AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಯಾಗಿ ಟಿವಿ ನೋಡ್ತೀರಾ?: ನಿಮ್ಮ ಮೆದುಳು ಕುಗ್ಗಬಹುದು ಹುಷಾರ್!; ಸಂಶೋಧನೆಯಲ್ಲಿ ಬೆಚ್ಚಿಬೀಳಿಸುವ ಸತ್ಯ

ಮಧ್ಯವಯಸ್ಸಿನಲ್ಲಿ ಅತಿಯಾದ ಟಿವಿ ವೀಕ್ಷಣೆ ಮೆದುಳಿನ ಆರೋಗ್ಯಕ್ಕೆ ಮಾರಕ. ಹೊಸ ಅಧ್ಯಯನದ ಪ್ರಕಾರ, ಇದು ಸ್ಮರಣಶಕ್ತಿ, ಕಲಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಮೆದುಳಿನ ಭಾಗಗಳನ್ನು ಕುಗ್ಗಿಸುತ್ತದೆ. ಕೇವಲ ಕುಳಿತುಕೊಳ್ಳುವುದಕ್ಕಿಂತ, ಮಾನಸಿಕ ಶ್ರಮವಿಲ್ಲದ 'ನಿಷ್ಕ್ರಿಯ ಸ್ಕ್ರೀನ್ ಟೈಮ್' ಹೆಚ್ಚು ಅಪಾಯಕಾರಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಮೆದುಳನ್ನು ಸಕ್ರಿಯವಾಗಿಡಲು ಓದುವಿಕೆ, ವ್ಯಾಯಾಮ ಮತ್ತು ಸಾಮಾಜಿಕ ಸಂವಹನ ಅಗತ್ಯ. ಮೆದುಳಿನ ಆರೋಗ್ಯ ಕಾಪಾಡಲು ಇದು ನಿರ್ಣಾಯಕ.

ಅತಿಯಾಗಿ ಟಿವಿ ನೋಡ್ತೀರಾ?: ನಿಮ್ಮ ಮೆದುಳು ಕುಗ್ಗಬಹುದು ಹುಷಾರ್!; ಸಂಶೋಧನೆಯಲ್ಲಿ ಬೆಚ್ಚಿಬೀಳಿಸುವ ಸತ್ಯ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 22, 2026 | 10:08 PM

Share

ಬೆಂಗಳೂರು, ಜು.22: ಹೆಚ್ಚು ಟಿವಿ ನೋಡಬೇಡ, ಮೆದುಳು ಹಾಳಾಗುತ್ತದೆ ಎಂದು ಹಿರಿಯರು ಹೇಳುತ್ತಿದ್ದ ಮಾತುಗಳನ್ನು ನಾವು ಇದುವರೆಗೆ ಕೇವಲ ತಮಾಷೆ ಅಥವಾ ಅತಿಯಾದ ಎಚ್ಚರಿಕೆ ಎಂದು ತಳ್ಳಿಹಾಕುತ್ತಿದ್ದೆವು. ಆದರೆ, ಈ ಹಳೆಯ ಮಾತಿನಲ್ಲಿ ನಿಜವಾದ ಸತ್ಯಾಂಶವಿದೆ ಎಂಬುದನ್ನು ವಿಜ್ಞಾನಿಗಳು ಈಗ ಕಂಡುಕೊಂಡಿದ್ದಾರೆ!

ಮಧ್ಯ ವಯಸ್ಸಿನಲ್ಲಿ ಅತಿಯಾಗಿ ಟಿವಿ ನೋಡುವ ಅಭ್ಯಾಸವು ವಯಸ್ಸಾದಂತೆ ನೆನಪಿನ ಶಕ್ತಿ, ಕಲಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ನಿಯಂತ್ರಿಸುವ ಮೆದುಳಿನ ಭಾಗಗಳನ್ನು ಕುಗ್ಗಿಸುತ್ತದೆ ಎಂದು ಹೊಸ ವೈಜ್ಞಾನಿಕ ಅಧ್ಯಯನವೊಂದು ಎಚ್ಚರಿಸಿದೆ.

ಈ ಬಗ್ಗೆ ಅಧ್ಯಯನ ಹೇಳುವುದೇನು?:

ಈ ವಿಚಾರದ ಬಗ್ಗೆ’ಆಲ್ಝೈಮರ್ಸ್ ಆಂಡ್ ಡಿಮೆನ್ಷಿಯಾ’ಎಂಬ ಜಾಗತಿಕ ನಿಯತಕಾಲಿಕೆಯಲ್ಲಿ ಈ ಅಧ್ಯಯನ ಪ್ರಕಟವಾಗಿದೆ. ಸಂಶೋಧಕರು ಮಧ್ಯವಯಸ್ಸಿನ ಸುಮಾರು 1,700 ವ್ಯಕ್ತಿಗಳ ಟಿವಿ ನೋಡುವ ಅಭ್ಯಾಸಗಳನ್ನು ವಿಶ್ಲೇಷಿಸಿ, 20 ವರ್ಷಗಳ ನಂತರ ಅವರ ಮೆದುಳಿನ MRI ಸ್ಕ್ಯಾನ್‌ಗಳನ್ನು ಪರಿಶೀಲಿಸಿದರು.

‘ಅತಿಯಾಗಿ’ ಟಿವಿ ನೋಡುವವರಲ್ಲಿ ಕಂಡುಬಂದ ಆತಂಕಕಾರಿ ಬದಲಾವಣೆಗಳು

ವಿರಳವಾಗಿ ಅಥವಾ ಕಮ್ಮಿ ಟಿವಿ ನೋಡುವವರಿಗೆ ಹೋಲಿಸಿದರೆ, ಅತಿಯಾಗಿ ಟಿವಿ ನೋಡುವ ಅಭ್ಯಾಸ ಹೊಂದಿದ್ದವರಲ್ಲಿ ಈ ಕೆಳಗಿನ ಪ್ರಮುಖ ವ್ಯತ್ಯಾಸಗಳು ಕಂಡುಬಂದಿವೆ.

  • ನೆನಪಿನ ಶಕ್ತಿ ಕುಸಿತ: ನೆನಪುಗಳನ್ನು ರೂಪಿಸುವ ಮೆದುಳಿನ ಭಾಗಗಳ ಗಾತ್ರ ಕಡಿಮೆಯಾಗಿದೆ.
  • ಫ್ರಂಟಲ್ ಲೋಬ್ ಕುಗ್ಗುವಿಕೆ: ಯೋಜನೆ, ನಿರ್ಧಾರ ಕೈಗೊಳ್ಳುವುದು ಹಾಗೂ ಸಮಸ್ಯೆ ಬಗೆಹರಿಸುವಿಕೆಗೆ ನೆರವಾಗುವ ‘ಫ್ರಂಟಲ್ ಲೋಬ್’ (Frontal Lobe) ಗಾತ್ರ ಸಣ್ಣದಾಗಿದೆ.
  • ಆಕ್ಸಿಪಿಟಲ್ ಲೋಬ್ ಮೇಲೆ ಪರಿಣಾಮ: ದೃಶ್ಯಗಳನ್ನು ವಿಶ್ಲೇಷಿಸುವ ‘ಆಕ್ಸಿಪಿಟಲ್ ಲೋಬ್’ (Occipital Lobe) ಭಾಗದ ಪ್ರಮಾಣವೂ ಕಡಿಮೆಯಾಗಿದೆ.
  • ವೈಟ್ ಮ್ಯಾಟರ್ ಹಾನಿ: ವೃದ್ಧಾಪ್ಯ, ಪಾರ್ಶ್ವವಾಯು (Stroke), ಜ್ಞಾಪಕಶಕ್ತಿ ನಷ್ಟ ಹಾಗೂ ಡಿಮೆನ್ಷಿಯಾಗೆ (Dementia) ಕಾರಣವಾಗುವ ‘ವೈಟ್ ಮ್ಯಾಟರ್’ ಹಾನಿಯ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ.

ಈ ಅಧ್ಯಯನದ ಅತ್ಯಂತ ಕುತೂಹಲಕಾರಿ ಅಂಶವೆಂದರೆ , ಬರಿ ಕೂತು ಕೆಲಸ ಮಾಡುವುದು ಈ ಸಮಸ್ಯೆಗೆ ಮುಖ್ಯ ಕಾರಣವಲ್ಲ. ಉದಾಹರಣೆಗೆ, ಕಚೇರಿಯಲ್ಲಿ ದೀರ್ಘಕಾಲ ಕುಳಿತು ಏಕಾಗ್ರತೆ ಅಥವಾ ಮಾನಸಿಕ ಶ್ರಮದ ಕೆಲಸ ಮಾಡುವವರಲ್ಲಿ ಈ ರೀತಿಯ ಮೆದುಳಿನ ಕುಗ್ಗುವಿಕೆ ಕಂಡುಬಂದಿಲ್ಲ. ಅಂದರೆ, ಕೇವಲ ಒಂದೇ ಕಡೆ ಕೂತಿರುವುದಕ್ಕಿಂತ ‘ನಿಷ್ಕ್ರಿಯ ಸ್ಕ್ರೀನ್ ಟೈಮ್’ ಅಂದರೆ ಯಾವುದೇ ಮಾನಸಿಕ ಕಸರತ್ತಿಲ್ಲದೆ ಸುಮ್ಮನೆ ಟಿವಿ ನೋಡುವುದು ಮೆದುಳಿಗೆ ಹೆಚ್ಚು ಹಾನಿಕರ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಓದುವುದು, ಹೊಸ ವಿಷಯಗಳನ್ನು ಕಲಿಯುವುದು ಅಥವಾ ಸಂಭಾಷಣೆ ನಡೆಸುವುದು ಮೆದುಳಿನ ಹಲವು ಜಾಲಗಳನ್ನು ಸಕ್ರಿಯಗೊಳಿಸುತ್ತದೆ. ಆದರೆ, ಟಿವಿ ವೀಕ್ಷಣೆಗೆ ಮೆದುಳಿನ ಯಾವುದೇ ಸಕ್ರಿಯ ಶ್ರಮದ ಅಗತ್ಯವಿರುವುದಿಲ್ಲ.

ಹಾಗಾದರೆ ಟಿವಿ ನೋಡಿದರೆ ನೆನಪಿನ ಶಕ್ತಿ ಪೂರ್ಣ ಹೊರಟುಹೋಗುತ್ತದೆಯೇ?

ಖಂಡಿತ ಇಲ್ಲ.. ಟಿವಿ ನೋಡುವುದೇ ನೇರವಾಗಿ ಡಿಮೆನ್ಷಿಯಾಗೆ ಕಾರಣ ಎಂದು ಈ ಅಧ್ಯಯನ ಸಂಪೂರ್ಣವಾಗಿ ದೃಢಪಡಿಸಿಲ್ಲ. ಬದಲಿಗೆ, ಇದು ಟಿವಿ ವೀಕ್ಷಣೆ ಮತ್ತು ಮೆದುಳಿನ ಗಾತ್ರ ಕುಗ್ಗುವಿಕೆಯ ನಡುವಿನ ಸಂಬಂಧವನ್ನು ತೋರಿಸಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ದೈಹಿಕ ಚಟುವಟಿಕೆ, ಉತ್ತಮ ಆಹಾರ ಪದ್ಧತಿ, ರಕ್ತದೊತ್ತಡ, ನಿದ್ರೆ, ಹಾಗೂ ಸಾಮಾಜಿಕ ಒಡನಾಟಗಳು ಸಹ ಮೆದುಳಿನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ.

ಇದನ್ನೂ ಓದಿ: ಪ್ರಾಡಕ್ಟ್ ಲೇಬಲ್ ಓದದೆಯೇ ಖರೀದಿಸುವ ಅಭ್ಯಾಸವಿದ್ದರೆ ಹಿಡನ್ ಶುಗರ್ ಹೆಚ್ಚಾಗಬಹುದು ಎಚ್ಚರ!

ಮೆದುಳನ್ನು ಚುರುಕಾಗಿಡಲು ತಜ್ಞರ ಸಲಹೆಗಳು:

ವಯಸ್ಸಾದ ಮೇಲೆಯೂ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಧ್ಯವಯಸ್ಸಿನ ಅವಧಿ ಅತ್ಯಂತ ನಿರ್ಣಾಯಕ. ಓದುವುದು, ಒಗಟು/ಸುಡೋಕು ಬಿಡಿಸುವುದು, ಹೊಸ ಭಾಷೆ ಅಥವಾ ವಾದ್ಯಗಳನ್ನು ಕಲಿಯುವುದು. ಒಟ್ಟಿನಲ್ಲಿ ಬುದ್ಧಿಗೆ ಕೆಲಸ ಕೊಡಿ. ಸ್ವಲ್ಪ ದೈಹಿಕ ಚಟುವಟಿಕೆಯಿಂದ ಇರಬೇಕು. ಪ್ರತಿದಿನ ಕನಿಷ್ಠ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು. ಜತೆಗೆ ಸಂವಹನವನ್ನು ಮಾಡಿ, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಅರ್ಥಪೂರ್ಣವಾಗಿ ಮಾತನಾಡುವುದು.

ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ
ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಮೊಟ್ಟೆ ಎಸೆದು ಆಕ್ರೋಶ
ಬರ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ತರಾಟೆ
ಬರ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಡಿಸಿಎಂ ಪರಮೇಶ್ವರ್ ತರಾಟೆ
ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಐಎನ್ಎಸ್ ಮಾಲ್ವನ್
ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಐಎನ್ಎಸ್ ಮಾಲ್ವನ್
ಅವನನ್ನು ಯಾವಾಗ ಕರ್ಕೊಂಡು ಬರ್ತೀಯಾ ಎಂದು ಕೇಳಿದ್ದರು ಚೆನ್ನಮ್ಮ: ಹೆಚ್​ಡಿಕೆ
ಅವನನ್ನು ಯಾವಾಗ ಕರ್ಕೊಂಡು ಬರ್ತೀಯಾ ಎಂದು ಕೇಳಿದ್ದರು ಚೆನ್ನಮ್ಮ: ಹೆಚ್​ಡಿಕೆ