AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಮೆಡಿಕಲ್ ಎಮರ್ಜೆನ್ಸಿ ವೇಳೆ ಸೇವೆ ನೀಡಲು ಬಂತು ಡ್ರೋನ್​; ಏರ್​ಬಾಂಡ್​​ ಸಂಸ್ಥೆಯಿಂದ ಆವಿಷ್ಕಾರ

ಮೆಡಿಕಲ್ ಎಮರ್ಜೆನ್ಸಿ ವೇಳೆ ಸೇವೆ ನೀಡಲು ನೆರವಾಗಬಲ್ಲ ಡ್ರೋನ್​ಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಏರ್​ಬಾಂಡ್​​ ಸಂಸ್ಥೆ ಪರಿಚಯಿಸಿದೆ. ನೂತನ ಮಾದರಿಯ ಡ್ರೋನ್​ಗಳ ಹಾರಾಟ ಪರೀಕ್ಷೆಯೂ ಯಶಸ್ವಿಯಾಗಿದ್ದು, ಸುಮಾರು 1 ಕೆ.ಜಿ.ಯಷ್ಟು ಭಾರವಿರುವ ಪರಿಕರಗಳನ್ನು ಹೊತ್ತು ಸಾಗಬಲ್ಲ ಸಾಮರ್ಥ್ಯ ಇವುಗಳಿಗಿವೆ.

ಬೆಂಗಳೂರು: ಮೆಡಿಕಲ್ ಎಮರ್ಜೆನ್ಸಿ ವೇಳೆ ಸೇವೆ ನೀಡಲು ಬಂತು ಡ್ರೋನ್​; ಏರ್​ಬಾಂಡ್​​ ಸಂಸ್ಥೆಯಿಂದ ಆವಿಷ್ಕಾರ
ಡ್ರೋನ್​
ನವೀನ್ ಕುಮಾರ್ ಟಿ
| Edited By: |

Updated on:Oct 14, 2025 | 4:08 PM

Share

ಬೆಂಗಳೂರು, ಅಕ್ಟೋಬರ್​ 14: ತುರ್ತು ಸಂದರ್ಭದಲ್ಲಿ ರೋಗಿಗಳ ಚಿಕಿತ್ಸೆಗೆ ವೈದ್ಯಕೀಯ ಸಾಮಗ್ರಿಗಳು, ಔಷಧ ಅತ್ಯಗತ್ಯ. ಆದರೆ ರಾಜ್ಯ ರಾಜಧಾನಿ ಬೆಂಗಳೂರಲ್ಲಿನ ಟ್ರಾಫಿಕ್​ ಸಮಸ್ಯೆಯಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಜೀವ ಕಳೆದುಕೊಂಡವರು ಅದೆಷ್ಟೋ ಮಂದಿ ಇದ್ದಾರೆ. ಈ ವಿಷಯವನ್ನ ಗಮನದಲ್ಲಿರಿಸಿ ಏರ್​ ಬಾಂಡ್​​​ ಸಂಸ್ಥೆ ತುರ್ತು ಸಂದರ್ಭ ಮೆಡಿಕಲ್​ ಉಪಕರಣಗಳನ್ನು ಸಾಗಿಸಬಲ್ಲ ಡ್ರೋನ್ ಆವಿಷ್ಕಾರ ಮಾಡಿದೆ. ರಕ್ತ ಸೇರಿದಂತೆ ಇತರೆ ಮೆಡಿಕಲ್ ಪರಿಕರಗಳು ಸಾಗಿಸಲು ಈ ಡ್ರೋನ್​ ನೆರವಾಗಲಿದೆ.

ಡ್ರೋನ್​ ಕಾರ್ಯನಿರ್ವಹಣೆ ಹೇಗೆ?

ಏರ್​ಬಾಂಡ್​​ ಮತ್ತು ನಾರಾಯಣ್ ಹೆಲ್ತ್ ಸಹಯೋಗದೊಂದಿಗೆ ಈ ಡ್ರೋನ್​ ಸೇವೆ ಸಿಗಲಿದ್ದು, ಗಂಟೆಗೆ 60 ಕಿ.ಮೀ. ವೇಗ ಮತ್ತು 400 ಮೀಟರ್ ಎತ್ತರದಲ್ಲಿ ಹಾರುವ ಸಾಮರ್ಥ್ಯವನ್ನು ಇದು ಹೊಂದಿದೆ. 2.5 ಕೆ.ಜಿ. ತೂಕವಿರುವ ಈ ಡ್ರೋನ್​, ಸುಮಾರು 1 ಕೆ.ಜಿ.ಯಷ್ಟು ಭಾರವಿರುವ ಪರಿಕರಗಳನ್ನು ಹೊತ್ತು ಸಾಗಬಹುದಾಗಿದೆ. ಸಾಗಾಟದ ವೇಳೆ ಮಳೆ, ಗಾಳಿ, ಬಿಸಿಲು ಸೇರಿ ಯಾವುದೇ ರೀತಿಯ ವಾತಾವರಣ ಇದ್ದರೂ ವೈದ್ಯಕೀಯ ಪರಿಕರಗಳಿಗೆ ಯಾವುದೇ ಹಾನಿ ಆಗದ ರೀತಿಯಲ್ಲಿ ಡ್ರೋನ್​ ವಿನ್ಯಾಸಗೊಳಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿಯ ಏರ್​ಬಾಂಡ್​​ ಸಂಸ್ಥೆ ಸಿಬ್ಬಂದಿ ಈಗಾಗಲೇ ಪ್ರಾಯೋಗಿಕವಾಗಿ 5 ಡ್ರೋನ್​ಗಳ ಯಶಸ್ವಿ ಹಾರಾಟ ನಡೆಸಿದ್ದಾರೆ. ಇವು ಹೊಸಕೋಟೆಯಲ್ಲೇ ನಿರ್ಮಾಣಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆವಿಷ್ಕಾರಗಳ ಮೂಲಕ ಹೆಚ್ಚು ಡ್ರೋನ್​ ಗಳ ನಿರ್ಮಾಣದ ಗುರಿಯನ್ನು ಸಂಸ್ಥೆ ಹೊಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:08 pm, Tue, 14 October 25

Follow Us
Naveen Kumar
Naveen Kumar

ನವೀನ್ ಕುಮಾರ್ ಟಿ ಎಂಬ ನಾನು ಮೂಲತಃಹ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ನಮ್ಮ ಹೆಮ್ಮೆಯ ಟಿವಿನೈನ್ ನ ದೇವನಹಳ್ಳಿ ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ನಾನು ಪದವಿ ಮುಗಿಯುತ್ತಿದ್ದಂತೆ ಟಿವಿನೈನ್ ನಲ್ಲಿ ವರದಿಗಾರನಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದೇನೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಉದ್ದೇಯನ್ನ ಪಡೆದು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡ್ತಿದ್ದೀನಿ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಾ ಬಂದಿದ್ದೇನೆ.

Read More