AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ಯಾಸೆರೆಗೆ ನನ್ನ…’; ಆ ಲಿರಿಕ್ಸ್​ನ ನಿಜವಾದ ಅರ್ಥ ಹೇಳಿದ ಮನೋಹರ್

1998ರಲ್ಲಿ ಬಿಡುಗಡೆಯಾದ ‘ಪ್ರೀತ್ಸೋದ್ ತಪ್ಪಾ...?’ ಚಿತ್ರದ ‘ರಾಜಾ ರಾಜ..’ ಹಾಡಿನ ಸಾಹಿತ್ಯ ವಿವಾದ ಸೃಷ್ಟಿಸಿತ್ತು. ಅಲ್ಲಿ ಬಳಕೆ ಆದ ಪದಗುಚ್ಛದ ತಪ್ಪು ಅರ್ಥೈಸುವಿಕೆಯಿಂದ ಉಂಟಾದ ಗೊಂದಲವನ್ನು ವಿ. ಮನೋಹರ್ ಅವರು ಸ್ಪಷ್ಟಪಡಿಸಿದ್ದಾರೆ. ಅವರು ಈ ಪದಗುಚ್ಛದ ನಿಜವಾದ ಅರ್ಥವನ್ನು ವಿವರಿಸಿದ್ದಾರೆ .

‘ಕನ್ಯಾಸೆರೆಗೆ ನನ್ನ...’; ಆ ಲಿರಿಕ್ಸ್​ನ ನಿಜವಾದ ಅರ್ಥ ಹೇಳಿದ ಮನೋಹರ್
ರವಿಚಂದ್ರನ್
ರಾಜೇಶ್ ದುಗ್ಗುಮನೆ
|

Updated on:Jun 21, 2025 | 11:46 AM

Share

1998ರಲ್ಲಿ ಬಂದ ‘ಪ್ರೀತ್ಸೋದ್ ತಪ್ಪಾ..?’ (Preethsod Thappa) ಸಿನಿಮಾ ಮೆಚ್ಚುಗೆ ಪಡೆಯಿತು. ವಿ. ರವಿಚಂದ್ರನ್ ಅವರು ಈ ಚಿತ್ರವನ್ನು ನಿರ್ದೇಶಿಸಿ, ನಟಿಸಿದರು. ರಾಕ್​ಲೈನ್ ವೆಂಕಟೇಶ್ ಈ ಚಿತ್ರದ ನಿರ್ಮಾಪಕರು. ಈ ಚಿತ್ರಕ್ಕಾಗಿ ಶಿಲ್ಪಾ ಶೆಟ್ಟಿಯನ್ನು ಮತ್ತೆ ಕನ್ನಡಕ್ಕೆ ಕರೆತರಲಾಯಿತು. ಈ ಸಿನಿಮಾದ ‘ರಾಜಾ ರಾಜ..’ ಹಾಡು ಗಮನ ಸೆಳೆದಿತ್ತು. ಈ ಚಿತ್ರದ ಹಾಡಿನ ಲಿರಿಕ್ಸ್ ಕೂಡ ಚರ್ಚೆ ಆಗಿತ್ತು. ಇದರಲ್ಲಿ ಬರೋ ಒಂದು ಸಾಲನ್ನು ತಪ್ಪಾಗಿ ಅರ್ಥೈಸಲಾಗಿತ್ತು. ಇದಕ್ಕೆ ಸಂಗೀತ ಸಂಯೋಜಕ ವಿ. ಮನೋಹರ್ ಸ್ಪಷ್ಟನೆ ನೀಡಿದ್ದಾರೆ.

‘ಪ್ರೀತ್ಸೀದ್ ತಪ್ಪಾ..?’ ಸಿನಿಮಾಗೆ ಮ್ಯೂಸಿಕ್ ನೀಡಿದ್ದು ಹಂಸಲೇಖ ಅವರು. ಅವರೇ ‘ರಾಜಾ ರಾಜ’ ಹಾಡಿಗೆ ಸಾಹಿತ್ಯ ಬರೆದಿದ್ದರು. ಈ ಸಿನಿಮಾದ ಲಿರಿಕ್ಸ್ ಗೊಂದಲಮಯವಾಗಿತ್ತು. ನಿಜಕ್ಕೂ ಆ ಲಿರಿಕ್ಸ್​ನ ಹಾಗೆಯೇ ಬರೆಯಲಾಗಿತ್ತೇ? ಇದಕ್ಕೆ ಮನೋಹರ್ ಸ್ಪಷ್ಟನೆ ನೀಡಿದ್ದಾರೆ.

ಚರ್ಚೆ ಹುಟ್ಟು ಹಾಕಿದ್ದ ಲಿರಿಕ್ಸ್..

‘ಬತ್ತಾಬರ್ತಿದ್ದಾನಂತೆ ನನ್ನ ರೋಮಿಯೋ ಸುದ್ದಿ ಕೊಟ್ಟಿದೆ ನನ್ನ ಹೃದಯ ರೇಡಿಯೋ..ಬಂದ ಕೂಡಲೇ ಪ್ರೀತಿಯಿಂದಲೇ ಕನ್ಯಾಸೆರೆಗೆ ನನ್ನ ಟಾಟಾ ಚೆರಿಯೋ’ ಎಂಬುದು ಹಾಡಿನ ಲಿರಿಕ್ಸ್.

ಇದನ್ನೂ ಓದಿ
Image
ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ ಖ್ಯಾತಿ ಮೋದಿಗೆ ಸಲ್ಲುತ್ತೆ; ಪವನ್
Image
ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಗುಂಡಿಗೆ ಬೇಕು
Image
ಸೆಲೆಬ್ರಿಟಿಗಳು ಎಷ್ಟು ಗಂಟೆಗೆ ಕೊನೆಯ ಊಟ ಮಾಡುತ್ತಾರೆ? ಇಲ್ಲಿದೆ ಮಾಹಿತಿ
Image
ರುಕ್ಮಿಣಿ ವಸಂತ್ ಶರ್ಟ್​ ಮೇಲೆ ಟೈಗರ್ ಚಿತ್ರ; ಇದರ ಹಿಂದಿದೆ ದೊಡ್ಡ ರಹಸ್ಯ

ಇದನ್ನೂ ಓದಿ: ಬ್ಯಾಚುಲರ್ಸ್ ವೇದಿಕೆ ಮೇಲೆ ರೊಮ್ಯಾಂಟಿಕ್ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್

ಮನೋಹರ್ ಹೇಳಿದ್ದೇನು?

‘ಶ್ರೀಗಂಧ ಟಿವಿ’ ಹೆಸರಿನ ಯೂಟ್ಯೂಬ್ ಚಾನೆಲ್​​ಗೆ ನೀಡಿದ ಸಂದರ್ಶನ ಒಂದರಲ್ಲಿ ಮಾತನಾಡಿರೋ ಮನೋಹರ್, ‘ರಾಜಾ ರಾಜ ಹಾಡಿನಲ್ಲಿ ಕನ್ಯಾಸೆರೆಗೆ ನನ್ನ ಟಾಟಾ ಚೆರಿಯೋ ಎಂದಿದೆ. ಟಾಟಾ ಚೆರಿಯೋ ಎಂದರೆ ವಿದಾಯ ಎಂದರ್ಥ. ಆದರೆ ಇದನ್ನು ‘ಡಾಶ್ ತೆರಿಯೋ’ ಎಂದರ್ಥ ಕಲ್ಪಿಸಿಕೊಂಡರು. ನಾನು ಈ ಲಿರಿಕ್ಸ್ ವಿಚಾರವಾಗಿ ಜಗಳ ಆಡಿದೆ’ ಎಂದಿದ್ದಾರೆ ಮನೋಹರ್.

(ಈ ಹಾಡಿನ ವಿವರಣೆ ವಿಡಿಯೋ ಆರಂಭ ಆದ 10 ನಿಮಿಷದಿಂದ ಇದೆ..)

‘ಅಲ್ಲಿ ಬಳಕೆ ಆಗಿದ್ದು ಟಾಟಾ ಚಿರಿಯೋ ಎಂಬುದಾಗಿ ಸ್ಪಷ್ಟನೆ ಕೊಟ್ಟರು. ಇಂಗ್ಲಿಷರು ಟಾಟಾ ಚಿರಿಯೋ ಬಾಯ್ ಎನ್ನುತ್ತಿದ್ದರು. ಆ ಬಳಿಕ ಅದು ಟಾಟಾ ಬಾಯ್ ಬಾಯ್ ಆಯ್ತು. ಈಗ ಬಾಯ್ ಅಷ್ಟೇ ಇದೆ. ಕನ್ಯಾ ಸೆರೆಗೆ ಟಾಟಾ ಚೀರಿಯೊ ಎಂದರೆ ಕನ್ಯಾ ಸೆರೆಗೆ ನನ್ನ ವಿದಾಯ ಎಂದರ್ಥ. ಇದನ್ನು ಬೇರೆ ರೀತಿ ಅರ್ಥೈಸಲು ಹೋದರು. ಆ ಬಳಿಕ ಅಭಿಮಾನಿಗಳು ಬೈದ ಬಳಿಕ ವಿವಾದ ತಣ್ಣಗಾಯ್ತು’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:36 am, Sat, 21 June 25

ಮೊದಲ ಹೆಂಡತಿ ನನ್ನ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಹಾಕಿದ್ದಳು: ಬಾಬು
ಮೊದಲ ಹೆಂಡತಿ ನನ್ನ ವಿರುದ್ಧ ಕೌಟುಂಬಿಕ ಹಿಂಸೆ ಕೇಸ್ ಹಾಕಿದ್ದಳು: ಬಾಬು
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
ಮಾಧ್ಯಮಗಳ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ: ವಿ ಸೋಮಣ್ಣ
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಬದುಕು ಇಲ್ಲವಾಗಿಸಿಕೊಳ್ಳುವುದನ್ನು ಬಿಟ್ಟರೆ ದಾರಿಯಿಲ್ಲ: ಹೂವಿನ ವ್ಯಾಪಾರಿ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು: ಸಚಿವ
ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು: ಸಚಿವ
ಸಿಎಂ ಸಿದ್ದರಾಮಯ್ಯ ಪ್ರತಾಪ್​ನಂತೆ ಕೆಲಸವಿಲ್ಲದವರಲ್ಲ: ಪ್ರದೀಪ್ ಈಶ್ವರ್
ಸಿಎಂ ಸಿದ್ದರಾಮಯ್ಯ ಪ್ರತಾಪ್​ನಂತೆ ಕೆಲಸವಿಲ್ಲದವರಲ್ಲ: ಪ್ರದೀಪ್ ಈಶ್ವರ್
ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ, ಇತ್ತ ಧಿಕಾರಿ ರಮ್ಮಿ ಆಟದಲ್ಲಿ ಮಗ್ನ
ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ, ಇತ್ತ ಧಿಕಾರಿ ರಮ್ಮಿ ಆಟದಲ್ಲಿ ಮಗ್ನ
ಮಳೆಗಾಲದಲ್ಲಿ ಮಕ್ಕಳ ಪ್ರತಿನಿತ್ಯದ ಗೋಳಿದು, ಶಾಸಕರಿಗಿಲ್ಲ ಕಾಳಜಿ
ಮಳೆಗಾಲದಲ್ಲಿ ಮಕ್ಕಳ ಪ್ರತಿನಿತ್ಯದ ಗೋಳಿದು, ಶಾಸಕರಿಗಿಲ್ಲ ಕಾಳಜಿ