AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕಾರ್ತಿಕ್​ ಗೆಲ್ಲಬೇಕು’: ಹಳೇ ಬೇಸರ ಮರೆತು ಸ್ನೇಹಿತನ ಪರ ಪ್ರಚಾರ ಮಾಡಿದ ತನಿಷಾ

ನಾಮಿನೇಷನ್​ ವಿಚಾರದಲ್ಲಿ ಕಾರ್ತಿಕ್​ ಮಹೇಶ್​ ಮೇಲೆ ತಮಗೆ ಇದ್ದ ಬೇಸರವನ್ನು ತನಿಷಾ ಕುಪ್ಪಂಡ ಮರೆತಿದ್ದಾರೆ. ಸ್ನೇಹಿತನ ಪರವಾಗಿ ಅವರು ಪ್ರಚಾರ ಮಾಡಿದ್ದಾರೆ. ‘ಕಾರ್ತಿಕ್​ ಅವರು ಬಿಗ್​ ಬಾಸ್​ ಮನೆಯಲ್ಲಿ ಮೊದಲ ವಾರದಿಂದ ಈವರೆಗೆ ಸತತವಾಗಿ ಶ್ರಮಪಡುತ್ತಾ ಬಂದಿದ್ದಾರೆ. ಅವರನ್ನು ವಿನ್ನರ್​ ಆಗಿ ನೋಡಬೇಕು ಅಂತ ಆಸೆಪಡುತ್ತಿದ್ದೇನೆ’ ಎಂದು ತನಿಷಾ ಹೇಳಿದ್ದಾರೆ.

‘ಕಾರ್ತಿಕ್​ ಗೆಲ್ಲಬೇಕು’: ಹಳೇ ಬೇಸರ ಮರೆತು ಸ್ನೇಹಿತನ ಪರ ಪ್ರಚಾರ ಮಾಡಿದ ತನಿಷಾ
ಕಾರ್ತಿಕ್​ ಮಹೇಶ್​, ತನಿಷಾ ಕುಪ್ಪಂಡ
ಮದನ್​ ಕುಮಾರ್​
|

Updated on: Jan 27, 2024 | 3:38 PM

Share

ನಟಿ ತನಿಷಾ ಕುಪ್ಪಂಡ (Tanisha Kuppanda) ಅವರು ಇತ್ತೀಚಿಗೆ ಬಿಗ್​ ಬಾಸ್​ನಿಂದ ಎಲಿಮಿನೇಟ್​ ಆದರು. ಮಿಡ್​ ವೀಕ್​ ಎಲಿಮಿನೇಷನ್​ ಆದ್ದರಿಂದ ಅವರಿಗೆ ತುಂಬ ಬೇಸರ ಆಯಿತು. ಅವರು ಔಟ್​ ಆಗಲು ಒಂದು ರೀತಿಯಲ್ಲಿ ಕಾರ್ತಿಕ್​ ಮಹೇಶ್​ (Karthik Mahesh) ಕಾರಣ. ಯಾಕೆಂದರೆ, ಆ ವಾರದಲ್ಲಿ ತನಿಷಾ ಅವರನ್ನು ನಾಮಿನೇಟ್​ ಮಾಡಿದ್ದು ಕಾರ್ತಿಕ್ ಒಬ್ಬರೇ. ಆ ಬಗ್ಗೆ ಅವರಿಗೆ ಬೇಸರ ಇತ್ತು. ಆದರೆ ಈಗ ಆ ಬೇಸರವನ್ನು ಮರೆತು ಕಾರ್ತಿಕ್​ಗೆ ತನಿಷಾ ಕುಪ್ಪಂಡ ಬೆಂಬಲ ನೀಡಿದ್ದಾರೆ. ಕಾರ್ತಿಕ್​ ಪರವಾಗಿ ವೋಟ್​ ಮಾಡುವಂತೆ ಬಿಗ್​ ಬಾಸ್​ (BBK 10) ಶೋನ ವೀಕ್ಷಕರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ. ಕಾರ್ತಿಕ್​ ಮಹೇಶ್​ ಅವರ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.

ಬಿಗ್​ ಬಾಸ್​ ಶೋ ಆರಂಭ ಆದಾಗ ಕಾರ್ತಿಕ್​ ಮಹೇಶ್​, ಸಂಗೀತಾ ಶೃಂಗೇರಿ ಹಾಗೂ ತನಿಷಾ ಕುಪ್ಪಂಡ ಸ್ನೇಹಿತರಾಗಿದ್ದರು. ಬಳಿಕ ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್​ ಮಹೇಶ್​ ನಡುವೆ ಬಿರುಕು ಮೂಡಿತು. ಆಗ ಕಾರ್ತಿಕ್​ ಅವರ ಜೊತೆಗೆ ನಿಂತಿದ್ದು ತನಿಷಾ ಕುಪ್ಪಂಡ. ‘ಅವಳು ನನ್ನ ಬೆಸ್ಟ್​ ಫ್ರೆಂಡ್​’ ಎಂದು ಕಾರ್ತಿಕ್ ಅವರು ತನಿಷಾ ಬಗ್ಗೆ ಅನೇಕ ಬಾರಿ ​ಹೇಳಿದ್ದರು. ಹಾಗಿದ್ದರೂ ನಾಮಿನೇಟ್​ ಮಾಡಿದ್ದರಿಂದ ತನಿಷಾಗೆ ಬೇಸರ ಆಗಿತ್ತು.

ಇದನ್ನೂ ಓದಿ: ‘ಜಗಳ ಆದ್ರೂ ಜೊತೆಗೆ ನಿಂತಿದ್ದೇವೆ’; ಗೆಳೆಯ ವಿನಯ್​ನ ಬಿಟ್ಟುಕೊಡದ ಕಾರ್ತಿಕ್​

ನಾಮಿನೇಷನ್​ ವಿಚಾರದಲ್ಲಿ ತಮಗೆ ಇದ್ದ ಬೇಸರವನ್ನು ತನಿಷಾ ಕುಪ್ಪಂಡ ಮರೆತಂತಿದೆ. ಸ್ನೇಹಿತನ ಪರವಾಗಿ ಅವರು ಪ್ರಚಾರ ಮಾಡಿದ್ದಾರೆ. ‘ಬಿಗ್​ ಬಾಸ್​ ಮನೆಯಲ್ಲಿ ಮೊದಲ ವಾರದಿಂದ ಈವರೆಗೆ ಸತತವಾಗಿ ಶ್ರಮಪಡುತ್ತಾ, ಎಲ್ಲಿಯೂ ಕುಗ್ಗದೇ ತುಂಬಾ ಚೆನ್ನಾಗಿ ಆಟ ಆಡುತ್ತಾ ಬರುತ್ತಿರುವ ಕಾರ್ತಿಕ್​ ಮಹೇಶ್​ ಅವರಿಗೆ ವೋಟ್​ ಮಾಡೋಣ. ಅವರನ್ನು ವಿನ್ನರ್​ ಆಗಿ ನೋಡಬೇಕು ಅಂತ ನಾನು ತುಂಬ ಆಸೆಪಡುತ್ತಿದ್ದೇನೆ’ ಎಂದು ತನಿಷಾ ಕುಪ್ಪಂಡ ಹೇಳಿದ್ದಾರೆ.

‘ನನಗೆ ಸಪೋರ್ಟ್​ ಮಾಡುತ್ತಿದ್ದ ಪ್ರತಿಯೊಬ್ಬ ಅಭಿಮಾನಿಗಳಲ್ಲೂ ನಾನು ಕೇಳಿಕೊಳ್ಳುತ್ತೇನೆ. ನಾವೆಲ್ಲ ವೋಟ್​ ಮಾಡಿ ಕಾರ್ತಿಕ್​ ಅವರನ್ನು ಗೆಲ್ಲಿಸೋಣ’ ಎಂದು ತನಿಷಾ ಕುಪ್ಪಂಡ ಹೇಳಿದ್ದಾರೆ. ಸಿಂಪಲ್​ ಸುನಿ, ಕಾರುಣ್ಯ ರಾಮ್​, ಅನುಪಮಾ ಗೌಡ, ಸುಂದರ್​ ವೀಣಾ, ಯಶ್​ ಶೆಟ್ಟಿ, ಅಶ್ವಿತಿ ಶೆಟ್ಟಿ, ಶೈನ್​ ಶೆಟ್ಟಿ, ನಿಧಿ ಹೆಗಡೆ, ರೂಪೇಶ್​ ಶೆಟ್ಟಿ, ಸಂಗೀತಾ, ಅಪೇಕ್ಷಾ ಪುರೋಹಿತ್​ ಮುಂತಾದವರು ಕಾರ್ತಿಕ್​ ಮಹೇಶ್​ಗೆ ಬೆಂಬಲ ಸೂಚಿಸಿದ್ದಾರೆ.

ಕಾರ್ತಿಕ್​ ಮಹೇಶ್​, ಸಂಗೀತಾ ಶೃಂಗೇರಿ, ವರ್ತೂರು ಸಂತೋಷ್​, ತುಕಾಲಿ ಸಂತೋಷ್​, ಡ್ರೋನ್​ ಪ್ರತಾಪ್​ ಹಾಗೂ ವಿನಯ್​ ಗೌಡ ಅವರು ಬಿಗ್​ ಬಾಸ್​ ಫಿನಾಲೆಗೆ ಬಂದಿದ್ದಾರೆ. ಜನವರಿ 27 ಮತ್ತು 28ರಂದು ಫಿನಾಲೆ ನಡೆಯಲಿದೆ. ಅಂತಿಮವಾಗಿ ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಬಿಗ್​ ಬಾಸ್​ ವಿನ್ನರ್​ಗೆ 50 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಒಂದು ಕಾರು ಹಾಗೂ ಎಲೆಕ್ಟ್ರಿಕ್​ ಸ್ಕೂಟರ್​ ಕೂಡ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​