AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜುನ ಅಪ್ಪಿ ಮಗುವಿನಂತೆ ಅತ್ತ ಮೋಕ್ಷಿತಾ; ಮಳೆಯಂತೆ ಸುರಿಯಿತು ಕಣ್ಣೀರು

ಮೋಕ್ಷಿತಾ ಪೈ ಅವರು ನಿಧಾನಕ್ಕೆ ಬದಲಾಗಿದ್ದಾರೆ. ಸ್ವಾಭಿಮಾನದ ಕಾರಣದಿಂದ ಗೌತಮಿ ಜೊತೆ ಕೈ ಜೋಡಿಸುವುದಿಲ್ಲ ಎಂದು ಹಠ ಮಾಡಿದ್ದರು. ಅವರು ಈಗ ಮಂಜು ಹಾಗೂ ಗೌತಮಿ ಜೊತೆ ಮತ್ತೆ ಆಪ್ತವಾಗಿದ್ದಾರೆ. ಉಗ್ರಂ ಮಂಜು ಕಂಡರೆ ಉರಿದುಬೀಳುತ್ತಿದ್ದ ಅವರು ಈಗ ಮಂಜು ಜೊತೆಗೆ ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಂಡಿದ್ದಾರೆ.

ಮಂಜುನ ಅಪ್ಪಿ ಮಗುವಿನಂತೆ ಅತ್ತ ಮೋಕ್ಷಿತಾ; ಮಳೆಯಂತೆ ಸುರಿಯಿತು ಕಣ್ಣೀರು
ಮಂಜು-ಮೋಕ್ಷಿತಾ
ರಾಜೇಶ್ ದುಗ್ಗುಮನೆ
|

Updated on: Jan 15, 2025 | 7:00 AM

Share

ಮಂಜು, ಮೋಕ್ಷಿತಾ ಹಾಗೂ ಗೌತಮಿ ಒಂದು ತಂಡವಾಗಿ ಆಟ ಆಡುತ್ತಿದ್ದರು. ಆದರೆ, ಈ ಆಟ ಹೆಚ್ಚು ದಿನ ಉಳಿಯಲೇ ಇಲ್ಲ. ಮೋಕ್ಷಿತಾ ಅವರು ತಮ್ಮದೇ ನಿರ್ಧಾರ ಮಾಡಿ ಇವರಿಂದ ದೂರ ಆದರು. ಮಂಜು ಸಮಯಸಾಧಕ ಎನ್ನುವ ಪಟ್ಟ ಕಟ್ಟಿದರು. ಆದರೆ, ಈಗ ಫಿನಾಲೆ ವಾರ ಬರುತ್ತಿದ್ದಂತೆ ಎಲ್ಲವೂ ಬದಲಾಗಿದೆ. ಇವರ ಮಧ್ಯೆ ಮತ್ತೆ ಎಲ್ಲವೂ ಸರಿಯಾದಂತೆ ಕಾಣಿಸಿದೆ. ಅವರು ಮಂಜು ಬಿಗಿದಪ್ಪಿ ಮಗುವಿನಂತೆ ಕಣ್ಣೀರು ಹಾಕಿದ್ದಾರೆ.

ಮೋಕ್ಷಿತಾ ಭಾವನಾತ್ಮಕ ಜೀವಿ. ಅವರು ಎಲ್ಲರ ಗೆಳೆತನಕ್ಕೆ ಬೆಲೆ ಕೊಡುತ್ತಾರೆ. ಜನವರಿ 14ರ ಟಾಸ್ಕ್​ನಲ್ಲಿ ಮೋಕ್ಷಿತಾ ಹಾಗೂ ಮಂಜು ಮಾತನಾಡುತ್ತಿದ್ದರು. ಮಂಜು ಅವರ ಮಾತನ್ನು ಕೇಳಿ ಮೋಕ್ಷಿತಾಗೆ ಅಳುವೇ ಬಂದಿದೆ. ಅವರು ಗಳಗಳನೆ ಅತ್ತಿದ್ದಾರೆ. ಮಳೆ ಹನಿಯಂತೆ ಕಣ್ಣೀರು ಬಂದಿದೆ. ಆಗ ಮಂಜು ಅವರು ಸಮಾಧಾನ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ.

‘ನಾನು ಜೀರೋ ಆಗಿಬಿಟ್ಟಿದ್ದೇನೆ. ಮೆಮೋರಿಸ್ ಹಾಕ್ಕೋತ್ತೀನಿ. ರಿಸಲ್ಟ್ ಬಗ್ಗೆ ಏನೂ ತಲೆಕೆಡಿಸಿಕೊಳ್ಳೋಕೆ ಆಗಲ್ಲ’ ಎನ್ನುತ್ತಿದ್ದಂತೆ ಮೋಕ್ಷಿತಾಗೆ ಭಯ ಆರಂಭ ಆಯಿತು. ಮಂಜು ಎಲಿಮಿನೇಟ್ ಆಗಿಬಿಟ್ಟರೆ ಅನಿಸಿತು. ಅತ್ತ ನಾಮಿನೇಟ್ ಆಗಿರುವ ಗೌತಮಿ ಅವರು ಬ್ಯಾಗ್ ತುಂಬುತ್ತಾ ಇರುವುದನ್ನು ನೋಡಿ ಮೋಕ್ಷಿತಾ ಕರುಳು ಚುರುಕ್ ಎಂದಿತು. ಇವರು ಎಲಿಮಿನೇಟ್ ಆದರೆ ಅಥವಾ ತಾವೇ ಎಲಿಮಿನೇಟ್ ಆದರೆ ಎನ್ನುವ ಭಯ ಅವರನ್ನು ಕಾಡಲು ಆರಂಭಿಸಿತು. ಹೀಗಾಗಿ, ಅವರು ಕಣ್ಣೀರು ಹಾಕೋಕೆ ಆರಂಭಿಸಿದರು. ಆಗ ಮಂಜು ಸಮಾಧಾನ ಮಾಡಿದರು. ಆ ಬಳಿಕ ಮೋಕ್ಷಿತಾ ಅವರು ಗೌತಮಿ ಬಳಿ ಬಂದು ತಮ್ಮ ದುಃಖ ತೋಡಿಕೊಂಡರು. ಗೌತಮಿ ಕೂಡ ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

ಇದನ್ನೂ ಓದಿ: ಮತ್ತೆ ಒಂದಾದ ಮಂಜು, ಮೋಕ್ಷಿತಾ, ಗೌತಮಿ; ಇದೇನು ಹೊಸ ಡ್ರಾಮಾ?

ಈ ವಾರದ ನಾಮಿನೇಷನ್​ ಲಿಸ್ಟ್​ನಲ್ಲಿ ಮೋಕ್ಷಿತಾ, ರಜತ್, ತ್ರಿವಿಕ್ರಂ, ಭವ್ಯಾ, ಗೌತಮಿ ಹಾಗೂ ಮಂಜು ಇದ್ದಾರೆ. ಇವರ ಪೈಕಿ ಒಬ್ಬರು ವಾರದ ಮಧ್ಯದಲ್ಲಿ ಹೊರ ಹೋಗಲಿದ್ದಾರೆ. ಕ್ಯಾಪ್ಟನ್ ಹನುಮಂತ ಅವರನ್ನು ಹೊರತುಪಡಿಸಿ ಒಬ್ಬರು ವೀಕೆಂಡ್​ನಲ್ಲಿ ಎಲಿಮಿನೇಟ್ ಆಗಲಿದ್ದಾರೆ. ಆ ಬಳಿಕ ಫಿನಾಲೆ ವಾರ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್