AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಮೇಲೆ ಆಗಿದ್ದ ಭಯ ಈಗೆಲ್ಲಿ ಹೋಯ್ತು?’; ಸುದೀಪ್ ಪ್ರಶ್ನೆಗೆ ತುಕಾಲಿ ಶಾಕ್

‘ಮುಂದಿನ ಬಾರಿ ನೀವು ಇದೇ ರೀತಿ ಮಾಡಿದರೆ ನನ್ನ ಧ್ವನಿ ಇಷ್ಟು ಕೂಲ್ ಆಗಿ ಇರೋದಿಲ್ಲ, ನೆನಪಿರಲಿ. ಇದು ನಾನು ನಿಮಗೆ ಕೊಡ್ತಿರೋ ಪ್ರಾಮಿಸ್’ ಎಂದರು ಕಿಚ್ಚ. ಅವರ ಖಡಕ್ ಕ್ಲಾಸ್​ಗೆ ತುಕಾಲಿ ಸಂತೋಷ್ ಅವರು ಶಾಕ್​ಗೆ ಒಳಗಾದರು. ಅವರಿಗೆ ಮರಳಿ ಏನು ಹೇಳಬೇಕು ಎಂಬುದೇ ತಿಳಿಯಲಿಲ್ಲ.

‘ನನ್ನ ಮೇಲೆ ಆಗಿದ್ದ ಭಯ ಈಗೆಲ್ಲಿ ಹೋಯ್ತು?’; ಸುದೀಪ್ ಪ್ರಶ್ನೆಗೆ ತುಕಾಲಿ ಶಾಕ್
ತುಕಾಲಿ ಸಂತೋಷ್​, ಕಿಚ್ಚ ಸುದೀಪ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jan 07, 2024 | 11:24 AM

Share

ತುಕಾಲಿ ಸಂತೋಷ್ (Tukali Santhosh) ಅವರು ಆರಂಭದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೂ ಈಗ ಇರುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಅವರು ಹಲವು ವಿಚಾರದಲ್ಲಿ ಬದಲಾಗಿದ್ದಾರೆ. ಈ ಕಾರಣಕ್ಕೆ ಒಂದು ವರ್ಗದ ಜನರಿಗೆ ಅವರು ಇಷ್ಟ ಆಗುತ್ತಿದ್ದಾರೆ. ಮೊದಲು ಮಾತನಾಡಲು ಹಿಂಜರಿಯುತ್ತಿದ್ದರು. ಆದರೆ, ಈಗ ಹಾಗಿಲ್ಲ. ಅವರು ಅನೇಕ ವಿಚಾರಗಳ ಬಗ್ಗೆ ನಿರರ್ಗಳವಾಗಿ ಅಭಿಪ್ರಾಯ ತಿಳಿಸುತ್ತಾರೆ. ಈ ಬಗ್ಗೆ ಸುದೀಪ್ (Kichcha Sudeep) ಅವರಿಗೆ ಖುಷಿ ಇದೆ. ಇದರ ಜೊತೆಗೆ ಒಂದು ವಿಚಾರದ ಬಗ್ಗೆ ಕಿಚ್ಚ ಅಸಮಾಧಾನ ಹೊರಹಾಕಿದ್ದಾರೆ. ‘ನನ್ನನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಂಡಿದ್ದೀರಾ’ ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ.

ಸುದೀಪ್ ಅವರು ಕ್ಯಾಪ್ಟನ್ಸಿ ಬಗ್ಗೆ ಮಾತನಾಡುತ್ತಿದ್ದರು. ‘ಎಲ್ಲರೂ ಅಲ್ಲಿಗೆ ಹೋಗೋಕೆ ಇಷ್ಟ ಪಡ್ತೀರಿ. ನಾಯಕತ್ವದ ಜೊತೆ ಇಮ್ಯೂನಿಟಿ ಬರುತ್ತದೆ. ಸಾಕಷ್ಟು ಬೆನಿಫಿಟ್ ಸಿಗುತ್ತದೆ. ಇದಕ್ಕೋಸ್ಕರ ಅನೇಕ ಟಾಸ್ಕ್ ಇದೆ. ಈ ಆಟಕ್ಕಾಗಿ ಮೈ ಕೈ ಮೂಳೆ ಮುರಿದು ಕೊಳ್ತೀರಿ. ಅಲ್ಲಿಗೆ ಬಂದಮೇಲೆ ಆ ಸ್ಥಾನಕ್ಕೆ ಗೌರವ ಬೇಕು’ ಎಂದರು. ಆ ಬಳಿಕ ಸಂಗೀತಾ ಕ್ಯಾಪ್ಟನ್ಸಿ ಯಾರಿಗೆ ಇಷ್ಟ ಆಗುತ್ತಿದೆ ಎಂದು ಕೇಳಿದರು. ಈ ವೇಳೆ ತುಕಾಲಿ ಸಂತೋಷ್ ಅವರು ಕೈ ಎತ್ತಿದರು. ಅವರು ಸಂಗೀತಾನ ಹೊಗಳುವ ಭರದಲ್ಲಿ ನಮ್ರತಾ ಕ್ಯಾಪ್ಟನ್ಸಿಯನ್ನು ತೆಗಳಿದರು. ಈ ವಿಚಾರವಾಗಿ ವಾದ ವಿವಾದ ನಡೆಯಿತು.

ಯಾರೇ ಮಾತನಾಡುವಾಗ ತಮ್ಮ ಅಭಿಪ್ರಾಯ ಹೇಳಬೇಕು ಎಂದಿದ್ದವರು ಕೈ ಎತ್ತಬೇಕು. ಕೈ ಎತ್ತಿ ತಮ್ಮ ಅಭಿಪ್ರಾಯ ಏನಿದೆ ಎಂಬುದನ್ನು ತಿಳಿಸಬೇಕು. ಸಂತೋಷ್ ಹೇಳಿದ ಮಾತಿಗೆ ವಿನಯ್ ಹಾಗೂ ನಮ್ರತಾ ಉತ್ತರಿಸುತ್ತಿದ್ದರು. ಈ ವೇಳೆ ತುಕಾಲಿ ಸಂತೋಷ್ ಅವರು ಕೈ ಎತ್ತದೇ ಮಧ್ಯೆ ಮಾತನಾಡಿದರು. ಇದರಿಂದ ಸುದೀಪ್ ಸಿಟ್ಟಾದರು. ‘ಮೊದಲ ವಾರದ ಪಂಚಾಯ್ತಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಭಯ ಎನ್ನುತ್ತಿದ್ದಿರಿ. ಈಗ ಆ ಭಯ ಎಲ್ಲಿ ಹೋಯ್ತು? ನನ್ನನ್ನು ಗ್ರ್ಯಾಂಟೆಡ್ ಆಗಿ ತೆಗೆದುಕೊಂಡಿದ್ದೀರಾ’ ಎಂದು ಸುದೀಪ್ ಕೇಳಿದರು.

ಇದನ್ನೂ ಓದಿ: ‘ಇದೆಲ್ಲ ಅಲ್ಲಿದ್ದವರ ಹತ್ರ ಇಟ್ಕೊಳಿ, ನನ್ನ ಹತ್ತಿರ ಅಲ್ಲ’; ಖಡಕ್ ಎಚ್ಚರಿಕೆ ಕೊಟ್ಟ ಸುದೀಪ್

‘ಅಣ್ಣ ಗೊತ್ತಾಗಲಿಲ್ಲ, ಕ್ಷಮಿಸಿ’ ಎಂದರು ತುಕಾಲಿ ಸಂತೋಷ್​. ‘ಕ್ಷಮೆಯನ್ನು ಸ್ವೀಕರಿಸಿದ್ದೇನೆ. ಬಹುಶಃ ಇದು ಹತ್ತನೇ ಬಾರಿ ಇರಬಹುದು’ ಎಂದು ಸುದೀಪ್ ವ್ಯಂಗ್ಯವಾಗಿ ಮಾತನಾಡಿದರು. ಆ ಬಳಿಕ ತುಕಾಲಿ ಸಂತೋಷ್ ಅವರಿಗೆ ಸುದೀಪ್ ಒಂದು ಪ್ರಾಮಿಸ್ ಮಾಡಿದರು. ‘ಮುಂದಿನ ಬಾರಿ ನೀವು ಇದೇ ರೀತಿ ಮಾಡಿದರೆ ನನ್ನ ಧ್ವನಿ ಇಷ್ಟು ಕೂಲ್ ಆಗಿ ಇರೋದಿಲ್ಲ, ನೆನಪಿರಲಿ. ಇದು ನಾನು ನಿಮಗೆ ಕೊಡ್ತಿರೋ ಪ್ರಾಮಿಸ್’ ಎಂದರು ಕಿಚ್ಚ. ಅವರ ಖಡಕ್ ಕ್ಲಾಸ್​ಗೆ ತುಕಾಲಿ ಸಂತೋಷ್ ಅವರು ಶಾಕ್​ಗೆ ಒಳಗಾದರು. ಅವರಿಗೆ ಮರಳಿ ಏನು ಹೇಳಬೇಕು ಎಂಬುದೇ ತಿಳಿಯಲಿಲ್ಲ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಣೆಗೆ ಅವಕಾಶ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 11:18 am, Sun, 7 January 24

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಮೆಡಿಕಲ್ ಸೀಟ್ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರಗಳಿಗೆ ಕೊಡಿ: ಸಿಎಂ ಆಗ್ರಹ
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ಯುವ ಕಾರ್ಯಕರ್ತರು ಪೊಲೀಸ್ ವಶಕ್ಕೆ, ನಾಯಕರು ಹೋಟೆಲ್​​ಗೆ​
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ