಾನೆ? ಝೇಂಡೆ ಮಾತು ಕೇಳಿ ಮೀರಾ ಶಾಕ್

Jothe Jotheyali Serial Update: ಝೇಂಡೆ ಮಾಸ್ಟರ್​ ಪ್ಲ್ಯಾನ್ ಮಾಡಿದ್ದಾನೆ. ವರ್ಧನ್ ಕಂಪನಿಯ ಎಲ್ಲಾ ಆಸ್ತಿಯನ್ನು ತಾನು ಪಡೆದುಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಆತ ಇದ್ದಾನೆ.

Jothe Jotheyali: ಆರ್ಯ ಯಾವಾಗ ಬರ್ತಾನೆ? ಝೇಂಡೆ ಮಾತು ಕೇಳಿ ಮೀರಾ ಶಾಕ್
‘ಜೊತೆ ಜೊತೆಯಲಿ’ ಧಾರಾವಾಹಿ
Follow us
TV9 Web
| Updated By: ಮದನ್​ ಕುಮಾರ್​

Updated on: Dec 13, 2022 | 6:30 AM

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಇದನ್ನೂ ಓದಿ
Image
ವಿಷ ಇರುವ ಪಾಯಸ ಕುಡಿದು ಆಸ್ಪತ್ರೆ ಸೇರಿದ ಸಂಜು; ಅನುಗೆ ಸಂಕಟ
Image
ಝೇಂಡೆಯ ಅಸಲಿ ಮುಖ ರಿವೀಲ್​; ವಿಲನ್ ಆದ ರಮ್ಯಾ
Image
ಅನು ಸಿರಿಮನೆ-ಸಂಜುನಿಂದ ಮುರಿದು ಬಿತ್ತು ರಮ್ಯಾ ಎಂಗೇಜ್​ಮೆಂಟ್
Image
ಎಲ್ಲರ ಎದುರು ಸಂಜುಗೆ ಆರ್ಯ ಎಂದು ಕರೆದ ಝೇಂಡೆ; ಸಿಟ್ಟಾದ ಅನು ಸಿರಿಮನೆ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ಸಂಜುಗೆ ತಾನೇ ಆರ್ಯವರ್ಧನ್ ಎನ್ನುವ ವಿಚಾರ ಗೊತ್ತಿಲ್ಲ. ಆತನಿಗೆ ವಿಶ್ವ ಎಂದು ಹೇಳಿ ನಂಬಿಸಲಾಗಿದೆ. ಆತನಿಗೆ ನಿಜ ವಿಚಾರ ಹೇಳಿಲ್ಲ. ಈಗ ಅಪಘಾತ ನಡೆದ ಸ್ಥಳದಲ್ಲಿ ಬರುವಾಗ ಆತನಿಗೆ ಹಳೆಯ ನೆನಪು ಕಾಡಿದೆ. ಯಾರೋ ಬುಲೆಟ್ ಹಾರಿಸಿದಂತೆ, ಕಾರು ಅಪಘಾತ ಆದಂತೆ ಆತನಿಗೆ ಅನಿಸಿದೆ. ಈ ಘಟನೆ ಏಕೆ ನೆನಪಾಯಿತು ಎನ್ನುವ ಪ್ರಶ್ನೆ ಆತನನ್ನು ಕಾಡಿದೆ.

ಸಂಜುಗೆ ಕಾಡಿದೆ ಪ್ರಶ್ನೆ

ಸಂಜುಗೆ ತಾನು ಯಾರು ಎನ್ನುವ ಪ್ರಶ್ನೆ ಕಾಡಿದೆ. ಆತನಿಗೆ ತಾನು ಯಾರು ಎನ್ನುವ ಪ್ರಶ್ನೆ ಈ ಮೊದಲಿನಿಂದಲೂ ಕಾಡುತ್ತಿದೆ. ಈಗ ಸವದತ್ತಿಯಿಂದ ಬರುವಾಗ ಸಂಜುಗೆ ಅಪಘಾತದ ಘಟನೆ ಹಾದು ಹೋಗಿದೆ. ಈ ಕಾರಣಕ್ಕೆ ಆತನಿಗೆ ತಾನು ಯಾರು ಎನ್ನುವ ಪ್ರಶ್ನೆ ಮೂಡಿದೆ. ಹೀಗಾಗಿ, ಶಾರದಾದೇವಿ ಬಳಿ ಬಂದ ಆತ ತನ್ನ ಮನದಾಳದ ಮಾತನ್ನು ಕೇಳಿಕೊಂಡಿದ್ದಾನೆ. ‘ಅಮ್ಮ ಒಂದು ಸಹಾಯ ಮಾಡ್ತೀರಾ? ನಾನು ಯಾರು ಎನ್ನುವ ಪ್ರಶ್ನೆಗೆ ಉತ್ತರ ನೀಡಿ. ನಿಮಗೆಲ್ಲರಿಗೂ ನನ್ನ ಬಗ್ಗೆ ಗೊತ್ತಿದೆ. ಆದರೆ, ನನಗೆ ನನ್ನ ಬಗ್ಗೆ ಗೊತ್ತಿಲ್ಲ. ದಯವಿಟ್ಟು ನಾನು ಯಾರು ಎಂಬುದನ್ನು ಹೇಳಿ ಪ್ಲೀಸ್​’ ಎಂದು ಬೇಸರ ತೋಡಿಕೊಂಡಿದ್ದಾನೆ.

ಇದನ್ನೂ ಸರಿ: ಮೀರಾ ಮಾಡಿದ ಮಸಲತ್ತಿನ ಬಗ್ಗೆ ಸಂಜುಗೆ ಬಂತು ಅನುಮಾನ; ಝೇಂಡೆಗೆ ಆರ್ಯನೇ ವಿಲನ್

ಆರಾಧನಾ ಹೆಂಡತಿ ಎಂದು ಹೇಳಿಕೊಂಡು ಬಂದು ಸಂಜುಗೆ ತೊಂದರೆ ಕೊಡುತ್ತಿದ್ದಾಳೆ. ಸಂಜುಗೆ ಆಕೆ ಹೆಂಡತಿ ಎಂಬುದನ್ನು ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಆಕೆ ಬೇರೆ ಯಾರೋ ಎಂದು ಅನಿಸುತ್ತಿದೆ. ಈ ಬಗ್ಗೆಯೂ ಸಂಜು ಮಾತನಾಡಿದ್ದಾನೆ. ‘ನನಗೆ ಆರಾಧನಾ ಕನೆಕ್ಟ್ ಆಗುತ್ತಿಲ್ಲ. ಆಕೆ ಹೆಂಡತಿ ಎಂದು ನನಗೆ ಅನ್ನಿಸುತ್ತಲೇ ಇಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ’ ಎಂದು ಕೋರಿದ್ದಾನೆ.

ಬ್ಲಾಕ್​ಮೇಲ್ ಮಾಡಿದ ಆರಾಧನಾ

ಆರಾಧನಾಳಿಂದ ದೂರ ಹೋಗಬೇಕು ಎಂದು ಸಂಜು ಪ್ರಯತ್ನ ಮಾಡುತ್ತಲೇ ಇದ್ದಾನೆ. ಇದನ್ನು ನೋಡಿ ನೋಡಿ ಆರಾಧನಾಗೆ ಬೇಸರ ಬಂದಿದೆ. ಈ ಕಾರಣಕ್ಕೆ ಆಕೆ ಒಂದು ಪ್ಲ್ಯಾನ್ ಮಾಡಿದ್ದಾಳೆ. ಸಂಜು ಎದುರು ಬಂದು ಬ್ಲ್ಯಾಕ್​ಮೇಲ್ ಮಾಡಿದ್ದಾಳೆ. ‘ನೀನು ನನ್ನ ವಿಷ್​. ನೀನು ನನ್ನಿಂದ ದೂರ ಹೋಗೋಕೆ ನಾನು ಬಿಡಲ್ಲ. ನನ್ನಿಂದ ನೀನು ದೂರ ಹೋಗುವ ಪ್ರಯತ್ನ ಮಾಡಿದರೆ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ’ ಎಂದು ಬೆದರಿಕೆ ಹಾಕಿದ್ದಾಳೆ. ಇದನ್ನು ಕೇಳಿ ಸಂಜುಗೆ ಶಾಕ್ ಆಗಿದೆ.

ಮತ್ತೆ ಮರಳಿದ ಝೇಂಡೆ

ಝೇಂಡೆ ಮಾಸ್ಟರ್​ ಪ್ಲ್ಯಾನ್ ಮಾಡಿದ್ದಾನೆ. ವರ್ಧನ್ ಕಂಪನಿಯ ಎಲ್ಲಾ ಆಸ್ತಿಯನ್ನು ತಾನು ಪಡೆದುಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಆತ ಇದ್ದಾನೆ. ಇದಕ್ಕೆ ಆರ್ಯನನ್ನು ಮೆಟ್ಟಿಲನ್ನಾಗಿ ಮಾಡಿಕೊಳ್ಳಬೇಕು ಎಂಬುದು ಆತನ ಆಲೋಚನೆ. ಇದಕ್ಕಾಗಿ ಝೇಂಡೆ ಮಾಸ್ಟರ್​ ಪ್ಲ್ಯಾನ್ ಮಾಡಿದ್ದಾನೆ. ಆತ ವರ್ಧನ್ ಕಂಪನಿಗೆ ಮರಳಿದ್ದಾನೆ.

ಇದನ್ನೂ ಸರಿ: ಆರ್ಯ ಸತ್ತಿದಾನೆ ಅನ್ನೋದಕ್ಕೆ ಸಾಕ್ಷಿ ಕೇಳಿದ ಝೇಂಡೆ; ಮೀರಾಗೆ ಶುರುವಾಯ್ತು ಅನುಮಾನ

ವರ್ಧನ್ ಕಂಪನಿಗೆ ಬಂದ ಝೇಂಡೆಗೆ ಭವ್ಯ ಸ್ವಾಗತ ನೀಡಿದ್ದಾಳೆ ಮೀರಾ ಹೆಗಡೆ. ಇದನ್ನು ನೋಡಿ ಝೇಂಡೆ ಖುಷಿ ಪಟ್ಟಿದ್ದಾನೆ. ಸಂಜು ಯಾವಾಗ ಕಚೇರಿಗೆ ಮರಳುತ್ತಾರೆ ಅನ್ನೋ ಪ್ರಶ್ನೆ ಮೂಡಿದೆ. ಹೀಗಾಗಿ, ಮೀರಾ ಬಳಿ ಹೋಗಿ ನೇರವಾಗಿ ಪ್ರಶ್ನೆ ಮಾಡಿದ್ದಾನೆ. ‘ಮೀರಾ ಜೀ, ಎನೋ ಕೇಳಬೇಕಿತ್ತು. ಆರ್ಯ ಯಾವಾಗ ಬರ್ತಾನೆ?’ ಎಂದು ಕೇಳಿದ್ದಾನೆ. ಇದನ್ನು ಕೇಳಿ ಮೀರಾಗೆ ಶಾಕ್ ಆಗಿದೆ. ಒಂದೊಮ್ಮೆ ಝೇಂಡೆ, ‘ಸಾರಿ, ಆರ್ಯ ಅಲ್ಲ ಸಂಜು’ ಎಂದು ಹೇಳಿದರೆ ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಮೀರಾಗೆ ತಿಳಿದು ಹೋಗಲಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ಆರ್​​​ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ವಿಯೆಟ್ನಾಂನ ಬೈಕ್ ಅಪಘಾತದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿ ಸಾವು
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಆಟೋಚಾಲಕನಿಗೆ ತನ್ನ ಫೋನ್ ಕಳುವು ಗೊತ್ತಾಗಿದ್ದು ಕಳ್ಳನನ್ನು ಹಿಡಿದ ನಂತರ!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಕಾಲ್ತುಳಿತದ ನಡುವೆ ನೂರರು ಮೊಬೈಲ್‌ ಎಗರಿಸಿದ ಕಳ್ಳರು...!
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಉಚಿತ ಪಾಸ್​ಗಳನ್ನು ವಿತರಿಸಿದ್ದಕ್ಕೆ ಕಾಲ್ತುಳಿತದ ಘಟನೆ ಸಂಭವಿಸಿದೆ: ವಕೀಲ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ಎರಡೆರಡು ಕಡೆ ಸತ್ಕಾರ ಸಮಾರಂಭ ಏರ್ಪಡಿಸುವ ಅಗತ್ಯವೇನಿತ್ತು? ಚಲವಾದಿ
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ತಮ್ಮ ಮನೆಯಲ್ಲಿ ಸಿಂಧೂರ ಸಸಿ ನೆಟ್ಟ ಪ್ರಧಾನಿ ಮೋದಿ; ಏನಿದರ ವಿಶೇಷತೆ?
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಅರ್​ಸಿಬಿ ಆಟಗಾರರ ವಿಕ್ಟರಿ ಪರೇಡ್ ನೋಡಲು ಅಕ್ಷತಾರನ್ನು ಕರೆತಂದಿದ್ದ ಪತಿ
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: ಚಂದನ್ ಶೆಟ್ಟಿ ಹೇಳಿದ್ದೇನು?
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ
ಸರ್ಕಾರದ ತಪ್ಪಿನಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಂಡರು: ಹಿರಿಯ ನಾಗರಿಕ