ದಿನದಲ್ಲಿ ಎಷ್ಟು ಕಪ್ ಚಹಾ ಕುಡಿದರೆ ದೇಹದ ಆರೋಗ್ಯ ಕೆಡುವುದಿಲ್ಲ ಎಂದು ತಿಳಿಯಿರಿ

ಚಹಾವನ್ನು ನಾವು ಪ್ರತಿನಿತ್ಯ ಹಲವು ಬಾರು ಕುಡಿಯುತ್ತೇವೆ. ಎಷ್ಟೇ ಕುಡಿದರು ಮತ್ತೊಂದು ಕಪ್ಆ ಬೇಕೆಂದು ನಮಗೆ ಅನಿಸುವುದು ಸಹಜ. ಆದರೆ, ಹೆಚ್ಚುವರಿ ಚಹಾವು ದೇಹಕ್ಕೆ ಹಾನಿಯನ್ನುಂಟುಮಾಡಬಹುದು

ದಿನದಲ್ಲಿ ಎಷ್ಟು ಕಪ್ ಚಹಾ ಕುಡಿದರೆ ದೇಹದ ಆರೋಗ್ಯ ಕೆಡುವುದಿಲ್ಲ ಎಂದು ತಿಳಿಯಿರಿ
ಚಹಾದ ಅಡ್ಡ ಪರಿಣಾಮಗಳುImage Credit source: Adobe stock
Follow us
|

Updated on:Apr 28, 2023 | 3:02 PM

ಚಹಾವು (Tea) ರುಚಿಯ ದೃಷ್ಟಿಯಿಂದ ಮಾತ್ರವಲ್ಲದೆ ಆರೋಗ್ಯದ (Health) ದೃಷ್ಟಿಯಿಂದಲೂ ಅತ್ಯುತ್ತಮ ಪಾನೀಯವಾಗಿದೆ. ಕಡಿಮೆ ಉರಿಯೂತ (Inflammation), ಕಡಿಮೆ ಹೃದ್ರೋಗದ ಅಪಾಯ (Heart Problems) ಮತ್ತು ಹೆಚ್ಚಿದ ಜೀವಿತಾವಧಿ (Lifespan) ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಚಹಾ ನೀಡುತ್ತದೆ. “ಹೃದಯರಕ್ತನಾಳದ ಕಾಯಿಲೆಗಳು, ಸಂಧಿವಾತ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುವ ಪಾಲಿಫಿನಾಲ್ಗಳು ಮತ್ತು ಇತರ ಘಟಕಗಳನ್ನು ಚಹಾವು ಒಳಗೊಂಡಿದೆ. ತೀರಾ ಇತ್ತೀಚೆಗೆ, ಹಸಿರು ಚಹಾದ ದೈನಂದಿನ ಬಳಕೆಗೆ ಸಂಬಂಧಿಸಿದ ಪ್ರಯೋಜನಕಾರಿ ಗುಣಗಳು ಉತ್ತಮ ಎಂದು ಗುರುತಿಸಲ್ಪಟ್ಟಿವೆ” ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆ (NIH) ನಡೆಸಿದ ಅಧ್ಯಯನ ತಿಳಿಸಿದೆ.

ಆದರೆ ಅತಿಯಾದರೆ ಅಮೃತವು ವಿಷ ಎಂಬ ಮಾತಿನಂತೆ ಚಹಾವನ್ನು ಮಿತಿ ಮೀರಿ ಸೇವಿಸಿದರೆ ಅದರಿಂದ ಅಪಾಯ ತಪ್ಪಿದ್ದಲ್ಲ. ಅತಿಯಾದ ಚಹಾ ಸೇವನೆಯಿಂದ ನಿಮ್ಮ ದೇಹಕ್ಕೆ ಆಗುವ ಅಡ್ಡ ಪರಿಣಾಮಗಳು ಹೀಗಿವೆ;

1. ಅಸಿಡಿಟಿ:

ಚಹಾ ಆಮ್ಲೀಯ ಸ್ವಭಾವವನ್ನು ಹೊಂದಿದೆ, ಅದಕ್ಕಾಗಿಯೇ ಅತಿಯಾದ ಚಹಾವನ್ನು ಸೇವಿಸುವವರು ಆಮ್ಲೀಯತೆ ಅಥವಾ ಎದೆಯುರಿ ಮುಂತಾದ ಅಡ್ಡ ಪರಿಣಾಮಗಳನ್ನು ಅನುಭವಿಸಬಹುದು. ಚಹಾದಲ್ಲಿನ ವಿಶೇಷ ಅಂಶವು ಸೂಕ್ಷ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿರುವವರಲ್ಲಿ ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗಬಹುದು. ಹೊಟ್ಟೆಯ ಸೋಂಕಿನಿಂದ ಬಳಲುತ್ತಿರುವವರು ಸಹ ಅತಿಯಾಗಿ ಚಹಾ ಸೇವಿಸುವುದನ್ನು ತಪ್ಪಿಸಬೇಕು.

2. ನಿರ್ಜಲೀಕರಣ:

ಚಹಾದಲ್ಲಿ ಕೆಫೀನ್ ಅಂಶವಿದೆ ಎಂದು ಅನೇಕ ಜನರಿಗೆ ತಿಳಿದಿಲ್ಲ. ಇದು ನೈಸರ್ಗಿಕ ನಿರ್ಜಲೀಕರಣದ ಸಂಯುಕ್ತವಾಗಿದೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು. “ಹೆಚ್ಚುವರಿ ಸೇವನೆ ಎಂದರೆ ಕೆಫೀನ್‌ನ ಅಧಿಕ ಸೇವನೆ, ಇದು ನಿಮ್ಮ ಟ್ಯೂಬ್ಯೂಲ್‌ಗಳ ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ, ಇದು ನಿಮ್ಮನ್ನು ನಿರ್ಜಲೀಕರಣಗೊಳಿಸುತ್ತದೆ” ಎಂದು ಫೋರ್ಟಿಸ್ ಆಸ್ಪತ್ರೆಯ ಪೌಷ್ಟಿಕತಜ್ಞ ಡಾ. ಸಿಮ್ರಾನ್ ಸೈನಿ NDTV ವರದಿಯಲ್ಲಿ ಹೇಳುತ್ತಾರೆ.

3. ಕಬ್ಬಿಣದ ಹೀರುವಿಕೆ:

ಅಧಿಕವಾದ ಚಹಾ ಸೇವನೆಯು ದೇಹದಲ್ಲಿನ ಪೋಷಕಾಂಶಗಳ ಹೀರುವಿಕೆಗೆ ಅಡ್ಡಿಯಾಗಬಹುದು ಎಂದು ತಜ್ಞರು ಸಾಮಾನ್ಯವಾಗಿ ವಿವರಿಸುತ್ತಾರೆ. ಚಹಾವು ಟ್ಯಾನಿನ್‌ಗಳಲ್ಲಿ ಸಮೃದ್ಧವಾಗಿದೆ, ಅದು ಕಬ್ಬಿಣದೊಂದಿಗೆ ಬಂಧಿಸುತ್ತದೆ ಮತ್ತು ಜೀರ್ಣಾಂಗದಲ್ಲಿ ಹೀರಿಕೊಳ್ಳಲು ಲಭ್ಯವಿಲ್ಲ. ಹೀಗಾಗಿ, ನೀವು ಕಬ್ಬಿಣದ ಕೊರತೆಯನ್ನು ಹೊಂದಿದ್ದರೆ, ಚಹಾವನ್ನು ಮಿತವಾಗಿ ಸೇವಿಸಲು ಮರೆಯದಿರಿ.

4. ಒತ್ತಡ ಅಥವಾ ನಿದ್ರೆಯ ಕೊರತೆ:

ಅತಿಯಾದ ಚಹಾವು ದೇಹದಲ್ಲಿ ಒತ್ತಡದ ಮಟ್ಟವನ್ನು ಹೆಚ್ಚಿಸಬಹುದು ಮತ್ತು ನಿದ್ರೆಯ ಕೊರತೆ ಅಥವಾ ಆತಂಕದ ಹಿಂದಿನ ಕಾರಣವೂ ಆಗಿರಬಹುದು. ಇದು ದೇಹದಲ್ಲಿನ ಜಾಗರೂಕತೆಯನ್ನು ಸಕ್ರಿಯಗೊಳಿಸಲು ತಿಳಿದಿರುವ ಚಹಾದಲ್ಲಿನ ಕೆಫೀನ್ ಅಂಶದಿಂದಾಗಿ. ನೀವು ಒತ್ತಡವನ್ನು ಅನುಭವಿಸುತ್ತಿದ್ದರೆ ಅಥವಾ ನಿದ್ರಿಸಲು ತೊಂದರೆಯನ್ನು ಎದುರಿಸುತ್ತಿದ್ದರೆ, ಚಹಾ ಸೇವನೆಯನ್ನು ಕಡಿಮೆ ಮಾಡಿ.

5. ತಲೆತಿರುಗುವಿಕೆ:

ಅತಿಯಾದ ಸೇವನೆಯಿಂದ ದೊಡ್ಡ ಪ್ರಮಾಣದ ಕೆಫೀನ್ ತಲೆತಿರುಗುವಿಕೆಗೆ ಕಾರಣವಾಗಬಹುದು, ವಿಶೇಷವಾಗಿ ಜೀರ್ಣಾಂಗ ವ್ಯವಸ್ಥೆಯು ವಿಶೇಷವಾಗಿ ಸೂಕ್ಷ್ಮವಾಗಿರುವವರಲ್ಲಿ. ಡಾ. ಸಿಮ್ರಾನ್ ಸೈನಿ, “ಸಾಮಾನ್ಯ ಟೀ ಕುಡಿಯುವವರು ತಮ್ಮ ದೈನಂದಿನ ಕಪ್ ಅನ್ನು ಅದೇ ಸಮಯದಲ್ಲಿ ಪಡೆಯದಿದ್ದರೆ, ಅದು ಅವರನ್ನು ಸುಸ್ತಾಗಿ, ಆಲಸ್ಯ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ ಮತ್ತು ಅವರ ಶಕ್ತಿಯ ಮಟ್ಟವನ್ನು ಕಡಿಮೆ ಮಾಡುತ್ತದೆ.” ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಬೀದಿಬದಿ ಆಹಾರವನ್ನು ತಿನ್ನದಿರಿ

ದಿನದಲ್ಲಿ ಎಷ್ಟು ಕಪ್ ಚಹಾ ಸೇವಿಸುವುದು ಉತ್ತಮ?

ಹಾರ್ವರ್ಡ್‌ನ ಅಧ್ಯಯನವು ದಿನಕ್ಕೆ 3-4 ಕಪ್‌ ಚಹಾ ಸೇವನೆಯನ್ನು ಅನುಮತಿಸುತ್ತದೆ ಮತ್ತು ಯಾವುದೇ ಪ್ರಮುಖ ಅಡ್ಡಪರಿಣಾಮಗಳಿಗೆ ಕಾರಣವಾಗುವುದಿಲ್ಲ ಎಂದು ಹೇಳುತ್ತದೆ. ನೀವು ಯಾವುದೇ ತೀವ್ರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ವೈದ್ಯರು ಅಥವಾ ಅರ್ಹ ಪೌಷ್ಟಿಕತಜ್ಞರನ್ನು ಸಂಪರ್ಕಿಸುವುದು ಒಳ್ಳೆಯದು..

Published On - 2:42 pm, Fri, 28 April 23

ತಾಜಾ ಸುದ್ದಿ
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು