AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ನಡತಿ’ ಕಥೆಗೆ ಬಿಗ್ ಟ್ವಿಸ್ಟ್​: ಮಾಡದ ತಪ್ಪಿಗೆ ಅರೆಸ್ಟ್​ ಆದ ಭುವನೇಶ್ವರಿ

ರತ್ನಮಾಲಾ ಮನೆಯಲ್ಲಿ ನವರಾತ್ರಿ ಹಬ್ಬದ ಆಚರಣೆ ಜೋರಾಗಿದೆ. ಎಲ್ಲರೂ ಹಬ್ಬ ಆಚರಿಸುತ್ತಾ ಸಂಭ್ರಮದಲ್ಲಿ ತೇಲುತ್ತಿದ್ದರು. ಈ ಸಮಯಕ್ಕೆ ಸರಿಯಾಗಿ ಮನೆಗೆ ಪೊಲೀಸರ ಆಗಮನವಾಗಿದೆ.

‘ಕನ್ನಡತಿ’ ಕಥೆಗೆ ಬಿಗ್ ಟ್ವಿಸ್ಟ್​: ಮಾಡದ ತಪ್ಪಿಗೆ ಅರೆಸ್ಟ್​ ಆದ ಭುವನೇಶ್ವರಿ
ರಂಜನಿ
TV9 Web
| Updated By: ಮದನ್​ ಕುಮಾರ್​|

Updated on: Sep 27, 2022 | 8:39 AM

Share

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಭುವನೇಶ್ವರಿ ಪಾತ್ರ ವೀಕ್ಷಕರಿಗೆ ಇಷ್ಟವಾಗಿದೆ. ಈ ಪಾತ್ರವನ್ನು ನಟಿ ರಂಜನಿ ರಾಘವನ್ ಅವರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ತಮ್ಮ ಪಾತ್ರಕ್ಕೆ ಅವರು ಸಂಪೂರ್ಣ ನ್ಯಾಯ ಒದಗಿಸುತ್ತಿದ್ದಾರೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಭುವಿ ಪಾತ್ರ ಬೇರೆಯದೇ ರೀತಿಯಲ್ಲಿ ಗುರುತಿಸಿಕೊಂಡಿದೆ. ಅವಳ ಮುಗ್ಧತೆ. ತಪ್ಪು ಮಾಡಿದವರಿಗೆ ಸೈಲೆಂಟ್ ಆಗಿ ತಮ್ಮ ಮಾತಿನ ಮೂಲಕವೇ ಖಡಕ್ ಆಗಿ ಉತ್ತರ ನೀಡೋದು ಹೀಗೆ ಅವರ ಪಾತ್ರದ ಅನೇಕ ಗುಣಗಳು ವೀಕ್ಷಕರಿಗೆ ಇಷ್ಟವಾಗಿದೆ. ಈ ಮಧ್ಯೆ ‘ಕನ್ನಡತಿ’ ಕಥೆಗೆ ಟ್ವಿಸ್ಟ್ ಸಿಕ್ಕಿದೆ. ಭುವನೇಶ್ವರಿ ಮಾಡದ ತಪ್ಪಿಗೆ ಅರೆಸ್ಟ್ ಆಗಿದ್ದಾಳೆ. ಇದರ ಹಿಂದೆ ಇರೋದು ಯಾರು ಎಂಬುದು ಸದ್ಯದ ಕುತೂಹಲ.

ರತ್ನಮಾಲಾ ಮನೆಯಲ್ಲಿ ನವರಾತ್ರಿ ಹಬ್ಬದ ಆಚರಣೆ ಜೋರಾಗಿದೆ. ಎಲ್ಲರೂ ಹಬ್ಬ ಆಚರಿಸುತ್ತಾ ಸಂಭ್ರಮದಲ್ಲಿ ತೇಲುತ್ತಿದ್ದರು. ಈ ಸಮಯಕ್ಕೆ ಸರಿಯಾಗಿ ಮನೆಗೆ ಪೊಲೀಸರ ಆಗಮನವಾಗಿದೆ. ಮನೆಯ ಹೊರಗೆ ನಿಂತಿದ್ದ ಪೊಲೀಸರನ್ನು ಕಂಡು ಭುವಿ ನೇರವಾಗಿ ಪೊಲೀಸರ ಬಳಿ ಬಂದು ಪ್ರಶ್ನೆ ಮಾಡಿದ್ದಾಳೆ. ‘ನೀವು ಇಲ್ಲಿಗೆ ಬಂದ ಕಾರಣ ಏನು? ಯಾಕೆ ಮನೆಯವರೆಗೆ ಬಂದಿದ್ದೀರಿ’ ಎಂದು ಪ್ರಶ್ನೆ ಮಾಡಿದ್ದಾಳೆ ಭುವಿ. ಆದರೆ, ಪೊಲೀಸರು ಇದಕ್ಕೆ ಉತ್ತರ ನೀಡಿಲ್ಲ. ಬದಲಿಗೆ ‘ಈ ಕಾರು ರತ್ನಮಾಲಾ ಅವರದ್ದಲ್ಲವೇ? ಎಲ್ಲಿದ್ದಾರೆ ಅವರು? ನೋಡಿ ಕಾರಿಗೆ ಸ್ಕ್ರ್ಯಾಚ್ ಆಗಿದೆ. ಮೊನ್ನೆ ರಾತ್ರಿ ಕಾರು ಚಲಾಯಿಸುತ್ತಿದ್ದುದು ಅವರೇ ತಾನೇ? ಅವರು ಪೊಲೀಸ್ ಠಾಣೆಗೆ ಬರಬೇಕು’ ಎಂದು ಪೊಲೀಸರು ಹೇಳುತ್ತಿದ್ದಂತೆ ಭುವಿ ಅಲರ್ಟ್​ ಆದಳು. ಎಲ್ಲೋ ತಪ್ಪು ನಡೆದಿದೆ ಎಂಬುದು ಅವಳಿಗೆ ಗೊತ್ತಾಗಿದೆ.

‘ಮೊನ್ನೆ ಕಾರು ತೆಗೆದುಕೊಂಡು ಹೋಗಿದ್ದು ರತ್ನಮಾಲಾ ಅಲ್ಲ. ಅವರಿಗೆ ಅನಾರೋಗ್ಯ ಕಾಡಿದೆ. ಹೀಗಾಗಿ ನಾನೇ ಕಾರು ಚಲಾಯಿಸಿಕೊಂಡು ಹೋಗಿದ್ದೆ’ ಎಂದು ಭುವಿ ಸ್ಪಷ್ಟನೆ ನೀಡಿದ್ದಾಳೆ. ಇದಾದ ಬೆನ್ನಲ್ಲೇ ಭುವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರಣವನ್ನೂ ಹೇಳದೇ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ ಪೊಲೀಸರು.

ಇದನ್ನೂ ಓದಿ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಸಾನಿಯಾ ಬಿದ್ದು ಗಾಯಮಾಡಿಕೊಂಡಿದ್ದಳು. ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ರತ್ನಮಾಲಾ. ಆದರೆ, ಅಮ್ಮಮ್ಮನಿಗೆ ಮರೆವಿನ ಕಾಯಿಲೆ ಶುರುವಾಗಿದೆ. ಹೀಗಾಗಿ ಸಾನಿಯಾಳನ್ನು ಆಸ್ಪತ್ರೆಯಲ್ಲೇ ಬಿಟ್ಟು ರತ್ನಮಾಲಾ ನೇರವಾಗಿ ಮನೆ ಬಂದಿದ್ದಾಳೆ. ಆದರೆ ಮನೆಗೆ ಬರುವಾಗ ಕಾರಿಗೆ ಅಪಘಾತವಾಗಿರಬಹುದು ಎಂಬುದು ವೀಕ್ಷಕರ ಊಹೆ. ಈ ಕಾರಣದಿಂದ ಪೊಲೀಸರು ರತ್ನಮಾಲಾಳನ್ನು ಹುಡುಕಿ ಬಂದಿದ್ದಾರೆ ಎನ್ನಲಾಗಿದೆ.

ರತ್ನಮಾಲಾಗೆ ಭುವಿಯ ಮೇಲೆ ಅಪಾರ ಪ್ರೀತಿ ಇದೆ. ಭುವಿಗೂ ಅಷ್ಟೇ, ರತ್ನಮಾಲಾಳನ್ನು ಕಂಡರೆ ಅಪಾರ ಗೌರವ. ರತ್ನಮಾಲಾಗೆ ಅನಾರೋಗ್ಯ ಕಾಡುತ್ತಿರುವುದರಿಂದ ಅವರನ್ನು ಬಂಧಿಸಿ ಕರೆದುಕೊಂಡು ಹೋದರೆ ಸಾಕಷ್ಟು ತೊಂದರೆ ಉಂಟಾಗಬಹುದು. ಈ ಕಾರಣದಿಂದ ತಾನೇ ತಪ್ಪು ಮಾಡಿರುವುದಾಗಿ ಭುವಿ ಒಪ್ಪಿಕೊಂಡಿದ್ದಾಳೆ.

ಇದನ್ನೂ ಓದಿ: ಸಾನಿಯಾಗೆ ಮನೆಬಿಟ್ಟು ಹೋಗುವಂತೆ ಹೇಳಿದ ರತ್ನಮಾಲಾ: ಅಮ್ಮಮ್ಮನಿಗೆ ಮಿತಿಮೀರಿತು ಮರೆವಿನ ಕಾಯಿಲೆ

ಹರ್ಷ ಮನೆಯಲ್ಲಿ ಇಲ್ಲ. ಕೆಲಸದ ನಿಮಿತ್ತ ಆತ ಹೊರಗೆ ತೆರಳಿದ್ದಾನೆ. ಆತನಿಗೆ ಸಾಕಷ್ಟು ಪ್ರಭಾವ ಇದೆ. ಅವನು ಇದ್ದಿದ್ದರೆ ಭುವಿಯನ್ನು ಬಿಡುಗಡೆ ಮಾಡಿ ಕರೆ ತರುತ್ತಿದ್ದ. ಆದರೆ, ಆತ ಇಲ್ಲದ ಸಂದರ್ಭದಲ್ಲೇ ಭುವಿ ಬಂಧನಕ್ಕೆ ಒಳಗಾಗಿದ್ದರಿಂದ ಆಕೆಗೆ ಸಂಕಷ್ಟ ಹೆಚ್ಚಬಹುದು. ಆದಿನ ರಾತ್ರಿ ನಡೆದಿದ್ದು ಏನು? ಕಾರಿನ ಒಂದು ಭಾಗ ಉಜ್ಜಿಕೊಂಡಂತೆ ಹೋಗಿದ್ದು ಹೇಗೆ? ಅಪಘಾತ ನಡೆದಿತ್ತೇ? ಎಂಬಿತ್ಯಾದಿ ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿದೆ. ಇದಕ್ಕೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಶ್ರೀಲಕ್ಷ್ಮಿ ಎಚ್.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು