AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನು ಒಂಟಿ ಮನುಷ್ಯನಾಗಿಯೇ ಉಳಿಯೋದು’; ಕಾರ್ತಿಕ್ ಬಗ್ಗೆ ವಿನಯ್ ಅಂದು ನುಡಿದಿದ್ದ ಭವಿಷ್ಯ ನಿಜವಾಯ್ತು

ತನಿಷಾ ಹಾಗೂ ಕಾರ್ತಿಕ್ ಅವರಿಂದ ಸಂಗೀತಾ ದೂರ ಆದರು. ಈಗ ತನಿಷಾ ಎಲಿಮಿನೇಟ್ ಆಗಿದ್ದು ಕಾರ್ತಿಕ್ ಏಕಾಂಗಿ ಆಗಿದ್ದಾರೆ. ವಿನಯ್ ಅಂದು ಹೇಳಿದ ಮಾತು ನಿಜವಾಯ್ತಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

‘ನೀನು ಒಂಟಿ ಮನುಷ್ಯನಾಗಿಯೇ ಉಳಿಯೋದು’; ಕಾರ್ತಿಕ್ ಬಗ್ಗೆ ವಿನಯ್ ಅಂದು ನುಡಿದಿದ್ದ ಭವಿಷ್ಯ ನಿಜವಾಯ್ತು
ವಿನಯ್-ಕಾರ್ತಿಕ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jan 19, 2024 | 8:08 AM

Share

ಕಾರ್ತಿಕ್ ಮಹೇಶ್ (Karthik Mahesh) ಅವರು ಬಿಗ್ ಬಾಸ್​ಗೆ ಬಂದ ಸಂದರ್ಭದಲ್ಲಿ ಸಂಗೀತಾ ಹಾಗೂ ತನಿಷಾ ಕುಪ್ಪಂಡ ಜೊತೆ ಆಪ್ತತೆ ಬೆಳೆಸಿಕೊಂಡಿದ್ದರು. ಮೂವರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆಯಿತು. ಇವರ ಗೆಳೆತನದ ಮೇಲೆ ಯಾರ ಕಣ್ಣು ಬಿತ್ತೋ ಏನೋ. ತನಿಷಾ (Tanisha Kuppanda) ಹಾಗೂ ಕಾರ್ತಿಕ್ ಅವರಿಂದ ಸಂಗೀತಾ ದೂರ ಆದರು. ಈಗ ತನಿಷಾ ಎಲಿಮಿನೇಟ್ ಆಗಿದ್ದು ಕಾರ್ತಿಕ್ ಏಕಾಂಗಿ ಆಗಿದ್ದಾರೆ. ವಿನಯ್ ಅಂದು ಹೇಳಿದ ಮಾತು ನಿಜವಾಯ್ತಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಸಂಗೀತಾ ಇಂದ ದೂರ..

ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಕಿರಿಕ್ ಆದ ಬಳಿಕ ಸಂಗೀತಾ ಅವರು ಕಾರ್ತಿಕ್ ಅವರಿಂದ ಸಂಪೂರ್ಣವಾಗಿ ದೂರ ಆದರು. ಕಾರ್ತಿಕ್ ಜೊತೆ ಎಲ್ಲವನ್ನೂ ಸರಿ ಮಾಡಿಕೊಳ್ಳೋಣ ಎಂದು ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಹೀಗಾಗಿ, ಸಂಗೀತಾ ಅವರು ಕಾರ್ತಿಕ್ ಗೆಳೆತನವನ್ನು ಬಿಟ್ಟಿದ್ದಾರೆ. ಅನೇಕ ಸಂದರ್ಭದಲ್ಲಿ ಕಾರ್ತಿಕ್​ನ ಅವರು ನಾಮಿನೇಟ್ ಮಾಡಿದ್ದಾರೆ.

ತನಿಷಾ ಔಟ್

ಇತ್ತೀಚೆಗೆ ಕಾರ್ತಿಕ್ ಹಾಗೂ ತನಿಷಾ ಮಧ್ಯೆ ಯಾವುದೂ ಸರಿ ಇರಲಿಲ್ಲ. ತನಿಷಾ ಅವರ ಹೆಸರನ್ನು ಸೂಚಿಸಿದ್ದು ಕಾರ್ತಿಕ್. ಇದಕ್ಕೆ ಅವರಿಗೆ ಬೇಸರ ಇತ್ತು. ಈ ಕಾರಣಕ್ಕೆ ತನಿಷಾ ಮುನಿಸಿಕೊಂಡಿದ್ದರು. ಇಬ್ಬರ ಮಧ್ಯೆ ಎಲ್ಲವೂ ಸರಿ ಆಯಿತು ಎಂದುಕೊಳ್ಳುವಾಗಲೇ ತನಿಷಾ ಔಟ್ ಆದರು. ಜನವರಿ 18ರ ಎಪಿಸೋಡ್​ನಲ್ಲಿ ಅವರು ಔಟ್ ಆಗಿದ್ದಾರೆ.

ನಮ್ರತಾ ಕೂಡ ದೂರ

ಸಂಗೀತಾ ಜೊತೆ ಬಾಂಧವ್ಯ ಕಳಚಿದ ಬಳಿಕ ಕಾರ್ತಿಕ್ ಅವರು ನಮ್ರತಾ ಜೊತೆ ಕ್ಲೋಸ್ ಆದರು. ಇವರು ಆಗಾಗ ಫ್ಲರ್ಟ್ ಮಾಡುತ್ತಿದ್ದರು. ಇದು ಹೊರಗಿನಿಂದ ಬೇರೆ ರೀತಿ ಕಾಣುತ್ತಿದೆ ಎಂದು ಅತಿಥಿಯಾಗಿ ಬಂದ ಸ್ನೇಹಿತ್ ಹೇಳಿದ್ದರು. ಇದನ್ನು ನಮ್ರತಾ ಮನಸ್ಸಿಗೆ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕೆ ಕಾರ್ತಿಕ್​ನಿಂದ ಅಂತರ ಕಾಯ್ದಿಕೊಂಡಿದ್ದಾರೆ.

ಸಂತು-ಪಂತು..

ಕಾರ್ತಿಕ್​ಗೆ ಯಾರು ಇಲ್ಲ ಎನ್ನುವ ವಿಚಾರ ತಿಳಿದ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಅವರು ಕಾರ್ತಿಕ್​ನ ಬೆಂಬಲಿಸಲು ಬಂದಿದ್ದಾರೆ. ಇವರದ್ದು ಪಕ್ಕಾ ರಾಜಕೀಯ. ಕಾರ್ತಿಕ್​ಗೆ ಇವರಿಂದ ಸಿಕ್ಕ ಬೆಂಬಲ ನಿಜ ಎಂದುಕೊಳ್ಳುವಂತಿಲ್ಲ. ಅದರ ಹಿಂದೆ ಒಂದು ಡರ್ಟಿ ಪಾಲಿಟಿಕ್ಸ್ ಇರುತ್ತದೆ.

ಇದನ್ನೂ ಓದಿ: ‘ಯೋಗ್ಯತೆ ಇರೋದಕ್ಕೆ ಬಂದಿದ್ದು’; ವಿನಯ್ ಗೌಡ ಬಾಯಿ ಮುಚ್ಚಿಸಿದ ಪ್ರತಾಪ್

ವಿನಯ್ ಹೇಳಿದ್ದ ಮಾತು..

ವಿನಯ್ ಹಾಗೂ ಕಾರ್ತಿಕ್ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇತ್ತು. ಆದರೆ, ಈ ಫ್ರೆಂಡ್​ಶಿಪ್ ಹೆಚ್ಚು ದಿನ ಉಳಿಯಲಿಲ್ಲ. ಜಗಳದ ಸಂದರ್ಭದಲ್ಲಿ ವಿನಯ್ ಒಂದು ಮಾತು ಹೇಳಿದ್ದರು. ಅದು ನಿಜವಾಯಿತೇ ಎನ್ನುವ ಅನುಮಾನ ಮೂಡಿದೆ. ‘ಜೀವನದಲ್ಲಿ ನೀನು ಒಬ್ಬ ಒಂಟಿ ಮನುಷ್ಯನಾಗಿಯೇ ಉಳಿಯೋದು’ ಎಂದು ವಿನಯ್ ಅಂದು ಹೇಳಿದ್ದರು. ಆ ಮಾತು ಈಗ ನಿಜವಾಗಿದೆ.

ಫಿನಾಲೆ..

ಇನ್ನು ಕೆಲವೇ ದಿನಗಳಲ್ಲಿ ಫಿನಾಲೆ ನಡೆಯಲಿದೆ. ಸದ್ಯ ಏಳು ಮಂದಿ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇವರ ಪೈಕಿ ಐವರು ಫಿನಾಲೆ ತಲುಪಲಿದ್ದಾರೆ. ತುಕಾಲಿ ಸಂತೋಷ್, ವರ್ತೂರು ಸಂತೋಷ್, ವಿನಯ್ ಗೌಡ, ಸಂಗೀತಾ ಶೃಂಗೇರಿ, ನಮ್ರತಾ ಗೌಡ, ಡ್ರೋನ್ ಪ್ರತಾಪ್, ಕಾರ್ತಿಕ್ ಮಹೇಶ್ ಮಧ್ಯೆ ಸ್ಪರ್ಧೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?