AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಾಪ್​ಗೆ ಕಾಗೆ ಅಂದಿದ್ದ ಈಶಾನಿಗೆ ಕಿಚ್ಚನ ಕ್ಲಾಸ್​? ಎಲಿಮಿನೇಟ್​ ಬಳಿಕವೂ ಕಿರಿಕ್​

ಬಿಗ್​ ಬಾಸ್ ಮನೆಯಲ್ಲಿ ಈ ವಾರ ಒಂದು ಮಹತ್ವದ ಸಂಗತಿ ಜರುಗಿತು. ಈಗಾಗಲೇ ಎಲಿಮಿನೇಟ್​ ಆಗಿರುವ ಮೈಕಲ್​ ಅಜಯ್​, ಸ್ನೇಹಿತ್​ ಗೌಡ, ಈಶಾನಿ, ರಕ್ಷಕ್​ ಮುಂತಾದವರು ಮತ್ತೆ ದೊಡ್ಮನೆಯೊಳಗೆ ಕಾಲಿಟ್ಟಿದ್ದರು. ಈ ವೇಳೆ ಈಶಾನಿ ಆಡಿದ ಮಾತುಗಳಿಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಡ್ರೋನ್​ ಪ್ರತಾಪ್​ ಅವರನ್ನು ಕಾಗೆ ಎಂದು ಈಶಾನಿ ಹೇಳಿದ್ದಾರೆ.

ಪ್ರತಾಪ್​ಗೆ ಕಾಗೆ ಅಂದಿದ್ದ ಈಶಾನಿಗೆ ಕಿಚ್ಚನ ಕ್ಲಾಸ್​? ಎಲಿಮಿನೇಟ್​ ಬಳಿಕವೂ ಕಿರಿಕ್​
ಡ್ರೋನ್​ ಪ್ರತಾಪ್​, ಈಶಾನಿ, ಸುದೀಪ್​
ಮದನ್​ ಕುಮಾರ್​
|

Updated on: Jan 20, 2024 | 3:58 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಈಗ ಅಂತಿಮ ಘಟ್ಟವನ್ನು ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ ಫಿನಾಲೆ ನಡೆಯಲಿದೆ. ಜನವರಿ 27 ಮತ್ತು 28ರಂದು ಅದ್ದೂರಿಯಾಗಿ ಬಿಗ್​ ಬಾಸ್​ ಫಿನಾಲೆ (Bigg Boss Kannada Finale) ಪ್ರಸಾರ ಆಗಲಿದೆ. ಕಿಚ್ಚ ಸುದೀಪ್​ ಅವರು ಇಂದು (ಜನವರಿ 20) ಈ ಸೀಸನ್​ನ ಕೊನೇ ಪಂಚಾಯ್ತಿ ನಡೆಸಲಿದ್ದಾರೆ. ಬಿಗ್​ ಬಾಸ್ ಮನೆಯಲ್ಲಿ ಇರುವವರ ತಪ್ಪು ಮಾಡಿದರೆ ಸುದೀಪ್ (Kichcha Sudeep)​ ಕ್ಲಾಸ್​ ತೆಗೆದುಕೊಳ್ಳುತ್ತಾರೆ. ಅದು ಸಹಜ. ಆದರೆ ಎಲಿಮಿನೇಟ್ ಆಗಿ ಹೋದವರು ತಪ್ಪು ಮಾಡಿದರೆ? ಅಂಥವರ ಬಗ್ಗೆ ಸುದೀಪ್​ ಮಾತನಾಡಿದ್ದು ಕಡಿಮೆ. ಆದರೆ ಈ ವಾರ ಅವರು ಆ ಬಗ್ಗೆ ಮಾತನಾಡುವ ಸಾಧ್ಯತೆ ಇದೆ. ಅದಕ್ಕೆ ಕಾರಣ ಆಗಿರುವುದು ಈಶಾನಿ (Eshani) ನೀಡಿದ ಕೆಲವು ಹೇಳಿಕೆಗಳು!

ಬಿಗ್​ ಬಾಸ್ ಮನೆಯಲ್ಲಿ ಈ ವಾರ ಕೆಲವು ಮಹತ್ವದ ಸಂಗತಿಗಳು ಜರುಗಿದವು. ಈಗಾಗಲೇ ಎಲಿಮಿನೇಟ್​ ಆಗಿ ಹೊರಗೆ ಹೊಗಿರುವ ಮೈಕೆಲ್​ ಅಜಯ್​, ಸ್ನೇಹಿತ್​ ಗೌಡ, ಈಶಾನಿ, ರಕ್ಷಕ್​, ಸಿರಿ ಮುಂತಾದವರು ಮತ್ತೆ ದೊಡ್ಮನೆಯೊಳಗೆ ಕಾಲಿಟ್ಟಿದ್ದರು. ಈ ವೇಳೆ ಈಶಾನಿ ಆಡಿದ ಮಾತುಗಳಿಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಡ್ರೋನ್​ ಪ್ರತಾಪ್​ ಅವರನ್ನು ಕಾಗೆ ಎಂದು ಈಶಾನಿ ಹೇಳಿದ್ದಾರೆ. ಇದರ ಬಗ್ಗೆ ವಾರದ ಪಂಚಾಯ್ತಿಯಲ್ಲಿ ಸುದೀಪ್​ ಪ್ರಸ್ತಾಪ ಮಾಡುತ್ತಾರೆ ಎಂಬುದಕ್ಕೆ ಈಗ ಸುಳಿವು ಸಿಕ್ಕಿದೆ.

ವಿರೋಧದ ಬಳಿಕ ಸುದೀಪ್ ಹಾಗೂ ಅವರ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ರಕ್ಷಕ್

‘ಕಲರ್ಸ್​ ಕನ್ನಡ’ ವಾಹಿನಿ ಹಂಚಿಕೊಂಡ ಪ್ರೋಮೋನಲ್ಲಿ ಸುದೀಪ್​ ಅವರು ಈ ಬಗ್ಗೆ ಮಾತಾಡಿದ್ದಾರೆ. ‘ಈ ವಾರ ಮನೆಗೆ ಹಳೇ ಗೆಳೆಯರು ವಾಪಸ್​ ಬಂದರು. ಅವರು ಹೊಸ ಉತ್ಸಾಹ ತಂದ್ರಾ ಅಥವಾ ಇರುವ ಉತ್ಸಾಹವನ್ನು ಹಾಳುಮಾಡಿ ಹೋದ್ರಾ’ ಎಂದು ಸುದೀಪ್​ ಪ್ರಶ್ನೆ ಮಾಡಿದ್ದಾರೆ. ಈ ಸೀಸನ್​ನ ಕೊನೇ ಪಂಚಾಯ್ತಿಯಲ್ಲಿ ಈ ಎಲ್ಲ ವಿಷಯಗಳು ಪ್ರಸ್ತಾಪ ಆಗಲಿವೆ. ಜನವರಿ 20ರಂದು ಈ ಸಂಚಿಕೆ ‘ಕಲರ್ಸ್​ ಕನ್ನಡ’ ಮತ್ತು ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಪ್ರಸಾರ ಆಗಲಿದೆ.

ಈಶಾನಿ ಹೇಳಿದ್ದು ಏನು?

‘ಕಾಗೆ ಕಕ್ಕ ಮಾಡಿ ಎಲ್ಲ ಕಡೆ ಹೋಗುತ್ತಲೇ ಇದೆ. ಸಿಂಪಥಿ ಕಾರ್ಡ್​ ಬಳಕೆ ಮಾಡಿ’ ಎಂದು ಈಶಾನಿ ಹೇಳಿದ್ದರು. ಎಲಿಮಿನೇಟ್​ ಆದ ಬಳಿಕ ಅತಿಥಿಯಾಗಿ ಬಿಗ್​ ಬಾಸ್​ ಮನೆಯೊಳಗೆ ಕಾಲಿಡುವ ಅವಕಾಶ ಈಶಾನಿಗೆ ಸಿಕ್ಕಿತು. ಅತಿಥಿಯಾಗಿ ಬಂದ ಅವರು ಇಷ್ಟೆಲ್ಲ ಖಾರವಾಗಿ ಮಾತನಾಡುವ ಅವಶ್ಯಕತೆ ಇರಲಿಲ್ಲ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ. ಈಶಾನಿ ಅವರ ಮಾತುಗಳ ಬಗ್ಗೆ ಸುದೀಪ್​ ಕ್ಲಾಸ್​ ತೆಗೆದುಕೊಳ್ಳುತ್ತಾರಾ ಎಂಬುದನ್ನು ತಿಳಿಯಲು ಜ.20ರ ಸಂಚಿಕೆ ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ