AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಷ ಹಾಗೂ ಭುವಿ ಸಂಬಂಧಕ್ಕೆ ಹುಳಿ ಹಿಂಡಿದ ವರು; ಮುಂದಿದೆ ಸಂಕಷ್ಟ

ಸದ್ಯ ರತ್ನಮಾಲಾ ಮೃತಪಟ್ಟಿರುವ ವಿಚಾರ ವೀಕ್ಷಕರಿಗೆ ಬೇಸರ ತರಿಸಿದೆ. ಈ ರೀತಿಯ ಟ್ವಿಸ್ಟ್ ನೀಡಬಾರದಿತ್ತು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಹರ್ಷ ಹಾಗೂ ಭುವಿ ಸಂಬಂಧಕ್ಕೆ ಹುಳಿ ಹಿಂಡಿದ ವರು; ಮುಂದಿದೆ ಸಂಕಷ್ಟ
ಹರ್ಷ-ವರು
TV9 Web
| Edited By: |

Updated on: Nov 16, 2022 | 7:00 AM

Share

ಧಾರಾವಾಹಿ: ಕನ್ನಡತಿ

ಪ್ರಸಾರ: ಕಲರ್ಸ್ ಕನ್ನಡ

ಸಮಯ: ರಾತ್ರಿ 7.30

ಇದನ್ನೂ ಓದಿ
Image
ಉರಿಯುತ್ತಿರುವ ರತ್ನಮಾಲಾ ಚಿತೆ ಎದುರು ಹೊಸ ಪ್ರತಿಜ್ಞೆ ಮಾಡಿದ ವರು; ಹರ್ಷ-ಭುವಿಗೆ ಇನ್ನಿದೆ ಕಷ್ಟ
Image
ಹರ್ಷ-ಭುವಿನ ಬೇರೆ ಮಾಡೋಕೆ ಮಾಸ್ಟರ್​ ಪ್ಲ್ಯಾನ್ ಮಾಡಿದ ವರುಧಿನಿ
Image
ರತ್ನಮಾಲಾ ಅಂತ್ಯಸಂಸ್ಕಾರ: ಕುಸಿದ ಹೋದ ಹರ್ಷ; ವಿಲ್ ವಿಚಾರ ಹೇಳಲು ಮುಂದಾದ ವರುಧಿನಿ
Image
ರತ್ನಮಾಲಾ ಅಂತ್ಯಸಂಸ್ಕಾರದಲ್ಲಿ ಸಾನಿಯಾಗೆ ಆಸ್ತಿ ಚಿಂತೆ; ಜೋರಾಗಿ ನಕ್ಕೇ ಬಿಟ್ಟಳು ವರುಧಿನಿ

ನಿರ್ದೇಶನ: ಯಶ್ವಂತ್ ಪಾಂಡು

ಪಾತ್ರವರ್ಗ: ಕಿರಣ್ ರಾಜ್, ರಂಜನಿ ರಾಘವನ್ ಹಾಗೂ ಇತರರು

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು?

ರತ್ನಮಾಲಾ ಅಂತ್ಯ ಸಂಸ್ಕಾರ ಮಾಡಿ ಎಲ್ಲರೂ ಮನೆಗೆ ಬಂದಿದ್ದಾರೆ. ರತ್ನಮಾಲಾಳನ್ನು ಕಳೆದುಕೊಂಡ ನೋವು ಮಾಸಲಿಲ್ಲ. ಹರ್ಷ ಹಾಗೂ ಭುವಿಗೆ ದುಃಖ ಉಮ್ಮಳಿಸಿ ಬರುತ್ತಿದೆ. ಆದರೆ, ಕಣ್ಣೀರು ಹಾಕಲು ಸಾಧ್ಯವಾಗುತ್ತಿಲ್ಲ. ಸಾನಿಯಾ ಬೇಕೆಂದೇ ಜಗಳ ಮಾಡಲು ಬಂದಿದ್ದಾಳೆ. ಆದರೆ, ಹರ್ಷ ಶಾಂತಮೂರ್ತಿ ಆಗಿದ್ದಾನೆ. ಯಾರ ತಂಟೆ ತಕರಾರಿಗೂ ಹೋಗಬಾರದು ಎಂದು ಆತ ನಿರ್ಧರಿಸಿದಂತಿದೆ.

ಅಸಲಿ ಆಟ ಶುರು ಮಾಡಿದ ವರುಧಿನಿ

ವರುಧಿನಿಯ ಪಾತ್ರ ಒಂದು ರೀತಿಯಲ್ಲಿ ಸೈಕೋ ತರಹ ಇದೆ ಎಂಬುದು ವೀಕ್ಷಕರಿಗೆ ಯಾವಾಗಲೋ ತಿಳಿದು ಹೋಗಿದೆ. ಒಮ್ಮೊಮ್ಮೆ ಆಕೆ ನಡೆದುಕೊಳ್ಳುವ ರೀತಿ ಅನೇಕರಿಗೆ ಇಷ್ಟ ಆಗುವುದಿಲ್ಲ. ಹರ್ಷನನ್ನು ಆಕೆ ಮೊದಲಿನಿಂದಲೂ ಪ್ರೀತಿಸುತ್ತಿದ್ದಳು. ಆದರೆ, ಹರ್ಷನ ಕಡೆಯಿಂದ ಆಕೆಗೆ ಪಾಸಿಟಿವ್ ರೆಸ್ಪಾನ್ಸ್ ಬಂದಿಲ್ಲ. ಭುವಿಯ ಕಡೆ ಹರ್ಷ ವಾಲಿದ್ದ. ಹರ್ಷ ಹಾಗೂ ಭುವಿಯ ಮದುವೆ ನಿಲ್ಲಿಸಬೇಕು ಎಂದು ವರುಧಿನಿ ಸಾಕಷ್ಟು ಪ್ರಯತ್ನಪಟ್ಟಳು. ಆದರೆ, ಅದು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಆಕೆ ಕುತಂತ್ರ ಮಾಡಲು ಮುಂದಾದಳು.

ಭುವಿ ಹಾಗೂ ಹರ್ಷ ಖುಷಿಯಿಂದ ಇರಲು ಕೊಡಬಾರದು ಎಂದು ವರು ನಿರ್ಧರಿಸಿ ಆಗಿದೆ. ಅದಕ್ಕೆ ತಕ್ಕಂತೆ ಆಕೆ ಪ್ಲ್ಯಾನ್ ರೂಪಿಸುತ್ತಿದ್ದಾಳೆ. ಆರಂಭದಲ್ಲಿ ಭುವಿಯನ್ನು ಕೊಲ್ಲಲು ಸಾನಿಯಾ ಪ್ಲ್ಯಾನ್ ಮಾಡಿದ್ದಳು. ಇದಕ್ಕೆ ವರುಧಿನಿ ಕೂಡ ಸಾಥ್ ನೀಡಿದ್ದಳು. ಆದರೆ, ಅದು ವಿಫಲವಾಯಿತು. ಭುವಿ ಬದುಕಿದಳು. ಹರ್ಷ ಹಾಗೂ ಭುವಿ ಮದುವೆ ಕೂಡ ಆಯಿತು.

ಮದುವೆ ದಿನವೂ ಹರ್ಷನ ಬಿಟ್ಟುಕೊಡುವಂತೆ ವರುಧಿನಿ ಬೇಡಿಕೆ ಇಟ್ಟಿದ್ದಳು. ಆದರೆ, ಇದಕ್ಕೆ ಭುವಿ ನೋ ಎಂದಿದ್ದಳು. ಹರ್ಷನನ್ನೇ ಮದುವೆ ಆದಳು. ಈಗ ಅವಳಿಗೆ ಒಂದಾದ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಿವೆ. ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎಂದು ವರು ನಿರ್ಧರಿಸಿ ಆಗಿದೆ.

ರತ್ನಮಾಲಾ ನಿಧನ ಹೊಂದಿದ ನಂತರದಲ್ಲಿ ಹರ್ಷನಿಗೆ ಒಂಟಿ ಭಾವನೆ ಕಾಡಿದೆ. ಈ ಕಾರಣಕ್ಕೆ ಆತ ಕಚೇರಿಗೆ ತೆರಳಿದ್ದ. ಅಲ್ಲಿ ವರುಧಿನಿ ಬಳಿ ಆತ ಕಟುವಾಗೇ ನಡೆದುಕೊಂಡಿದ್ದಾನೆ. ಮೊಬೈಲ್ ಚಾರ್ಜ್ ಹಾಕುವಂತೆ ವರುಧಿನಿಗೆ ಹರ್ಷ ಮೊಬೈಲ್ ನೀಡಿದ್ದ. ಆಕೆ ಮೊಬೈಲ್​ನ ಸ್ವಿಚ್​ ಆಫ್ ಮಾಡಿದ್ದಾಳೆ.

ಅದೇ ಸಮಯಕ್ಕೆ ಭುವಿಯ ಆಗಮನ ಆಗಿದೆ. ಆಕೆ ಹರ್ಷನಿಗೆ ಕರೆ ಮಾಡಿದ್ದಾಳೆ. ಆದರೆ, ಮೊಬೈಲ್ ಸ್ವಿಚ್​ಆಫ್ ಆಗಿತ್ತು. ಇನ್ನು, ವರು ಹೊರಗೆ ಬಂದು ನಕ್ಕಿ ಹೋಗಿದ್ದಾಳೆ. ಆದರೆ, ಅವಳು ಹರ್ಷನ ಬಳಿ ಭುವಿ ಬಂದಿರುವ ವಿಚಾರವನ್ನು ಹೇಳಲೇ ಇಲ್ಲ. ಇದರಿಂದ ಹರ್ಷ ಹಾಗೂ ಭುವಿ ಸಂಬಂಧಕ್ಕೆ ತೊಂದರೆ ಆಗುವ ಸೂಚನೆ ಸಿಕ್ಕಿದೆ.

ಹರ್ಷನಿಗೆ ಕೋಪ ಜಾಸ್ತಿ. ಸಣ್ಣ ವಿಚಾರಕ್ಕೂ ಆತ ಕೂಗಾಡುತ್ತಾನೆ. ಅನೇಕ ಸಂದರ್ಭಗಳಲ್ಲಿ ಯೋಚಿಸದೇ ಆತ ನಿರ್ಧಾರ ತೆಗೆದುಕೊಂಡ ಉದಾಹರಣೆ ಇದೆ. ಈಗ ವರುಧಿನಿ ಮಾಡುತ್ತಿರುವ ಸಂಚುಗಳು ಆತನ ಗಮನಕ್ಕೆ ಬರುತ್ತಿಲ್ಲ. ಇದರಿಂದ ಭುವಿ ಹಾಗೂ ಹರ್ಷನ ಮಧ್ಯೆ ಸಮಸ್ಯೆ ಉಂಟಾಗಬಹುದು.

ಆಸ್ತಿಯನ್ನು ಭುವಿಯ ಹೆಸರಿಗೆ ಬರೆದಿದ್ದಾಳೆ ರತ್ನಮಾಲಾ. ಈ ವಿಚಾರವನ್ನು ಲೀಕ್ ಮಾಡಿ ಹರ್ಷ ಹಾಗೂ ಭುವಿಯನ್ನು ಬೇರೆ ಮಾಡಬೇಕು ಎನ್ನುವ ಆಲೋಚನೆಯಲ್ಲಿ ವರುಧಿನಿ ಇದ್ದಾಳೆ. ಇದು ಯಶಸ್ವಿ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಸದ್ಯ ರತ್ನಮಾಲಾ ಮೃತಪಟ್ಟಿರುವ ವಿಚಾರ ವೀಕ್ಷಕರಿಗೆ ಬೇಸರ ತರಿಸಿದೆ. ಈ ರೀತಿಯ ಟ್ವಿಸ್ಟ್ ನೀಡಬಾರದಿತ್ತು ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀಲಕ್ಷ್ಮಿ ಎಚ್.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ