ಬಿಗ್ ಬಾಸ್​ನಲ್ಲಿ ಸ್ಟ್ರಾಂಗ್ ಎನಿಸಿಕೊಂಡು ಎಡವುತ್ತಿದ್ದಾರೆ ಈ ಸ್ಪರ್ಧಿಗಳು..

ಆರಂಭದಲ್ಲಿ ಸ್ಟ್ರಾಂಗ್ ಎನಿಸಿಕೊಂಡ ಸ್ಪರ್ಧಿಗಳು ಇತ್ತೀಚಿಗಿನ ದಿನಗಳಲ್ಲಿ ಸಾಕಷ್ಟು ಎಡವುತ್ತಿದ್ದಾರೆ. ಅವರು ಈಗ ತಿದ್ದುಕೊಳ್ಳದೇ ಇದ್ದರೆ ಫಿನಾಲೆಯಲ್ಲಿ ಕಪ್​ ಎತ್ತಬೇಕು ಎನ್ನುವ ಕನಸು ನಾಶ ಆಗಲಿದೆ. ಅವರು ಯಾರು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್​ನಲ್ಲಿ ಸ್ಟ್ರಾಂಗ್ ಎನಿಸಿಕೊಂಡು ಎಡವುತ್ತಿದ್ದಾರೆ ಈ ಸ್ಪರ್ಧಿಗಳು..
ಬಿಗ್ ಬಾಸ್​ನಲ್ಲಿ ಸ್ಟ್ರಾಂಗ್ ಎನಿಸಿಕೊಂಡು ಎಡವುತ್ತಿದ್ದಾರೆ ಈ ಸ್ಪರ್ಧಿಗಳು..
Follow us
| Updated By: ರಾಜೇಶ್ ದುಗ್ಗುಮನೆ

Updated on:Jan 11, 2024 | 1:01 PM

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಜೋರಾಗಿದೆ. ಈಗ ಸದ್ಯ ಉಳಿದಿರೋದು ಎಂಟು ಮಂದಿ ಮಾತ್ರ. ಈ ಪೈಕಿ ಫಿನಾಲೆಗೆ ಉಳಿಯೋದು ಮೂವರು ಮಾತ್ರ. ಅವರು ಯಾರು ಎನ್ನುವ ಲೆಕ್ಕಾಚಾರ ಜೋರಾಗಿದೆ. ಅತ್ತ ಬಿಗ್ ಬಾಸ್ (Bigg Boss) ಮನೆಯಲ್ಲೂ ಸ್ಪರ್ಧೆ ಜೋರಾಗಿದೆ. ಆರಂಭದಲ್ಲಿ ಸ್ಟ್ರಾಂಗ್ ಎನಿಸಿಕೊಂಡ ಸ್ಪರ್ಧಿಗಳು ಇತ್ತೀಚಿಗಿನ ದಿನಗಳಲ್ಲಿ ಸಾಕಷ್ಟು ಎಡವುತ್ತಿದ್ದಾರೆ. ಅವರು ಈಗ ತಿದ್ದುಕೊಳ್ಳದೇ ಇದ್ದರೆ ಫಿನಾಲೆಯಲ್ಲಿ ಕಪ್​ ಎತ್ತಬೇಕು ಎನ್ನುವ ಕನಸು ನಾಶ ಆಗಲಿದೆ. ಅವರು ಯಾರು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ಅವರು ಸಾಕಷ್ಟು ಎಡವುತ್ತಿದ್ದಾರೆ. ಅವರು ಆರಂಭದಲ್ಲಿ ಸ್ಟ್ರಾಂಗ್ ಎನಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಅವರು ಮೊದಲಿನ ರೀತಿ ಇಲ್ಲ. ಆರಂಭದಲ್ಲಿ ಸಂಗೀತಾ ಜೊತೆ ಇದ್ದಾಗ ಎಲ್ಲರಿಗೂ ಇಷ್ಟ ಆಗುತ್ತಿದ್ದರು. ಆದರೆ, ದಿನ ಕಳೆದಂತೆ ಅವರು ಬದಲಾದರು. ಸಂಗೀತಾ ಜೊತೆ ಮನಸ್ತಾಪ ಉಂಟಾಗಿದೆ. ಈಗ ಸಂಗೀತಾ ಅವರಿಂದ ದೂರವೇ ಇದ್ದಾರೆ. ತನಿಷಾಗೆ ಕಾರ್ತಿಕ್​ನಿಂದ ನೋವಾಗಿದೆ. ನಮ್ರತಾ ಜೊತೆ ಫ್ಲರ್ಟ್ ಮಾಡುತ್ತಿದ್ದಾರೆ. ಇದು ಅನೇಕರಿಗೆ ಇಷ್ಟ ಆಗುತ್ತಿಲ್ಲ. ಅವರಿಗೆ ಆಟದ ಮೇಲೆ ಗಮನ ಕಡಿಮೆ ಆಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಅವರು ಆಟ ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ತನಿಷಾ ಕುಪ್ಪಂಡ

ತನಿಷಾ ಕುಪ್ಪಂಡ ಅವರು ಆರಂಭದಲ್ಲಿ ಸಾಕಷ್ಟು ಸ್ಟ್ರಾಂಗ್ ಎನಿಸಿಕೊಂಡಿದ್ದರು. ಆದರೆ, ಈಗ ಅವರ ಆಟದ ವರಸೆ ಬದಲಾಗಿದೆ. ಅವರ ಕಾಲಿಗೆ ಏಟಾದ ಬಳಿಕ ಕೊಂಚ ಡಲ್ ಆಗಿದ್ದಾರೆ. ಅವರ ಹೆಸರು ಈ ವಾರದ ನಾಮಿನೇಷನ್ ಲಿಸ್ಟ್​ನಲ್ಲಿ ಇದೆ. ಅವರಿಗೆ ಎಲಿಮಿನೇಷನ್ ಭಯ ಕಾಡಿದೆ. ಅವರು ಮತ್ತೆ ಮೊದಲಿನ ಫಾರ್ಮ್​ಗೆ ಮರಳಬೇಕಿದೆ.

ನಮ್ರತಾ ಗೌಡ

ನಮ್ರತಾ ಗೌಡ ಅವರು ಬಿಗ್ ಬಾಸ್​ಗೆ ಬಂದಾಗ ‘ವಿನಯ್ ಚಮಚಾ’ ಎಂಬ ಕುಖ್ಯಾತಿ ಪಡೆದರು. ಆ ಬಳಿಕ ಅವರು ವಿನಯ್ ಅವರಿಂದ ಅಂತರ ಕಾಯ್ದುಕೊಂಡರು. ಅಲ್ಲಿಂದ ಅವರು ಶೈನ್ ಆಗಲು ಆರಂಭಿಸಿದರು. ಕಳೆದ ಹಲವು ವಾರಗಳಿಂದ ಅವರ ಹೆಸರು ನಾಮಿನೇಷನ್​ನಲ್ಲಿ ಇರಲಿಲ್ಲ. ಆದರೆ, ಈ ವಾರ ಅವರು ನಾಮಿನೇಟ್ ಆಗಿದ್ದಾರೆ. ಈ ಬೆನ್ನಲ್ಲೇ ಅವರು ಕಣ್ಣೀರು ಹಾಕಲು ಆರಂಭಿಸಿದ್ದಾರೆ. ‘ಈ ಮನೆಯಿಂದ ನಾನು ಹೋಗಬೇಕು’ ಎಂದು ಅತ್ತಿದ್ದಾರೆ. ಬಹುಶಃ ಅವರಿಗೆ ಎಲಿಮಿನೇಷನ್ ಭಯ ಕಾಡಿದೆ ಎನ್ನಲಾಗುತ್ತಿದೆ. ಈ ವಾರ ಹಲವು ಅವಕಾಶ ಸಿಕ್ಕರೂ ಟಾಸ್ಕ್ ಆಡಲು ಅವರ ಬಳಿ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಅವರು ಚಾರ್ಮ್ ಹೆಚ್ಚಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ಜಗಳಕ್ಕೆ ಬಂದ ಕಾರ್ತಿಕ್​ಗೆ ಸರಿಯಾಗಿ ತಿರುಗೇಟು ಕೊಟ್ಟ ಸಂಗೀತಾ ಶೃಂಗೇರಿ

 ವಿನಯ್ ಗೌಡ

ಡ್ರೋನ್ ಪ್ರತಾಪ್ ಹೇಳಿದಂತೆ ವಿನಯ್ ಅವರ ನಾಲಿಗೆಗೆ ಲಗಾಮು ಬೀಳಬೇಕು. ಅವರು ಮಾತಿನಲ್ಲಿ ಪದೇ ಪದೇ ಎಡವುತ್ತಿದ್ದಾರೆ. ವಿನಯ್ ಗೌಡ ಅವರು ಮಾತನಾಡುವ ಭರದಲ್ಲಿ ಕೆಟ್ಟ ಪದ ಬಳಕೆ ಮಾಡುತ್ತಾರೆ. ಇದನ್ನು ಅವರು ನಿಯಂತ್ರಿಸಿಕೊಳ್ಳಬೇಕಿದೆ. ಉಳಿದ ಎಲ್ಲಾ ವಿಚಾರಗಳಲ್ಲಿ ಮಿಂಚುವ ವಿನಯ್ ಇದೊಂದು ವಿಚಾರದಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:01 pm, Thu, 11 January 24

ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
ಅಕ್ಟೋಬರ್ 07 ರಿಂದ 13 ರವರೆಗಿನ ವಾರ ಭವಿಷ್ಯ ತಿಳಿಯಿರಿ
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?
Navratri 2024 4th Day: ನವರಾತ್ರಿ 4ನೇ ದಿನ ಕುಷ್ಮಾಂಡ ದೇವಿಯ ಮಹತ್ವವೇನು?