AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನಲ್ಲಿ ಸ್ಟ್ರಾಂಗ್ ಎನಿಸಿಕೊಂಡು ಎಡವುತ್ತಿದ್ದಾರೆ ಈ ಸ್ಪರ್ಧಿಗಳು..

ಆರಂಭದಲ್ಲಿ ಸ್ಟ್ರಾಂಗ್ ಎನಿಸಿಕೊಂಡ ಸ್ಪರ್ಧಿಗಳು ಇತ್ತೀಚಿಗಿನ ದಿನಗಳಲ್ಲಿ ಸಾಕಷ್ಟು ಎಡವುತ್ತಿದ್ದಾರೆ. ಅವರು ಈಗ ತಿದ್ದುಕೊಳ್ಳದೇ ಇದ್ದರೆ ಫಿನಾಲೆಯಲ್ಲಿ ಕಪ್​ ಎತ್ತಬೇಕು ಎನ್ನುವ ಕನಸು ನಾಶ ಆಗಲಿದೆ. ಅವರು ಯಾರು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್​ನಲ್ಲಿ ಸ್ಟ್ರಾಂಗ್ ಎನಿಸಿಕೊಂಡು ಎಡವುತ್ತಿದ್ದಾರೆ ಈ ಸ್ಪರ್ಧಿಗಳು..
ಬಿಗ್ ಬಾಸ್​ನಲ್ಲಿ ಸ್ಟ್ರಾಂಗ್ ಎನಿಸಿಕೊಂಡು ಎಡವುತ್ತಿದ್ದಾರೆ ಈ ಸ್ಪರ್ಧಿಗಳು..
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 11, 2024 | 1:01 PM

Share

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧೆ ಜೋರಾಗಿದೆ. ಈಗ ಸದ್ಯ ಉಳಿದಿರೋದು ಎಂಟು ಮಂದಿ ಮಾತ್ರ. ಈ ಪೈಕಿ ಫಿನಾಲೆಗೆ ಉಳಿಯೋದು ಮೂವರು ಮಾತ್ರ. ಅವರು ಯಾರು ಎನ್ನುವ ಲೆಕ್ಕಾಚಾರ ಜೋರಾಗಿದೆ. ಅತ್ತ ಬಿಗ್ ಬಾಸ್ (Bigg Boss) ಮನೆಯಲ್ಲೂ ಸ್ಪರ್ಧೆ ಜೋರಾಗಿದೆ. ಆರಂಭದಲ್ಲಿ ಸ್ಟ್ರಾಂಗ್ ಎನಿಸಿಕೊಂಡ ಸ್ಪರ್ಧಿಗಳು ಇತ್ತೀಚಿಗಿನ ದಿನಗಳಲ್ಲಿ ಸಾಕಷ್ಟು ಎಡವುತ್ತಿದ್ದಾರೆ. ಅವರು ಈಗ ತಿದ್ದುಕೊಳ್ಳದೇ ಇದ್ದರೆ ಫಿನಾಲೆಯಲ್ಲಿ ಕಪ್​ ಎತ್ತಬೇಕು ಎನ್ನುವ ಕನಸು ನಾಶ ಆಗಲಿದೆ. ಅವರು ಯಾರು ಎನ್ನುವ ಬಗ್ಗೆ ಇಲ್ಲಿದೆ ವಿವರ.

ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ಅವರು ಸಾಕಷ್ಟು ಎಡವುತ್ತಿದ್ದಾರೆ. ಅವರು ಆರಂಭದಲ್ಲಿ ಸ್ಟ್ರಾಂಗ್ ಎನಿಸಿಕೊಂಡಿದ್ದರು. ಆದರೆ, ಇತ್ತೀಚೆಗೆ ಅವರು ಮೊದಲಿನ ರೀತಿ ಇಲ್ಲ. ಆರಂಭದಲ್ಲಿ ಸಂಗೀತಾ ಜೊತೆ ಇದ್ದಾಗ ಎಲ್ಲರಿಗೂ ಇಷ್ಟ ಆಗುತ್ತಿದ್ದರು. ಆದರೆ, ದಿನ ಕಳೆದಂತೆ ಅವರು ಬದಲಾದರು. ಸಂಗೀತಾ ಜೊತೆ ಮನಸ್ತಾಪ ಉಂಟಾಗಿದೆ. ಈಗ ಸಂಗೀತಾ ಅವರಿಂದ ದೂರವೇ ಇದ್ದಾರೆ. ತನಿಷಾಗೆ ಕಾರ್ತಿಕ್​ನಿಂದ ನೋವಾಗಿದೆ. ನಮ್ರತಾ ಜೊತೆ ಫ್ಲರ್ಟ್ ಮಾಡುತ್ತಿದ್ದಾರೆ. ಇದು ಅನೇಕರಿಗೆ ಇಷ್ಟ ಆಗುತ್ತಿಲ್ಲ. ಅವರಿಗೆ ಆಟದ ಮೇಲೆ ಗಮನ ಕಡಿಮೆ ಆಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಅವರು ಆಟ ಬದಲಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ತನಿಷಾ ಕುಪ್ಪಂಡ

ತನಿಷಾ ಕುಪ್ಪಂಡ ಅವರು ಆರಂಭದಲ್ಲಿ ಸಾಕಷ್ಟು ಸ್ಟ್ರಾಂಗ್ ಎನಿಸಿಕೊಂಡಿದ್ದರು. ಆದರೆ, ಈಗ ಅವರ ಆಟದ ವರಸೆ ಬದಲಾಗಿದೆ. ಅವರ ಕಾಲಿಗೆ ಏಟಾದ ಬಳಿಕ ಕೊಂಚ ಡಲ್ ಆಗಿದ್ದಾರೆ. ಅವರ ಹೆಸರು ಈ ವಾರದ ನಾಮಿನೇಷನ್ ಲಿಸ್ಟ್​ನಲ್ಲಿ ಇದೆ. ಅವರಿಗೆ ಎಲಿಮಿನೇಷನ್ ಭಯ ಕಾಡಿದೆ. ಅವರು ಮತ್ತೆ ಮೊದಲಿನ ಫಾರ್ಮ್​ಗೆ ಮರಳಬೇಕಿದೆ.

ನಮ್ರತಾ ಗೌಡ

ನಮ್ರತಾ ಗೌಡ ಅವರು ಬಿಗ್ ಬಾಸ್​ಗೆ ಬಂದಾಗ ‘ವಿನಯ್ ಚಮಚಾ’ ಎಂಬ ಕುಖ್ಯಾತಿ ಪಡೆದರು. ಆ ಬಳಿಕ ಅವರು ವಿನಯ್ ಅವರಿಂದ ಅಂತರ ಕಾಯ್ದುಕೊಂಡರು. ಅಲ್ಲಿಂದ ಅವರು ಶೈನ್ ಆಗಲು ಆರಂಭಿಸಿದರು. ಕಳೆದ ಹಲವು ವಾರಗಳಿಂದ ಅವರ ಹೆಸರು ನಾಮಿನೇಷನ್​ನಲ್ಲಿ ಇರಲಿಲ್ಲ. ಆದರೆ, ಈ ವಾರ ಅವರು ನಾಮಿನೇಟ್ ಆಗಿದ್ದಾರೆ. ಈ ಬೆನ್ನಲ್ಲೇ ಅವರು ಕಣ್ಣೀರು ಹಾಕಲು ಆರಂಭಿಸಿದ್ದಾರೆ. ‘ಈ ಮನೆಯಿಂದ ನಾನು ಹೋಗಬೇಕು’ ಎಂದು ಅತ್ತಿದ್ದಾರೆ. ಬಹುಶಃ ಅವರಿಗೆ ಎಲಿಮಿನೇಷನ್ ಭಯ ಕಾಡಿದೆ ಎನ್ನಲಾಗುತ್ತಿದೆ. ಈ ವಾರ ಹಲವು ಅವಕಾಶ ಸಿಕ್ಕರೂ ಟಾಸ್ಕ್ ಆಡಲು ಅವರ ಬಳಿ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಅವರು ಚಾರ್ಮ್ ಹೆಚ್ಚಿಸಿಕೊಳ್ಳಬೇಕಿದೆ.

ಇದನ್ನೂ ಓದಿ: ಜಗಳಕ್ಕೆ ಬಂದ ಕಾರ್ತಿಕ್​ಗೆ ಸರಿಯಾಗಿ ತಿರುಗೇಟು ಕೊಟ್ಟ ಸಂಗೀತಾ ಶೃಂಗೇರಿ

 ವಿನಯ್ ಗೌಡ

ಡ್ರೋನ್ ಪ್ರತಾಪ್ ಹೇಳಿದಂತೆ ವಿನಯ್ ಅವರ ನಾಲಿಗೆಗೆ ಲಗಾಮು ಬೀಳಬೇಕು. ಅವರು ಮಾತಿನಲ್ಲಿ ಪದೇ ಪದೇ ಎಡವುತ್ತಿದ್ದಾರೆ. ವಿನಯ್ ಗೌಡ ಅವರು ಮಾತನಾಡುವ ಭರದಲ್ಲಿ ಕೆಟ್ಟ ಪದ ಬಳಕೆ ಮಾಡುತ್ತಾರೆ. ಇದನ್ನು ಅವರು ನಿಯಂತ್ರಿಸಿಕೊಳ್ಳಬೇಕಿದೆ. ಉಳಿದ ಎಲ್ಲಾ ವಿಚಾರಗಳಲ್ಲಿ ಮಿಂಚುವ ವಿನಯ್ ಇದೊಂದು ವಿಚಾರದಿಂದ ಹಿನ್ನಡೆ ಅನುಭವಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:01 pm, Thu, 11 January 24

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?