AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮೆಡಿಕಲ್ ಎಮರ್ಜೆನ್ಸಿ ವೇಳೆ ಸೇವೆ ನೀಡಲು ಬಂತು ಡ್ರೋನ್​; ಏರ್​ಬಾಂಡ್​​ ಸಂಸ್ಥೆಯಿಂದ ಆವಿಷ್ಕಾರ

ಮೆಡಿಕಲ್ ಎಮರ್ಜೆನ್ಸಿ ವೇಳೆ ಸೇವೆ ನೀಡಲು ನೆರವಾಗಬಲ್ಲ ಡ್ರೋನ್​ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಏರ್​ಬಾಂಡ್​​ ಸಂಸ್ಥೆ ಪರಿಚಯಿಸಿದೆ. ನೂತನ ಮಾದರಿಯ ಡ್ರೋನ್​ಗಳ ಹಾರಾಟ ಪರೀಕ್ಷೆಯೂ ಯಶಸ್ವಿಯಾಗಿದ್ದು, ಸುಮಾರು 1 ಕೆ.ಜಿ.ಯಷ್ಟು ಭಾರವಿರುವ ಪರಿಕರಗಳನ್ನು ಹೊತ್ತು ಸಾಗಬಲ್ಲ ಸಾಮರ್ಥ್ಯ ಇವುಗಳಿಗಿವೆ.

ಬೆಂಗಳೂರು: ಮೆಡಿಕಲ್ ಎಮರ್ಜೆನ್ಸಿ ವೇಳೆ ಸೇವೆ ನೀಡಲು ಬಂತು ಡ್ರೋನ್​; ಏರ್​ಬಾಂಡ್​​ ಸಂಸ್ಥೆಯಿಂದ ಆವಿಷ್ಕಾರ
ಡ್ರೋನ್​
ನವೀನ್ ಕುಮಾರ್ ಟಿ
| Edited By: |

Updated on:Oct 14, 2025 | 4:08 PM

Share

ಬೆಂಗಳೂರು, ಅಕ್ಟೋಬರ್​ 14: ತುರ್ತು ಸಂದರ್ಭದಲ್ಲಿ ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಸಾಮಗ್ರಿಗಳು, ಔಷಧ ಅತ್ಯಗತ್ಯ. ಆದರೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿನ ಟ್ರಾಫಿಕ್​ ಸಮಸ್ಯೆಯಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿ ಇದ್ದಾರೆ. ಈ ವಿಷಯವನ್ನ ಗಮನದಲ್ಲಿರಿಸಿ ಏರ್​ ಬಾಂಡ್​​​ ಸಂಸ್ಥೆ ತುರ್ತು ಸಂದರ್ಭ ಮೆಡಿಕಲ್​ ಉಪಕರಣಗಳನ್ನು ಸಾಗಿಸಬಲ್ಲ ಡ್ರೋನ್ ಆವಿಷ್ಕಾರ ಮಾಡಿದೆ. ರಕ್ತ ಸೇರಿದಂತೆ ಇತರೆ ಮೆಡಿಕಲ್ ಪರಿಕರಗಳು ಸಾಗಿಸಲು ಈ ಡ್ರೋನ್​ ನೆರವಾಗಲಿದೆ.

ಡ್ರೋನ್​ ಕಾರ್ಯನಿರ್ವಹಣೆ ಹೇಗೆ?

ಏರ್​ಬಾಂಡ್​​ ಮತ್ತು ನಾರಾಯಣ್ ಹೆಲ್ತ್ ಸಹಯೋಗದೊಂದಿಗೆ ಈ ಡ್ರೋನ್​ ಸೇವೆ ಸಿಗಲಿದ್ದು, ಗಂಟೆಗೆ 60 ಕಿ.ಮೀ. ವೇಗ ಮತ್ತು 400 ಮೀಟರ್ ಎತ್ತರದಲ್ಲಿ ಹಾರುವ ಸಾಮರ್ಥ್ಯವನ್ನು ಇದು ಹೊಂದಿದೆ. 2.5 ಕೆ.ಜಿ. ತೂಕವಿರುವ ಈ ಡ್ರೋನ್​, ಸುಮಾರು 1 ಕೆ.ಜಿ.ಯಷ್ಟು ಭಾರವಿರುವ ಪರಿಕರಗಳನ್ನು ಹೊತ್ತು ಸಾಗಬಹುದಾಗಿದೆ. ಸಾಗಾಟದ ವೇಳೆ ಮಳೆ, ಗಾಳಿ, ಬಿಸಿಲು ಸೇರಿ ಯಾವುದೇ ರೀತಿಯ ವಾತಾವರಣ ಇದ್ದರೂ ವೈದ್ಯಕೀಯ ಪರಿಕರಗಳಿಗೆ ಯಾವುದೇ ಹಾನಿ ಆಗದ ರೀತಿಯಲ್ಲಿ ಡ್ರೋನ್​ ವಿನ್ಯಾಸಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಏರ್​ಬಾಂಡ್​​ ಸಂಸ್ಥೆ ಸಿಬ್ಬಂದಿ ಈಗಾಗಲೇ ಪ್ರಾಯೋಗಿಕವಾಗಿ 5 ಡ್ರೋನ್​ಗಳ ಯಶಸ್ವಿ ಹಾರಾಟ ನಡೆಸಿದ್ದಾರೆ. ಇವು ಹೊಸಕೋಟೆಯಲ್ಲೇ ನಿರ್ಮಾಣಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆವಿಷ್ಕಾರಗಳ ಮೂಲಕ ಹೆಚ್ಚು ಡ್ರೋನ್​ ಗಳ ನಿರ್ಮಾಣದ ಗುರಿಯನ್ನು ಸಂಸ್ಥೆ ಹೊಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:08 pm, Tue, 14 October 25

Follow Us
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ