Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್​ಗೆ ಇಬ್ಬರು ಅತಿಥಿಗಳು

Weekend With Ramesh: ವೀಕೆಂಡ್ ವಿತ್ ರಮೇಶ್​ ಸೀಸನ್ 5ರ ಈ ವಾರದ ಅತಿಥಿಗಳಾಗಿ ಒಬ್ಬರು ಸಿನಿಮಾ ಕ್ಷೇತ್ರದವರು ಹಾಗೂ ಮತ್ತೊಬ್ಬರು ಬಹುಮುಖ ಪ್ರತಿಭೆ ಆಗಮಿಸಲಿದ್ದಾರೆ.

Weekend With Ramesh: ಈ ವಾರ ವೀಕೆಂಡ್ ವಿತ್ ರಮೇಶ್​ಗೆ ಇಬ್ಬರು ಅತಿಥಿಗಳು
ವೀಕೆಂಡ್ ವಿತ್ ರಮೇಶ್
Follow us
ಮಂಜುನಾಥ ಸಿ.
|

Updated on:May 09, 2023 | 4:21 PM

ವೀಕೆಂಡ್ ವಿತ್ ರಮೇಶ್ (Weekend With Ramesh) ಸೀಸನ್ 5 ಯಶಸ್ವಿಯಾಗಿ ಟೆಲಿಕಾಸ್ಟ್ ಆಗುತ್ತಿದೆ. ಈಗಾಗಲೇ ಹಲವು ಮಂದಿ ಸಾಧಕರು ವೀಕೆಂಡ್ ವಿತ್ ರಮೇಶ್​ನ ಸಾಧಕರ ಕುರ್ಚಿ ಏರಿದ್ದಾರೆ. ಇದೀಗ ಮತ್ತೊಂದು ವೀಕೆಂಡ್ ಬರಲಿದ್ದು ಈ ಬಾರಿ ಸಾಧಕರ ಕುರ್ಚಿ ಏರಲಿರುವ ಅತಿಥಿಗಳು ಯಾರು ಎಂಬ ಕುತೂಹಲ ಮನೆ ಮಾಡಿದೆ. ಅಂದಹಾಗೆ ಈ ವಾರ ಒಬ್ಬರು ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದವರಾದರೆ ಮತ್ತೊಬ್ಬರು ವೈದ್ಯಕೀಯ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದವರಾಗಿದ್ದಾರೆ.

ಕಳೆದ ವಾರ ಲವ್ಲಿ ಸ್ಟಾರ್ ಪ್ರೇಮ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಶನಿವಾರ ಹಾಗೂ ಭಾನುವಾರ ಎರಡೂ ದಿನ ಅವರದ್ದೇ ಎಪಿಸೋಡ್ ನಡೆದಿತ್ತು. ಇದೀಗ ಈ ವೀಕೆಂಡ್​ಗೆ ಇಬ್ಬರು ಅತಿಥಿಗಳು ಶೋಗೆ ಆಗಮಿಸಲಿದ್ದು ಶನಿವಾರ ಒಬ್ಬರು ಭಾನುವಾರ ಒಬ್ಬರು ಸಾಧಕರು ಸಾಧಕರ ಕುರ್ಚಿ ಏರಲಿದ್ದಾರೆ.

ಶನಿವಾರದ ಎಪಿಸೋಡ್​ಗೆ ಜನಪ್ರಿಯ ಡ್ಯಾನ್ಸ್ ಕೊರಿಯೋಗ್ರಫರ್ ಆಗಿರುವ ಚಿನ್ನಿ ಪ್ರಕಾಶ್ ಮಾಸ್ಟರ್ ಆಗಮಿಸಲಿದ್ದರೆ, ಭಾನುವಾರದ ಎಪಿಸೋಡ್​ಗೆ ವೈದ್ಯ, ಲೇಖಕ, ಥಟ್ ಅಂತ ಹೇಳಿ ಕಾರ್ಯಕ್ರಮದ ನಿರೂಪಕ ನಾ ಸೋಮೇಶ್ವರ್ ಆಗಮಿಸಲಿದ್ದಾರೆ. ಇವರಿಬ್ಬರ ಕಾರ್ಯಕ್ರಮದ ಪ್ರೋಮೊಗಳನ್ನು ಜೀ ಕನ್ನಡ ವಾಹಿನಿ ಈಗಾಗಲೇ ಪ್ರಸಾರ ಮಾಡುತ್ತಿದೆ. ಚಿನ್ನ ಪ್ರಕಾಶ್ ಮಾಸ್ಟರ್ ಅವರ ಸಿನಿ ಜೀವನದ ಜರ್ನಿ, ಅಮಿತಾಬ್ ಬಚ್ಚನ್ ಸೇರಿದಂತೆ ಬಾಲಿವುಡ್​ನ ಹಲವು ದಿಗ್ಗಜರು, ಕನ್ನಡದಲ್ಲಿ ರವಿಚಂದ್ರನ್, ವಿಷ್ಣುವರ್ಧನ್ ಇನ್ನೂ ಹಲವು ತಾರೆಯರಿಗೆ ಡ್ಯಾನ್ಸ್ ಹೇಳಿಕೊಟ್ಟಿದ್ದನ್ನು ನೆನಪು ಮಾಡಿಕೊಂಡಿದ್ದಾರೆ. ಚಿನ್ನ ಮಾಸ್ಟರ್​ಗಾಗಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಖ್ಯಾತ ತಾರೆಯರು ವಿಶೇಷ ವಿಡಿಯೋ ಕಳುಹಿಸಿದ್ದಾರೆ.

ಶೋನಲ್ಲಿ ಚಿನ್ನಿ ಮಾಸ್ಟರ್ ಪತ್ನಿ ಸಹ ಭಾಗವಹಿಸಿದ್ದು ಇಬ್ಬರೂ ಸಹ ಹಾಡುಗಳಿಗೆ ನರ್ತಿಸಿ ಪ್ರೇಕ್ಷಕರಿಗೆ ನೃತ್ಯ ರಸದೌತಣ ನೀಡಿದ್ದಾರೆ. ಚಿನ್ನಿ ಮಾಸ್ಟರ್ ಪತ್ನಿ ತಾರಾ ಸಹ ಅದ್ಭುತ ನೃತ್ಯಗಾರ್ತಿ. ಮಾಧುರಿ ದೀಕ್ಷಿತ್ ಸೇರಿದಂತೆ ಹಲವು ನಟಿಯರಿಗೆ ಅವರು ನೃತ್ಯ ತಾಲೀಮು ಮಾಡಿಸಿದ್ದಾರೆ.

ಇನ್ನು ನಾ ಸೋಮೇಶ್ವರ್ ಅವರು ತಮ್ಮ ಬಾಲ್ಯ, ಶಿಕ್ಷಣ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾ ವೀಕೆಂಡ್ ವಿತ್ ರಮೇಶ್​ ವೇದಿಕೆಯ ಮೇಲೆಯೇ ಥಟ್ ಅಂತ ಹೇಳಿ ಕಾರ್ಯಕ್ರಮ ನಡೆಸಿದ್ದಾರೆ. ಅಲ್ಲದೆ ಶೋಗೆ ಆಗಮಿಸಿದ ಅವರ ಗುರುಗಳ ಪಾದಗಳಿಗೆ ವೇದಿಕೆ ಮೇಲೆ ನಮಿಸಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ನಾ ಸೋಮೇಶ್ವರರು ಮಾಡುತ್ತಿರುವ ಕನ್ನಡ ಕೆಲಸಕ್ಕೆ ಭಾರಿ ಪ್ರಶಂಸೆಯನ್ನು ಶೋಗೆ ಬಂದ ಅತಿಥಿಗಳು ವ್ಯಕ್ತಪಡಿಸಿದ್ದಾರೆ.

ವೀಕೆಂಡ್ ವಿತ್ ರಮೇಶ್ ಸೀಸನ್ 5 ರಲ್ಲಿ ಈವರೆಗೆ ಹಲವು ಜನಪ್ರಿಯ ಸೆಲೆಬ್ರಿಟಿಗಳು ಸಾಧಕರ ಕುರ್ಚಿ ಏರಿದ್ದಾರೆ. ನಟಿ ರಮ್ಯಾ, ಪ್ರಭುದೇವ, ಹೃದ್ರೋಗ ತಜ್ಞ ಮಂಜುನಾಥ, ಮಂಡ್ಯ ರಮೇಶ್, ಅವಿನಾಶ್, ಗುರುರಾಜ ಕರಜಗಿ, ಸಿಹಿ-ಕಹಿ ಚಂದ್ರು ಇನ್ನೂ ಹಲವು ಸಾಧಕರು ಈ ಬಾರಿ ಸಾಧಕರ ಕುರ್ಚಿ ಏರಿದ್ದು, ನೂರನೇ ಎಪಿಸೋಡ್​ಗೆ ವಿಶೇಷ ಅತಿಥಿಯನ್ನು ಕರೆತರಲಿದ್ದಾರಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Tue, 9 May 23

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ