AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Carrot Day 2025: ಕ್ಯಾರೆಟ್ ತಿನ್ನುವುದರಿಂದ ನಿಜಕ್ಕೂ ಕಣ್ಣಿನ ದೃಷ್ಟಿ ಸುಧಾರಿಸುತ್ತದೆಯೇ? ಸತ್ಯಾಂಶ ತಿಳಿಯಿರಿ

ವಿಟಮಿನ್‌ ಎ ಮತ್ತು ಬೀಟಾ ಕ್ಯಾರೋಟಿನ್‌ ಈ ಎರಡರಲ್ಲೂ ಸಮೃದ್ಧವಾಗಿರುವ ಕ್ಯಾರೆಟ್‌ ದೃಷ್ಟಿ ಸುಧಾರಣೆಗೆ ತುಂಬಾ ಒಳ್ಳೆಯದು ಎಂದು ಹೇಳ್ತಾರೆ. ಕಣ್ಣಿನ ಅರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ ಕ್ಯಾರೆಟ್‌ ಅಥವಾ ಅದರ ಜ್ಯೂಸ್‌ ಕುಡಿಯಿರಿ ಎಂದು ಹಲವರು ಸಲಹೆ ನೀಡ್ತಾರೆ. ಆದ್ರೆ ನಿಜಕ್ಕೂ ಕ್ಯಾರೆಟ್‌ ಕಣ್ಣಿನ ದೃಷ್ಟಿ ಸುಧಾರಣೆಗೆ ಸಹಾಯಕಾರಿಯೇ? ಈ ಕುರಿತ ವಾಸ್ತವ ಸಂಗತಿಯನ್ನು ತಿಳಿಯಿರಿ.

International Carrot Day 2025: ಕ್ಯಾರೆಟ್ ತಿನ್ನುವುದರಿಂದ ನಿಜಕ್ಕೂ ಕಣ್ಣಿನ ದೃಷ್ಟಿ ಸುಧಾರಿಸುತ್ತದೆಯೇ? ಸತ್ಯಾಂಶ ತಿಳಿಯಿರಿ
ಕ್ಯಾರೆಟ್​
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 04, 2025 | 9:33 AM

ಬೀಟಾ ಕ್ಯಾರೋಟಿನ್‌ (Beta Carotene) ಮತ್ತು ವಿಟಮಿನ್‌ ಎ (Vitamin A) ಪೋಷಕಾಂಶಗಳಿಂದ (nutrient) ಸಮೃದ್ಧವಾಗಿರುವ ಕ್ಯಾರೆಟ್‌ (Carrot) ಆರೋಗ್ಯಕ್ಕೆ (Health) ಬಹಳ ಒಳ್ಳೆಯದು. ನಾವು ಸೇವಿಸುವ ಆಹಾರದಲ್ಲಿ ನಿಯಮಿತವಾಗಿ ಕ್ಯಾರೆಟ್‌ ಸೇರಿಸುವ ಮೂಲಕ ಆರೋಗ್ಯ ವೃದ್ಧಿಸಬಹುದು ಎಂದು ಹೇಳ್ತಾರೆ. ಹಾಗಾಗಿ ಈ ಕ್ಯಾರೆಟ್‌ನ ಆರೋಗ್ಯ ಪ್ರಯೋಜನದ ಬಗ್ಗೆ ಜನರಿಗೆ ಅರಿವು ಮೂಡಿಲು ಪ್ರತಿವರ್ಷ ಏಪ್ರಿಲ್‌ 4 ರಂದು ವಿಶ್ವ ಕ್ಯಾರೆಟ್‌ (International Carrot Day) ದಿನವನ್ನು ಆಚರಣೆ ಮಾಡಲಾಗುತ್ತದೆ. ಅದರಲ್ಲೂ ಕಣ್ಣಿನ (Eye) ಆರೋಗ್ಯಕ್ಕೆ ಕ್ಯಾರೆಟ್‌ ತುಂಬಾನೇ ಒಳ್ಳೆಯದು, ನಿಯಮಿತವಾಗಿ ಕ್ಯಾರೆಟ್‌ ಹಾಗೂ ಅದರ ಜ್ಯೂಸ್‌ ಸೇವನೆ ಮಾಡುವುದರಿಂದ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುವುದರ ಜೊತೆಗೆ ಕಣ್ಣಿನ ಆರೋಗ್ಯವೂ ವೃದ್ಧಿಸುತ್ತದೆ ಎಂದು ಹೇಳುವ ಮಾತನ್ನು ಕೇಳಿರುತ್ತೀರಿ ಅಲ್ವಾ. ಆದ್ರೆ ಈ ಕ್ಯಾರೆಟ್‌ ತಿನ್ನೋದ್ರಿಂದ ನಿಜಕ್ಕೂ ಕಣ್ಣಿನ ದೃಷ್ಟಿ (Eye Sight) ವೃದ್ಧಿಸುತ್ತದಯೇ? ವಿಶ್ವ ಕ್ಯಾರೆಟ್‌ ದಿನದಂದು ಈ ಕುರಿತ ವಾಸ್ತವ ಸಂಗತಿಯ ಬಗ್ಗೆ ತಿಳಿಯಿರಿ.

ಕ್ಯಾರೆಟ್‌ ಕಣ್ಣಿನ ದೃಷ್ಟಿ ಸುಧಾರಿಸಲು ಸಹಕಾರಿಯೇ?

ಕ್ಯಾರೆಟ್ ಮತ್ತು ದೃಷ್ಟಿ ಸುಧಾರಣೆಯ ನಡುವೆ ಯಾವುದೇ ನಿರ್ದಿಷ್ಟ ಸಂಬಂಧವಿಲ್ಲ. ಕ್ಯಾರೆಟ್‌ನಲ್ಲಿ ವಿಟಮಿನ್ ಎ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಇದು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ನಿಜ. ಆದರೆ ಕ್ಯಾರೆಟ್‌ ದೃಷ್ಟಿ ಸುಧಾರಣೆಗೆ ಸಹಕಾರಿ ಎಂಬುದು ತಪ್ಪು ಕಲ್ಪನೆಯಾಗಿದೆ ಎಂದು ಡಾ. ಗುಂಜನ್‌ ದೇಶಪಾಂಡೆ (drgunjand) ಹೇಳಿದ್ದಾರೆ. ಈ ಬಗ್ಗೆ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
Image
ಪ್ರೋಟೀನ್ ಹೆಚ್ಚಾದರೆ ಮೂತ್ರಪಿಂಡಕ್ಕೆ ಹಾನಿ
Image
ಕಣ್ಣಿಗೆ ಧೂಳು, ಕಸ ಬಿದ್ದರೆ ಹೀಗೆ ಮಾಡಿ
Image
ಬೇಸಿಗೆಯಲ್ಲಿ ಸ್ನಾನಕ್ಕೆ ಬಿಸಿ ನೀರನ್ನೇ ಆಯ್ಕೆ ಮಾಡಿಕೊಳ್ತೀರಾ?
Image
ನೀವು ಆರೋಗ್ಯವಾಗಿದ್ದೀರಿ ಎಂದು ಬೆಳಗಿನಜಾವದ ಈ ಸೂಚನೆಗಳಿಂದ ತಿಳಿಯಬಹುದು

ಕ್ಯಾರೆಟ್‌ ಕಣ್ಣಿನ ದೃಷ್ಟಿ ಸುಧಾರಿಸುತ್ತದೆ ಎಂಬ ಈ ತಪ್ಪು ಕಲ್ಪನೆ ಎರಡನೇ ಮಹಾಯುದ್ಧದಷ್ಟು ಹಳೆಯದು. ಎರಡನೇ ಮಹಾಯುದ್ಧದ ಸಮಯದಲ್ಲಿ ಬ್ರಿಟೀಷ್‌ ರಾಯಲ್‌ ಏರ್‌ಫೋರ್ಸ್‌, ತನ್ನ ಪೈಲಟ್‌ಗಳಿಗೆ ಕತ್ತಲಲ್ಲಿ ದೃಷ್ಟಿ ಸುಧಾರಣೆಗೆ ಕ್ಯಾರೆಟ್‌ ತಿನ್ನಲು ಹೇಳುತ್ತಿತ್ತು. ಆ ಸಮಯದಲ್ಲಿ ಆಹಾರದ ಕೊರತೆಯೂ ಇದ್ದ ಕಾರಣ ಹೆಚ್ಚಾಗಿ ಕ್ಯಾರೆಟ್‌, ಆಲುಗಡ್ಡೆಯಂತಹ ತರಕಾರಿಗಳನ್ನೇ ಸೇವಿಸಲು ಕೊಡುತ್ತಿದ್ದರು. ಹೀಗೆ ಕಾಲಾನಂತರದಲ್ಲಿ ಕ್ಯಾರೆಟ್‌ ಕಣ್ಣಿನ ದೃಷ್ಟಿ ಸುಧಾರಿಸಲು ಸಹಕಾರಿ ಎಂಬ ಸಿದ್ಧಾಂತವು ಬೆಳೆಯುತ್ತಾ ಹೋಯಿತು. ಅಂದಿನಿಂದ ಇಂದಿಗೂ ಸಹ ಕ್ಯಾರೆಟ್‌ ದೃಷ್ಟಿ ಸುಧಾರಣೆಗೆ ಸಹಕಾರಿ ಎಂದು ನಂಬಲಾಗಿದೆ ಎಂದು ಅವರು ಹೇಳಿದ್ದಾರೆ.

ಕ್ಯಾರೆಟ್ ಒಂದು ಪೌಷ್ಟಿಕಾಂಶಗಳಿಂದ ಹೇರಳವಾಗಿರುವ ತರಕಾರಿಯಾಗಿದ್ದು, ಇದು ಕಣ್ಣುಗಳಿಗೆ ಸೇರಿದಂತೆ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದು ಕಣ್ಣಿಗೆ ಸಂಧಿಸಿದ ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ದೃಷ್ಟಿ ಸುಧಾರಿಸಲು ಸಹಕಾರಿ ಎಂಬುದು ತಪ್ಪು ಕಲ್ಪನೆಯಾಗಿದೆ. ಹೌದು ಜನರು ಕ್ಯಾರೆಟ್ ಕಣ್ಣುಗಳಿಗೆ ಒಳ್ಳೆಯದು ಎಂಬ ಪರಿಕಲ್ಪನೆಯನ್ನು ʼದೃಷ್ಟಿ ಸುಧಾರಣೆಗೆ ಸಹಕಾರಿʼ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಇದನ್ನೂ ಓದಿ: 2 ವರ್ಷದ ಮಗುವಿನಲ್ಲೂ ಹೆಚ್ಚುತ್ತಿದೆ ಮಲಬದ್ಧತೆ; ಕಾರಣವೇನು? ಪರಿಹಾರವೇನು?

ದೃಷ್ಟಿ ಸುಧಾರಿಸಲು ನ ಸಹಾಯ ಮಾಡುವ ಕೆಲವು ಅಂಶಗಳು:

• ನೈಸರ್ಗಿಕ ಬೆಳಕಿಗೆ ನಿಯಮಿತವಾಗಿ ಒಡ್ಡಿಕೊಳ್ಳುವುದು, ವಿಶೇಷವಾಗಿ ಮುಂಜಾನೆಯ ಸಮಯದಲ್ಲಿ

• ಅತಿಯಾಗಿ ಮೊಬೈಲ್‌, ಟಿವಿ ನೋಡದೆ ಸ್ಕ್ರೀನ್ ಸಮಯವನ್ನು ಕಡಿಮೆ ಮಾಡುವುದು

• ಪೌಷ್ಟಿಕ ಆಹಾರ ಸೇವನೆ

• ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರುವುದು

• ಕಣ್ಣಿಗೆ ಸಂಬಂಧಿಸಿ ವ್ಯಾಯಾಮಗಳನ್ನು ಮಾಡುವುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:30 am, Fri, 4 April 25

ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
ಶಿವಣ್ಣ, ದರ್ಶನ್ ಅವರನ್ನು ನಿಂದಿಸಿದ್ದು ನಿಜವೇ? ಮನು ಹೇಳಿದ್ದೇನು?
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಡಿಕೆ ಸಹೋದರರು ಕುಮಾರಸ್ವಾಮಿ ಅರೋಗ್ಯದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ಕಪ್​ಗೆ ಮುತ್ತಿಡಲು ಶಿವಕುಮಾರ್ ಆರ್​ಸಿಬಿ ತಂಡದ ಆಟಗಾರನೇ? ಭಾಸ್ಕರ್ ರಾವ್
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ನನ್ನ ಆರೋಗ್ಯ ಚೆನ್ನಾಗಿದೆ, ಅದನ್ನು ದೇವರು ನೋಡ್ಕೋತಾನೆ: ಕುಮಾರಸ್ವಾಮಿ
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ವಿರಾಟ್ ಕೊಹ್ಲಿ ಏನು ದೇವರಾ: ಮೃತ ಪ್ರಜ್ವಲ್ ತಾಯಿ ಆಕ್ರೋಶದ ಮಾತು
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಸರ್ಕಾರದಿಂದ ನೆರವು ಸಿಕ್ಕಿಲ್ಲ, ಅಧಿಕಾರಿಗಳು ಮನಗೆ ಬಂದಿಲ್ಲ:ಶಿವಲಿಂಗನ ತಾಯಿ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ಕಾಶ್ಮೀರದ ಮೊದಲ ವಂದೇ ಭಾರತ್ ರೈಲು ಅಂಜಿ ಸೇತುವೆ ದಾಟಿದ ಅದ್ಭುತ ವಿಡಿಯೋ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ನಾನು ಪುನಃ ಜೈಲಿಗೆ ಹೋಗುವುದನ್ನು ನೋಡಲು ಬಹಳ ಜನ ಕಾಯುತ್ತಿದ್ದರು: ಕುಲಕರ್ಣಿ
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಕೇದಾರನಾಥಕ್ಕೆ ಹೋಗುವಾಗ ರಸ್ತೆಯಲ್ಲೇ ಲ್ಯಾಂಡ್ ಆದ ಹೆಲಿಕಾಪ್ಟರ್
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು
ಮೃತಪ್ರೇಮಿಯನ್ನು ಮಾತಾಡುವ ನೆಪದಲ್ಲಿ ತೋಟದ ಮನೆಗೆ ಕರೆಸಲಾಗಿತ್ತು