AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯರಾತ್ರಿಯಲ್ಲಿ ಬಿಕ್ಕಳಿಕೆಯನ್ನು ಅನುಭವಿಸಿದ್ದೀರಾ? ತಜ್ಞರು ಇದರ ಸಂಭವನೀಯ ಕಾರಣಗಳನ್ನು ವಿವರಿಸಿದ್ದಾರೆ

ಬಹುತೇಕ ಜನರು ಒಂದಲ್ಲಾ ಒಂದು ಬಾರಿ ಬಿಕ್ಕಳಿಕೆಯನ್ನು ಅನುಭವಿಸಿರುತ್ತಾರೆ. ಈ ಬಿಕ್ಕಳಿಕೆಗಳು ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ತಾನಾಗಿಯೇ ಕಡಿಮೆಯಾಗುತ್ತವೆ. ಅವು ಕಿರಿಕಿಯನ್ನು ಉಂಟುಮಾಡಬಹುದು ಮತ್ತು ಮಧ್ಯರಾತ್ರಿಯಲ್ಲಿ ಉಂಟಾಗುವ ಬಿಕ್ಕಳಿಕೆಯಿಂದ ಒಬ್ಬ ವ್ಯಕ್ತಿಯ ನಿದ್ರೆ ಹಾಳಾಗಬಹುದು.

ಮಧ್ಯರಾತ್ರಿಯಲ್ಲಿ ಬಿಕ್ಕಳಿಕೆಯನ್ನು ಅನುಭವಿಸಿದ್ದೀರಾ? ತಜ್ಞರು ಇದರ ಸಂಭವನೀಯ  ಕಾರಣಗಳನ್ನು ವಿವರಿಸಿದ್ದಾರೆ
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ|

Updated on: May 04, 2023 | 5:29 PM

Share

ಬಿಕ್ಕಳಿಕೆ ಎನ್ನುವುದು ದೇಹವು ನಿಯಂತ್ರಿಸಲಾಗದ ಸ್ವಯಂಚಾಲಿತ ಪ್ರಕ್ರಿಯೆಯಾಗಿದೆ. ಬಿಕ್ಕಳಿಕೆ ಉಂಟಾಗುವ ಸಮಯದಲ್ಲಿ ನಿಮ್ಮ ಶ್ವಾಸಕೋಶದ ವಪೆ (ನಿಮ್ಮ ಶ್ವಾಸಕೋಶದ ಅಡಿಯಲ್ಲಿ ನಾವು ಉಸಿರಾಡಲು ಸಹಾಯ ಮಾಡುವ ಸ್ನಾಯು) ಸಂಕುಚಿತಕೊಳ್ಳುತ್ತದೆ. ವಪೆ ಸೆಳೆತವನ್ನು ಉಂಟುಮಾಡಲು ಪ್ರಾರಂಭಿಸಿದಾಗ ಬಿಕ್ಕಳಿಕೆ ಸಂಭವಿಸುತ್ತದೆ. ಬಹುತೇಕರು ಒಂದಲ್ಲಾ ಒಂದು ಬಾರಿ ಬಿಕ್ಕಳಿಕೆಯನ್ನು ಅನುಭವಿಸಿರುತ್ತಾರೆ. ಈ ಬಿಕ್ಕಳಿಕೆಗಳು ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ತಾನಾಗಿಯೇ ಕಡಿಮೆಯಾಗುತ್ತವೆಯಾದರೂ ಅವು ಕಿರಿಕಿಯನ್ನು ಉಂಟುಮಾಡಬಹುದು. ಆದರೆ ಕೆಲವರಿಗೆ ಮಧ್ಯರಾತ್ರಿಯಲ್ಲಿ ಬಿಕ್ಕಳಿಕೆ ಉಂಟಾಗುತ್ತದೆ. ಈ ಬಿಕ್ಕಳಿಕೆಯು ಆ ವ್ಯಕ್ತಿಯ ನಿದ್ರೆಯ ಗುಣಮಟ್ಟವನ್ನು ಹದಗೆಡಿಸುತ್ತದೆ. ಇದು ಆಯಾಸ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಮಧ್ಯರಾತ್ರಿ ಬಿಕ್ಕಳಿಕೆ ಉಂಟಾಗಲು ಕೆಲವೊಂದು ಕಾರಣಗಳಿವೆ.

ಗುರುಗ್ರಾಮ್ ನ ಸಿಕೆ ಬಿರ್ಲಾ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಕನ್ಸಲ್ಟೆಂಟ್ ಡಾ. ತುಷಾರ್ ತಯಾಲ್ ಪ್ರಕಾರ ವಪೆಯನ್ನು (ಡಯಾಫ್ರಾಮ್) ಕಿರಿಕಿರಿಗೊಳಿಸಬಲ್ಲ ಯಾವುದಾದರೂ ಒಂದು ಅಂಶ ಬಿಕ್ಕಳಿಕೆಯನ್ನು ಉಂಟುಮಾಡಬಹುದು. ಮತ್ತು ಅವರು ಹೇಳಿದರು, ಬಿಕ್ಕಳಿಕೆಗಳು ವಪೆಯ ಪುನರಾವರ್ತಿತ, ಅನಿಯಂತ್ರಿತ ಸಂಕೋಚನಗಳು. ಧ್ವನಿಫಲಕವು ಲಯದಿಂದ ಕುಗ್ಗುವುದು ಬಿಕ್ಕಳಿಕೆಗೆ ಕಾರಣವಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಬಿಕ್ಕಳಿಸುವಿಕೆಯು ಕೆಲವು ನಿಮಿಷಗಳವರೆಗೆ ಇರುತ್ತದೆ ಮತ್ತು ತನ್ನಷ್ಟಕ್ಕೆ ನಿಂತುಹೋಗುತ್ತದೆ, ಆದರೆ ಬಿಕ್ಕಳಿಸುವಿಕೆಯು ರಾತ್ರಿಯಲ್ಲಿ ನಿದ್ದೆ ಮಾಡುವಾಗಲೂ ಸಂಭವಿಸಬಹುದು.

ನಿದ್ದೆ ಮಾಡುವಾಗ ಉಂಟಾಗುವ ಬಿಕ್ಕಳಿಕೆಯ ಸಂಭವನೀಯ ಕಾರಣಗಳು:

ಡಾ. ತುಷಾರ್ ತಯಾಲ್ ನಿದ್ದೆ ಮಾಡುವಾಗ ಸಂಭವಿಸುವ ಬಿಕ್ಕಳಿಕೆಯ ಕೆಲವು ಸಾಮಾನ್ಯ ಕಾರಣಗಳನ್ನು ತಿಳಿಸಿದ್ದಾರೆ: ಆಮ್ಲೀಯತೆ: ಅನ್ನನಾಳದ ಹಿಮ್ಮುಖ ಹರಿವು (GERD) ಹೊಂದಿರುವ ಜನರು ಮಲಗುವಾಗ ಆಹಾರನಾಳದಲ್ಲಿ ಆಮ್ಲೀಯತೆಯ ಸಮಸ್ಯೆ ಉಂಟಾಗಬಹುದು. ಇದು ವಪೆಯನ್ನು ಕಿರಿಕಿರಿಗೊಳಿಸುತ್ತದೆ ಮತ್ತು ಬಿಕ್ಕಳಿಕೆಯನ್ನು ಉಂಟುಮಾಡುತ್ತದೆ, ಇದನ್ನು ತಡೆಗಟ್ಟಲು, ಮಲಗುವಾಗ ತಲೆಭಾಗವನ್ನು ಮೆಲಕ್ಕೆತ್ತಲು 2 ದಿಂಬುಗಳನ್ನು ಬಳಸಬಹುದು.

ಬಾಯಿಯ ಉಸಿರಾಟ:

ಬಾಯಿಯ ಮೂಲಕ ಉಸಿರಾಡುವ ಜನರು ನಿದ್ದೆ ಮಾಡುವಾಗ ಬಹಳಷ್ಟು ಗಾಳಿಯನ್ನು ನುಂಗುತ್ತಾರೆ. ಇದು ಹೊಟ್ಟೆಯನ್ನು ಹಿಗ್ಗಿಸುತ್ತದೆ ಮತ್ತು ಇದರಿಂದ ಬಿಕ್ಕಳಿಕೆ ಉಂಟಾಗುತ್ತದೆ.

ಇದನ್ನೂ ಓದಿ: ತಾಳೆ ಬೊಂಡದ ಆರೋಗ್ಯ ಪ್ರಯೋಜನಗಳು; ಈ ಬೇಸಿಗೆಯಲ್ಲಿ ಪ್ರಯತ್ನಿಸಬೇಕಾದ 3 ಪಾಕವಿಧಾನಗಳು

ಧೂಮಪಾನ:

ಧೂಮಪಾನಿಗಳು ಧೂಮಪಾನ ಮಾಡುವಾಗ ಸಾಕಷ್ಟು ಪ್ರಮಾಣದ ಗಾಳಿಯನ್ನು ನುಂಗುತ್ತಾರೆ. ಅಲ್ಲದೆ ಹೊಗೆಯು ಗಂಟಲನ್ನು ಸೇರಿಕೊಳ್ಳುತ್ತದೆ. ಇದು ಅನ್ನನಾಳ ಮತ್ತು ವಪೆಯನ್ನು ಕೆರಳಿಸುತ್ತದೆ. ಹಾಗೂ ಇದು ಬಿಕ್ಕಳಿಕೆಯನ್ನು ಪ್ರಚೋದಿಸುತ್ತದೆ.

ಆಲ್ಕೋಹಾಲ್-ಸೋಡಾಯುಕ್ತ ಪಾನೀಯಗಳು:

ಸೋಡಾ ಪಾನೀಯಗಳು ಮತ್ತು ಮದ್ಯದ ಅತಿಯಾದ ಸೇವನೆಯು ಹೊಟ್ಟೆಯನ್ನು ಕೆರಳಿಸುತ್ತದೆ. ಇದು ದೇಹದ ಅಂಗಗಳಲ್ಲಿ ಅತಿಯಾದ ಆಮ್ಲ ಉತ್ಪಾದನೆಗೆ ಕಾರಣವಾಗಬಹುದು ಮತ್ತು ಆಮ್ಲೀಯತೆಯನ್ನು ಪ್ರಚೋದಿಸುತ್ತದೆ. ಹೊಟ್ಟೆಯಲ್ಲಿ ಅತಿಯಾದ ಆಮ್ಲವು ಉತ್ಪತ್ತಿಯಾದಾಗ ಬಿಕ್ಕಳಿಕೆ ಉಂಟಾಗುತ್ತದೆ.

ಔಷಧಿಗಳು:

ಸ್ಟೀರಾಯ್ಡ್, ಪ್ರತಿಜೀವಕಗಳು ಮತ್ತು ಆಂಟಿ ಎಪಿಲೆಪ್ಟಿಕ್ ಗಳಂತಹ ಕೆಲವು ಔಷಧಿಗಳ ಸೇವನೆಯಿಂದಲು ಬಿಕ್ಕಳಿಕೆ ಉಂಟಾಗಬಹುದು.

ಇತರ ವೈದ್ಯಕೀಯ ಪರಿಸ್ಥಿತಿಗಳು:

ಮೆದುಳಿನ ಉರಿಯೂತ, ನ್ಯೂಮೋನಿಯಾ, ಯುರೇಮಿಯಾ ನಂತಹ ವಿವಿಧ ಅಂಗಗಳ ಮೇಲೆ ಪರಿಣಾಮ ಬೀರುವ ಕಾಯಿಲೆಗಳು ಬಿಕ್ಕಳಿಕೆ ಉಂಟಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ