AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಶುರುವಾಯ್ತು ಶಾರ್ಕ್ ಟ್ಯಾಂಕ್, ಈ ಬಾರಿ ಹೊಸ ಉದ್ಯಮಿಗಳು: ಯಾರೀ ಕೊಟ್ಯಧಿಪತಿ?

Shark Tank 3: ಹಿಂದಿ ಟಿವಿ ಲೋಕದಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ರಿಯಾಲಿಟಿ ಶೋ 'ಶಾರ್ಕ್ ಟ್ಯಾಂಕ್ ಇಂಡಿಯಾ'. ಅಮೆರಿಕದಲ್ಲಿ ಶುರುವಾದ ಈ ಶೋ ಅನ್ನು ಭಾರತದ ಮಾದರಿದೆ ತಕ್ಕಂದೆ ಕೆಲವು ಬದಲಾವಣೆಗಳೊಂದಿಗೆ ತರಲಾಗಿದ್ದು, ಈ ಶೋನ ಮೂರನೇ ಸೀಸನ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ.

ಮತ್ತೆ ಶುರುವಾಯ್ತು ಶಾರ್ಕ್ ಟ್ಯಾಂಕ್, ಈ ಬಾರಿ ಹೊಸ ಉದ್ಯಮಿಗಳು: ಯಾರೀ ಕೊಟ್ಯಧಿಪತಿ?
ಶಾರ್ಕ್ ಟ್ಯಾಂಕ್ 3
ಮಂಜುನಾಥ ಸಿ.
|

Updated on: Oct 07, 2023 | 4:16 PM

Share

ಹಿಂದಿ ಟಿವಿ ಲೋಕದಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ರಿಯಾಲಿಟಿ ಶೋ (Realty Show) ‘ಶಾರ್ಕ್ ಟ್ಯಾಂಕ್ ಇಂಡಿಯಾ‘ (Shark Tank India). ಅಮೆರಿಕದಲ್ಲಿ ಶುರುವಾದ ಈ ಶೋ ಅನ್ನು ಭಾರತದ ಮಾದರಿದೆ ತಕ್ಕಂದೆ ಕೆಲವು ಬದಲಾವಣೆಗಳೊಂದಿಗೆ ತರಲಾಗಿದ್ದು, ಈ ಶೋನ ಮೂರನೇ ಸೀಸನ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈ ರಿಯಾಲಿಟಿ ಶೋನಲ್ಲಿ ನಿಜವಾದ ಜನಪ್ರಿಯ ಉದ್ಯಮಿಗಳು ಬಂದು, ತಮ್ಮ ಸಹಾಯ ಕೇಳಿ ಬರುವ ಯುವ ಉದ್ಯಮಿಗಳ ಐಡಿಯಾ, ಅವರ ಬ್ಯುಸಿನೆಸ್ ಅನ್ನು ಗಮನಿಸಿ ಅಳೆದು, ಆ ಯುವ ಉದ್ಯಮಿಗಳ ಉದ್ಯಮದಲ್ಲಿ ಹೂಡಿಕೆ ಮಾಡುತ್ತಾರೆ.

2021ರ ಡಿಸೆಂಬರ್​ನಲ್ಲಿ ಪ್ರಸಾರವಾಗಿದ್ದ ಶಾರ್ಕ್​ ಟ್ಯಾಂಕ್ ಇಂಡಿಯಾ ಮೊದಲ ಸೀಸನ್ ಭಾರಿ ಹಿಟ್ ಆಗಿತ್ತು. ಅದಾದ ಬಳಿಕ 2023 ರ ಜನವರಿ ತಿಂಗಳಲ್ಲಿ ಎರಡನೇ ಸೀಸನ್ ನಡೆದು ಸಾಧಾರಣ ಯಶಸ್ಸು ಕಂಡಿತು. ಇದೀಗ ಈ ಶೋನ ಮೂರನೇ ಸೀಸನ್ ಕೆಲವೇ ದಿನಗಳಲ್ಲಿ ಪ್ರಸಾರವಾಗಲಿದ್ದು, ಈ ಬಾರಿ ಹೊಸ ಉದ್ಯಮಿಗಳು ಜಡ್ಜ್​ಗಳಾಗಿ ಶೋಗೆ ಆಗಮಿಸಿದ್ದಾರೆ.

ಮೊದಲ ಸೀಸನ್​ನಲ್ಲಿ ಬೋಟ್ ಸಂಸ್ಥೆಯ ಅಮನ್ ಗುಪ್ತಾ, ಮ್ಯಾಟ್ರಿಮೋನಿ ವೆಬ್​ಸೈಟ್​ನ ಅನುಪಮ್ ಮಿತ್ತಲ್, ಭಾರತ್ ಪೇಯ ಅಶ್ನೀರ್ ಗ್ರೋವರ್, ಲೆನ್ಸ್​ಕಾರ್ಟ್​ನ ಪಿಯೂಷ್ ಗೋಯಲ್, ಶುಗರ್ ಕಾಸ್ಮೆಟಿಕ್ಸ್ ಮಾಲಕಿ ವಿನೀತಾ ಸಿಂಗ್, ಎಂಕ್ಯೂರ್ ಫಾರ್ಮಾಸುಟಿಕಲ್ಸ್​ ಸಂಸ್ಥೆಯ ನಮಿತಾ ತಾಪರ್ ಅವರುಗಳು ಪ್ರಮುಖ ಜಡ್ಜ್​ಗಳಾಗಿದ್ದರು.

ಇದನ್ನೂ ಓದಿ:‘ಶಾರ್ಕ್​ ಟ್ಯಾಂಕ್’ಗೆ ಪ್ರತಿ ಜಡ್ಜ್​​ಗಳು ಪಡೆದ ಸಂಭಾವನೆ ಎಷ್ಟು? ಇಲ್ಲಿದೆ ಅಚ್ಚರಿಯ ವಿಚಾರ

ಭಾರತ್ ಪೇಯ ಅಶ್ನೀರ್ ಗ್ರೋವರ್, ಸ್ಪರ್ಧಿಗಳೊಂದಿಗೆ ಒರಟಾಗಿ ಮಾತನಾಡಿದ್ದು ಆಗ ವಿವಾದ ಎಬ್ಬಿಸಿತ್ತು. ಬಳಿಕ ಎರಡನೇ ಸೀಸನ್​ಗೆ ಅಶ್ನೀತ್ ಗ್ರೋವರ್ ಅನ್ನು ಕೈಬಿಟ್ಟು ಕಾರ್​ದೇಖೋ ಸಂಸ್ಥೆಯ ಅಮಿತ್ ಜೈನ್ ಅವರನ್ನು ಅಶ್ನೀರ್ ಗ್ರೋವರ್ ಸ್ಥಾನಕ್ಕೆ ಶಾರ್ಕ್ ಆಗಿ ಕರೆತರಲಾಯ್ತು. ಇದೀಗ ಮೂರನೇ ಸೀಸನ್ ಶುರುವಾಗುತ್ತಿದ್ದು, ಇಬ್ಬರು ಹೊಸ ಶಾರ್ಕ್​ಗಳು ಬಂದಿದ್ದಾರೆ.

ಜೊಮಾಟೊ ಕಂಪೆನಿಯ ಸ್ಥಾಪಕ ಮತ್ತು ಸಿಇಓ ದೀಪೇಂದರ್ ಗೋಯಲ್ ಈ ಬಾರಿ ಶಾರ್ಟ್ ಟ್ಯಾಂಕ್ ಇಂಡಿಯಾ ಸೇರಿದ್ದಾರೆ. ಅವರ ಜೊತೆಗೆ ಓಯೋ ರೂಮ್ಸ್ ಸಂಸ್ಥಾಪಕ ಹಾಗೂ ಸಿಇಓ ರಿತೇಶ್ ಅಗರ್ವಾಲ್ ಸಹ ಶಾರ್ಕ್ ಟ್ಯಾಂಕ್ 3 ಸೇರಿಕೊಂಡಿದ್ದಾರೆ. ಆದರೆ ಈ ಹಿಂದಿನ ಎರಡು ಸೀಸನ್​ಗಳಲ್ಲಿ ಇದ್ದ ಎಂಕ್ಯೂರ್ ಫಾರ್ಮಾಸುಟಿಕಲ್ಸ್​ ಸಂಸ್ಥೆಯ ನಮಿತಾ ತಾಪರ್ ಮೂರನೇ ಸೀಸನ್​ನಲ್ಲಿ ಇರುವುದಿಲ್ಲ ಎನ್ನಲಾಗುತ್ತಿದೆ.

ಶಾರ್ಕ್​ ಟ್ಯಾಂಕ್ ಮೂರನೇ ಸೀಸನ್​ನ ಚಿತ್ರೀಕರಣ ಪ್ರಸ್ತುತ ಚಾಲ್ತಿಯಲ್ಲಿದ್ದು, ಹೊಸ ಶಾರ್ಕ್​ಗಳ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಿತೇಶ್ ಅಗರ್ವಾಲ್ ಹಾಗೂ ದೀಪೇಂದರ್ ಗೋಯಲ್ ಅವರುಗಳು ಇತರೆ ಶಾರ್ಕ್​ಗಳ ಜೊತೆ ಕಾಣಿಸಿಕೊಂಡಿದ್ದಾರೆ. ಓಯೋ ರೂಮ್ಸ್​ನ ಮಾಲೀಕ ರಿತೇಶ್ ಅಗರ್ವಾಲ್ ಭಾರತದ ಅತ್ಯಂತ ಯುವ ಬಿಲೇನಿಯರ್ ಎಂಬ ಹೆಸರು ಗಳಿಸಿದವರು. ಇದೀಗ ಅತ್ಯಂತ ಯುವ ಶಾರ್ಕ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?